Tuesday, March 20, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣8⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 ಕೂಫದ ಜನತೆ *ಹುಸೈನ್(ರ)ರವರ* ಆಗಮನವನ್ನು ಕಾತರದಿಂದ ಕಾಯುತ್ತಿದ್ದಾಗ ಗುಂಪಿನಲ್ಲಿದ್ದವನೊಬ್ಬ

 ಅದೇೂ...
ಅಲ್ಲಿ ನೇೂಡಿ..
ಆ ಕಪ್ಪು ಕುದುರೆಯ ಮೇಲೇರಿ *ಹುಸೈನ್(ರ)* ಬರುತ್ತಿದ್ದಾರೆ ಎಂದಾಗ....

ಅಲ್ಲಿ ನೆರೆದಿದ್ದ ಜನರೆಲ್ಲರೂ ಒಮ್ಮೆಲೆ ಅತ್ತ ದಿಟ್ಟಿಸಿದರು.

ಆತ ಹೇಳಿದಂತೆ ದೂರದಿಂದ ಒಂದು ಕಪ್ಪು ಕುದುರೆ ಇವರತ್ತಲೇ ಬರುತ್ತಿತ್ತು. ಆ ಕುದುರೆಯ ಮೇಲೊಬ್ಬ ಸವಾರನೂ ಇದ್ದ.

ಇದನ್ನು ಕಂಡು ಹರ್ಷಿತರಾದ ಜನತೆ
ಆ ಕಪ್ಪು ಕುದುರೆಯ ಮೇಲೆ ಬರುತ್ತಿರುವುದು ಹುಸೈನ್ (ರ) ಎಂದು ಭಾವಿಸಿ ಪದ್ಯ ಹಾಡುತ್ತಾ ಸಂತೇೂಷದಿಂದ ಕುಣಿದು ಕುಪ್ಪಳಿಸುತ್ತಾ ಅತ್ತ ಕಡೆ  ಧಾವಿಸಿದರು.

ಆದರೆ ಆ ಕಪ್ಪು ಕುದುರೆ ಅವರ ಸಮೀಪಕ್ಕೆ ತಲುಪಿದಾಗ ಅವರಿಗೆ ನಿರಾಸೆ ಕಾದಿತ್ತು. ಕಾರಣ ಆ ಕಪ್ಪು ಕುದುರೆಯ ಮೇಲೆ ಬಂದ ವ್ಯಕ್ತಿ *ಹುಸೈನ್(ರ) ಆಗಿರದೆ ಯಝೀದ್'ನ ಅಣತಿಯಂತೆ ಬಂದ ಉಬೈದ್ ಇಬ್ನು ಝಿಯಾದ್* ಆಗಿದ್ದನು.

ಜನತೆಯ ಹಾಡು ಕುಣಿತ ಮತ್ತು ಘೇೂಷವಾಕ್ಯಗಳನ್ನು ಗಮನಿಸಿದ ಉಬೈದ್ ಆ ಜನತೆಯನ್ನೊಮ್ಮೆ ದಿಟ್ಟಿಸಿ ನೇೂಡಿ ಏನೇೂ ಮನವರಿಕೆಯಾದವನಂತೆ ಮರು ಮಾತನಾಡದೆ ನೇರವಾಗಿ *ನುಅಮಾನ್ ಬಿನ್ ಬಶೀರ್ (ರ)* ಅರಮನೆಗೆ ಹೇೂದ.

*ಇತ್ತ ನುಅಮಾನ್ ಬಿನ್ ಬಶೀರ್(ರ) ರವರಿಗಂತೂ ಇದು ನುಂಗಲಾರದ ತುತ್ತಾಗಿತ್ತು. ಕಾರಣ ಒಂದೆಡೆ ಮುತ್ತು ರಸೂಲ್ ﷺ ರವರ ಕುಟುಂಬವಾದರೆ ಮತ್ತೊಂದೆಡೆ ದುಷ್ಟನಾದ ಯಝೀದ್, ಹಾಗಾಗಿ ಈ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದೆಂದು ತಿಳಿಯದೆ ಅರಮನೆಯ ಕೇೂಣೆಯೊಂದರೊಳಗೆ ಬಾಗಿಲು ಮುಚ್ಚಿ ಕುಳಿತು ಚಿಂತಿಸುತ್ತಿರುವಾಗ..*

ಅಲ್ಲಿಗೆ ತಲುಪಿದ ಉಬೈದ್ ಕದ ಬಡಿಯುತ್ತಾ..

ಬಶೀರ್.... ಬಶೀರ್..

 ನಾನು ಉಬೈದ್ ಇಬ್ನು ಝಿಯಾದ್ ಬಾಗಿಲು ತೆರೆ ಎಂದನು....!

ಕದ ತೆರೆದ *ನುಅಮಾನ್ ಬಿನ್ ಬಷಿರ್ (ರ)* ಒಲ್ಲದ ಮನಸ್ಸಿನಿಂದಲೇ ಉಬೈದ್'ನನ್ನು ಸ್ವಾಗತಿಸಿ ಒಳಗೆ ಕರೆದೊಯ್ದರು.

ಕ್ಷೇಮ ಸಮಾಚಾರ ವಿಚಾರಿಸಿದ ನಂತರ ಉಬೈದ್ ಹೇಳಿದ..

 ಯಝೀದ್'ನ ವಿರುದ್ಧ ಕ್ರಾಂತಿಗೆ ಸಂಘಟಿತರಾಗುತ್ತಿರುವ ಕೂಫದ ಜನತೆಯನ್ನು ಹತ್ತಿಕ್ಕಲು ನಿನ್ನಿಂದ ಸಾಧ್ಯವಿಲ್ಲ. ಆದ್ದರಿಂದ ಪರಿಸ್ಥಿತಿಯನ್ನು ಹತೇೂಟಿಗೆ ತರುವ ಸಲುವಾಗಿ ಇಲ್ಲಿಯ ಉಸ್ತುವಾರಿಯನ್ನು ಯಝೀದ್ ನನಗೆ  ವಹಿಸಿದ್ದಾನೆ. ನೀನೇನೂ ಮಾಡಬೇಕಿಲ್ಲ ನನಗೆ ಬೆಂಬಲ ನೀಡಿ ಸಹಕರಿಸಿದರಷ್ಟೇ ಸಾಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರಲಾರದೆಂದು ಎಚ್ಚರಿಸುತ್ತಾ...

ಖಲೀಫನಾದ ಯಝೀದ್ ಉಬೈದ್'ನಿಗೆ ಬರೆದಿದ್ದ ಪತ್ರವನ್ನು ನುಅ್'ಮಾನ್ ಇಬ್ನು ಬಶೀರ್ (ರ)ರಿಗೆ ಕೊಟ್ಟು...

ನಾನು ಕೂಫಕ್ಕೆ ಕಾಲಿಡುತ್ತಿದ್ದಂತೆ ನನ್ನನ್ನು ಕಂಡ ಜನತೆ ಹುಸೈನ್ (ರ) ಎಂದು ಭಾವಿಸಿ ಹಾಡುತ್ತಾ ಕುಣಿದು ಕುಪ್ಪಳಿಸುತ್ತಿದುದನ್ನು ಗಮನಿಸಿದೆ. ಹಾಗೆ ನೇೂಡಿದರೆ ಹುಸೈನ್ (ರ)ರಿಗೆ ಇಲ್ಲಿನ ಜನತೆಯ ಸಂಪೂರ್ಣ ಬೆಂಬಲವಿದೆ. ಹಾಗಾಗಿ ಜನರಿಗೆ ಎಚ್ಚರಿಕೆ ಕೊಟ್ಟು ಅವರ ಬೆಂಬಲಕ್ಕೆ ನಿಲ್ಲದಂತೆ ಮಾಡಬೇಕಿದೆ. ಆದ್ದರಿಂದ "ನಾಳೆ ನೀನೊಂದು ಸಾರ್ವಜನಿಕ ಸಭೆ ಕರೆದು ಕೂಫದ ಜನತೆಯನ್ನು ಆ ಸಭೆಗೆ ಆಹ್ವಾನಿಸಬೇಕು" ಎಂದನು.

ಉಬೈದ್ ಕೊಟ್ಟ ಪತ್ರವನ್ನು ಓದಿದ ನುಅಮಾನ್ ಬಿನ್ ಬಶೀರ್ (ರ)ರವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಉಬೈದ್'ನ ಅಣತಿಯಂತೆ ವಿಧಿಯಿಲ್ಲದೆ ಮರುದಿನ ಒಂದು ಸಾರ್ವಜನಿಕ ಸಭೆ ಕರೆದರು.

ಕೂಫದ ಜನತೆಯೆಲ್ಲರೂ ಆ ಸಭೆಯಲ್ಲಿ ಭಾಗವಹಿಸಬೇಕೆಂಬ ಕಟ್ಟಾಜ್ಞೆಯಿದ್ದುದರಿಂದ ಜನರೆಲ್ಲರೂ ಆ ಸಭೆಗೆ ಹಾಜರಾದರು.

ಕಿಕ್ಕಿರಿದ ಸಭೆಯ ಆರಂಭದಲ್ಲೇ ಎದ್ದು ನಿಂತ ಉಬೈದುಲ್ಲ ಮಾತು ಆರಂಭಿಸಿದ..

*ಆಗ ಸಭೆಯಲ್ಲಿದ್ದ ಯುವಕನೊಬ್ಬ ಎದ್ದು ನಿಂತು.. ಮೊದಲಿಗೆ ಸಭೆಯನ್ನುದ್ದೇಶಿಸಿ ಮಾತನಾಡಬೇಕಾದವರು ನಮ್ಮ ಗವರ್ನರ್ ಆಗಿರುವ ನುಅಮಾನ್ ಬಿನ್ ಬಶೀರ್ (ರ)ರವರೇ ಹೊರತು ತಾವಲ್ಲ ಎಂದನು.*

ಯುವಕನ ಮಾತು ಕೇಳಿ ಕೇೂಪಗೊಂಡ ಉಬೈದ್ ಕೇೂಪವನ್ನು ತೇೂರ್ಪಡಿಸದೆ ಆ ಯುವಕನನ್ನು ವೇದಿಕೆಗೆ ಬರುವಂತೆ ಸೂಚಿಸಿದನು..

ಆಗ ಉಬೈದ್'ನ ಸ್ವಭಾವವನ್ನು ಬಲ್ಲ ವೃದ್ಧರೊಬ್ಬರು ತಕ್ಷಣ ಹೇಳಿದರು.

ಬೇಡ.. ಉಬೈದ್.. ಬೇಡಾ..!

ಅಷ್ಟರಲ್ಲಿ ಆ ಯುವಕ ವೇದಿಕೆಯೇರಿ ಉಬೈದ್'ನ ಮುಂದೆ ನಿಂತಿದ್ದನು. ತನ್ನ ಮಾತನ್ನು ಆಕ್ಷೇಪಿಸಿದ ಆ ಯುವಕನೊಂದಿಗೆ ಉಬೈದ್ ಹೇಳಿದನು.

 "ನಿನ್ನನ್ನು ನಾನು ನೋಡಿದೆ. ಆದರೆ ಈ ಸಭೆಯಲ್ಲಿ ನೆರೆದಿರುವ ಜನರಿಗೆ ನಿನ್ನನ್ನು ಸರಿಯಾಗಿ ಕಾಣಿಸುತ್ತಿಲ್ಲ. ಅದರಿಂದ ನೀನು ಸಭಿಕರ ಕಡೆ ಮುಖ ಮಾಡಿ ನಿಲ್ಲು"
ಯುವಕ ಸಭಿಕರತ್ತ ತಿರುಗಿ ನಿಲ್ಲತ್ತಿದ್ದಂತೆ ಉಬೈದ್ ಜನರೊಂದಿಗೆ ಕೇಳಿದನು..

 ಈ ಸಭೆಯಲ್ಲಿ ನೆರೆದಿರುವ ಜನತೆಗೆ ಮತ್ತು ಈ ಯುವಕನಿಗೆ ನಾನು ಯಾರೆಂದು ತಿಳಿದಿಲ್ಲ. ಹಾಗಾಗಿ ನನ್ನ ಕುರಿತು ನಿಮಗೆ ತಿಳಿಯಬೇಡವೇ..?
ಎನ್ನುತ್ತಾ..

*ತನ್ನ ಖಡ್ಗವನ್ನು ಒರೆಯಿಂದ ಎಳೆದು ಯುವಕನ ಕುತ್ತಿಗೆಗೆ ಒಂದೇ ಇರಿತ..!!*

*ಇದನ್ನು ಊಹಿಸಿರದ ಆ ಯುವಕ ಈ ಅನಿರೀಕ್ಷಿತ ಆಕ್ರಮಣದಿಂದ ಕುಸಿದು ಬಿದ್ದು ವಿಲವಿಲನೆ ಒದ್ದಾಡಿ ನಿಶ್ಚಲನಾದ.*

ಈ ಘಟನೆಯನ್ನು ಕಂಡು ಇಡೀ ಸಭೆಯೇ ಬೆಚ್ಚಿ ಬಿತ್ತು. ನಂತರ ಉಬೈದ್ ಯುವಕನ ರುಂಡವನ್ನು ಖಡ್ಗದಲ್ಲಿ ಚುಚ್ಚಿ ಎತ್ತಿ ಹಿಡಿದು ಸಭಿಕರನ್ನುದ್ದೇಶಿಸಿ ಹೇಳಿದ...

ಓ.. ಜನರೇ..!

*ಹುಸೈನ್ ಇಬ್ನು ಅಲಿ (ರ) ರವರ ಪ್ರತಿನಿಧಿಯಾದ ಮುಸ್ಲಿಂ (ರ) ಇಲ್ಲಿಗೆ ತಲುಪಿದ್ದಾರೆ ಎನ್ನುವುದು ನನಗೆ ತಿಳಿದಿದೆ.*
*ನಿಮ್ಮಲ್ಲಿ ಯಾರಾದರೂ ಅವರಿಗೆ ಅಭಯ ಕೊಟ್ಟು ವಾಸ್ತವ್ಯ ಕಲ್ಪಿಸಿದರೆ ನಿಮಗೂ ಇದೇ ಗತಿ ಬರಲಿದೆ.*
*ಅದರಿಂದ ಜಾಗರೂಕರಾಗಿರಿ..  ಎಂದನು*

ಮುಸ್ಲಿಂ (ರ) ಮತ್ತು ಅವರ ಮಕ್ಕಳಿಗೆ ವಾಸ್ತವ್ಯ ಕಲ್ಪಿಸಿದ್ದ *ಹಾನಿಅ (ರ)* ರವರೂ ಆ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ಮುಕ್ತಾಯವಾಗಿತ್ತು. ⤵

*ಮುಂದುವರಿಯುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰

No comments:

Post a Comment