Saturday, October 21, 2017

ಮಂಕೂಸ್ ಮೌಲೂದ್
         ವಿಮರ್ಶನೆಗಳಿಗೆ ಉತ್ತರ..

✒✒✒✒✒✒✒✒✒

ಹೌದು ಸಳಪಿಗೆ ಮೌಲೂದ್ ಅಂದರೆ ಅಲರ್ಜಿ.
 ಕಾರಣ ಅದರಲ್ಲಿರವುದೇ ನಮ್ಮ ಮುತ್ತು ನೆಬಿಯವರ ಗುಣಗಾನ.
ಅದೇಗೆ ಅವನಿಗೆ ಪಥ್ಯವಾಗುವುದು..?
ಅವನ ಉಸ್ತಾದ್ ಇಬ್ಲೀಸ್ ನಿಗೂ ಕೂಡಾ ನೆಬಿಯವರ ಹೆಸರು ಅಲರ್ಜಿ..!!
ಮತ್ತೆ ಗುಣಗಾನ ಮಾಡಿದರೆ ಅವನ ಬಿಪಿ ಏರದೇ ಇರುತ್ತದಾ..??
ಅದಲ್ಲವೇ ಅಝಾನ್ ಕೇಳುವಾಗ ಇಬ್ಲೀಸ್ ಎಬಾ.... ಎಂತಹ ಕರ್ಕಶ ..ವೆಂಬ ರೀತಿಯಲ್ಲಿ ದೂರ ಓಡಿಹೋಗುತ್ತಾನೆ.
ಕಾರಣ ಅಝಾನ್ ನಲ್ಲಿ ನಮ್ಮ ಮುತ್ತು ನೆಬಿಯರ ಹೆಸರು ಎರಡು ಬಾರಿ ಹೇಳಲ್ಪಡುತ್ತೆ ತಾನೇ..??
ಅಂದರೆ ಇಬ್ಲೀಸನಿಗೆ ಪ್ರವಾದಿಗಳ ಗುಣಗಾನ ಅಲರ್ಜಿಯಾದಂತೆ ಅವನ ಶಿಷ್ಯಂದಿರಾದ ಸಳಪಿಗಳಿಗೂ ಪ್ರವಾದಿ ಕೀರ್ತನೆ ಅಲರ್ಜಿ ಹಾಗಾಗಿ ಅವನು ಮೌಲೂದನ್ನು ಅವನಿಗಾಗುವ ರೀತಿಯಲ್ಲಿ
ವಿಮರ್ಶಿಸಿ, ಅದರಲ್ಲಿ ಹಲವಾರು ತಪ್ಪುಗಳು ಇದೆಯೆಂಬ ಸುಳ್ಳನ್ನು ನಿರಂತರ ಹೇಳಿ ಗೀಬಲ್ಸ್ ನ ತಂತ್ರ ದಂತೆ ಒಂದು ಸುಳ್ಳನ್ನು ನಿರಂತರ ಹೇಳಿ  ಸತ್ಯವೆಂಬಂತೆ ಬಿಂಬಿಸುತ್ತಾನೆ.!!

ಅದಕ್ಕಾಗಿ ಸಹೀಹ್ ಆದ ಹದೀಸನ್ನು ಳಹೀಫ್ ,ಮವ್ಲೂಅ್ ಎಂದು ಹೇಳಲು ಅವನು ಹೇಸಲ್ಲ...!!

ಅದಕ್ಕಾಗಿ ಅಲ್ಬಾನಿಯಂತಹ ಳಹೀಫ್ ಸ್ಪಷಲಿಸ್ಟ್ ನ ಪಾದಾರವಿಂದ ಕ್ಕೆ ಮುಗಿಬಿದ್ದಾದರೂ ,ನೆಬಿಯವರ ಕೀರ್ತನೆ ಇರುವ ಹದೀಸನ್ನು ದುರ್ಬಲ ವೆಂದು ಘೋಷಿಸುತ್ತಾನೆ..!!

ನೆಬಿಯವರ ಮೌಲಿದ್ ಇರುವ ಹದೀಸ್ ಎಂದರೆ ಈ ಸಳಪಿ ಗೆ ಅಷ್ಟೊಂದು ಅಲರ್ಜಿ.!!
ಹಾಗಾಗಿಯೇ ಮಂಕೂಸ್ ಮೌಲೂದ್ ನಲ್ಲಿ ಬಂದಂತಹ ಕೆಲವೊಂದು ಪರಾಮರ್ಶೆ,
ನೂಹ್ ನೆಬಿ (ಅ) ಹಡಗಿನಲ್ಲಿ ಹತ್ತಿ ರಕ್ಷೆ ಹೊಂದಲು ಮುತ್ತು ನೆಬಿಯವರು ನಿಮಿತ್ತವಾಗಿದ್ದರು.
ಅದೇ ರೀತಿ ಇಬ್ರಾಹಿಮ್ ನೆಬಿ (ಅ) ರನ್ನು ಬೆಂಕಿಗೆ ಎಸೆಯಲ್ಟಟ್ಟಾಗ ಅಲ್ಲಿ ಕೂಡಾ ನಮ್ಮ ಮುತ್ತು ನೆಬಿಯವರು ರಕ್ಷೆ ಹೊಂದಲು ನಿಮಿತ್ತವಾಗಿದ್ದರು ಎಂಬ ಸಾಲನ್ನು ಕಟ್ಟು ಕಥೆಯೆಂದು ಸಳಪಿ ಬಿಂಬಿಸುತ್ತಾನೆ..!!
ನಹೂಝ್ ಬಿಲ್ಲಾ...!!!

ಹಾಗಾಗಿ ಅದರ ಕುರಿತು ಹದೀಸ್  ಮತ್ತು ಖುರಾನ್ ವ್ಯಾಖ್ಯಾನ ಏನು ಹೇಳುತ್ತದೆ ಎಂದು ನೋಡೋಣ.👇👇👇

 🔘👈 وتقلبك في الساجدين اخ...
شعراء 219
👉ಸಾಷ್ಟಾಂಗ (ಸುಜೂದ್)ವೆರಗುವವರಲ್ಲಾಗಿ ಬಂದಿರುವ ತಮ್ಮ ಚಲನ ...( ನೋಡುವವನು)
👆👆ಈ ಸೂಕ್ತದ ವಿವರಣೆಯಲ್ಲಿ ಇಮಾಮ್ ಸುಯೂಥಿ ಬರೆಯುತ್ತಾರೆ.✒👇👇
🔘👈 واخرج ابن ابي حاتم وابن مردويه وابو نعيم في الدلائل عن ابن عباس في قوله
(وتقلبك في الساجدين ) قال:  ما زال النبي صلي الله عليه وسلم يتقلب في اصلاب الانبياء حتي ولدته امه

👉ಇಬ್ನ್ ಅಬೀ ಹಾತಿಮ್ (ರ) ,ಇಬ್ನ್ ಮರ್ದವೈಹಿ (ರ) ,ಅಬೂ ನುಹೈಮ್ (ರ)
'ದಲಾಇಲ್' ನಲ್ಲಿ ಇಬ್ನ್ ಅಬ್ಬಾಸ್ (ರ) ರಿಂದ ವರದಿ ಮಾಡುತ್ತಾರೆ.
"ಸಾಷ್ಟಾಂಗವೆರಗುವವರ ಸಮೂಹದಲ್ಲಿರುವ ತಮ್ಮ ಚಲನವು"
ಎಂಬ ಆಯತ್ ನ ವ್ಯಾಖ್ಯಾನದಲ್ಲಿ ಅವರು ಹೇಳುತ್ತಾರೆ.
ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ತಾಯಿ ಜನ್ಮ ನೀಡುವ ತನಕ ಅವರು ಪ್ರವಾದಿಗಳ ಬೆನ್ನುಗಳಲ್ಲಿ ಹಸ್ತಾಂತರವಾಗುತ್ತಿದ್ದರು.
ಅದ್ದುರ್ರ್ ಲ್ ಮನ್ಸೂರ್ 7/418

ನಾನು ಕೆಳಗೆ ಕೊಡುವ ಹದೀಸ್ ಗಮನಿಸಿ..👇👇
🔘👈 واخرج ابن مردويه عن ابن عباس قال سالت رسول الله صلي الله عليه وسلم فقلت بابي انت وامي اين كنت وآدم في الجنة ؟
👉ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ.
ನಾನು ಮುತ್ತು ನೆಬಿಯವರಲ್ಲಿ ಕೇಳಿದೆ.
"ಆದಂ ನೆಬಿ(ಅ) ಸ್ವರ್ಗದಲ್ಲಿರುವಾಗ ಓ ನೆಬಿಯವರೇ ತಾವು ಎಲ್ಲಿದ್ದದ್ದು..?

فتبسم حتي بدت نواجده ثم قال
ಆಗ...

ಮುತ್ತು ನೆಬಿಯವರು ತಮ್ಮ ಸುಂದರವಾದ ಬಿಳುಪು ದಂತಗಳು ಹೊರಗೆ ಕಾಣತಕ್ಕ ರೀತಿಯಲ್ಲಿ ಮಂದಸ್ಮಿತರಾಗಿ ಹೇಳಿದರು.

"اني كنت في صلبه ،وهبط الي الارض وانا في صلبه ،وركبت السفينة في صلب ابي نوح وقذفت في النار في صلب ابي ابراهيم ولم يلتق ابوي قط علي سفاح....اخ
الدر المنثور 7/418
"ಆಗ ನಾನು ಆದಮರ ಬೆನ್ನಿನಲ್ಲಿದ್ದೆ.ನಾನು ಅವರ ಬೆನ್ನಲ್ಲಿರುವಾಗಲೇ ಅವರನ್ನು ಭೂಮಿಗೆ ಇಳಿಸಲಾಯಿತು."

"ನನ್ನ ಪಿತಾಮಹ ಹಝ್ರತ್ ನೂಹ್ (ಅ) ರ ಬೆನ್ನ ಮೇಲೆ ಇದ್ದಾಗ ನಾನು ಹಡಗು ಹತ್ತಿದೆ"

"ನನ್ನ ಪಿತಾಮಹ ಇಬ್ರಾಹಿಮ್ (ಅ)ರ ಬೆನ್ನ ಮೇಲೆ ಇದ್ದಾಗ ನನ್ನನ್ನು ಬೆಂಕಿಗೆ ಎಸೆಯಲಾಯಿತು..!!"

ನನ್ನ ಮಾತಾಪಿತರು ಒಮ್ಮಯೂ ವ್ಯಭಿಚಾರ ಮಾಡಿದವರಲ್ಲ."

"ಪರಿಶುದ್ಧವಾದ ಬೆನ್ನುಗಳಿಂದ ಸಂಶುಧ್ದವಾದ ಗರ್ಭಾಶಯಕ್ಕೆ ಶುಧ್ದೀಕರಿಸಲ್ಪಟ್ಟವನಾಗಿ ಅಲ್ಲಾಹು ನನ್ನನ್ನು ಹಸ್ತಾಂತರಿಸುತ್ತಿದ್ದ..................
ಅದ್ದುರ್ರಲ್ ಮನ್ಸೂರ್  7/418

👉 ಅಂತ್ಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಕಾಶ ಬೆನ್ನ ಮೇಲೆ ಇರುವಾಗ ಬೆಂಕಿಗೆ ಎಸೆಯಲ್ಪಟ್ಟರೂ ಬೇರೆ ಯಾವುದೇ ಅಪಾಯ ಸಂಭವಿಸಿದರೂ ಅದು ಎಫಕ್ಟ್ ಆಗದು ಎಂಬುದು ಖಚಿತ ತಾನೇ.
ಹಾಗಾಗಿ ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾರಣದಿಂದ,
 ನೂಹ್ ನೆಬಿಯವರನ್ನು ಹಡಗಿನ ಮೂಲಕ,  ಇಬ್ರಾಹಿಮ್ ನೆಬಿಯವರನ್ನು ಬೆಂಕಿಯಿಂದಲೂ ಅಲ್ಲಾಹು ರಕ್ಷೆ ನೀಡಿದನು ಎಂದು ಮಂಕೂಸ್ ಮೌಲೂದ್ ಹೇಳಿದುದರಲ್ಲಿ ಯಾವ ತಪ್ಪು ಉಂಟು..??
ನಿಜವಾಗಿ ಹದೀಸ್ ನಲ್ಲಿ ಬಂದಂತಹ ಪರಾಮರ್ಶೆ ಯನ್ನು ಮಂಕೂಸ್ ಮೌಲೂದ್ ಹೇಳಿದ್ದು ತಪ್ಪಾ..??
ಹದೀಸ್ ನಲ್ಲಿ ಬಂದಂತಹ ಆ ಪರಾಮರ್ಶೆಯನ್ನು ನಾವು ಮಂಕೂಸ್ ಮೌಲೂದ್ ನಲ್ಲಿ ಓದಿದರೆ ನಾವೆಲ್ಲಾ ತಪ್ಪುಗಾರರಾ.??

ಈ ಸಳಪಿ ಯಾಕಾಗಿ ಮುಸ್ಲಿಮರ ಮಧ್ಯೆ ಭಿನ್ನಮತ ಉಂಟು ಮಾಡುತ್ತಾನೆ.??

ಎಲ್ಲಾ ಒಳ್ಳೆಯ ಕಾರ್ಯಗಲ್ಲಿ ಇನ್ವೋಳ್ ಆಗಿ ಅಲ್ಲಿ ಭಿನ್ನತೆ ಸೃಷ್ಟಿ ಮಾಡಿ ಮುಸ್ಲಿಮರು ತಮ್ನ ತಮ್ಮ ಲ್ಲಿ ಕಚ್ಚಾಡುವುದನ್ನು ನೋಡಿ ಗಹಗಹಿಸಿ ನಗುತ್ತಾನೆ.
ಇವನ ಹೆಸರು ಇಬ್ಲೀಸ್ ಅಲ್ಲದಿದ್ದರೆ ಮತ್ತೆ ಯಾರ ಹೆಸರು ಇಬ್ಲೀಸ್..??

ಇದೀಗ ನೋಡಿ ನಾನು ಮೊನ್ನೆ ಇಮಾಮ್ ಹಾಕಿಮ್ (ರ) ತನ್ನ ಮುಸ್ತದ್ರಕ್ ಎಂಬ ಗ್ರಂಥದಲ್ಲಿ ಪರಂಪರೆ ಸಹೀಹ್ ಎಂದು ಮೊಹರು ಹಾಕಿದ ಅದಮ್ ನೆಬಿ, ನಮ್ಮ ಮುತ್ತು ನೆಬಿಯವರನ್ನು ತವಸ್ಸುಲ್ ಮಾಡಿದ ಹದೀಸ್ ಕೊಟ್ಟಾಗ
ಅದನ್ನು ಮುಟ್ಟಲು ಅವನಿಂದಾಗಲಿಲ್ಲ.

ಹಾಗಾಗಿ ಇಮಾಮ್ ಹಾಕಿಮ್ ಸಹೀಹ್ ಮಾಡಿದ ಹದೀಸನ್ನು ಳಹೀಫ್ ಮಾಡಲಿಕ್ಕಾಗಿ ಅತ್ತ ಇತ್ತ ಹುಡುಕಿ ದಹಬಿ,ಅಲ್ಬಾನಿ ಯ ಹೇಳಿಕೆ ತೆಗೆದುಕೊಂಡು ಬಂದಿದ್ದಾನೆ.

ಹಾಗದರೆ ಇಮಾಮ್ ಹಾಕಿಮ್ (ರ) ಆ ಹದೀಸ್ ಸಹೀಹ್ ಎಂದು ಹೇಳಿದ್ದು ಸುಳ್ಳಾ...??
ತವಸ್ಸುಲ್ ಶಿರ್ಕ್ ಎಂದಾದರೆ ಇಂತಹ ಹದೀಸ್ ಗಳನ್ನು ಬರೆದು ಇಮಾಮ್ ಹಾಕಿಮ್ (ರ) ಶಿರ್ಕನ್ನು ಪ್ರೋತ್ಸಾಹಿಸಿದ್ದಾ..??

ಈ ಹದೀಸನ್ನು ಮಂಕೂಸ್ ಮೌಲೂದ್ ನಲ್ಲಿ ಓದಿದ ಸುನ್ನಿಗಳು ಮುಶ್ರಿಕ್ ಎಂದಾದರೆ
ಈ ಹದೀಸನ್ನು ಬರೆದ ಇಮಾಮ್ ಹಾಕಿಮ್ (ರ) ಕೂಡಾ ಮುಶ್ರಿಕಾ.??

ಇಂತಹ ಹದೀಸ ನ್ನು ರಿಪೋರ್ಟ್ ಮಾಡಿದ ಇಮಾಮ್ ಬೈಹಕಿ,(ರ)
ಇಮಾಮ್ ತ್ವಬ್ರಾನಿ,(ರ)
ಇಮಾಮ್ ಸುಯೂಥಿ,(ರ)
ಇಮಾಮ್ ಖಸ್ತಲ್ಲಾನಿ,(ರ)
ಇಮಾಮ್ ಸುಬುಕಿ,(ರ)
ಅಲ್ಲಾಮ ಸುರ್ಖಾನಿ (ರ),
ಇಮಾಮ್ ಇಬ್ನ್ ಕಸೀರ್,
ಇಮಾಮ್ ಇಬ್ನ್ ಹಜರುಲ್ ಹೈತಮಿ
ಇವರೆಲ್ಲರೂ ತಪ್ಪುಗಾರರೇ..??
ಇವರೆಲ್ಲಾ ಶಿರ್ಕನ್ನು ಫ್ರೋತ್ಸಾಹಿಸಿದ ಮಹಾ ತಪ್ಪುಗಾರರೇ.??

ಅಲ್ಲ, ಇವರು ಯಾರೂ ಈ ಹದೀಸನ್ನು ವರದಿ ಮಾಡಿ ಬರೆದು ತಪ್ಪು ಮಾಡಿಲ್ಲ ಎಂದಾದರೆ,
ಮತ್ತೆ ಮಂಕೂಸ್ ಮೌಲೂದ್ ನಲ್ಲಿ ಮಾತ್ರ ಬರೆದರೆ, ಅಥವಾ ಓದಿದರೆ ಅದು ತಪ್ಪಾಗುವುದು ಹೇಗೆ...??

ಮಂಕೂಸ್ ಮೌಲೂದ್ ಅದರ ಇಷ್ಟಾನುಸಾರ ಬರೆದದಲ್ಲ ಇಷ್ಟೊಂದು ಇಮಾಮ್ ಗಳು ವರದಿ ಮಾಡಿದ ಹದೀಸಿನ ಸಾರಂಶ ಹೇಳಿದ್ದು ಮಾತ್ರ.
ಅದೇಗೆ ತಪ್ಪಾಗುವುದು..??

ತವಸ್ಸುಲ್ ಅನುವದನೀಯ ಎಂಬುವುದಕ್ಕೆ ಬೇರೆಯೂ ಆಯತ್ ಹದೀಸ್ ಪುರಾವೆ ಇದೆ.
ಮಂಕೂಸ್ ಮೌಲೂದ್ ನಲ್ಲಿ ಆ ಪರಾಮರ್ಶೆ ಕೊಟ್ಟದ್ದು ಮುತ್ತು ನೆಬಿಯವರ ಸ್ಥಾನ ಪವರ್ ತೋರಿಸಿ ಕೊಡಲಿಕ್ಕಾಗಿದೆಯೇ ಹೊರತು ಅದು ತವಸ್ಸುಲ್ ಗೆ ಪುರಾವೆಯಾಗಿ ಕೊಟ್ಟದ್ದಲ್ಲ.
ಹಾಗಾಗಿ ಹದೀಸ್ ಳಹೀಫ್ ಆದರೂ ಅದನ್ನು ನಮಾಝ್ ರೋಝ ಮುಂತಾದ ಕಡ್ಡಾಯ ಕರ್ಮಗಳಿಗೆ ಪುರಾವೆಯಾಗಿ ಬಳಸಬಾರದೆಯೇ ಹೊರತು ನೆಬಿಯವರ ಮಹತ್ವ ಗುಣಗಾನ ಹೇಳಲು ಬಳಸಬಾರದೆಂದು ಯಾವ ಇಮಾಮ್ ಗಳು ಫತ್ವ ಹೊರಡಿಸಿದ್ದು..??
ಅಲ್ಲದಿದ್ದರೂ ನೆಬಿಯವರ ಖಸಾಇಸ್ ಹೇಳುವ ಹಲವಾರು ಹದೀಸ್ ಗಳು ಳಹೀಫ್ ತಾನೇ..??
ಆದರೆ ಇಲ್ಲಿ ಈ ಹದೀಸನ್ನು ಇಮಾಮ್ ಹಾಕಿಮ್ ಸಹೀಹ್ ಮಾಡಿಯೂ ಕೂಡಾ
ಸಳಪಿ ಗೆ ಅದು ಅಲರ್ಜಿಯಾಗಿ ಹುಣ್ಣಾಗಿ ನೀರು ಬಂದು ಅಸಹ್ಯ ನೋವಿನಿಂದ ನರಳಾಡುತ್ತಾ ಹೋಗಿ ಅದನ್ನು ಹೇಗಾದರೂ ಮಾಡಿ ಳಹೀಫ್ ಮಾಡುವಲ್ಲಿ ಸಫಲನಾದ...!!
ಮಾರಿ..!!
ಕಾರಣ ನೆಬಿಯವರ ಮಹತ್ವ ವಿವರಿಸುವ ಹದೀಸ್ ಎಂದು ಗೊತ್ತಾದರೆ ಸಾಕು ಅವನಿಗೆ ಅದು ಅಲರ್ಜಿ..!!
ಕನಿಷ್ಟ ಪಕ್ಷ ಹೋಗಲಿ ನೆಬಿಯವರ ಮಹತ್ವ ಅಲ್ಲವೇ ಓದುವವರು ಓದಲಿ ಅದೇನು ಕಡ್ಡಾಯ ಕರ್ಮಕ್ಕೆ ಪುರಾವೆಯಾಗಿ ಕೊಟ್ಟದ್ದೇನು ಅಲ್ಲವಲ್ಲ,
ಮಾತ್ರವಲ್ಲ ಇಮಾಮ್ ಹಾಕಿಮ್ (ರ) ಕೂಡಾ ಆ ಹದೀಸನ್ನು ಸಹೀಹ್ ಮಾಡಿದ್ದಾರೆ ಆದ್ದರಿಂದ ಇಷ್ಟವಿರುವವರು ಓದಲಿ ... ಬಿಡುವವರು ಬಿಡಲಿ ಎಂದು ಸುಮ್ಮನಾಗಬಹುದಿತ್ತು.
ಎಲ್ಲಿ ..
ಪವಿತ್ರ ಕುರಾನಿನ ನಂತರ ಮಸ್ಲಿಮರು
ಅವಿರೋದವಾಗಿ ಅಂಗೀಕರಿಸುವ  ಬುಖಾರಿ ಗ್ರಂಥದಿಂದ ಬರೋಬ್ಬರಿ ನಲ್ವತ್ತು ಹದೀಸ್ ಗಳನ್ನು ಳಹೀಫ್ ಮಾಡಿದ ಸಲಪಿಗಳ ಮುದಿ ನೇತಾರ ಸಲಾಮ್ ಸುಲ್ಲಮಿಯ ಮರಿ ಶಿಷ್ಯಂದಿರಲ್ಲವೇ ಇವರು.?

ಮುದಿ ಮೌಲವಿಯೇ ಹೀಗಾದರೆ ಮರಿ ಮೌಲವಿಗಳ ಅವಸ್ಥೆ ಹೇಳಬೇಕಾಗಿಲ್ಲ ತಾನೇ...??

ಇದೀಗ ಮಂಕೂಸ್ ಮೌಲಿದ್ ನಲ್ಲಿ 'ಇರ್ತಕಬ್ತು' ಇದೆಯೆಂದು ಸಳಪಿ ಅರಚುತಿದ್ದಾನೆ.
ಇನ್ಶಾ ಅಲ್ಲಾ....
ಅವನ ಮಹಾ ಮಾರಿ ವ್ಯಾಧಿ ಗೆ ಸೂಕ್ತ ಮದ್ದು ಕೊಡುವ,
ಏನಂತೀರಿ..??
ಮುಂದಿನ ಬರಹ ಅದಾಗಿರಲಿ
ಅಲ್ಲಾಹು ತೌಫಿಕ್ ನೀಡಲಿ ಆಮೀನ್
ಇತೀ ನಿಮ್ಮವನೇ ಆದ
✒ ಅಬೂಶಝ

No comments:

Post a Comment