*ಝಿಯಾರತ್ತ್ ಕೇಂದ್ರ*
💧💧3⃣1⃣💧💧
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
_*"ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್" (ನ:ಮ.)*_
ವಾಯಕ್ಕಾಡ್, ಮಲಪ್ಪುರಂ ಜಿಲ್ಲೆ.
➖➖➖➖➖➖➖
ಜಾಗತಿಕ ಜಗತ್ತಿನಲ್ಲಿ ವೈಜ್ಞಾನಿಕ ಪ್ರಭೆಯ ಧಾರ್ಮಿಕ ಪ್ರಭೋಧನೆಯ ಬೆಳಕನ್ನು ಚೆಲ್ಲಿದ *"ರಈಸುಲ್ ಮುಹಖ್ಖಿಖೀನ್"* ಎಂಬ ಅಪರ ನಾಮದಿಂದ ಅರಿಯಲ್ಪಡುವ *ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್ (ನ:ಮ)*.
ಪರಕೀಯರ ವಿರುದ್ಧ ಯುದ್ಧ ಮಾಡಿದ ಕುಂಞಾಲಿ ಮರಕಾರ್ (ರ). ರವರ ಪರಂಪರೆಯಲ್ಲಿ ಚೆರೂರ್ ಮರಕಾರ್ ಪರಂಬತ್ತ್ ಕಣ್ಣಿಯತ್ತ್ ಉಣ್ಣಿಮೊಯಿದೀನ್ ರವರ ಮಗ, ಅವರಾನ್ ಕುಟ್ಟಿ ಮೊಲ್ಲಯವರ ಹಾಗೂ ಮುಲಕಡವನ್ ಪಡಮುಖತ್ತ್ ಅಬ್ದುರಹ್ಮಾನ್ ಕುಟ್ಟಿಯವರ ಮಗಳಾದ ಖದೀಜುಞೀಯವರ ಮಗನಾಗಿ 1900ರ ಜನವರಿ 17ಕ್ಕೆ ಮಂಜೇರಿಯ ಹತ್ತಿರದ *ಫುಲ್'ಪಟ್ಟ ತೊಟ್ಟಕಾಡ್ಡ್* ಎಂಬಲ್ಲಿ ಮಹಾನವರು ಜನಿಸಿದರು.
11 ಅಂಗ ಕುಟುಂಬದ ಸದಸ್ಯರಲ್ಲಿ 4 ಗಂಡು ಮಕ್ಕಳಲ್ಲಿ ಒಬ್ಬರಾಗಿದ್ದರು ಮಹಾನವರು.
ಮಾಲಿಕ್ ಬಿನ್ ದೀನಾರ್ (ರ.) ರವರ ಸಹೋದರ ಪುತ್ರರಾಗಿದ್ದಾರೆ ಕಣ್ಣಿಯತ್ತ್ ಉಸ್ತಾದವರ (ರ.) ರವರ ಪೂರ್ವ ಪಿತ್ರರೆಂದು ಚರಿತ್ರೆ.
ಮಲಪ್ಪುರಂ ಜಿಲ್ಲೆಯ ವೆಂಗರ ಎಂಬ ಸ್ಥಳದಲ್ಲಾಗಿತು ಕುಟುಂಬ ವಾಸವಾಗಿದದ್ದು. ಮಹಾನವರು ಬಾಲ್ಯದಲ್ಲೆ ತಂದೆಯವರನ್ನು ಕಳಕೊಂಡ ಯತೀಮ್(ಅನಾಥ) ಮಗು ಆಗಿದ್ದರು.
"ರಈಸುಲ್ ಖಾರಿಈನ್" ಎಂಬ ಹೆಸರಿನಿಂದ ಅರಿಯಲ್ಪಟ್ಟ ದೊಡ್ಡ ಸಹೋದರರಾದ ಅಬ್ದುರಹ್ಮಾನ್ ಮುಸ್ಲಿಯಾರ್ (ರ). ರವರ ಪರಿಚರಣೆಯಲ್ಲಿ ಕುಟುಂಬ ಜೀವಿಸುತ್ತಿತ್ತು. 1921ರಲ್ಲಿ
ತಂದೆಯ ವಿಯೋಗದ ನಂತರ ಕುಟುಂಬ *ವಾಯಕಾಡಿಗೆ* ಹೋದರು.
ತನ್ನ 17'ನೇ ವಯಸ್ಸಿನಿಂದ ವಾಯಕಾಡ್ ದಾರುಲ್ ಉಲೂಮಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಮಹಾನವರು ಕಲಿತರು.
ಆರಂಭ ಕಾಲದಲ್ಲಿ ಬಹಳ ಕಷ್ಟದಲ್ಲಿದ್ದಂತಹ ಉಸ್ತಾದರು ಅರ್ಧ ಲುಂಗಿ ಮತ್ತು ಟೊಪ್ಪಿ ಮಾತ್ರ ಧರಿಸಿಯಾಗಿತ್ತು ಕಲಿಯಲು ಹೋಗಿರುವುದು.
ಮದ್ರಸ ಶಿಕ್ಷಣದಲ್ಲಿ ಚಾಲಿಲಕತ್ತ್ ಕುಂಞಹ್ಮದ್ ಹಾಜಿ (ನ:ಮ), ಖುತುಬಿ ಮುಹಮ್ಮದ್ ಮುಸ್ಲಿಯಾರ್ (ನ:ಮ), ಚೆರುಶ್ಶೇರಿ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಬೈತ್ತಲ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಯೂಸುಫುಲ್ ಫಳ್'ಫರಿ (ನ:ಮ), ಅಝೀಝುಲ್ ವೆಲುರಿ (ನ:ಮ), ಎಂಬವರಾಗಿದ್ದರು ಮಹಾನವರ ಗುರುವರ್ಯರು...
💧ಮುಂದುವರಿಯುವುದು...
✍ಗಫೂರ್ ಬಾಯಾರ್.
🌻🌻🌻🌻🌻🌻🌻

No comments:
Post a Comment