ಐಕ್ಯತೆಯ ಕೂಗಿಗೆ ಧ್ವನಿಯಾಗುವ ಮೊದಲು ಒಂದ್ನಿಮಿಷ........!
"ನಿಮ್ಮಲ್ಲಿ ನಿಮ್ಮ ಸ್ವಂತ ಶರೀರಕ್ಕಿಂತ, ನಿಮ್ಮ ತಂದೆ-ತಾಯಿಗಿಂತ,ಹೆಂಡತಿ-ಮಕ್ಕಳಿಗಿಂತ ಮತ್ತು ನಿಮ್ಮ ಪ್ರೀತಿ ಪಾತ್ರರಾದವರಿಗಿಂತ ಹೆಚ್ಚು ನನ್ನನ್ನು ಪ್ರೀತಿಸದೇ ಇದ್ದರೆ ನೀವ್ಯಾರು ಪರಿಪೂರ್ಣ ಸತ್ಯ ವಿಶ್ವಾಸಿ ಆಗುವುದಿಲ್ಲ"ಎಂದು ಈ ಪ್ರಪಂಚದ ಸೃಷ್ಠಿಗೆ ಕಾರಣಕರ್ತರಾದ ಮುತ್ತು ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಅ)ರವರು ಹೇಳಿರುವಾಗ ಈಗ ಎಲ್ಲೆಡೆ ಕೇಳಿಬರುತ್ತಿರುವ ಷೋಷವಾಕ್ಯ ಸುನ್ನಿ-ಸಲಫಿ ಎಂದು ನೋಡಬೇಡಿ ಶತ್ರುಗಳು ಆಕ್ರಮಣ ಮಾಡುತ್ತಿದ್ದಾರೆ ಒಂದಾಗಿ ಬಾಳೋಣ ಎಂಬುವುದಾಗಿದೆ.ಗಾದೆ ಮಾತಿನಂತೆಯೇ "ಕೆಟ್ಟ ಮೇಲೆ ಬುದ್ದಿ ಬಂತು ಮತ್ತು ಊರು ಕೊಳ್ಳೆ ಹೊಡೆದು ಮೇಲೆ ಕೋಟೆ ಬಾಗಿಲು ಮುಚ್ಚಿದರು"ಎಂಬಂತೆ.
ಏನೇ ಇರಲಿ ನೀವು ಇಲ್ಲಿ ಪ್ರವಾಸಿಯವರಂತೆ ಜೀವಿಸಬೇಕೆಂದು ನಮ್ಮಲ್ಲಿ ಆಜ್ಞೆಯಾಗಿದೆ.ಈ ಲೋಕ ನಶ್ವರ ನಾಳೆ ಎಂಬುದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ.ಆದರೂ ನೀವು ಒಂದಾಗಿ ಶತ್ರುಗಳು ಆಕ್ರಮಣ ಮಾಡಿಯಾರು ಈ ದುನಿಯಾದಲ್ಲಿ ಎಂಬುದಾಗಿದೆ ಗುತ್ತಿಗೆ ಧರ್ಮರಕ್ಷಕರ ಘೋಷವಾಕ್ಯ.ಪ್ರವಾದಿ ಸ್ವ.ಅ.ರವರು ಹೇಳಿದರು ಅಂತ್ಯದಿನ ಸಮೀಪಿಸುವಾಗ ನೀವು ಬಹುಸಂಖ್ಯಾತರಿರುವಿರಿ ಆದರೆ ಶತ್ರುಗಳು ನಿಮ್ಮನ್ನು ಹಸಿದವರು ಅನ್ನವಿರುವ ತಟ್ಟೆಗೆ ಮುತ್ತಿಗೆ ಬೀಳುವಂತೆ ಶತ್ರುಗಳು ನಿಮ್ಮನ್ನು ಆಕ್ರಮಿಸುತ್ತಾರೆ.ಆದರೆ,ಕೆಲವು ರೆಡಿಮೇಡ್ ಧರ್ಮರಕ್ಷಕರು ಅದು ಸುಳ್ಳು ಮಾಡಲು ಹೆಣಗಾಡುತ್ತಿದ್ದಾರೆ ಆ ನೀರಸ ಪ್ರಯತ್ನ ವಿಪರ್ಯಾಸವೇ ಸರಿ.ಆದರೆ ಈ ಇಲ್ಲಸಲ್ಲದ ಆಧಾರರಹಿತ ಭಿನ್ನಾಭಿಪ್ರಾಯ ತೆಗೆಯುವಾಗ ಇರಲಿಲ್ಲವೇ ಇವರಿಗೆ ಐಕ್ಯತಾ ಮನೋಭಾವನೆ.
🔹ಪ್ರವಾದಿ ಸ್ವ.ಅ.ರವರ ಕಾಲದಿಂದಲೂ ನಡೆದು ಬರುತ್ತಿದ್ದ ಅರಬಿ ಭಾಷೆಯ ಕುತುಬಾ ಮಲಯಾಳದಲ್ಲಿ ಮಾಡುವ ಆವಶ್ಯವಿತ್ತೇ?
🔹ಆಧಾರಗಳಿಂದ ಧೃಡಪಟ್ಟ ಕೂಡು ಪ್ರಾರ್ಥನೆ,ಸುಬುಹಿ ನಮಾಝ್ ಕುನೂತ್,ಇಸ್ತಿಗಾಸ,ಮರಣದ ಮನೆಯಲ್ಲಿ ಕುರ್ಆನ್ ಪಾರಾಯಣ,ಮಹಾತ್ಮರ ಆಂಡ್ ನೇರ್ಚೆ ಮತ್ತು ಮೌಲಿದ್ ಪಾರಾಯಣ ಇವುಗಳನ್ನು ಪ್ರಶ್ನಿಸಿ ಸಾಧಿಸಿಧ್ದಾದರು ಏನು?ಉಮ್ಮತ್ತಿನ ನಡುವೇ ಭಿನ್ನಾಭಿಪ್ರಾಯವೇ?
🔹ಉಮ್ಮತ್ತಿಗಿಲ್ಲದ ಮುಉಜಿಸತ್ನಿಂದ ಮುಬಾಹಲ(ಶಾಪ ಪ್ರಾರ್ಥನೆ)ಮಾಡಲು ಹೋಗಿ ಅಲ್ಲಾಹನಿಗೆ ಸಮಯ ನಿಗದಿ ಪಡಿಸಿ ಯುಕ್ತಿವಾದಿಗಳಿಂದ ಅಲ್ಲಾಹನು ಇರುವನೇ ಎಂಬ ಸಂಶಯದ ಲೇಖನ ಬರೆಸಿ ಸಾಧಿಸಿದ್ದಾದರೂ ಏನು?
🔹ಯಾವುದೇ ಸ್ವಹಾಬಿಗಳಿಗಿಲ್ಲದ,ಇಮಾಮರಿಗಿಲ್ಲದ ತರಾವೀಹ್ನ ಸಂಖ್ಯೆಯಲ್ಲಿ ಸಂಶಯ ತಂದದ್ದು ಬೇಗ ಹೋಗಿ ಮಲಗಬೇಕೆಂಬ ದುರಾಸೆಯಿಂದಲೋ ಏನು?
🔹ಮಹಾತ್ಮರ ದೇಹ ಭೂಮಿ ತಿನ್ನುವುದಿಲ್ಲ ಅದು ಭೂಮಿಗೆ ಹರಾಂ ಎಂಬ ಧೃಡ ಆಧಾರವಿದ್ದರೂ ಪ್ರವಾದಿ(ಸ್ವ.ಅ)ಪವಿತ್ರದೇಹ ಭೂಮಿಯಲ್ಲಿ ಜೀರ್ಣಿಸಿದೆ ಎಂಬ ಹೇಯವಾದ ವಾದ ತಂದು ಯಾರನ್ನು ತೃಪ್ತಿ ಪಡಿಸಲು ಹೊರಟಿದ್ದು ಇವರು?
🔹ಇನ್ನು ಬಾಬರಿ ಮಸ್ಜಿದ್ ನಿರ್ನಾಮವನ್ನು ವಿರೋದಿಸುವವರು, ಇತರ ಸಂಘಟನೆ ಮೇಲೆ ಹಾಕಲು ಸ್ವಂತ ಮದ್ರಸಕ್ಕೆ ಬೆಂಕಿಕೊಡಲೂ ಹೇಸದಿರುವುದರಿಂದ ಏನು ಐಕ್ಯಪಾಠ ಕಲಿಯುವುದಿದೆ ಇವರ ಬಳಿ?
🔹ಜಾಗತಿಕ ಮಟ್ಟದ ಪಂಡಿತರೊಬ್ಬರು ಮಸೀದಿ ನಿರ್ಮಿಸಲು ಹೊರಟರೆ ಅದನ್ನು ವಿರೋದ ಮಾಡುವವರಿಗೆ ಇತ್ತೀಚಿಗೆ ನಡೆದ ಮಸ್ಜಿದ್ ಆಕ್ರಮಣವನ್ನು ವಿರೋದ ಮಾಡಲು ನೈತಿಕ ಹಕ್ಕಿದೆಯೇ?
🔹ಮದೀನಾದ ಮಣ್ಣನ್ನು ಒಬ್ಬ ಅವಮಾನಿಸಿದರೆ ಅವನು ಈಮಾನ್ ಇಲ್ಲದೆ ಸತ್ತುಹೋಗುತ್ತನೆಂಬ ಧೃಡವಾಕ್ಯವಿದ್ದರೂ ಪ್ರವಾದಿ(ಸ್ವ.ಅ)ರವರ ಪುಣ್ಯಪ್ರವಾದಿಯವರ ಆಸಾರನ್ನು ನಡುಬೀದಿಯಲ್ಲಿ ಅಮುಸ್ಲಿಮರು ಕೂಡ ನಾಚುವಂತೆ ಹೇಯವಾಗಿ ನಡೆಸಿಕೊಂಡವರೊಂದಿಗೆ ಐಕ್ಯಮಾಡಲು ಮನಸ್ಸಾಕ್ಷಿ ಒಪ್ಪಬಹುದೇ?
🔹ಒಬ್ಬ ಕುರುಡನ ಮುಂದೆಯೂ ಅನ್ಯಸ್ತ್ರೀ ಬರಬಾರದೆಂದು ಸೂಕ್ಷ್ಮತೆ ಕಲಿಸಿದ ಪ್ರವಾದಿ(ಸ್ವ.ಅ)ರವರು,ಅವರ ಧರ್ಮಪತ್ನಿ ಹಾಗೂ ಉಮ್ಮಆತುಲ್ ಮುಉಮಿನ್ ಆಯಿಷಾ ಬೀವಿ(ರ.ಅ)ರವರು ಯುದ್ದದಲ್ಲಿ ಪಾಲ್ಗೊಂಡಿದ್ದರೆಂದು ಆರೋಪ ಮಾಡಿ,ಸ್ತ್ರೀಯರನ್ನು ವೇದಿಕೆಗೆ ಮತ್ತು ಮಸ್ಜಿದ್ಗೆ ಪ್ರವೇಶ ಮಾಡಿಸುವವರೊಂದಿಗೆ ಐಕ್ಯವೆಂಬ ಮಾತು ಹೇಗೆ?
🔹ಪವಿತ್ರ ಇಸ್ಲಾಮಿನ ಇತಿಹಾಸದಲ್ಲಿ ಅನಿವಾರ್ಯತೆಯ ಯುದ್ದಗಳನ್ನು ದುರ್ವ್ಯಾಖ್ಯಾನ ಮಾಡಿ ತೀರ್ವವಾದಕ್ಕೆ ಬೆಂಬಲ ಕೊಡುವವರೊಂದಿಗೆ ಐಕ್ಯದ ಆಸೆ ಹೇಗೆ?
🔹ಯಾರು ಅಮುಸ್ಲಿಮರು ಹೇಳದ ಮಾತು"ಸೌದಿಯ ಆಡಳಿತ ನಮಗೆ ಸಿಕ್ಕಿದರೆ ಮೊದಲು ಮಾಡುವ ಕೆಲಸ ಮದೀನಾದ ಹಸಿರು ಗುಮ್ಮಟ ಒಡೆಯುವುದೆಂದು "ನೀಚ ನಾಲಿಗೆಯಿಂದ ಹೇಳುವವರೊಂದಿಗೆ ಐಕ್ಯಶ್ರಮ ಸಮುದಾಯಕ್ಕೆ ಒಳಿತೇ?
🔹ಕುರ್ಆನ್ ಮತ್ತು ಹದೀಸಿಗೆ ವಿರುದ್ದವಾಗಿಯೇ ಕಾರ್ಯಚರಿಸಿಯವರೊಂದಿಗೆ ಐಕ್ಯಮಾಡಿ ಎಂದು ಬೊಬ್ಬಿಡುವವರೆ ಹಾಗಾದರೆ ಅಲ್ಲಾಹು ಮತ್ತು ಅವನ ರಸೂಲ್(ಸ್ವ.ಅ)ರವರೊಂದಿಗೆ ಸಮರ ಸಾರಬೇಕೇ?
ಮುಂದಿನ ಒಂದು ಹೆಜ್ಜೆಇಡುವೆನೆಂದು ಕೂಡ ವಿಶ್ವಾಸವಿಲ್ಲದ ನಮಗೆ ನಶ್ವರ ಲೋಕದಲ್ಲಿ ಅಲ್ಲಾಹನ ರಸೂಲ್(ಸ್ವ.ಅ)ರವರೊಂದಿಗೆ ಸಮರ ಸಾಧಿಸಿದವರೊಂದಿಗೆ ಐಕ್ಯಮಾಡಿ ಶಾಶ್ವತ ಲೋಕದಲ್ಲಿ ಅಲ್ಲಾಹನ ನ್ಯಾಯಲಯದಲ್ಲಿ ಕೈ ಕಚ್ಚಬೇಕೇ?ಐಕ್ಯವೆಂದಾದರೆ ಕುರ್ಆನ್ ಮತ್ತು ಹದೀಸಿನಿಂದ ದೃಡಪಟ್ಟ ಅಂಶಗಳನ್ನು ಅಳವಡಿಸಿಕೊಳ್ಳುವುದಾದರೆ ಐಕ್ಯಕ್ಕೆ ಸಿಧ್ಧ.ಅದಲ್ಲದೇ ಯಾರೋ ಇಸ್ಲಾಮಿನ ಮೂಲ ಜ್ಞಾನವಿಲ್ಲದವರು ಮಾಡುವ ಅನಾಚಾರವನ್ನು ಶಿರ್ಕ್ ಕಿರ್ಕ್ ಎಂದು ನೈಜ ಸುನ್ನಿಗಳ ಮೇಲೆ ಆರೋಪ ಹೊರಿಸುವುದಾದರೆ ಎಂದಿಗೂ ಐಕ್ಯವಿಲ್ಲ.ಅದಲ್ಲದೇ ಅವರಿಗೆ ಇಸ್ಲಾಂನ ಅಹ್ಲ್ ಸುನ್ನತ್ ಜಮಾಅತ್ನ ಆಶಯಆದರ್ಶಗಳನ್ನು ಕಲಿಸಿಕೊಟ್ಟು ಸದೃಡರನ್ನಾಗಿ ಮಾಡುವುದಾದರೆ ಐಕ್ಯಕ್ಕೆ ಎಂದಿಗೂ ಸಿದ್ದ.
ಅಲ್ಲಾಹು ಎಲ್ಲರಿಗೂ ಸತ್ಯ ಅರ್ಥಮಾಡಿಸಲಿ.ಆಮೀನ್
✒..ಶಮೀರ್ ಶಂಸುದ್ದೀನ್ ಶೃಂಗೇರಿ.
No comments:
Post a Comment