😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣8⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
*وَبَارِكْ وَسَلِّمْ عَلَيْه*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ತನ್ನ ಸಂತಸಕ್ಕೆ ಕಾರಣವಾದ ಆ ಸಂಗತಿಯನ್ನು ನುಅ್'ಮಾನ್ (ರ) ತನ್ನ ಪತ್ನಿಗೆ ಹೇಳಲಾರಂಭಿಸಿದರು ⬇
ಪ್ರಿಯೇ..
*ಇದು ಯಝೀದ್'ನ ಪತ್ರವಾಗಿದೆ. ಅವನೀಗ ಖಲೀಫನಾಗಿದ್ದು ನನ್ನನ್ನು ಗವರ್ನರ್ ಆಗಿ ನೇಮಿಸಿರುವುದಾಗಿಯೂ ಮತ್ತು ಕೂಡಲೇ ಹೇೂಗಿ ಮುಖತಃ ಭೇಟಿಯಾಗಬೇಕೆಂದೂ ಈ ಪತ್ರದಲ್ಲಿ ಸೂಚಿಸಿದ್ದಾನೆ.*
ಇದನ್ನು ಕೇಳಿದ *ಉಮ್ಮುಲ್ ಹಕೀಮ್ (ರ)* ಹೇಳಿದರು..
*ಯಝೀದ್'ನ* ಬಗ್ಗೆ ನಾನು ಚೆನ್ನಾಗಿ ಬಲ್ಲೆ ಆತನೊಬ್ಬ ಕ್ರೂರಿಯೂ, ವಂಚಕನೂ, ವಿಶ್ವಾಸದ್ರೇೂಹಿಯೂ ಆಗಿದ್ದಾನೆ, ಅವನ ಮಾತು ನಂಬಿಕೆಗೆ ಅರ್ಹವಲ್ಲ. ಹಾಗಾಗಿ ತಾವು ಅಲ್ಲಿಗೆ ಹೋಗುವುದೇ ಬೇಡ ಎಂದರು....
ಇಲ್ಲ ಪ್ರಿಯೇ..!
ಗವರ್ನರ್ ಹುದ್ದೆಗೆ ನಾನು ಮನವಿ ಸಲ್ಲಿಸಲಿಲ್ಲವಲ್ಲ? ಅವನೇ ನನ್ನನ್ನು ಆಮಂತ್ರಿಸಿರುವುದಲ್ಲವೇ? ಅಷ್ಟಕ್ಕೂ ಅವನಿಗೆ ನನ್ನ ಮೇಲೇನೂ ದ್ವೇಷವೂ ಇಲ್ಲ. ಯಾವುದಕ್ಕೂ ನಾನೊಮ್ಮೆ ಅಲ್ಲಿಗೆ ಹೋಗಿ ಬರುತ್ತೇನೆಂದು ಹೇಳಿ *ನುಅಮಾನ್ (ರ)* ಡಮಾಸ್ಕಸ್'ಗೆ ಹೊರಟರು.
ಡಮಾಸ್ಕಸ್ ತಲುಪುತ್ತಿದ್ದಂತೆ ನೇರವಾಗಿ ಯಝೀದ್'ನ ಅರಮನೆಯತ್ತ ಹೆಜ್ಜೆ ಹಾಕಿದರು.
*ನುಅಮಾನ್ (ರ)ರನ್ನು ಕಂಡ ಯಝೀದ್ ಗೌರವಯುತವಾಗಿ ಬರ ಮಾಡಿಕೊಂಡು ಹೇಳಿದನು,*
*ನುಅಮಾನ್ (ರ)...*
ಗವರ್ನರ್ ಸ್ಥಾನಕ್ಕೆ ಆಮಂತ್ರಿಸಿದವರಲ್ಲಿ ಮೊದಲನೆಯದಾಗಿ ನನ್ನನ್ನು ಮುಖತಃ ಭೇಟಿ ಮಾಡಿದ ವ್ಯಕ್ತಿ ತಾವಾಗಿದ್ದೀರಿ.
ಬನ್ನಿ ಎನ್ನುತ್ತಾ ಬಾಗಿಲೊಂದನ್ನು ಬಿಟ್ಟರೆ ಕಿಟಿಕಿಗಳೂ ಇಲ್ಲದ ಕೋಣೆಯೊಂದಕ್ಕೆ ಕರೆದೊಯ್ದು ಕುಳ್ಳಿರಿಸಿದನು..!
ಬಳಿಕ *ನುಅಮಾನ್ (ರ)ರೊಂದಿಗೆ* ಹೇಳಿದನು,
*ನುಅಮಾನರೇ (ರ)*..! ನಾನು ತಮ್ಮನ್ನು ಗವರ್ನರ್ ಮಾಡಲು ತೀರ್ಮಾನಿಸಿರುವೆನು. ಆದರೆ ಅಧಿಕಾರ ವಹಿಸಿಕೊಳ್ಳುವ ಮುನ್ನ ನನ್ನ ನೀತಿ ನಿಯಮಗಳಿಗೆ ಬದ್ಧನಾಗಿ ಅದನ್ನು ಅನುಸರಿಸುವುದಾಗಿ ಕೆಲವು ಕಾಗದ ಪತ್ರಗಳಿಗೆ ತಾವು ಸಹಿ ಹಾಕಬೇಕು.
ಅದಕ್ಕೆ ತಾವು ಸಿದ್ಧರಿದ್ದೀರಾ..?
ಸರಿ ಎಂದು *ಯಝೀದ್'ನ* ಮಾತಿಗೆ ಸಮ್ಮತಿಸಿದರು.
ಒಂದನೇ ನಿಬಂಧನೆಯನ್ನು ಬಿಳಿ ಕಾಗದದಲ್ಲಿ *ಯಝೀದ್* ಬರೆದನು....
*"ಆಡಳಿತಾಧಿಕಾರಿಯಾದ ಯಝೀದ್ ಆಜ್ಞಾಪಿಸುವ ಎಲ್ಲಾ ಆಜ್ಞೆ ಆದೇಶಗಳನ್ನೂ ನಾನು ಅಂಗೀಕರಿಸಿ ಚಾಚೂ ತಪ್ಪದೆ ಪಾಲಿಸುತ್ತೇನೆ.*
*ಅಲ್ಲಾಹು ಸಾಕ್ಷಿ.."*
*ಯಝೀದೆಂಬ ವಂಚಕನ ವಂಚನೆಯ ಅರಿವಿರದ ನುಅ್'ಮಾನ್ (ರ) ಹಿಂದು ಮುಂದು ನೇೂಡದೆ ಸಹಿ ಹಾಕಿದರು.*
ಇದನ್ನು ಕಂಡು *ಯಝೀದ್* ವಿಕಟಾಟ್ಟಹಾಸಗೈಯ್ಯುತ್ತ ಹೇಳಿದನು.
*"ಅಲ್ಲಾಹನನ್ನು ಸಾಕ್ಷಿ ನಿಲ್ಲಿಸಿ ನೀನು ಸಹಿ ಹಾಕಿರುವೆ ನೆನಪಿರಲಿ" ಎಂದಾಗ.."*
*ನುಅ್'ಮಾನ್ (ರ) ಹೇಳಿದರು ಹೌದು ನಾನದನ್ನು ಬಲ್ಲೆ.*
ಸರಿ ಹಾಗಾದರೆ ನನ್ನ ಮೊದಲ ಆದೇಶವೇನೆಂದರೆ..,
*"ನೀನು ನಿನ್ನ ಹೆಂಡತಿಯನ್ನು ತ್ವಲಾಖ್ ಹೇಳಬೇಕು..!!"*
*ಈ ಮಾತನ್ನು ಕೇಳಿದ ನುಅಮಾನ್ (ರ) ದಿಗ್ಭ್ರಾಂತರಾಗಿ ಇದೆಂತಾ ಮೇೂಸ? ಉಮ್ಮುಲ್ ಹಕೀಂ (ರ) ಳೊಂದಿಗೆ ನಾನು ನನ್ನ ಕೊನೆಯುಸಿರಿನ ತನಕವೂ ಸಂಸಾರ ಮಾಡುವೆನೆಂದು ಹಝ್ರತ್ತ್ ಅಲಿ (ರ) ರವರಿಗೆ ಮಾತು ಕೊಟ್ಟಿದ್ದೇನೆ.*
ಆಗ ಯಝೀದ್ ಕೇಳಿದ,
*"ನೀನು ಅಲ್ಲಾಹನಿಗೆ ಕೊಟ್ಟ ಮಾತು ಮುಖ್ಯವೇ...?*
*ಅಥವಾ ಅಲಿ(ರ)ರಿಗೆ ಕೊಟ್ಟ ಮಾತು ಮುಖ್ಯವೇ...?*
ಇದರಿಂದ ಸಂಧಿಗ್ದಕ್ಕೀಡಾದ ನುಅ್'ಮಾನ್ (ರ) ಗತ್ಯಂತರವಿಲ್ಲದೆ ವಿವಾಹ ಸಂಬಂಧ ಮುರಿಯುವ ತಲಾಖ್ ಪತ್ರಕ್ಕೆ ಸಹಿ ಹಾಕಿ ಅದನ್ನು ಮದೀನಕ್ಕೆ ಕಳುಹಿಸಿ ಕೊಟ್ಟರು.
ಈ ಪತ್ರವನ್ನು ಕಂಡ *ಉಮ್ಮುಲ್ ಹಕೀಮ್ (ರ)* ಬೆಚ್ಚಿ ಬಿದ್ದು ಬಿಕ್ಕಿ ಬಿಕ್ಕಿ ಆಳಲಾರಂಭಿಸಿದಳು.
ನಡೆದ ಘಟನೆಯ ನಿಜ ಸ್ಥಿತಿ ಅರಿಯದೆ ಭಾರವಾದ ಹೃದಯದೊಂದಿಗೆ ಆ ಮಹದಿ ತನ್ನ ಗುಡಿಸಿಲಿನಲ್ಲಿ ಏಕಾಂತವಾಗಿ ದಿನ ಕಳೆಯಲಾಂಭಿಸಿದರು.
ಇತ್ತ *ನುಅಮಾನ್(ರ)ರನ್ನು ಯಝೀದ್ ಕತ್ತಲೆ ಕೋಣೆಯೊಳಗೆ ಬಂಧನದಲ್ಲಿರಿಸಿದನು.*
ನಂತರದ ದಿನಗಳಲ್ಲಿ *ಉಮ್ಮುಲ್ ಹಕೀಮ್ (ರ)ರವರ* ಪೇೂಷಣೆಯ ಜವಾಬ್ದಾರಿಯನ್ನು *ಹಸನ್ (ರ)* ವಹಿಸಿಕೊಂಡರು.
ತಂದೆ-ತಾಯಿ, ಬಂಧು-ಬಳಗ ಯಾರೂ ಇಲ್ಲದ ಆ ಮಹದಿ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ದಿನ ಕಳೆಯುತ್ತಿದ್ದಳು.
ಉಮ್ಮುಲ್ ಹಕೀಮ್(ರ)ರವರ... ⬇
*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment