#ಝಿಯಾರತ್ತ್ #ಕೇಂದ್ರ*
➖➖➖➖➖➖➖
ಅಲಾಈದ್ದೀನ್ ಹಿಂಸ್ಸಿ (ರ)
ಇಡಿಯಂಙರ, ಕಲ್ಲಿಕೋಟ್ಟೆ.
☘☘3⃣3⃣
ಭಾಗ 02
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰
*ಕರಾಮತ್ತು (ಪವಾಡ)ಗಳು*
ಅಲಾಈದ್ದೀನ್ ಹಿಂಸಿ(ರ)ರವರು ಒಬ್ಬ ಮಹಾ ಪವಾಡ ಪುರುಷರಾಗಿದ್ದರು. ಅಲ್ಲಾಹನ ದೀನಿಗಾಗಿ ಸೇವನೆಗೈಯ್ಯುವಾಗ ಹಲಾವರು ರೀತಿಯಲ್ಲಿ ಅನೇಕ ಪವಾಡಗಳನ್ನು ಅಲ್ಲಾಹನ ಅನುಗ್ರಹದಿಂದ ಪ್ರತ್ಯಕ್ಷಶಾಕ್ಷಿಗೊಳಿಸಿದ್ದನ್ನು ಕೇರಳದ ಪ್ರಮುಖ ಇತಿಹಾಸ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
ಒಂದು ದಿನ ರಾಜರ ಆಸ್ಥಾನಕ್ಕೆ ಆಸ್ಥಾನದ ನೌಕರರು ಸಕ್ಕರೆಯ ಮೂಟೆಗಳನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿರುವಾಗ ಮಹಾನವರು ಕೇಳಿದರು ಅದೇನು ಚಿಲದೊಳಗಡೆ..?
ಇದು ಉಪ್ಪಾಗಿದೆ. ಎಂದು ನೌಕರರು ತಮಾಷೆ ರೂಪದಲ್ಲಿ ಮರು ಉತ್ತರ ನೀಡಿದರು..!
ಶೈಖವರು ಪ್ರತಿವಾದಿಸಿದರು. ಆಗಲಿ ಉಪ್ಪಾದರೆ ಉಪ್ಪು!!
ನೌಕರರು ಅರಮನೆಗೆ ತಲುಪಿ ಮೂಟೆಗಳನ್ನು ಬಿಚ್ಚಿ ನೋಡಿದಾಗ ಅಲ್ಲೊಂದು ಅದ್ಬುತ ಆಶ್ಚರ್ಯ ಕಾದಿತ್ತು..! ಸಕ್ಕರೆ ತುಂಬಿಸಿ ತಂದಂತಹಾ ಮೂಟೆಗಳೆಲ್ಲ ಉಪ್ಪಾಗಿ ಮಾರ್ಪಟ್ಟಿತ್ತು.
ಕೂಡಲೇ ಸತ್ಯವನ್ನು ಮನಗಂಡ ನೌಕರರು ಬರುವಾಗ ದಾರಿಯಲ್ಲಿ ನಡೆದ ಸಂಭವ ರಾಜರಲ್ಲಿ ಸವಿಸ್ತಾರವಾಗಿ ವಿವರಿಸುತ್ತಾರೆ. ಮಹಾನವರ ಹತ್ತಿರ ನೌಕರರು ಅಪಹಾಸ್ಯ ರೀತಿಯಲ್ಲಿ ಹೇಳಿದ ಉತ್ತರದ ಗೌರವವನ್ನು ಮನಗಂಡ ರಾಜರು ಮತ್ತು ಪರಿವಾರದವರು ಮಹಾನುಬಾವರೊಂದಿಗೆ ಕ್ಷಮೆ ಕೇಳಿದರು ನಂತರ ಉಪ್ಪು ಮೊದಲಿನಂತೆ ಸಕ್ಕರೆಯಾಗಿ ಮಾರ್ಪಾಡಾಯಿತು.
ಪ್ರಸ್ತುತ ಚರಿತ್ರೆಯನ್ನು ಶೈಖುನಾ ಶಂಸುಲ್ ಉಲಮಾ ಈ.ಕೆ. ಉಸ್ತಾದ್ (ನ:ಮ) ರವರು, ಹಿಂಸ್ಸಿ (ರ) ರವರ ನಾಮದಲ್ಲಿ ರಚಿಸಲ್ಪಟ ಮೌಲಿದ್ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
*ನಿಶ್ಚಯ ಅಲ್ಲಾಹನಿಗೆ ಕೆಲವು ಅಡಿಯಾರುಗಳು ಇದ್ದಾರೆ. ಅವರು ಒಂದು ಕಾರ್ಯವನ್ನು ಹೇಳಿದರೆ, ಅಲ್ಲಾಹನು ಅದು ಸತ್ಯ ಮಾಡುತ್ತಾನೆಂಬ ಪ್ರವಾದಿ ﷺ ವಚನವನ್ನು ಅನ್ವರ್ಥ ಮಾಡುದಾಗಿದೆ ಈ ಘಟನೆ.*
ಹಲವಾರು ಕರಾಮತ್ತುಗಳು ಪ್ರಕಟವಾಗುತಿದ್ದ ಮಹಾನವರುಗಳ ಸಾನಿಧ್ಯ ಜಾತಿ ಮತಭೇದವಲ್ಲದೆ ಸಮೂತಿರಿ ರಾಜರು ಒಳಗೊಂಡ ಎಲ್ಲರಿಗೂ ಅನುಗ್ರಹವಾಗಿತ್ತು.
ಹಿಜರಿ ವರ್ಷ 981ರ ರಜಬ್ ತಿಂಗಳ 15'ರಂದು ಅಲಾಈದ್ದೀನ್ ಹಿಂಸ್ಸಿ(ರ)ರವರು ಸೃಸ್ಟಿಕರ್ತನಾದ ಅಲ್ಲಾಹನ ವಿಧಿಗೆ ವಿಧೇಯನಾಗಿ ಇಹಲೋಕವನ್ನು ತೊರೆದು ಪರಲೊಕಕ್ಕೆ ಯಾತ್ರೆಯಾದರು.
ಆತ್ಮೀಯ ಪದವಿಯಲ್ಲಿ ಶೈಖ್ ಅವರ ಸ್ಥಾನವು ಅತುಲ್ಯವಾಗಿತ್ತು. ಎಂಬುದರಲ್ಲಿ ಯಾರಿಗೂ ಪಕ್ಷಾಂತರವಿಲ್ಲ.
ಖುತುಬುಝ್ಜಮಾನ್ ಮಂಬುರಂ ತಂಙಳ್ (ರ)ರವರು ಮಹಾನುಭಾವರ ಸನ್ನಿದಿಗೆ ಬರುತ್ತಿದ್ದ ಸಂಧರ್ಭದಲ್ಲಿ ಬಹು ದೂರ ಮೆಟ್ಟಿಲು ಕಳಚಿಟ್ಟು ನಗ್ನಪಾದದೊಂದಿಗೆ ನಡೆದು ಬಂದಾಗಿತ್ತು ಮಹಾನವರ ಮಖಾಂ ಝಿಯಾರತ್ತ್ ಮಾಡುತ್ತಿದ್ದರೆಂಬುದು ಕೂಡ ಶೈಖ್ ಹಿಂಸ್ಸಿ (ರ) ರವರ ಮಹತ್ವವನ್ನು ತಿಳಿಯಲು ನಮ್ಮನ್ನು ಪ್ರಾಪ್ತ ಮಾಡುತ್ತದೆ.
ಮೊದಲು ಮಹಾನವರ ಮಕ್ಬರ ಕಡಲಿನ ಕಿನಾರೆಯಲ್ಲಾಗಿತ್ತು ನೆಲೆಗೊಂಡಿದದ್ದು.
100 ವರ್ಷ ಕಳೆದ ನಂತರ ಅಲ್ಲಿಗೆ ನೀರು ಹತ್ತಿ ಮಕ್ಬರ ಸಮುದ್ರದ ಪಾಲಾಗುವ ಸ್ಥಿತಿ ಬಂದಾಗ, ಅಂದಿನ ಖಾಝಿಗೂ ಹಾಗು ಊರ ಪ್ರಮುಖರಿಗೂ ಮಹಾನವರ ಕನಸು ನಿರಂತರ ಕಾಣಲಾಯಿತು.
ಕನಸಿನಲ್ಲಿ ಮಹಾನುಭಾವರು ಹೇಳುತ್ತಿದ್ದರು *ನನ್ನನ್ನು ಇಲ್ಲಿಂದ ಮತ್ತೊಂದು ಸ್ಥಳಕ್ಕೆ ಬದಲಿಸಬೇಕು.*
*ಈ ಕನಸಿನ ಕಾರಣದಿಂದ ಮಹಾನವರ ಪುಣ್ಯ ಶರೀರವನ್ನು ಇಂದು ನೆಲೆಗೊಳ್ಳುವ ಇಡಿಯಂಙರಕ್ಕೆ ಸ್ಥಳಾಂತರಿಸುವಾಗ 100 ವರ್ಷದ ಕಾಲದ ಅಂತರವಿತ್ತು. ಆದರೂ ಮಹಾನವರ ಜನಾಝಕ್ಕೆ ಯಾವುದೇ ಬದಲಾವಣೆ ಆಗಿರಲಿಲ್ಲ ಎಂಬುದು ಸತ್ಯ ಸಾಕ್ಷಿಯಾಗಿದೆ.*
ಪುಣ್ಯಾತ್ಮಗಳಲ್ಲಿ ಉನ್ನತ ಪದವಿ ಅಲಂಕರಿಸಿದ ಮಹಾನವರ ಮಕ್ಬರವನ್ನು ಸಂದರ್ಶಿಸಲು ಹಾಗು ಪುಣ್ಯ ಗಳಿಸಲು ಅಲ್ಲಾಹು ನಮಗೆ ತೌಫೀಕ್ ನೀಡಲಿ ಆಮೀನ್.
🛣 ದಾರಿ:👉 ಕಲ್ಲಿಕೋಟೆ ರೈಲು ನಿಲ್ದಾಣದ ಹತ್ತಿರ, ಕುಟ್ಟಿಚಿರ ಇಡಿಯಂಙರ ಶೈಖ್ ಮಸ್ಜಿದ್.
🔹ಮುಗಿಯಿತು.
✍ಗಫೂರ್ ಬಾಯಾರ್
🥀🥀🥀🥀🥀🥀🥀
No comments:
Post a Comment