🌷🌷🌷🌷🌷🌷🌷🌷🌷
ಹಳೆಯ ಬಟ್ಟೆಧರಿಸಿಕೊಂಡ ಓರ್ವ ವಯೋವೃದ್ದ ರೈಲುಗಾಡಿಯ ಎ.ಸಿ. ಭೋಗಿಯಲ್ಲಿ ಯಾತ್ರೆ ಮಾಡುತ್ತಿದ್ದರು.
ಟಿಕೆಟ್ ಪರಿಶೋದಕನು ( ಟಿ. ಟಿ. ಇ ) ಅವರ ಹತ್ತಿರ ಹೋಗಿ ಟಿಕೆಟ್ ಕೇಳಿದರು.
ವೃದ್ದನು ತನ್ನ ಬ್ಯಾಗಿನಲ್ಲಿ ಟಿಕೇಟ್ ಹುಡುಕಲು ಆರಂಭಿಸಿದರು.
"ಇಲ್ಲಿ ಎಲ್ಲಿಯೋ ಕಾಣಬೇಕು."
ವೃದ್ಧ ಟಿಕೇಟ್ ಹುಡುಕುವುದರ ಮಧ್ಯೆ ಅತೃಪ್ತಿಯೊಂದಿಗೆ ಟಿ.ಸಿ.ಇ ಹೇಳಿದನು.
"ನಾನು ಮರಳಿ ಬರುವಾಗ ತಾವು ಟಿಕೆಟ್ ತೋರಿಸಬೇಕು."
ವೃದ್ಧನು ಟಿಕೆಟ್ ಇಲ್ಲದೆ ಯಾತ್ರೆ ಮಾಡುತ್ತಿರುವುದೆಂದು ಪರಿಶೋಧಕ ಊಹಿಸಿದನು.
ಅಲ್ಪ ಸಮಯ ಕಳೆದು ಆಗಮಿಸಿದ ಪರಿಶೋಧಕನಿಗೆ ವೃದ್ಧನು ತನ್ನ ಎ.ಸಿ. ಕ್ಲಾಸ್ ಟಿಕೆಟ್ ತೋರಿಸಿದರು.
ಟಿಕೇಟ್ ಪರಿಶೋಧಕನಿಗೆ ತನ್ನ ಊಹೆಯ ಬಗ್ಗೆ ತಪ್ಪಿನ ಅರಿವಾಯಿತು.
"ಒಂದೇ ನೋಟದಲ್ಲಿ ನಾನು ಅವರ ವ್ಯಕ್ತಿತ್ವದ ಮೇಲೆ ಬೆಲೆ ಕಟ್ಟಬಾರದಿತ್ತು. ಎಂದು ತನ್ನಲ್ಲಿ ತಾನೇ ಹೇಳಿಕೊಂಡನು."
ರೈಲುಗಾಡಿ ರೈಲ್ವೇ ನಿಲ್ದಾಣ ತಲುಪಿದಾಗ ಆ ವಯೋ ವೃದ್ದರನ್ನು ಹೊರಗೆ ಬರಲು ಪರಿಶೋಧಕನು ಸಹಾಯ ಮಾಡಿದನು.
ತನ್ನಲ್ಲಿದ್ದ ಸಾಮಾನುಗಳನ್ನು ತೆಗೆಯಲು ಒಬ್ಬ ಹೊರೆ ಹೊತ್ತುವ ಕೂಲಿ ಕೆಲಸದವನನ್ನು ವೃದ್ಧನು ಕರೆದನು.
ಕೂಲಿ ಕೆಲಸದವನು ವೃದ್ದನ ಸಾಮಾನುಗಳನ್ನು ಎತ್ತಿದನಾದರೂ, ಕೂಡಲೇ ಅವೆಲ್ಲವನ್ನೂ ಕೆಳಗಿಟ್ಟು ಹೋಗಿ, ಅವನು ಮುಂದಿನ ಭೋಗಿಯಲ್ಲಿ ಬಂದು ಇಳಿದ ಒಳ್ಳೆಯ ವಸ್ತ್ರ ಧರಿಸಿದ ಸುಂದರಿಯಾದ ಒಬ್ಬಳು ಯುವತಿಯ ಸಾಮಾನುಗಳನ್ನು ಎತ್ತಿ ತೆಲೆಗಿಟ್ಟು ನಡೆದು ಮುಂದೆಕ್ಕೆ ಸಾಗಿದನು.
ಇದೆಲ್ಲವನ್ನೂ ನೋಡುತಿದ್ದ ಟಿಕೆಟ್ ಪರಿಶೋಧಕ ವೃದ್ಧನ ಸಾಮಾನುಗಳನ್ನು ಸ್ವತಃ ತಾವೇ ಎತ್ತಿಕೊಂಡು ಹೋಗಿ ಒಂದು ಟ್ಯಾಕ್ಸಿಗೆ ತುಂಬಿಸಲು ಸಹಾಯ ಮಾಡಿದನು.
ಪರಿಶೋದಕರೊಂದಿಗೆ ಕೃತಜ್ಞತೆ ಹೇಳಿದ ವೃದ್ಧ ಒಂದು ನೂರು ರೂಪಾಯಿಯು ಕೊಟ್ಟು ಹೇಳಿದರು "ದಯಮಾಡಿ ಇದನ್ನು ಆ ಕೂಲಿಗಾರನಿಗೆ ನೀಡಬೇಕು." ಎಂದರು.
ಇನ್ನು ಮುಂದೆ ಯಾರನ್ನೂ ಅವರ ವೇಷಭೂಷಣ ನೋಡಿ ಬೆಲೆ ಕಲ್ಪಿಸಬಾರದೆಂದು ಕೂಲಿಗಾರನಿಗೆ ಹೇಳಬೇಕು ಎಂದು ಹೇಳಿ ಹೊರಟು ಹೋದರು.
ಅಲ್ಲಿಂದ ಮರಳಿದ ಪರಿಶೋಧಕನು ಕೂಲಿಗಾರನನ್ನು ಕಂಡಾಗ ಅವರ ಹತ್ತಿರ ಹೇಳಿದರು., "ನೀವು ಮಾಡಿದ್ದು ಸರಿಯಲ್ಲ."
ಏನಾದರೂ ಈ ಹಣ ಅವರು ನಿಮಗೆ ಕೊಟ್ಟಿರುವುದುದಾಗಿದೆ. ವೇಷ ನೋಡಿ ಯಾರಿಗೂ ಬೆಲೆ ಕಲ್ಪಿಸಬಾರದು ಎಂದು ಕೂಡ ನಿಮ್ಮ ಬಳಿ ಹೇಳಲು ಹೇಳಿದ್ದಾರೆ.
"ಕ್ಷಮಿಸಬೇಕು ಸಾರ್"
ಎಂದು ಹೇಳಿ, ಕೂಲಿ ಕೆಲಸದವನು ಹೇಳಿದನು, "ಅವಸರದಿಂದ ನಾನು ಹೇಳಲು ಮರೆತು ಬಿಟ್ಟೆ, ಅವರು ಓರ್ವ ಕಣ್ಣುಕಾಣದ ಕುರುಡಿ ಸ್ತ್ರೀಯಾಗಿದ್ದಾರೆ.
ಪ್ರತಿದಿನ ನಾನು ಅವರ ಸಾಮಾನುಗಳನ್ನು ಎತ್ತಿಕೊಂಡು ಹೋಗುವುದು. ನಾನು ಅದಕ್ಕೆ ಅವರಿಂದ ಕೂಲಿ ಏನು ತೆಗೆಯುತ್ತಿಲ್ಲ.
ತಾವು ಆ ವೃದ್ಧನನ್ನು ಇನ್ನು ಕಾಣಲು ಸಾದ್ಯವಾಗುವುದಾದರೆ ಅವರ ಹತ್ತಿರ ಹೇಳಬೇಕು, ಯಾರನ್ನು ಒಂದೇ ನೋಟದಲ್ಲಿ ಬೆಲೆ ಕಲ್ಪಿಸಬಾರದು ಎಂದು."
*ನಾವಾಗಿದ್ದೇವೆ ನಿಜಕ್ಕೂ ಸರಿಯಾದವರು ಎಂಬುವುದಾಗಿದೆ ನಮ್ಮೆಲ್ಲರ ಧೋರಣೆ..*
*ಅನಿರೀಕ್ಷಿತವಾಗಿಯೋ ಅಲ್ಲದೆಯೋ ಹಲವು ಬಾರಿ ಹೀಗೆಯೇ ನಮ್ಮ ಜೀವನದಲ್ಲಿಯೂ ಇಂತಹ ಘಟನೆಗಳು ಸಂಭವಿಸುತ್ತದೆ..*
*ಆ ಸಮಯದ ಅಹಂಕಾರದಲ್ಲಿ ನಾವು ಹಲವಾರು ಬಾರಿ ಅತಿರೇಕದ ವರ್ತನೆಗಳನ್ನು ತೋರಿಸುತ್ತೇವೆ..*
*ಈ ಅಹಂಕಾರದಿಂದ ನಾವು ಕೆಲವೊಮ್ಮೆ ಇನ್ನೊಬರ ದೋಷವನ್ನು ಹುಡುಕಲು ಶ್ರಮಿಸುತ್ತೇವೆ..*
*ಆದರೆ ನಮಗಿಂತ ದೊಡ್ಡ ಸರಿ ಅವರಾಗಿದ್ದರು ಎಂದು ಮನವರಿಕೆ ಮಾಡುವುದರಲ್ಲಿ ನಾವು ಹಲವು ಬಾರಿ ಎಡವಿಕೊಳ್ಳುತ್ತೇವೆ.*
✍ಗಫೂರ್ ಬಾಯಾರ್
------------------------
🔎 _ಹೃದಯದ ಆಳದಿಂದ ಓದಿರಿ.._
_ಜೀವನದಲ್ಲಿ ಅಳವಡಿಸಿರಿ.._
🔎ಸ್ವಂತ ಭಕ್ತಿ, ಅರೋಗ್ಯ, ಸಂತೋಷ, ಮನಶಾಂತಿ, ಹಾಗೂ ನಿದ್ರೆ ಇವೆಲ್ಲಕ್ಕಿಂತ ಸಂಪತ್ತಿಗೆ ಪ್ರಾಧಾನ್ಯತೆ ನೀಡಬಾರದು.
🔎ಕಣ್ಣೀರು ಒರೆಸಿ, ಇಡೀ ಪ್ರಪಂಚದ ಸರ್ವ ಸೃಷ್ಟಿಗಳನ್ನು ಸೃಷ್ಟಿಸಿದವನನ್ನು ಆರಾಧಿಸಿರಿ.
ಒಳ್ಳೆಯದು ಮಾತ್ರ ಚಿಂತಿಸಿರಿ, ನಮಗೆ ಲಭಿಸಿದೆಲ್ಲವೂ ಅನುಗ್ರಹವಾಗಿದೆ ಎಂದು ನೆನಪಿರಲಿ.
🔎ಸತ್ಕರ್ಮಗಳು ಮಾತ್ರ ನೀಡುವ ಮರದಂತೆ ನಾವಾಗಬೇಕು. ಕಲ್ಲು ಬಿಸಾಡಿದರೂ ಅದು ಫಲವನ್ನು ಕೊಡುತ್ತಾ ಇರುತ್ತದೆ.
🔎ನಮ್ಮ ಸ್ವಭಾವ ರೀತಿಗಳು, ಮನೋಭಾವನೆಗಳು, ಹೂದೋಟಕ್ಕಿಂತಲೂ ಮನೋಹರವಾಗಲಿ.
🔎ಸಮಯವನ್ನು ಸರಿಯಾಗಿ ಬಳಸಿದರೆ ಮಾಡಲಿರುದೆಲ್ಲವೂ ಮಾಡಿ ಮುಗಿಸಲು ಸಾಧ್ಯವಿದೆ.
🔎ಒಳ್ಳೆಯ ಗ್ರಂಥಗಳು ಓದಿರಿ.
ಅಲ್ಲದಿದ್ದರೆ ವಿಶುದ್ಧ ಗ್ರಂಥಗಳ ಪಾರಾಯಣವನ್ನು ಕೇಳಿರಿ.
ಕೆಲವೊಮ್ಮೆ ಅದರ ಒಂದು ಸಣ್ಣ ವಚನವು ಹೃದಯದಲ್ಲಿ ಕಂಪನವನ್ನು ಸೃಷ್ಟಿಸಬಹುದು..
🔎ಮಳೆಗಿಂತ ಉಪಕಾರಿ ಆಗಿರಿ.
ಚಂದ್ರಕ್ಕಿಂತಲೂ ಸೌಂದರ್ಯ ಉಳ್ಳವರಾಗಿರಿ.
🔎ನಮ್ಮ ಅಲಂಕಾರ ವರ್ಣನೆ ಸ್ವರ್ಣವೋ, ಬೆಳ್ಳಿಯೋ ಅಲ್ಲ. ಬದಲು ವಿನಮ್ರತೆ, ವಿನಯ, ಕ್ಷಮೆ, ದಯೆ, ತಿಳುವಳಿಕೆ ಹಾಗೂ ಪರೋಪಕಾರ ಎಂಬುವುದಾಗಬೇಕು.
🔎ಜೀವನ ನಿರಾಸೆಯಲ್ಲಿ ಸಿಲುಕಿದರೆ ಏನೂ ಕಲಿಯಲೊ, ಯಾವುದರಲ್ಲಿಯೂ ಸಂತೋಷವನ್ನೊ ಕಾಣಲು ಸಾಧ್ಯವಿಲ್ಲ.
🔎ಆರೋಗ್ಯಕರವಾದ ಶರೀರದಲ್ಲಿ ವಂಚನೆ, ವಿದ್ವೇಷ, ಅಸೂಯೆ ಎಂಬಿತ್ಯಾದಿಗಳಿಗೆ ಸ್ಥಾನವಿಲ್ಲ.
🔎ದಾನ ಧರ್ಮಗಳಿಂದ ಬಡವರ ಮತ್ತು ಅಗತ್ಯತೆ ಇರುವವರ ಸ್ನೇಹವನ್ನು ಗಳಿಸಿರಿ.
🔎ಪ್ರಾರ್ಥನೆಯನ್ನು ರೂಢಿ ಮಾಡಿ.
ಒಂದು ಗಂಟೆಗೊಂದು ಆಶಯ ರೂಪೀಕರಿಸಿರಿ. ದಿನಕ್ಕೊಂದು ಒಂದು ಒಳಿತುಗಳನ್ನಾದರೂ ಮಾಡಿರಿ.
🔎ನಮ್ಮ ಚಿಂತನೆಯಾಗಿದೆ ನಮ್ಮ ಸ್ವರ್ಣ, ಧಾರ್ಮಿಕತೆಯಾಗಿದೆ ಅಲಂಕಾರ, ಒಳ್ಳೆಯ ಸ್ವಭಾವವಾಗಿದೆ ಆಸ್ತಿ.
🔎ಸುಂಟರಗಾಳಿಯ ನಡುವಿನಲ್ಲೂ ಒಳ್ಳೆಯದೇ ಬರುವುದೆಂದು ಆಶಿಸಿರಿ.
🔎ಉಪದೇಶದಿಂದಲೂ, ದಯೆ ಇರುವ ಮಾತಿನಿಂದಲೂ, ನಿಮ್ಮನ್ನು ಸಹಾಯ ಮಾಡಲು ಸಾಧ್ಯವಿರುವವರಿಗೆ ಮಾತ್ರ ನಿಮ್ಮ ದುಃಖಗಳನ್ನು ಹಂಚಿರಿ.
🔎ಬಿದ್ದು ಗಾಯವಾದ ಮಗುವನ್ನು ನೆನೆದು ನಮ್ಮ ಸಮಯ ವ್ಯರ್ಥ ಮಾಡಬಾರದು. ಮಾಗುವಿನ ಗಾಯಗಳು ಬೇಗನೆ ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು.
🔎ಒಂದೊಂದು ದಿವಸವು ಹೊಸತನದೊಂದಿಗೆ ಆರಂಭವಾಗಲಿ. ಮಾಡಲು ಸಾಧ್ಯವಾಗದ ಕಾರ್ಯಗಳನ್ನು ಯೋಚಿಸಿ ದುಃಖಿಸಬೇಡಿ. ಸುಧಾರಣೆ ಮಾಡಲು ಸಾಧ್ಯವಾಗುವ ಕೆಲಸಗಳಿಗೆ ಸಮಯವನ್ನು ಮೀಸಲಿರಿಸಿರಿ.
🔎ನಮ್ಮಂತೆಯೇ ಎಲ್ಲರಿಗೂ ಸಮಸ್ಯೆಗಳಿವೆ. ಎಂದು ನೆನೆದುಕೊಂಡರೆ ಮನಸ್ಸು ಶಾಂತವಾದಿತು.
🔎ಕಳೆದ ಕಾಲದಲ್ಲಿ ನಾವು ತಪ್ಪು ಮಾಡಿದವರಾಗಿದ್ದರೆ ಅದರಿಂದ್ದ ಪಾಠ ಕಲಿತುಕೊಳ್ಳಬೇಕು, ಮತ್ತೆ ಆ ತಪ್ಪಿನಿಂದ ಮುಕ್ತನಾಗಬೇಕು.
🔎ನಮ್ಮ ಅತೀ ದೊಡ್ಡ ಶತ್ರುವಾಗಿದೆ ನಿರಾಶೆ. ಅದಕ್ಕೆ ನಮ್ಮ ಮನ:ಸ್ಸಮಾಧಾನ ನಾಶಪಡಿಸಲು ತಾಕತ್ತು ಇದೆ.
🔎ಕಳೆದು ಹೋದ ಕಾಲವನ್ನು ಬದಲಿಸಲು ನಮ್ಮಿಂದ ಸಾದ್ಯವಿಲ್ಲ. ಇನ್ನು ಬಾಕಿ ಇರುವ ಕಾಲದಲ್ಲಿ ಏನು ಸಂಭವಿಸಬಹುದು ಎಂದು ಕೂಡಾ ನಮಗೆ ತಿಳಿದಿಲ್ಲ.
ಮತ್ತೇಕೆ ನಾವು ದುಃಖಿಸಬೇಕು.
🔎ಆಹಾರ ಕಡಿಮೆ ಸೇವಿಸಿ, ಶರೀರಕ್ಕೆ ಆರೋಗ್ಯ ವೃದ್ದಿಯಾಗಬಹುದು.
🔎ಪಾಪಗಳು ಕಡಿಮೆ ಮಾಡಿ, ಮನಸ್ಸಿಗೆ ಅರೋಗ್ಯ ಉಂಟಾದಿತು.
🔎ದುಃಖಗಳನ್ನು ಕಡಿಮೆ ಮಾಡಿ, ಹೃದಯಕ್ಕೆ ಅರೋಗ್ಯವಿರಬಹುದು.
🔎ಮಾತು ಕಡಿಮೆ ಮಾಡಿ, ಜೀವನಕ್ಕೆ ಆರೋಗ್ಯ ಜಾಸ್ತಿಯಾದಿತು.
🔎ಜೀವನವೇ ಕಡಿಮೆ ಇರುವುದು, ಅದರಲ್ಲಿ ಚಿಂತಿತನಾಗಿಯೂ, ದುಃಖಿಸಿಯೂ, ಮತ್ತೆ ಮತ್ತೆ ಜೀವನವನ್ನು ಸಣ್ಣದು ಮಾಡಬಾರದು.
🔎ಕೆಟ್ಟದಾದ ನಾಲಗೆಯಿಂದ ಹೊರಡುವ ಕೆಟ್ಟ ಮಾತಿಗೆ ಆ ನಾಲಗೆಗಿಂತಲೂ, ಅದರ ಯಜಮಾನನಿಗೆ ಆಗಿದೆ ಹೆಚ್ಚು ದೋಷ ಉಂಟು ಮಾಡುವುದು.
🔎ಸುಂದರಿಯಾದ ಸ್ತ್ರೀ ಆಭರಣವಾದರೆ, ಸತ್'ವೃತ್ತಿಯಾದ ಸ್ತ್ರೀ ನಿಧಿಯಾಗಿದೆ.
©ಮನಸು ಸುಂದರವಾದರೆ ಕಾಣುವುದೆಲ್ಲವೂ ಸುಂದರವಾಗಿರುವುದು.
ಸ್ನೇಹಿತರೆ ಇದನ್ನು ಓದಿದ ನಂತರ ಇಷ್ಟವಾದರೆ ವರ್ಗಾಯಿಸಿರಿ, ಕಾರಣ ಒಳಿತನ್ನು ತಿಳಿಯಲು ಕಾತರದಿಂದಿರುವ ಸಾವಿರಾರು ಸ್ನೇಹಿತರು ನಮಗೆ ಸುತ್ತಲೂ ಇದ್ದಾರೆ ಎಂಬ ವಿಷಯವನ್ನು ಮರೆಯದಿರಿ..
*ಶುಭವಾಗಲಿ*.
ಅನುವಾದ:
✍ಗಫೂರ್ ಬಾಯಾರ್
🎱❣❣❣❣❣❣❣💟
No comments:
Post a Comment