👳📖ಮಂಕೂಸ್ ಮೌಲೀದ್📖👳
🌑ಸಳಪಿಯ ಜಹಾಲತ್ ಗೆ ಪ್ರತ್ಯುತ್ತರ..!
,,,,,,,,,,,,,,,,,🔘🔘🔘,,,,,,,,,,,,,,
"ವಹುವಲ್ಲಝೀ ತವಸ್ಸಲ ಬಿಹೀ ಆದಂ"
👇ಅರ್ಥ:
ಆದಂ (ಅ)ರು ಮಹಮ್ಮದ್ ನೆಬಿ ﷺ ರೊಂದಿಗೆ ತವಸ್ಸುಲ್ ಮಾಡಿದರು. (ಮಧ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದರು)
ಆದರೆ ಕುರಾನ್ ಹೇಳುವುದನ್ನು ನೋಡಿ.👇
فَتَلَقَّىٰ آدَمُ مِنْ رَبِّهِ كَلِمَاتٍ فَتَابَ عَلَيْهِ ۚ إِنَّهُ هُوَ التَّوَّابُ الرَّحِيمُ
ತರುವಾಯ ಆದಮ್ ತಮ್ಮ ಪ್ರಭುವಿನಿಂದ ಕೆಲವು ವಚನಗಳನ್ನು ಪಡೆದರು. (ಆ ವಚನಗಳ ಮೂಲಕ ಪಶ್ಚಾತ್ತಾಪಪಟ್ಟ) ಆದಮ್ ರಿಗೆ ಅಲ್ಲಾಹು ಪಾಪಮುಕ್ತಿಯನ್ನು ದಯಪಾಲಿಸಿದನು. ಅವನು (ಅಲ್ಲಾಹು) ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
[ಅಲ್-ಬಕರಃ : 37]
ಆ ವಚನಗಳು ಯಾವುದೆಂದು ಕುರಾನ್ ಧೃಢಪಡಿಸುವುದನ್ನು ನೋಡಿ.👇
قَالَا رَبَّنَا ظَلَمْنَا أَنْفُسَنَا وَإِنْ لَمْ تَغْفِرْ لَنَا وَتَرْحَمْنَا لَنَكُونَنَّ مِنَ الْخَاسِرِينَ
ಅವರಿಬ್ಬರೂ ಹೇಳಿದರು: ‘ನಮ್ಮ ಪ್ರಭೂ! ನಾವು ಸ್ವತಃ ನಮ್ಮೊಂದಿಗೇ ಅಕ್ರಮವೆಸಗಿರುವೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮಗೆ ಕರುಣೆ ತೋರದಿದ್ದರೆ ಖಂಡಿತವಾಗಿಯೂ ನಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವೆವು.’
[ಅಲ್-ಅ'ಅರಾಫ್ : 23]
"""""""""""""""""""""""""""""""
ಹೌದು👆👆👆ಈ ಸಳಪಿ ಮೌಲೂದ್ ಕಿತಾಬನ್ನು ವಿಮರ್ಶಿಸುವ ಭರದಲ್ಲಿ ಹದೀಸ್ ಕಡೆ ತಲೆ ಎತ್ತಿಯೂ ಕೂಡಾ ನೋಡಲಿಲ್ಲ.
ಇದೇ ಅಲ್ ಬಕರದ 37ನೇ ಸೂಕ್ತದ ವ್ಯಾಖ್ಯಾನವಾಗಿ ಇಮಾಮ್ ಗಳು ಸಹೀಹ್ ಆದ ಒಂದು ಹದೀಸ್ ಕೊಡುತ್ತಾರೆ.
ಪಾಪ ಈ ಸಳಪಿ ಅದನ್ನು ನೋಡಲೇ ಇಲ್ಲ.
ಅದೇ ಹದೀಸ್ ನ ಸಾರಂಶವನ್ನಾಗಿದೆ ಮಂಕೂಸ್ ಮೌಲೂದ್ ನಲ್ಲಿ ಕೊಡಲಾಗಿದೆ.
ಆದರೆ ಮಂಕೂಸ್ ಮೌಲೂದ ನ್ನು ಕಟ್ಟುಕಥೆಯೆಂದು ಬಿಂಬಿಸಲಿಕ್ಕಾಗಿ ಸಳಪಿ ಈ ವಿಷಯದಲ್ಲಿರುವ ಹದೀಸನ್ನು ಜನರಿಂದ ಮರೆಮಾಚುವ ಜಾಣ್ಮೆ ತೋರಿಸಿದ್ದಾನೆ.
ಆದಮ್ (ಅ) ರವರು ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮದ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದ ಹದೀಸನ್ನು ಹಲವಾರು ಮುಹದ್ದಿಸ್ ಗಳು ಉದ್ದರಿಸಿದ್ದಾರೆ.
ಮಾತ್ರವಲ್ಲ ಅದು ಪ್ರಬಲವಾಗಿದೆ ಎಂದು ಅವರು ಮೊಹರು ಹಾಕಿದ್ದಾರೆ.!!
ಇಮಾಂ ಹಾಕಿಮ್ (ರ) ಮುಸ್ತದ್ರಕ್ ನಲ್ಲಿ ಒಂದು ಹದೀಸ್ ನಿವೇದಿಸಿದ್ದು ಈ ರೀತಿ ಇದೆ👇👇👇👇👇
🔘👈 لما اقترف آدم الخطيئة
قال يا رب اسئلك بحق محمد الا غفرت لي فقال: الله كيف عرفت محمد ً ولم اخلقه ؟
فقال: لانك لما خلقتني بيدك ونفخت في من روحك رفعت راسي فرايت علي قوائم العرش مكتوباً
"لا اله الا الله محمد رسول الله"
فعلمت انك لم تضف الي اسمك الا احب الخلق اليك فقال الله صدقت يا آدم انه لاحب الخلق اليك ،ادعني بحقه فقد غفرت لك ولو لا محمد ما خلقتك ،هذا حديث صحيح الاسناد
👉 "ಸ್ವರ್ಗದ ಹಣ್ಣು ತಿಂದ ನಂತರ ಆದಮ್ (ಅ)ರು ಅಲ್ಲಾಹನಲ್ಲಿ ಹೇಳಿದರು
ಓ... ನನ್ನ ರಕ್ಷಕನೇ......
ಮುಹಮ್ಮದ್ (ಸ) ರವರ ಹಕ್ಕ್ ನಿಮಿತ್ತವಾಗಿ ನನ್ನನ್ನು ಕ್ಷಮಿಸು....
ಆಗ ಅಲ್ಲಾಹನು ಕೇಳುತ್ತಾನೆ
"ನಾನು ಇದು ವರೆಗೂ ಸೃಷ್ಟಿಸಿಲ್ಲದ ಆ ಮಹಾನುಭಾವರ ಕುರಿತು ನಿಮಗೆ ಮಾಹಿತಿ ಎಲ್ಲಿಂದ ಸಿಕ್ಕಿತು. ??
ಆದಂ (ಅ) ಉತ್ತರಿಸಿದರು
"ನೀನು ನನ್ನನ್ನು ಸೃಷ್ಟಿಸಿ ಪೂರ್ಣ ಗೊಂಡಾಗ ನಾನು ತಲೆಯೆತ್ತಿ ಮೇಲೆ ನೋಡಿದಾಗ 'ಅರ್ಶ್' ನ ಕಂಭಗಳಲ್ಲಿ "ಲಾಈಲಾಹ ಇಲ್ಲಲ್ಲಾ ಮುಹಮ್ಮದುನ್ ರಸೂಲುಲ್ಲಾ"
ಎಂದು ಬರೆದದನ್ನು ನೋಡಿದೆ.
ನಿನ್ನ ಹೆಸರಿನ ಜೊತೆ ಒಬ್ಬ ದಾಸನ ಹೆಸರು ಬರೆಯಬೇಕಾದರೆ ಆ ದಾಸನು ನಿನಗೆ ಅತ್ಯಂತ ಸ್ನೇಹ ವಿರುವ ವ್ಯಕ್ತಿಯಾಗಿರಬೇಕೆಂಬುದನ್ನು ನಾನು ಮನಗಂಡೆ."
ಆಗ ಅಲ್ಲಾಹನ ಪ್ರತಿಕ್ರಿಯೆ ಹೀಗಿತ್ತು..
" ಓ.. ಆದಂ.. ನೀವು ಸತ್ಯವನ್ನೇ ಹೇಳಿದ್ದೀರಿ..
ಅವರು ನನಗೆ ಅತ್ಯಂತ ಇಷ್ಟವಾದ ವ್ಯಕ್ತಿಯಾಗಿರುವರು.
ادعني بحقه
'ಮುಹಮ್ಮದ್' (ಸ) ರವರನ್ನು ಮಧ್ಯವರ್ತಿ(ತವಸ್ಸುಲ್)ಮಾಡಿ ನನ್ನಲ್ಲಿ ತಾವು ಪ್ರಾರ್ಥಿಸಿ "
فقد غفرت لك
"ನಿಶ್ಚಯವಾಗಿಯೂ ನಾನು ತಮಗೆ ಮಾಫಿ ನೀಡಿಯೇ ತೀರುವೆನು"
"ಮುಹಮ್ಮದ್'(ಸಲ್ಲಲ್ಲಾಹು ಅಲೈಹಿವಸಲ್ಲಮ್)ರನ್ನು ಸೃಷ್ಟಿಸದಿದ್ದರೆ
ತಮ್ಮನ್ನು ನಾನು ಸೃಷ್ಟಿಸುತ್ತಿರಲಿಲ್ಲ"
ಹದೀಸ್ ನಂ 4194
ಈ ಹದೀಸ್ ನ ಪರಂಪರೆ ಸಹೀಹ್ ಪ್ರಬಲವಾಗಿದೆಯೆಂದು ಇಮಾಮ್ ಹಾಕಿಮ್(ರ) ತನ್ನ ಮುಸ್ತದ್ರಕ್ ನಲ್ಲಿ ವ್ಯಕ್ತಪಡಿಸಿದ್ದಾರೆ.(ಮುಸ್ತದರಕ್ 2/615)
👉 ಈ ಹದೀಸ್ ನ್ನು ರಿಪೋರ್ಟ್ ಮಾಡಿದ ಇನ್ನಿತರ ಮುಹದ್ದಿಸ್ ಗಳ ಪಟ್ಟಿ ಈ ರೀತಿಇದೆ.👇👇
👉ಇಮಾಮ್ ಬೈಹಕಿ (ರ) ದಲಾಇಲುನ್ನುಬುವ್ವ ಹ.ನಂ 2243
👉 ಇಮಾಮ್ ತ್ವಬ್ರಾನಿ (ರ)ರವರ
'ಅಲ್ ಮುಅ್ ಜಮುಲ್ ಅವ್ ಸತ್
ಹ.ನಂ 989
👉ಇಮಾಮ್ ಸುಯೂಥಿ(ರ) ರವರ 'ಖಸಾಯಿಸ್' ಎಂಬ ಗ್ರಂಥ
👉ಇಮಾಮ್ ಖಸ್ತಲ್ಲಾನಿ (ರ)ರವರ
'ಅಲ್ ಮವಾಹಿಬು ಲ್ಲದುನ್ನಿಯ್ಯ'1/62
👉ಇಮಾಮ್ ಸುಬುಕಿ (ರ)ರವರ ಗ್ರಂಥ ಶಿಫಾಉಸ್ಸಖಾಮ್ 135
👉ಅಲ್ಲಾಮ ಸುರ್ಖಾನಿ(ರ)ರವರ
'ಶರಹುಲ್ ಮವಾಹಿಬ್'3/314
👉ಇಮಾಮ್ ಇಬ್ನ್ ಖಸೀರ್
'ಅಲ್ ಬಿದಾಯತು ವನ್ನಿಹಾಯ' 1/180
👉ಹಾಶಿಯತುಲ್ ಈಳಾಹ್ ನಲ್ಲಿ ಇಮಾಮ್ ಇಬ್ನ್ ಹಜರುಲ್ ಹೈತಮಿ (ರ) ಕೂಡಾ ಪ್ರಸ್ತುತ ಹದೀಸ್ ವರದಿ ಮಾಡಿದ್ದಾರೆ.
ಸಳಪಿಗಳ ನೇತಾರ ಇಬ್ನ್ ತೈಮಿಯ್ಯ ಕೂಡಾ ಈ ಹದೀಸನ್ನು ಉದ್ದರಿಸುತ್ತಾ,
ಬೇರೆ ಇಂತಹ ಪ್ರಬಲವಾದ ಹದೀಸ್ ಗಳ ವ್ಯಾಖ್ಯಾನ ಕೂಡಾ ಆಗಿದೆಯೆಂದು ಹೇಳಿದ್ದಾರೆ.
ಅಂತೂ ಇಂತೂ ಮಂಕೂಸ್ ಮೌಲಿದ್ ನಲ್ಲಿರುವ
"ವಹುವಲ್ಲಝೀ ತವಸ್ಸಲ ಬಿಹೀ ಆದಮ್"
'ಆದಂ(ಅ)ರು ಮುಹಮ್ಮದ್ ನೆಬಿಯವರೊಂದಿಗೆ ತವಸ್ಸುಲ್ ಮಾಡಿದರು (ಮದ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದರು)
ಎಂಬುವುದು ಕಟ್ಟುಕಥೆಯಲ್ಲ
ಬದಲಾಗಿ ಮುತ್ತು ನೆಬಿ ಹೇಳಿದ ಸತ್ಯ ಕಥೆಯೆಂದು ನಿಮಗೆಲ್ಲರಿಗೂ ತಿಳಿಯಿತು ತಾನೇ..??
ಮತ್ತೆ ಸಳಪಿ ಹಾಗೆ ಹೇಳಿದುದರಲ್ಲಿ ನೀವು ಆಶ್ಚರ್ಯ ಪಡಬೇಕಾಗಿಲ್ಲ.
ಅವರು ಜಾಹಿಲ್ ಗಳು ಅವರಿಗೆ ಇಸ್ಲಾಮಿನ ಕುರಿತು ಆಳವಾದ ಜ್ಞಾನ ಇಲ್ಲ.
ಅರೆಬರೆ ಕಲಿತು ಜನರನ್ನು ದಾರಿತಪ್ಪಿಸುತ್ತಿದ್ದಾರೆ.
ಪಾಪ ದೀನಿನ ಗಂಧಗಾಳಿ ಇಲ್ಲದ ಪಾಮರರು ಇವರ ಬಲೆಗೆ ಸಿಲುಕುತ್ತಾರೆ.
ಅಲ್ಲಾಹು ಕಾಪಾಡಲಿ.... ಆಮೀನ್.
ಇನ್ನು ಸಳಪಿ ಯ ಸಂಶಯ,
ಮಂಕೂಸ್ ಮೌಲಿದ್ ನಲ್ಲಿರುವ
"ವಸ್ತಗಾಸ ಬಿಹೀ ನೂಹುನ್ ಫ ನಜಾ "
'ಜಲಪ್ರಳಯದಿಂದ ಪಾರಾಗಲಿಕ್ಕೆ ಬೇಕಾಗಿ ನೂಹ್ ನೆಬಿ(ಅ)ಗೆ
ಮುಹಮ್ಮದ್ ನೆಬಿ (ಸಲ್ಲಲ್ಲಾಹು ಅಲೈಹಿವಸಲ್ಲಮರು) ನಿಮಿತ್ತವಾದರು'
ಎಂದು,
ಅದೇ ರೀತಿ ಇರ್ತಖಬುತು ನಲ್ಲಿ ಶಿರ್ಕ್ ಇದೆಯಂತೆ.
ಹೀಗೆ ಸಾಗುತ್ತೆ ಸಳಪಿಯ ಅರಚಾಟ...
ಇನ್ಶಾ ಅಲ್ಲಾ ಎಲ್ಲದಕ್ಕೂ ಹದೀಸ್ ಮೂಲಕ ಉತ್ತರಿಸುವ ಬರಹ ಮುಂದೆ ಬರಲಿದೆ
ಅದುವರೆಗೆ ಬಾಯ್
ಅಬೂ ಶಝ
No comments:
Post a Comment