Thursday, March 22, 2018

*ಇಸ್ರಾಅ್ ಮಿಹ್ರಾಜ್*

🍀🍀🍀🍀🍀🍀🍀🍀🍀🍀
*ಇಸ್ರಾಅ ಮಿಹ್ ರಾಜ್*
*--------------------------------------*
*ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಜೀವನದಲ್ಲಿ ಉಂಟಾದ ಅತೀ ಮಹತ್ತರವಾದ ಒಂದು ಅದ್ಭುತವಾಗಿದೆ ಇಸ್ರಾಅ ಮಿಅರಾಜ್.*
ಇದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಿಜ್ರಾದ 1 ವರ್ಷ ಮುಂಚೆ ನಡೆದ ಘಟನೆಯಾಗಿದೆ.

*ಖ್ಯಾತ ಫಿಖ್ಹ್ ಪಂಡಿತರೂ ಚರಿತ್ರೆಗಾರರೂ ಆದ ಇಮಾಮ್ ನವವೀ (ರ) ಹೇಳುತ್ತಾರೆ,*
ليلة الاسراء بمكة بعد النبوة بعشر سنين وثلاثة اشهر ليلة سبع وعشرين  من رجب (روضة الطالبين 10/206)

ನುಬುವ್ವತ್ ನ 10 ವರ್ಷ ಮತ್ತು 3 ತಿಂಗಳ ನಂತರ  ರಜಬ್ ತಿಂಗಳ 27 ನೇ ದಿನದಂದು
ಮಕ್ಕಾದಲ್ಲಿ ಇಸ್ರಾ ಘಟನೆ ನಡೆಯಿತು .
(ರೌಳತುತ್ತಾಲಿಬೀನ್ 10/206).

ಇಮಾಮ್ ಇಸ್ಮಾಯಿಲ್ ಅಲ್ ಹಿಖ್ಖಿ (ರ) ಹೇಳುತ್ತಾರೆ;
وهي ليلة سبع وعشرين من رجب  ليلة الاثنين وعليه عمل الناس
(تفسير روح البيان 5/78)

ಇಸ್ರಾಅ, ಮಿಅರಾಜ್ ರಜಬ್ 27 ನೇ ದಿನದಂದು ಸೋಮವಾರ ನಡೆದ ಘಟನೆಯಾಗಿದೆ.
(ರೂಹುಲ್ ಬಯಾನ್ 5/78)

ಇಸ್ರಾಅ ಮಿಅರಾಜ್ ಎಂಬ ಪವಿತ್ರವಾದ ಘಟನೆ ನಡೆದದ್ದು ರಜಬ್ 27 ಸೋಮವಾರ ರಾತಿಯೆಂದು ಇಮಾಮರುಗಳ ಈ ಮಾತಿನಿಂದ ತಿಳಿದು ಬಂತು.

*ರಜಬ್ 27 ರ ಮಹತ್ವ*

ಈ ರಾತ್ರಿಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಕಲ ಅನುಗ್ರಹಗಳನ್ನು ಕಂಡು ಪುಣ್ಯ ಮಕ್ಕಾ ಗೆ ಹಿಂದಿರುಗಿದ ದಿವಸವಾಗಿದೆ.

ಈ ದಿವಸದ ಮಹತ್ವವನ್ನು ತಿಳಿಸುವ ದಾರಾಳ ಹದೀಸುಗಳು ಇವೆ.

ಇಬ್ನ್ ತೀಮಿಯಾರೊಂದಿಗೆ ಹೀಗೆ ಕೇಳಲ್ಪಡಲಾಯಿತು
وسئل عن ليلة القدر وليلة الاسراء بالنبي صلي الله عليه وسلم ايهما افضل ؟
فاجاب  بان ليلة الاسراء افضل في حق النبي صلي الله عليه وسلم وليلة القدر افضل بالنسبة الي الامة فحظ النبي صلي الله عليه وسلم الذي اختص به ليلة المعراج منها اكمل من حظه من ليالي القدر
(فتاوي ابن تيمية 25 / 157)

ಲೈಲತುಲ್ ಖದ್ರಿಗಾ ಹೆಚ್ಚು ಮಹತ್ವ ? ಅಥವಾ ಇಸ್ರಾಅ ರಾತ್ರಿಗಾ ಹೆಚ್ವು ಮಹತ್ವ?.

ಆವಾಗ ಇಬ್ನ್ ತೀಮಿಯಾ ಈ ರೀತು ಉತ್ತರಿಸಿದರು.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ದೃಷ್ಟಿಯಲ್ಲಿ ಇಸ್ರಾ ರಾತ್ರಿಗಾಗಿದೆ ಅತೀ ಮಹತ್ವ.
ಅವರ ಉಮ್ಮತ್ ನ ಪಾಲಿಗೆ ಲೈಲತುಲ್ ಖದ್ರಿಗಾಗಿದೆ ಹೆಚ್ಚು ಮಹತ್ವ.
(ಮಜ್ಮೂಉಲ್ ಫತಾವಾ 25/157)
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಪಾಲಿಗೆ ಅಲ್ಲಾಹನ ಅತ್ಯಂತ ದೊಡ್ಡ ಕೊಡುಗೆಯಾಗಿದೆ ಇಸ್ರಾಅ ಮಿಅ ರಾಜ್.
ಖಂಡಿತವಾಗಿಯೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು  ಅತ್ಯಂತ ಸಂತೋಷಪಟ್ಟ ದಿವಸವಾಗಿತ್ತು ಅಂದಿನ ರಾತ್ರಿ.
ಇದನ್ನು ಇಬ್ನಿ ತೀಮಿಯ್ಯಾರೇ ಅಂಗೀಕರಿಸುತ್ತಾರೆ.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸಂತಸವುಂಟಾದ ಸಂಗತಿಯಲ್ಲಿ ಅವರ ಉಮ್ಮತ್ ಕೂಡಾ ಸಂತಷಪಡುತ್ತಾರೆ.
ವಿವೇಕವಿರುವ ಎಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ.

*ಮಿಅರಾಜ್ ದಿನ ಉಪವಾಸ*

ಇಮಾಮರುಗಳು ಇದನ್ನು ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ

ಇಮಾಮ್ ಗಝ್ಝಾಲಿ (ರ) ಬರೆಯುತ್ತಾರೆ.
"روي ابو هريرة ان رسول الله صلي الله عليه وسلم قال : من صام يوم سبع وعشرين من رجب كتب الله له صيام ستين شهرا"
(احياء علوم الدين 1/361)
ಅಬೂ ಹುರೈರ (ರ) ವರದಿ,
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ;ಯಾರಾದರು ರಜಬ್ 27 ನೇ ದಿನದಂದು ಉಪವಾಸ ಆಚರಿಸಿದಲ್ಲಿ  2 ತಿಂಗಳುಗಳ ಕಾಲ  ಉಪವಾಸ ಆಚರಿಸಿದ ಪ್ರತಿಫಲವು ಆತನಿಗೆ ಬರೆಯಲ್ಪಡುವುದು.
_(ಇಹ್ಯಾಉಲೂಮಿದ್ದೀನ್ 1/361)_

_ಮುಹ್ಯಿಯುದ್ದೀನ್ ಶೈಖ್ (ರ) - ಗುನ್ಯತ್ 182/1_

*ರಜಬ್ 27 ನೇ ದಿನದಂದು ಉಪವಾಸ ಆಚರಿಸುವುದಕ್ಕೆ ಹದೀಸ್ ಇದೆಯಾ ಎಂದು ಕೇಳುವುದೇ ಮೌಡ್ಯತನವಾಗಿದೆ.*
ಕಾರಣ ನಾವು ನಾಲ್ಕು ಮದ್ಸ್ ಹಬ್ ಗಳಲ್ಲಿ ಯಾವುದಾದರೊಂದು ಮದ್ಸ್ ಹಬನ್ನು ತಖ್ಲೀದ್ ಮಾಡುವ ಮುಖಲ್ಲಿದ್ ಗಳಾಗಿದ್ದೇವೆ.
ಮದ್ಸ್ ಹಬಿನ ಇಮಾಮರುಗಳು ಖುರ್ ಆನ್ ಮತ್ತು ಹದೀಸ್ನಿಂದ ನೀತಿ ನಿಯಮಗಳನ್ನು ಸಂಶೋಧನೆ ನಡೆಸಿ ಅವರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ಶಾಫಿಈ ಮದ್ಸ್ ಹಬಿನ ಎಷ್ಟೋ ಇಮಾಮರು ರಜಬ್27 ನೇ ದಿನದಂದು ಉಪವಾಸ ಸುನ್ನತ್ತಿದೆಯೆಂದು ಸ್ಪಷ್ಟಪಡಿಸಿದ್ದಾರೆ.
ويستحب صوم يوم المعراج
(اعانة 2/270)
_ಮಿಅರಾಜ್ ದಿನದಂದು ಉಪವಾಸ ಸುನ್ನತ್ತಿದೆ._
_(ಇಆನತ್ 2/270)_

ಇದೊಂದು ಉದಾಹರಣೆ ಮಾತ್ರವಾಗಿದೆ.
ಇಮಾಮ್ ಗಝ್ಝಾಲಿ (ರ) ಸಹಿತ ಇಮಾಮರುಗಳು ಅದು ಪುಣ್ಯಕರ್ಮವೆಂದು ಹೇಳುವಾಗ (ವಹ್ಹಾಬಿಗಳ ವಾದ ಪ್ರಕಾರ ಇಮಾಮ್ ಗಝ್ಝಾಲಿ ವರದಿ ಮಾಡಿದ ಹದೀಸ್ ಲಹೀಫ್ ಆಗಿದ್ದು ,  ಇಮಾಮ್ ಗಝ್ಝಾಲೀ (ರ) ಲಹೀಫ್ ಆದ ಹದೀಸ್ ವರದಿ ಮಾಡಿ ನೂತನವಾದವನ್ನು ಪ್ರಚಾರ ಮಾಡಿದರೇ?
ಬುಧ್ಧಿಯಿರುವವನು ಹೀಗೆ ಹೇಳಲಾರ.)
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಅನುಗ್ರಹವನ್ನು ನೀಡಲ್ಪಟ್ಟ ದಿವಸ ಎಂಬ ನೆಲೆಯಲ್ಲಿ ಕೃತಞ್ಞತೆಗಾಗಿ ಆ ದಿವಸದಂದು ಉಪವಾಸ ಆಚರಿಸಬಹುದಾಗಿದೆ.
ಕೃತಞ್ಞತೆ ಸಲ್ಲಿಸಲು ಇಂತಿತಹಾ ಸತ್ಕರ್ಮ ಮಾತ್ರ ನಿರ್ವಹಿಸಬೇಕೆಂದು ಇಸ್ಲಾಮ್ ಕಲಿಸಿಕೊಟ್ಟಿಲ್ಲ.
ಯಾವುದೇ ಇಬಾದತ್ ಮೂಲಕ ಅಲ್ಲಾಹನಿಗೆ ಕೃತಞ್ಞತೆ ಸಲ್ಲಿಸಬಹುದಾಗಿದೆ.

📝 *ಇಬ್ನ್ ಮುಹಮ್ಮದ್*
*ಸಾಲೆತ್ತೂರು.*

No comments:

Post a Comment