ನೂತನವಾದಿಯನ್ನು ಗೌರವಿಸುವಿಕೆ, ನೂತನವಾದಿಯ ಸಾಧನೆಯ ಬಗ್ಗೆ ಅಭಿಮಾನ ಪಡುವಿಕೆ, ಇದು ಧರ್ಮ ದ್ರೋಹದ ಕೆಲಸ..!
ಸುನ್ನೀ ಪ್ರಸ್ತಾನದಲ್ಲಿ ಗುರುತಿಸಿಕೊಂಡ ಕೆಲವರು, ಝಾಕಿರ್ ನಾಯಿಕ್ ಗೆ ಗೌರವ ಸೂಚಿಸುವಂತಹ ಮೆಸೇಜ್ ಗಳನ್ನು ಫೋರ್ವರ್ಡ್ ಮಾಡುತ್ತಿರುವುದು ಕಂಡುಬರುತ್ತಿದೆ.
ಅಷ್ಟಕ್ಕೂ ಝಾಕಿರ್ ನಾಯಿಕ್, ಗೌರವಿಸಬೇಕಾದಂತಹ ವ್ಯಕ್ತಿ ಅಲ್ಲ.ಗೌರವಿಸಲೂ ಬಾರದು. ಯಾಕೆಂದರೆ, ಝಾಕಿರ್ ನಾಯಿಕ್, ಮೌಲಿದ್, ತವಸ್ಸುಲ್ ಮತ್ತು ಇಸ್ತಿಗಾಸ, ಈದ್ ಮಿಲಾದ್ ನಂತಹ, ಪ್ರವಾದಿ ಸ.ಅ ರು ಕಳಿಸಿದ ಸುನ್ನತನ್ನು ಶಿರ್ಕ್ ಎಂದು ವಾದಿಸುವ ಅಪ್ಪಟ ನೂತನವಾದಿಯಾಗಿದ್ದಾರೆ. ಪ್ರವಾದಿ (ಸ.ಅ) ರ ಸುನ್ನತನ್ನು ನಿಷೇಧಿಸುವ ನೂತನವಾದಿಯನ್ನು ಗೌರವಿಸಬಾರದೆಂಬುದು ಪ್ರವಾದಿ ವಚನವಾಗಿದೆ.
"ಯಾರಾದರೂ ನೂತನವಾದಿಯನ್ನು ಗೌರವಿಸಿದರೆ, ಅವನು ಇಸ್ಲಾಂ ಧರ್ಮವನ್ನು ನಾಶಮಾಡಲು ಸಹಾಯಮಾಡಿದವನಾಗಿದ್ದಾನೆ" (ಹದೀಸ್)
ಇಸ್ಲಾಂ ಧರ್ಮವನ್ನು ನಾಶಮಾಡಲು ಟೊಂಕಕಟ್ಟಿ ನಿಂತ ಅದೆಷ್ಟೋ ಇಸ್ಲಾಮಿನ ಶತ್ರುಗಳು ನಮ್ಮ ಮುಂದೆ ಇದ್ದಾರೆ. ಅಂತಹ ಇಸ್ಲಾಮಿನ ಶತ್ರುಗಳ ಸಾಲಿನಲ್ಲಿ ನಾವುಕೂಡಾ ನಮಗರಿಯದೇ ಸೇರಿಕೊಳ್ಳುತ್ತಿದ್ದೇವೆ, ನೂತನವಾದಿಯಾದ ಝಾಕಿರ್ ನಾಯಿಕ್ ರಂತಹವರನ್ನು ಗೌರವಿಸಿ.
ಒಬ್ಬ ವ್ಯಕ್ತಿಯ ಸಾಧನೆಗಳು, ಆತನನ್ನು ಗೌರವಿಸುವುದಕ್ಕೊಂದು ಮಾನದಂಡ ಖಂಡಿತಾ ಅಲ್ಲ. ಆತ ಅದೆಂತಹ ಸಾಧನೆಗಳ ರಾಜನಾದರೂ ಸರಿ. ಆ ಸಾಧನೆಗಳು ಅಲ್ಲಾಹನಿಗೆ ಬೇಡವೆಂದಾದರೆ, ನಾವದಕ್ಕೆ ಗೌರವ ಕೊಡುವುದು ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಧಿಕ್ಕರಿಸಿದಂತೆ.
ಗೌರವ ಕೊಡುವುದಕ್ಕೆ ಸಾಧನೆಗಳು ಮಾನದಂಡವಾಗಿರುತ್ತಿದ್ದರೆ,ಇಂದು ಅತ್ಯಂತ ಹೆಚ್ಚು ಗೌರವಿಸಲ್ಪಡುವ ವ್ಯಕ್ತಿ ಇಬ್ಲೀಸ್ ಆಗಿರುತ್ತಿದ್ದ.
ಝಾಕಿರ್ ನಾಯಿಕರ ಸಾಧನೆಯನ್ನು ಹೆಮ್ಮೆಯಿಂದ ಹೇಳಿನಡೆಯುವ ಕೆಲವೊಂದು ಸುನ್ನಿಗಳೆನಿಸಿಕೊಂಡವರು ನಮ್ಮಲ್ಲಿದ್ದಾರೆ. ಈ ಬಗ್ಗೆ ಅವರು ಅಜ್ಙಾನಗಳಾಗಿರಬಹುದು. ನೂತನವಾದಿಗಳು ಅದೆಂತಹ ಸಾಧನೆಗಳನ್ನು ಮಾಡಿದರೂ ಅಲ್ಲಾಹು ಅದನ್ನು ಸ್ವೀಕರಿಸುವುದಿಲ್ಲ.
"ಯಾರಾದರೂ ನೂತನವಾದಿ ಆದರೆ, ಅವನಿಂದ ಕಡ್ಡಾಯ ಮತ್ತು ಸುನ್ನತ್ ಆದ ಯಾವೊಂದು ಇಬಾದತನ್ನೂ ಅಲ್ಲಾಹನು ಸ್ವೀಕರಿಸಲಾರ" (ಹದೀಸ್)
ನೂತನವಾದಿಯ ಯಾವೊಂದು ಸತ್ಕರ್ಮಗಳನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ ಎಂಬುದು ಪ್ರವಾದಿ ಸ.ರ ಹದೀಸ್ ನಿಂದ ಸ್ಪಷ್ಟವಾಗಿದೆ. ಅಲ್ಲಾಹನ ಬಳಿ ಸ್ವೀಕರಿಸಲ್ಪಡುವುದರ ಮಾನದಂಡ ಸತ್ಯ ವಿಶ್ವಾಸ ಮಾತ್ರವಾಗಿದೆ. ಅಲ್ಲಾಹನು ಸ್ವೀಕರಿಸದ, ಅಲ್ಲಾಹನಿಗೆ ಬೇಡವಾದ, ಅಲ್ಲಾಹನ ಬಳಿ, ಬೆಲೆ ಕಲ್ಪಿಸದ ಕಾರ್ಯವೊಂದಕ್ಕೆ ನಾವು ಗೌರವ ಸೂಚಿಸುವುದು, ಅಲ್ಲಾಹು ಮತ್ತು ಪ್ರವಾದಿ ಯವರನ್ನು ತಾತ್ಸಾರ ಮಾಡಿದಂತಾಗುತ್ತದೆ.
ಸುನ್ನೀ ಸಹಮಿತ್ರರೇ, ಬಾಹ್ಯ ನೋಟದ ಆಕರ್ಷಣೆಗೆ ಮಾರು ಹೋಗಿ,ನೂತನವಾದಿಯನ್ನು ಗೌರವಿಸಿ, ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಧಿಕ್ಕರಿಸುವ ಧಿಕ್ಕಾರಿಗಳು ನಾವಾಗಬಾರದು. ಅಲ್ಲಾಹು ಮತ್ತು ರಸೂಲ್ ಸ.ಅ ರಿಗೆ ಬೇಡವಾದದ್ದು ನಮಗೂ ಬೇಡವಾಗಲಿ.ನಮ್ಮ ಪ್ರೀತಿ,ಸ್ನೇಹ, ದ್ವೇಷ ಎಲ್ಲವೂ ಅಲ್ಲಾಹು ಮತ್ತು ಪ್ರವಾದಿ ಸ.ಅ ರಿಗಾಗಿ ಮಾತ್ರವಾಗಿದೆ. ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಸಂಪೂರ್ಣವಾಗಿ ಅನುಸರಿಸುವವರನ್ನು ನಾವು ಪ್ರೀತಿಸೋಣ, ಗೌರವಿಸೋಣ. ಅಲ್ಲಾಹು ಮತ್ತು ಪ್ರವಾದಿಯವರ ಆಜ್ಙೆಯನ್ನು ಧಿಕ್ಕರಿಸಿ ನಡೆಯುವವರನ್ನು ನಾವು ಎಂದೆಂದೂ ದ್ವೇಷಿಸೋಣ.ಇದು ಸತ್ಯ ವಿಶ್ವಾಸದ ಭಾಗವಾಗಿದೆ. ಇದುವೇ ಪರಲೋಕ ವಿಜಯದ ದಾರಿ.
ನೂತನವಾದಿಯ ಬಗ್ಗೆ ಹೆಮ್ಮೆ ಪಡುವಿಕೆ, ನೂತನವಾದಿಯನ್ನು ಗೌರವಿಸುವಿಕೆ, ನಮ್ಮ ಈಮಾನ್ ಮಂಕಾಗುವುದಕ್ಕೆ ಕಾರಣವಾಗುತ್ತದೆ. ನಮ್ಮ ಈಮಾನ್ ಗೆ ಚ್ಯುತಿ ಬರುವಿಕೆಯು, ನಮ್ಮ ಪರಲೋಕ ಜೀವನದ ಪರಾಜಯವಾಗಿದೆ. ಈಮಾನ್ ಮಂಕಾದವರಿಗಲ್ಲದೆ (ಕಪಟ ವಿಶ್ವಾಸಿಗಲ್ಲದೆ) ಝಾಕಿರ್ ನಾಯಿಕ್ ರಂತಹ ನೂತನವಾದಿಯಿಂದ ಹೆಮ್ಮೆಪಟ್ಟುಕೊಳ್ಳಲು ಸಾಧ್ಯವಿಲ್ಲ.
ನೂತನವಾದಿಯನ್ನು ಗೌರವಿಸುವಂತಹ ದುರ್ಗತಿಯಿಂದ ಅಲ್ಲಾಹನು ನಮ್ಮೆಲ್ಲರನ್ನು ರಕ್ಷಿಸಲಿ....ಆಮೀನ್.
✏...ಕೆ.ಸಿ ಎಣ್ಮೂರು
No comments:
Post a Comment