☪ *ಪವಿತ್ರ ಉರೂಸ್'ನಲ್ಲಿ ನುಸಿಳಿದ ಆನಾಚಾರಗಳು.* ☪
✍ಗಫೂರ್ ಬಾಯರ್.
〰〰〰〰〰〰〰〰〰
ಆಗಲಿದ ಮಹಾತ್ಮರ ಅನುಷ್ಮರಣೆಯಾಗಿ ವರ್ಷಕ್ಕೊಮ್ಮೆ ಸಮೂಯಿಕವಾಗಿ ಆಚರಿಸುವ ಕಾರ್ಯಕ್ರಮವನ್ನು ನಾವು ಅಂಡ್ ನೇರ್ಚೆ ಅಥವಾ ಉರೂಸ್ ಎಂದು ಕರೆಯುತ್ತೇವೆ. ಇದು ಇಸ್ಲಾಮಿನಲ್ಲಿ ಅನುವದನಿಯವಾಗಿದೆ. ಸುನ್ನತ್ ಕೂಡ ಹೌದು. ಇದಕ್ಕೆ ಹದೀಸ್'ಗಳಲ್ಲಿ ಪುರಾವೆಗಳಿವೆ ಉದಾರಣೆಗೆ
ನಬಿ ﷺ ರವರು ಎಲ್ಲಾ ವರ್ಷದ ಆರಂಭದಲ್ಲಿ ಸ್ವಹಾಬಿವರ್ಯರ ಹಾಗೂ ಶುಹದಾಗಳ ಕಬರಿನ ಹತ್ತಿರ ಹೋಗುವುದು ವಾಡಿಕೆಯಾಗಿತ್ತು. ಅಲ್ಲಿ ಹೋಗಿ ಹೀಗೆ ಪ್ರಾರ್ಥಿಸುತ್ತಿದ್ದರು👇
"ನೀವು ಕ್ಷಮಿಸಿದರಿಂದ ನಿಮಗೆ ಅಲ್ಲಾಹುವಿನ ರಕ್ಷಣೆ ಇರಲಿ ನಿಮ್ಮೆಲ್ಲರ ಅಭಯ ಕೇಂದ್ರ ತುಂಬಾ ಶ್ರೇಷ್ಟವುಳ್ಳದಾಗಿದೆ." ಎಂದು ಹೇಳಿ ಹೊಗಳಿ ಪ್ರಾರ್ಥಿಸುತ್ತಿದ್ದರು.
ಈ ವಾಡಿಕೆಯನ್ನು ಅಬೂಬಕ್ಕರ್
[ರಅ] ಉಮ್ಮರ್ [ ರಅ] ಉಸ್ಮಾನ್ [ರಅ] ಇವರು ಕೂಡ ಹಿಂಬಾಲಿಸಿದರು.
ತ್ವಬ್ರಾನಿ 2/241.
ಇದರ ಆದಾರದಲ್ಲಿಯೇ ಮರಣ ಹೊಂದಿ ಹೋದ ಔಲಿಯಾಗಳ, ಮಹಾತ್ಮಾಗಳ ಹೆಸರಿನಲ್ಲಿ ವಿದ್ವಾಂಸರುಗಳ ನೇತೃತ್ವದಲ್ಲಿ ಹಲವು ಸ್ಥಳಗಳಲ್ಲಿ ಉರೂಸ್ ನಡೆಯುತ್ತದೆ. ಖುರ್'ಆನ್ ಪಾರಾಯಣ ಮಾಡಿಯೂ, ಮೌಲೂದ್ ಓದಿಯೂ, ಅನ್ನದಾನ ವಿತರಣೆ ಮಾಡಿಯೂ, ಒಟ್ಟಿನಲ್ಲಿ ಧರ್ಮದ ಒಳಗೆ ಇದ್ದು ಧರ್ಮದ ನಿಯಮಗಳನ್ನು ಪಾಲಿಸಿ ನೆರೆವೆರಿಸುವುದು ಇದಾಗಿದೆ ಉರೂಸ್.
ಪ್ರಸ್ತುತ ಕಾರ್ಯಕ್ರಮಗಳಲ್ಲಿ ಮಹಾತ್ಮರ ಆಶೀರ್ವಾದ ಮತ್ತು ಮತಧರ್ಮ ಸೌಹಾರ್ದಕಾಂಕ್ಷಿಗಳಾಗಿ ಅನ್ಯಧರ್ಮಿಯರು ಸಹಕರಿಸುವುದು
ಸಾಮಾನ್ಯ
ಆದರೆ.....
ದುಃಖವೆಂದೆ ಹೇಳಬೇಕು, ಹಲವು
ಕಡೆಗಳಲ್ಲಿ ಉರೂಸ್ ಕಮಿಟಿಯ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಗಳು ಧರ್ಮದ ಎಲ್ಲಾ ಸೀಮೆಗಳನ್ನು ಉಲ್ಲಂಘಿಸಿಕೊಂಡಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಮಹಾತ್ಮಾರ ಹೆಸರಿನಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಇಸ್ಲಾಂ ಧರ್ಮ ಸಮ್ಮತವಲ್ಲದ ರೀತಿಯಲ್ಲಿ ಮಾತ್ರವಲ್ಲ ಧರ್ಮಕ್ಕೆ ಕಳಂಕ ತರುವನಂತಹ ರೀತಿಯಲ್ಲಿಯಾಗಿದೆ. ಹಲವು ಸ್ಥಳದ ಉರೂಸ್ ಸಮಾರಂಭಗಳು ನಡೆಯುವುದು.
ಅನ್ಯ ಸ್ತ್ರೀ ಪುರುಷರು, ಕೂಡಿ ಬೆರೆತು ನಿಯಂತ್ರಣವಿಲ್ಲದೆ ಪರಿಶುದ್ಧ ಇಸ್ಲಾಂನ ಆದೇಶ, ನಿರ್ದೇಶಗಳ್ಳನ್ನು ಗಾಳಿಗೆ ತೂರಿ ಇಸ್ಲಾಂ ವಿರೋಧಿಸಿದ ಕಾರ್ಯಗಳಿಗೆ ಯಾವ ಬೆಲೆಯೂ, ನೆಲೆಯು ಕೊಡದೆ ಮಾಡಿ ತೋರಿಸುವ ಈ ಅನಾಚಾರವನ್ನು ಉರೂಸ್ ಎಂದು ಹೇಳುವುದೇ ಸರಿಯಲ್ಲ. ಈ ಅನಾಚಾರಗಳು ಎಲ್ಲಿಂದ ಸಿಕ್ಕಿದಾಗಿದೆ?
ಈ ರೀತಿಯಲ್ಲಿ ಇರುವ ಆಚಾರ ಕಾರ್ಯಗಳು ಎಂದು ವ್ಯಕ್ತಪಡಿಸಬೇಕಾದದ್ದು ಅದು ನಡೆಸುವ ಆಚಾರಣಾ ಸಮಿತಿಯವರದ್ದಾಗಿದೆ.
ಒಂದು ಊರಿನ ಹೆಸರೋ, ಸ್ಥಳವೋ ಹೆಸರೆತ್ತಿ ಹೇಳುದಿಲ್ಲ. ಆದರೆ ಈ ಒಂದು ಆನಾಚಾರವನ್ನು ನಾವು ಕೊನೆಗೊಲ್ಲಿಸಬೇಕು. ಸ್ತ್ರೀಗಳಿಗೂ, ಪುರುಷರಿಗೂ, ನಮಗೇಕೆ ಪ್ರತ್ಯಕವಾಗಿ 2 ಸಮಯಗಳು ನಿಗದಿ ಪಡಿಸಬಾರದು? ಸ್ತ್ರಿಗಳ ಆಲೆದಾಟಗಳು ಇಂತಹ ಸ್ಥಳಗಳಲ್ಲಿ ನಡೆಯುದರಿಂದ ಮಾತ್ರ ಅಲ್ಲವೇ ಅಲ್ಲಿ ಯುವಕರ ದಂಡು ಮತ್ತು ಅನ್ಯರು ಕೂಡ ನಿತ್ಯ ಸಂದರ್ಶನವಿರುವುದು.
ಅದರಿಂದ್ದ ಕಾಣಿಕೆ ಡಬ್ಬಿ ತುಂಬುದರಿಂದಲೋ ಏನೋ? ಇದನ್ನು ಕೊನೆಗೊಳ್ಳಿಸಲು ಇದು ಸಂಘಟಿಸಲು ನೇತೃತ್ವ ಕೊಡುವರು ಹಿಂಜರಿಯುದು. ಎಂದು ಸಂಶಯಪಡಬೇಕಾಗಿದೆ.
ಇದು ಎಲ್ಲಿಂದ ಇವರೆಲ್ಲರು ಕಲಿತದ್ದು ಇದು ಒಮ್ಮೆಯೂ ಇಸ್ಲಾಮಿನ ಮೇಲೆ ಅರೂಪಿಸಕೂಡದು. ಸುನ್ನತ್ತ್ ಜಮಾಹತ್ತಿನ ಹಲವಾರು ಪಂಡಿತರು ಸ್ವತ: ಹಲವು ಸ್ಥಳಗಳಲ್ಲಿ ನಡೆಸುವ ಇಂತಹ ಅನಾಚಾರಗಳಿಗೆ ವಿರೋಧವಾಗಿ ದ್ವನಿ ಎತ್ತಿದಾರೆ.
ಸುನ್ನಿ ಉಸ್ತಾದರುಗಳ ಕೆಲವು ಪ್ರಬಾಷಣಗಳು ಕೆಳಗಿನ LINK ಗೆ ತೆರೆದು ಕೇಳಿ ನೋಡಿ.👇👇
👉🏿ಮಕ್ಬರಗಳಲ್ಲಿಯ ಆನಾಚಾರಗಳು....
☪ಫಾರೂಕ್ ನಈಮಿ ಉಸ್ತಾದ್ & ಪೆರೋಡ್ ಉಸ್ತಾದ್👇
https://www.youtube.com/watch?v=9dlCYHAIi9A&feature=youtube_gdata_player
☪ಮಕ್ಬರ, ಉರೂಸ್, ಮಂತ್ರವಾದ,
ಫಾರೂಕ್ ನಈಮಿ ಉಸ್ತಾದ್.👇
👉🏿https://www.youtube.com/watch?v=I1xBB0PA0NQ&feature=youtube_gdata_player
☪ಕೊಂಡೋಟ್ಟಿ ಉರೂಸ್, ತರದ ಆನಾಚಾರಗಳ ವಿರೋಧವಾಗಿ
ಪೆರೋಡ್ ಉಸ್ತಾದ್ ಸ್ಪೀಚ್👇
👉🏿https://www.youtube.com/watch?v=Le6EA9arxVc&feature=youtube_gdata_player
☪ಬೀಮ ಪಳ್ಳಿಯಲ್ಲಿ ನಡೆಯುವ ಆನಾಚಾರದ ವಿರೋಧವಾಗಿ ಫಾರೂಕ್ ನಈಮಿ ಉಸ್ತಾದವರ ಸ್ಪೀಚ್
👉🏿https://www.youtube.com/watch?v=fnn5_AZPctc&feature=youtube_gdata_player
ಒಟ್ಟಿನಲ್ಲಿ ಹೇಳುದಾದರೆ ಅಲ್ಲಾಹು ಮತ್ತು ಅವನ ರಸೂಲ್ ﷺ ಹೇಳಿದ ಮಾತುಗಳು ಅನುಸರಿಸದೆ, ಅದನ್ನು ಉಲ್ಲಂಘಿಸಿಕೊಂಡು ಈ ರೀತಿಯ ಉರೂಸ್ ನಡೆಸುವುದು ಒಮ್ಮೆಯೂ ಇಸ್ಲಾಮಿನಲ್ಲಿ ಅನುವದಿನಿಯವಲ್ಲ. ಮಾತ್ರವಲ್ಲ ದೊಡ್ಡ ಪಾಪವು ಕೂಡ ಆಗಿದೆ.
ಅದರಿಂದ್ದ ಉರೂಸ್ ನಡೆಸಲು ನೇತೃತ್ವ ಕೊಡುವ ಜನರು ಮತ್ತು ಅಲ್ಲಿಯ ಕಮಿಟಿ ಸದಸ್ಯರು ಇಂತಹ ಆನಾಚಾರಗಳನ್ನು ಬಿಟ್ಟು ಪರಿಶುದ್ಧವಾದ ಇಸ್ಲಾo ಧರ್ಮ ಸಮ್ಮತಗೊಳಿಸಿದ ರೀತಿಯಲ್ಲಿ ಉರೂಸ್'ಗಳು ನಡೆಸಬೇಕು, ಯುವಕರು ಇಂತಹ ಆನಾಚಾರಗಳ ವಿರುದ್ದವಾಗಿ ದ್ವನಿ ಎತ್ತಲೇಬೇಕು, ಈ ದುರ್'ವ್ಯವಸ್ಥಿತಿಯನ್ನು ಮಟ್ಟ ಹಾಕಲೇಬೇಕೆಂದು ಪ್ರಸ್ತುತ ಲೇಖನದ ಮೂಲಕ ಬಹುಮಾನ ಪೂರ್ವಕವಾಗಿ ನೆನಪಿಸುತ್ತೇನೆ.
🚫 "ಅಲ್ಲಾಹು ಅವನ ರಸೂಲ್ ﷺ ಒಂದು ಕಾರ್ಯದಲ್ಲಿ ತಿರ್ಮಾನ ತೆಗೆದರೆ ಸತ್ಯ ವಿಶ್ವಾಸಿಯಾದ ಒಂದು ಪುರುಷನಾದರೂ, ಸ್ತ್ರೀಯಾದರೂ ತಮ್ಮ ಸ್ವಂತ ಕಾರ್ಯದ ಕುರಿತು ಸ್ವತಂತ್ರವಾದ ಅಭಿಪ್ರಾಯ ಅನುವದನಿಯವಲ್ಲ. ಯಾರದರೂ ಅಲ್ಲಾಹನನ್ನು ಅವನ ದೂತರನ್ನು ದಿಕ್ಕರಿಸಿದರೆ ಅವನು ವ್ಯಕ್ತವಾದ ನೆಲೆಯಲ್ಲಿ ದಾರಿ ತಪ್ಪಿದವನಾಗಿರುತ್ತಾನೆ.
[ಪವಿತ್ರ ಖುರ್ಅನ್: 33:36]
✍ ಗಫೂರ್ ಬಾಯಾರ್
🍁🍁🍁🍁🍁🍁🍁🍁🍁
Posted by Gafoor
No comments:
Post a Comment