😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 1⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಇಡೀ ಮುಸ್ಲಿಮ್ ಸಮುದಾಯವನ್ನೇ "ಕಣ್ಣೀರ ಕಡಲಲ್ಲಿ ಮುಳುಗಿಸಿದ *ಕರ್ಬಲಾ* ಎಂಬ ಯುದ್ಧ ಚರಿತ್ರೆಯ" ಆರಂಭವೇ ಕರುಣಾಜನಕವಾಗಿದೆ.
ಮುಂದೆ ಓದಿ..... ⬇
ಪ್ರವಾದಿ ﷺ ರವರ ಅಹ್ಲ್'ಬೈತ್ ಎಂಬ ಅತ್ಯುನ್ನತ ಕುಟುಂಬ ಕಷ್ಟ ಕಾರ್ಪಣ್ಯಗಳನ್ನು ಸಹಿಸುತ್ತಾ ಮದೀನದಲ್ಲಿ ಬದುಕುತ್ತಿದ್ದರೂ ಸಮಾಧಾನದಿಂದ ನೆಮ್ಮದಿಯುತವಾಗಿ ಬದುಕಲು ಕೂಫ ನಿವಾಸಿಗಳು ಬಿಟ್ಟವರಲ್ಲ. ಇಂದು ಇಪ್ಪತ್ತೊಂದನೇ ಶತಮಾನಕ್ಕೆ ಕಾಲಿಟ್ಟಿದ್ದಲೂ ಚರಿತ್ರೆಯಲ್ಲಿ ವಂಚಕರ ನಾಡೆಂದೇ ಕುಖ್ಯಾತಿ ಪಡೆದ ಆ ಜನತೆ ಇಂದಿಗೂ ತಮ್ಮನ್ನು ತಿದ್ದಿ ಕೊಂಡವರಲ್ಲ.
( *ಇರಾಖಿನ ಧೀರ ಆಡಳಿತಾಧಿಕಾರಿಯಾಗಿದ್ದ ಸದ್ದಾಂ ಹುಸೈನ್'ನರ ಅಡಗುದಾಣವನ್ನು ಶತ್ರು ಸೈನಿಕರಿಗೆ ತೇೂರಿಸಿ ಕೊಟ್ಟು ಸದ್ದಾಂ ಹುಸೈನರನ್ನು ಗಲ್ಲಿಗೇರಿಸಲು ನೆರವಾದವರೂ ಇದೇ "ಕೂಫ" ನಿವಾಸಿಗಳಾಗಿದ್ದರೆನ್ನುವುದು ಗಮನಾರ್ಹ* )
ವಂಚನೆಯಲ್ಲಿ ಎತ್ತಿದ ಕೈಯಾದ "ಕೂಫದ ನಿವಾಸಿಗಳು" *ಹುಸೈನ್ (ರ)ರವರಿಗೆ* ಆಗಾಗ ಪತ್ರ ಬರೆದು ದೂತರ ಮೂಲಕ ಕಳುಹಿಸುತ್ತಿದ್ದರು.
ಹಾಗಿರುವಾಗ ಒಮ್ಮೆ *ಹುಸೈನ್(ರ)ರವರಿಗೆ* ಕೂಫದಿಂದ ದೂತನೊಬ್ಬನ ಮೂಲಕ ಪತ್ರವೊಂದು ಬಂತು. ಆ ಪತ್ರದ ಒಕ್ಕಣೆ ಹೀಗಿತ್ತು.
*"ಪ್ರೀತಿಯ ಹುಸೈನ್ (ರ) ತಂಙಳ್'ರವರೇ...*
_ಯಝೀದ್'ನ ದುರಾಡಳಿತದಿಂದ ನಮಗೆ ನೆಮ್ಮದಿಯಿಲ್ಲವಾಗಿದೆ._
_ಪ್ರವಾದಿ ﷺ ಕುಟುಂಬದ ಪ್ರಮುಖರಾಗಿರುವ ತಾವು ಕೂಫ ಜನತೆಯ ಹಿತದೃಷ್ಟಿಯಿಂದ ಇದಕ್ಕೊಂದು ಪರಿಹಾರ ಕಾಣ ಬೇಕಾಗಿದೆ._
_ಆದಷ್ಟು ಬೇಗ ಯಝೀದ್ ಎಂಬ ದುಷ್ಟನ ದುರಾಡಳಿತವನ್ನು ಕೊನೆಗೊಳಿಸ ಬೇಕಾಗಿದೆ. ಅಥವಾ ಉತ್ತಮವಾಗಿ ಆಡಳಿತ ನಡೆಸಲು ಅವನಿಗೆ ತಿಳಿ ಹೇಳಬೇಕೆಂದು ತಮ್ಮಲ್ಲಿ ಮನವಿ ಮಾಡಿ ಕೊಳ್ಳುತ್ತಿದ್ದೇವೆ. ನಾವೆಲ್ಲರೂ ತಮ್ಮೊಂದಿಗಿದ್ದೇವೆ"_
ಇದಾಗಿತ್ತು ಆ ಪತ್ರದಲ್ಲಿದ್ದ ವಿಷಯ.
ಪತ್ರದ ಸಾರಾಂಶ ನೇೂಡಿ ನೆಮ್ಮದಿಗೆಟ್ಟ *ಹುಸೈನ್ (ರ)* ತಮ್ಮ ಕುಟುಂಬದೊಂದಿಗೆ ಮದೀನದಿಂದ *'ಸಿರಿಯ'ಕ್ಕೆ* ವಾಸ್ತವ್ಯ ಬದಲಿಸಿದರು.
ಅಲ್ಲಿಯ ಸ್ಥಿತಿಯೂ ಇದೇ ಆಗಿತ್ತು.
ಹಾಗಾಗಿ ಅಲ್ಲಿಂದ ಪುನಃ *'ಮಕ್ಕ'ಕ್ಕೆ* ಹೋದರು.
*ಮಕ್ಕಕ್ಕೆ ತಲುಪಿದಾಗ ಅಂದಿನ ಮಕ್ಕಾ ಗವರ್ನರ್ ಆಗಿದ್ದ ಅಬ್ದುಲ್ಲಾಹಿಬ್ನು ಝುಬೈರ್ (ರ) ರವರು ಹುಸೈನ್ (ರ) ರವರೊಂದಿಗೆ ಹೇಳಿದರು. ತಾವು ಮಕ್ಕಾಗೆ ಬಂದಿರುವುದರಿಂದ ಹಾಗೂ ಅಹ್ಲ್'ಬೈತಿನ ಪ್ರಮುಖರೂ ಆಗಿರುವುದರಿಂದ "ನನ್ನ ಗವರ್ನರ್ ಸ್ಥಾನವನ್ನು ನಾನು ನಿಮಗೆ ಬಿಟ್ಟು ಕೊಡುತ್ತೇನೆ"*
ಆದರೆ ಯಾವುದೇ ಅಧಿಕಾರವನ್ನು ಬಯಸದ ಹುಸೈನ್ (ರ) ರವರು ಅಬ್ದುಲ್ಲಾಹ್ ಇಬ್ನು ಝುಬೈರ್ ರವರಲ್ಲಿ ಹೀಗೆಂದರು...
*"ನಾನೆಂದೂ ಅಧಿಕಾರವನ್ನು ಬಯಸಿದವನಲ್ಲ, ಬದಲಾಗಿ ನೆಮ್ಮದಿಯ ಒಂದು ಜೀವನವನ್ನಷ್ಟೇ ನಾನು ಬಯಸುತ್ತೇನೆ."*
*ಹಾಗಾಗಿ ತಾವೇ ಮಕ್ಕದ ಗವರ್ನರ್ ಆಗಿ ಮುಂದುವರೆಯಬೇಕು.*
*ಹುಸೈನ್(ರ)ರವರು* ಮಕ್ಕಕ್ಕೆ ವಾಸ್ತವ್ಯ ಬದಲಿಸಿದ ಸುದ್ದಿ ತಿಳಿಯುತ್ತಿದ್ದಂತೆ "ಕೂಫ ನಿವಾಸಿಗಳ" ಪತ್ರಗಳು ಮಕ್ಕಕ್ಕೂ ಬರಲಾರಂಭಿಸಿತು. ಹಾಗೆ ಬಂದ ಪತ್ರಗಳ ಸಂಖ್ಯೆ ಒಂದೆರಡಲ್ಲ ನೂರಾರು ಪತ್ರಗಳು. ಒಂದರ ಹಿಂದೆ ಒಂದರಂತೆ ಬಂದು ಕೆಲವೇ ದಿನಗಳಲ್ಲಿ ಸಾವಿರಾರು ಪತ್ರಗಳು *ಹುಸೈನ್(ರ)ರವರ* ಕೈ ಸೇರಿತ್ತು.
*ಅವುಗಳ ಪೈಕಿ ಒಂದು ಪತ್ರ ಹಝ್ರತ್ತ್ ಹುರ್'ರ್ (ರ) ರವರದಾಗಿತ್ತು.*
ಆ ಪತ್ರದ ಒಕ್ಕಣೆಯೂ ಬಹಳ ಗಂಭೀರವಾಗಿತ್ತು.
*"ಬಹುಮಾನ್ಯರಾದ ಹುಸೈನ್ (ರ) ರವರಿಗೆ ಕೂಫ'ದ ಜನತೆ ತಿಳಿಸುವುದು..*
*ಏನೆಂದರೆ....*
*ಈ ಹಿಂದೆ ದೂತರ ಮುಖೇನ ಹಲವಾರು ಪತ್ರಗಳನ್ನು ನಾವು ತಮಗೆ ಬರೆದಿದ್ದೇವೆ. ತಾವು ಈ ತನಕ ನಮ್ಮ ಯಾವ ಪತ್ರಕ್ಕೂ ಕೂಡ ಉತ್ತರಿಸಿಲ್ಲ.*
*ಹಾಗಾಗಿ ಇದು ನಮ್ಮ ಕೊನೆಯ ಪತ್ರವಾಗಿದೆ. ಇನ್ನು ನಾವು ತಮಗೆ ಪತ್ರ ಬರೆಯಲಾರೆವು. ಆದರೆ ಈ ಪತ್ರವನ್ನೂ ತಾವು ಗಂಭೀರವಾಗಿ ಪರಿಗಣಿಸದಿದ್ದರೆ ಖಂಡಿತವಾಗಿಯೂ "ನಾಳೆ ನಾವು ಅಲ್ಲಾಹನ ಮುಂದೆ ಮತ್ತು ರಸೂಲ್ ಕರೀಂ ﷺ ರವರ ಮುಂದೆ ತಮಗೆ ವಿರುದ್ಧವಾಗಿ ನಾವು ಸಾಕ್ಷಿ ನಿಲ್ಲಲಿದ್ದೇವೆ".*
ಈ ಪತ್ರವನ್ನು ಓದಿದ.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment