Wednesday, March 21, 2018

🌳🌳🌳🌳🌳🌳🌳
*ಮುನ್ನಂ ದುಡಿ ಮುಟ್ಟಿ ಕ'ಅಬಾನೆ ಚುಟ್ಟುಂಬೋಲ್*
*ಮಕ್ಕಿಗಲ್ ಇಂಬೀದೀ ವೇಂಡೆನ್ನ್ ಚೊನ್ನೋವರ್...*

*ಉಡನೇ ರಿಫಾಯೀ ಮದಿಲಿಲ್ ಕುಳತ್ತಿಯಾರ್*
*ಅಪ್ಪೋಲ್ ಕ'ಅಬಂ ತವಾಫೆನ್ನ್ ಚೊನ್ನೋವರ್...*
*ಇಳಗೀ ಕ'ಅಬಂ ತುಳಂಗುನ್ನ ನೇರತ್ತ್*
*ಒಳಿವರ್ ರಿಫಾಯೀ ಎನ್ನ್ ಅಲ್ಲಾಹ್ ವಿಳಿಚ್ಚೋವರ್...*
*ಏಳಾಗಾಶಂ ಬಾದಿಲ್ ಒಕ್ಕೇ ತುರನ್ನೋರೇ*
*ಇಳಗೀ ಮಲಕುಗಳ್ ಒಕ್ಕೇ ವಿಳಿಚ್ಚೋವರ್...*
 ----------------------------------
*ದಫ್ ಬಡಿಯತ್ತಾ ಪವಿತ್ರ ಕ'ಅಬಾ ಶರೀಫನ್ನು ತವಾಫ್ ಮಾಡುತ್ತಿದ್ದ ರಿಫಾಯೀ ಶೈಖರನ್ನು ಮಕ್ಕಾದವರು ತಡೆದರು*
*ಕೂಡಲೇ ಅವರು ಆ ದಫ್ಫನ್ನು ಕ‌ಅಬಾ ದ ಗೋಡೆಗೆ ತೂಗು ಹಾಕಿದರು*

*ಆಗ  ಕ‌ಅಬಾ ತನ್ನ ಜಾಗದಿಂದ ಕದಲತೊಡಗಿತು. ತನ್ನ ಸ್ವ ಸ್ಥಾನದಿಂದ ಚಲಿಸುತ್ತಾ ಬಂದು ರಿಫಾಯಿ ಶೈಖರ ಸುತ್ತ ಸುತ್ತುತ್ತಾ ತವಾಫ್ ಮಾಡತೊಡಗಿತು.*
*ಆಗ ಅಲ್ಲಾಹು ಶೈಖ್ ರವರನ್ನು ,ಯಾ ರಿಫಾಈ ಎಂದು ಕರೆದನು. ಶೈಖ್ ರವರು ದಫ್ಫನ್ನು ಕಅಬಾದಿಂದ ತೆಗೆದರು.ಕಅಬಾವು ಮೊದಲಿನಂತಾಯಿತು. ಏಳು ಆಕಾಶದಲ್ಲಿ ರುವ ಮಲಕುಗಳೂ ಈ ರೀತಿ ಕರೆದರು.*
 -----------------------------
*ಶೈಖ್ ಅಹ್ಮದುಲ್ ಕಬೀರುರ್ರಿಫಾಈ ರ.ಅ ರವರ ಕರಾಮತ್ ವಿವರಿಸುವ ರಿಫಾಈ ಮಾಲೆಯ ಕೆಲವು ಸಾಲುಗಳು ಮತ್ತು ಅದರ ಸರಿಯಾದ ಅನುವಾದ ಇದು. ಆದರೆ, ಅಲ್ಲಾಹು ಗೌರವಿಸಿದ ಮಹಾತ್ಮರ ಹಿರಿಮೆ ಮತ್ತು ವಿಶೇಷತೆ ಯನ್ನು ಒಪ್ಪಲು ಮನಸಿಲ್ಲದ ವಹ್ಹಾಬಿಗಳು, ಮಾಲೆಯ ಅರ್ಥ ವನ್ನು ವಕ್ರವಾಗಿ ಚಿತ್ರೀಕರಿಸಿ ಅಲ್ಲಾಹನನ್ನು ನಿಂದಿಸಿದ್ದಾರೆ.* *ಇಳಿಯುವ, ಹತ್ತುವ,   ಕುಳಿತುಕೊಳ್ಳುವ, ಕೈ ಕಾಲುಗಳಿರುವ, ಮುಖ ಹೊಂದಿರುವ ದೇವರಲ್ಲಿ ನಂಬಿಕೆ ಇಟ್ಟಿರುವ ವಹ್ಹಾಬಿಗಳು, ಖಿಯಾಮತ್ ದಿನದಂದು ಸಕಲ ವಸ್ತುಗಳೂ ನಾಶ ಹೊಂದಿ ಅಲ್ಲಾಹನ* *"ಮುಖ*" *ಮಾತ್ರ ಬಾಕಿಯಾಗಿ ಇತರೆಲ್ಲವೂ ನಶಿಸಿ ಹೋಗುವುದೆಂದು ಹೇಳುವಲ್ಲಿಗೆ ತಲುಪಿದವರಾಗಿದ್ದಾರೆ.*
*ಅಲ್ಲಾಹನ ಬಗ್ಗೆ ವಿಕಲ ನಂಬಿಕೆಯನ್ನು ಹೊತ್ತು ಕೊಂಡಿರುವ ವಹ್ಹಾಬಿಗಳು ಅದನ್ನು ಮರೆ ಮಾಚಲು ಸುನ್ನಿ ಗಳ ಮಾಲೆಯನ್ನು ದುರ್ವ್ಯಾಖ್ಯಾನ ಮಾಡುತ್ತಾರೆ*
*ಅಲ್ಲಾಹನ ಇಷ್ಟ ದಾಸರಾದ ರಿಫಾಈ ಶೈಖ್ ರವರಿಗಾಗಿ ಕಅಬಾವು ತಿರುಗಾಡಿತು ಎಂಬುವುದರಲ್ಲಿ  ಪವಿತ್ರ ಖುರ್ಆನ್ ಮತ್ತು ಹದೀಸ್ ಗೆ ವಿರುದ್ಧವಾದ ಯಾವುದೇ ಅಂಶವಿಲ್ಲ*
*ಸಅದ್ ಬಿನ್ ಮುಆದ್ಸ್ ರ.ಅ ರವರ ವಫಾತ್ ಕಾರಣದಿಂದ,ಅರ್ಶ್ ಕಂಪನ ಗೊಂಡಿತು ಎಂದು ಪ್ರವಾದಿ ವಚನವಿದೆ*
*ವಹ್ಹಾಬಿಗಳ ಮೊಂಡು ನಂಬಿಕೆಯಂತೆ ಅಲ್ಲಾಹು ಅರ್ ಶಿನ ಮೇಲೆ ಕುಳಿತು ಕೊಂಡಿದ್ದಾನೆ*
*ಅರ್ಶ್ ಅಲುಗಾಡಿದಾಗ ಇವರ ನಂಬಿಕೆಯಂತೆ ಅದರ ಮೇಲಿಲುವ ಅಲ್ಲಾಹನೂ ಅಲುಗಾಡಿರಬೇಕಲ್ಲವೇ?*
*ಪ್ರವಾದಿ ಶ್ರೇಷ್ಟ ರಾದ ಮುಹಮ್ಮದ್ ಸ ಅ ಮತ್ತು ಇತರ ಪ್ರವಾದಿ ಗಳು ವಫಾತ್ ಆದಾಗ ಅಲುಗಾಡದ ಅರ್ಶ್  ಸಅದ್ ರ ಅ ವಫಾತ್ ಆದಾಗ ಕಂಪಿಸಿತು ಎಂದು ಹೇಳುವುದನ್ನು ನಂಬ ಬಹುದೇ?* *ಎಂಬ ಪ್ರಶ್ನೆಯನ್ನು ಕೂಡ ವಹ್ಹಾಬಿಗಳಂತಹ  ವಿಚಾರವಾದಿಗಳು ಕೇಳ ಬಹುದು* 
*ಆದರೆ ಸಹೀಹುಲ್ ಬುಖಾರಿ ಸಹಿತ ಹಲವು ಹದೀಸ್ ಗ್ರಂಥಗಳಲ್ಲಿ ಉಲ್ಲೇಖ ಗೊಂಡ ಮೇಲಿನ ಹದೀಸ ನ್ನು ಅಲ್ಲ ಗಳೆಯಲು ಯಾರಿಗೂ ಸಾಧ್ಯವಿಲ್ಲ.*
         *ಅಲ್ಲಾಹನ ಸೃಷ್ಟಿಗಳಲ್ಲಿ ಉನ್ನತ ಸ್ಥಾನದಲ್ಲಿರುವ ಅರ್ಶ್ ಅಲ್ಲಾಹನ ಇಷ್ಟ ದಾಸರಾದ ಸಅದ್ ರ ಅ ರಿಗಾಗಿ ಕಂಪಿಸಿದ್ದರೆ,  ಕಅಬಾವು, ಅಲ್ಲಾಹನ ವಲಿಯ್ಯ್ ಆದ ರಿಫಾಈ ಶೈಖ್ ರಿಗಾಗಿ ತಿರುಗಾಡುವುದಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ* *ಮಾಲೆ ಯಲ್ಲಿರುವ ಮೇಲಿನ ಘಟನೆ ಒಂದು ಚರಿತ್ರೆ ಯಾಗಿದೆ. ಅದನ್ನು ನಂಬಿದರೆ ಖುರ್ಆನ್ ಮತ್ತು ಹದೀಸ್ ಗೆ ಕಿಂಚಿತ್ತೂ ಧಕ್ಕೆ ಬರುವುದಿಲ್ಲ*
*ಹಾಗಾಗಿ  ಚರಿತ್ರೆ ಘಟನೆಗಳ ದಾಖಲೆ ಯಾಗಿರುವ ಮಾಲೆಯನ್ನು ಮತ್ತು ಅದರಲ್ಲಿ ಅಡಕವಾಗಿರುವ ವಿಷಯಗಳನ್ನು ನಾವು ಕೊಂಡಾಡುತ್ತ್ತೇವೆ*
       *ಇನ್ನು, ಮೇಲಿನ ಘಟನೆಯು ಅಸತ್ಯ ಎಂದು ಸಾಬೀತು ಪಡಿಸಲು ವಹ್ಹಾಬಿಗಳು ಯಾವುದೇ ಚರಿತ್ರೆ ಪುಸ್ತಕದ ಉಲ್ಲೇಖ ವನ್ನು ತರುವುದಾದರೆ ನಿಮಗಿದೋ ಸ್ವಾಗತ!* *ಆದರೆ ನಿಮ್ಮ ಜನ್ಮದಲ್ಲಿ ಅದು ಸಾಧ್ಯವಿಲ್ಲ.*
   *ಅಲ್ಲಾಹನ ಇಷ್ಟ ದಾಸರಾದ ಔಲಿಯಾಗಳನ್ನು ಪವಿತ್ರ ಕಅಬಾಲಯವು ತ್ವವಾಫ್ ಮಾಡಿದ ಘಟನೆಯು ,ಇತರ ಔಲಿಯಾಗಳ ಬಗ್ಗೆಯೂ ವರದಿಯಾಗಿದೆ. ಶೈಖ್ ಅಬೂ ಯಝೀದಲ್ ಬಿಸ್ತ್ವಾಮೀ,ಶೈಖ್ ಇಬ್ನು ಅರಬೀ, ಶೈಖ್ ಮುಹ್ಯಿದ್ದೀನ್,ಶೈಖ್ ಇಬ್ರಾಹೀಮುಲ್ ಮತ್ಬೂಲೀ ಮುಂತಾದ ಮಹಾತ್ಮರನ್ನು ಕಅಬಾಲಯವು ತ್ವವಾಫ್ ಮಾಡಿದ್ದಾಗಿ , ಸೀರತುಲ್ ಹಲಬಿಯ್ಯ ,ಜಾಮಿಉ ಕರಾಮಾತಿಲ್ ಔಲಿಯಾ ಮುಂತಾದ ಗ್ರಂಥಗಳಲ್ಲಿ ನೋಡ ಬಹುದಾಗಿದೆ.ಔಲಿಯಾಗಳಲ್ಲಿ ಇಂಥಹ ಕರಾಮತ್ ಲಭಿಸಿದ ಹಲವು ಮಹಾತ್ಮರಿದ್ದಾರೆ ಎಂದು,ಇಮಾಮ್ ಗಝಾಲಿ ಇಹ್ಯಾ ದಲ್ಲಿ, ಇಮಾಮ್ ಯಾಫಿಈ ರೌಲು ರ್ರಯಾಹೀನ್ ಮತ್ತು ಮಿರ್ಆತುಲ್ ಜಿನಾನ್ ನಲ್ಲಿ ಮತ್ತು ಇಮಾಮ್ ಕಿರ್ಮಾನೀ ಅಲ್ ಮಸಾಲಿಕ್ ಮುಂತಾದ ಕಿತಾಬ್ ಗಳಲ್ಲಿ ವಿವರಿಸಿದುದನ್ನು ನೋಡ ಬಹುದಾಗಿದೆ. ಪವಿತ್ರ ಇಸ್ಲಾಮ್ ಧರ್ಮದ ಅಗ್ರೇಸರ ಪ್ರಬೋಧಕರು ಮತ್ತು ಪ್ರಚಾರಕರಾಗಿರುವ  ಇಂಥಹ ವಿದ್ವಾಂಸರಿಗೆ ದೀನ್ ನ ಬಗ್ಗೆ ತಿಳಿದಿಲ್ಲ ಎಂದು ಹೇಳಲು, ಧರ್ಮದೊಳಗೆ ನುಸುಳಿ ನೂತನ ವಾದದ  ಷಡ್ಯಂತರ ನಡೆಸಿ,ಮುಸ್ಲಿಮರನ್ನು ಪೂರ್ವಿಕರಾದ ಸಜ್ಜನರ ದಾರಿಯಿಂದ ಬೇರ್ಪಡಿಸಲು ಹವಣಿಸುತ್ತಿರುವ ವಹ್ಹಾಬೀ ಸಲಫಿಗಳಿಗೆ ಅಲ್ಲದೆ ಸಾಧ್ಯವಿಲ್ಲ. ಇವರ ಕುತಂತ್ರಗಳಿಂದ ಮುಸ್ಲಿಮ್ ಉಮ್ಮತನ್ನು ಅಲ್ಲಾಹು ರಕ್ಷಿಸಲಿ.ಆಮೀನ್*

       *ಪಿ ಎಸ್ ಮುಹಮ್ಮದ್ ಶಿಹಾಬುದ್ದೀನ್ ಅಶ್ರಫಿ ಕಾಮಿಲ್ ಸಖಾಫಿ ಉಳ್ಳಾಲ*🌱🌱🌱🌱for Ahlul haq

No comments:

Post a Comment