😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 1⃣9⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಸಭೆ ಮುಗಿಯಿತು. ⬇
ಜನರೆಲ್ಲರೂ ಅಲ್ಲಿಂದ ನಿರ್ಗಮಿಸಿದರು.
*ಮುಸ್ಲಿಂ (ರ) ಮಕ್ಕಳೊಂದಿಗೆ ಹಾನಿಯಾ(ರ) ಮತ್ತು ಶರಕ್ ಇಬ್ನು ಅವಾಅ (ರ) ರೊಂದಿಗೆ ಕುಳಿತು ಊಟ ಮಾಡುತ್ತಿರುವಾಗ ಹಾನಿಯಾ (ರ) ರವರು ಮುಸ್ಲಿಂ (ರ) ರವರೊಂದಿಗೆ ಹೇಳಿದರು. ಸದ್ಯದ ಪರಿಸ್ಥಿತಿ ತಲೆ ಕೆಳಗಾಗಿದೆ. ಈಗ ಇಲ್ಲಿನ ಆಡಳಿತದ ಚುಕ್ಕಾಣಿ ನುಅಮಾನ್ ಇಬ್ನು ಬಶೀರ್ (ರ) ರವರ ಕೈಯಲಿಲ್ಲ. ಬದಲಾಗಿ ಯಝೀದ್'ನ ಬಂಟನಾದ ಉಬೈದ್ ಬಸರದಿಂದ ಆಗಮಿಸಿ ಯಝೀದ್'ನ ಅಣತಿಯಂತೆ ಕೂಫದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ. ಅವನು ಇಂದಿನ ಸಭೆಯಲ್ಲಿ ಮುಸ್ಲಿಂ (ರ) ರವರಿಗೆ ವಾಸಿಸಲು ಸೌಕರ್ಯ ಕಲ್ಪಿಸುವವರ ತಲೆ ಹಾರಿಸುತ್ತೇನೆಂದು ಹೇಳುತ್ತಾ ಒಬ್ಬ ಬಡ ಯುವಕನ ತಲೆ ಕಡಿದು ಆ ತಲೆಯನ್ನು ತನ್ನ ಖಡ್ಗದಿಂದ ಚುಚ್ಚಿ ಎತ್ತಿ ಹಿಡಿದು ಜನರಿಗೆ ತೋರಿಸುತ್ತಾ ಎಚ್ಚರಿಕೆ ಕೊಟ್ಟಿದ್ದಾನೆ ಎಂದರು.*
ಆಗ ಮುಸ್ಲಿಂ (ರ) ಹೇಳಿದರು..
ಹೌದೇ...?
ತಮಗೆ ಈ ಬಗ್ಗೆ ಭಯವಿದ್ದರೆ ಹೇಳಿ ಮಕ್ಕಳೊಂದಿಗೆ ನಾನು ಇಲ್ಲಿಂದ ಬೇರೆ ಕಡೆ ಹೇೂಗುತ್ತೆನೆ..
ಇಲ್ಲ. ಖಂಡಿತಾ ನನಗೇನೂ ಭಯವಿಲ್ಲ. ಇಲ್ಲಿನ ಪರಿಸ್ಥಿತಿಯನ್ನು ತಮ್ಮ ಗಮನಕ್ಕೆ ತಂದೆ ಅಷ್ಟೇ....
*ಅಲ್ಲಾಹನ ರಸೂಲ್ ﷺ ರವರ ಕುಟುಂಬಕ್ಕೆ ಆಶ್ರಯ ನೀಡಿದ ಕಾರಣಕ್ಕೆ ಪ್ರಾಣವನ್ನೇ ತ್ಯಾಗ ಮಾಡಬೇಕಾಗಿ ಬಂದರೂ ನಾನದನ್ನು ಸಂತೇೂಷದಿಂದಲೇ ಸ್ವೀಕರಿಸುತ್ತೇನೆ. ಏಕೆಂದರೆ ಬಹು ಬೇಗನೆ ರಸೂಲ್ ﷺ ರವರ ಬಳಿ ತೆರಳಬಹುದಲ್ಲವೇ..? ಎಂದರು ಮುಗುಳ್ನಗುತ್ತಾ....*
_ಪ್ರಿಯ ಓದುಗರೇ..,_
ಇಲ್ಲಿ ನಾವು ಪ್ರತ್ಯೇಕವಾಗಿ ಗಮನಿಸಬೇಕಾದ ಒಂದು ಹದೀಸ್ ನೋಡಿ..
عن أبي موسى قال قال رسول الله صلى الله عليه وسلم أمتي هذه أمة مرحومة ليس عليها عذاب في الآخرة عذابها في الدنيا الفتن والزلازل والقتل
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು,
*("ನನ್ನ ಸಮುದಾಯವು ಕಾರುಣ್ಯತೆಯಿಂದ ಕೂಡಿದ ಸಮೂಹವಾಗಿದೆ. ಈ ಲೇೂಕದಿಂದ ಅವರು ದುರ್ಜನರ ದೌರ್ಜನ್ಯಕ್ಕೀಡಾಗಿಯೇೂ ಅಥವಾ ಪ್ರಕೃತಿ ವಿಕೇೂಪದಿಂದಲೇೂ ದುರ್ಮರಣ ಹೊಂದಿದರೆ ಅಂಥವರನ್ನು ನಾಳೆ ಪರಲೇೂಕದಲ್ಲಿ ಅಲ್ಲಾಹನು ಶಿಕ್ಷಿಸಲಾರ")*
(ವರದಿ: ಅಬೂದಾವೂದ್)
_ಇಂದು ಎಲ್ಲೆಲ್ಲೂ ಅತ್ಯಾಚಾರ, ಪೀಡನೆ, ಪ್ರಾಣಿಗಳ ಹೆಸರಿನಲ್ಲಿ ಕೊಲೆ ಮತ್ತು ಮುಸ್ಲಿಮರಾದ ಕಾರಣದಿಂದ ದೌರ್ಜನ್ಯ, ಹತ್ಯೆ ಮತ್ತು ಸುಲಿಗೆಗಳು ಎಗ್ಗಿಲ್ಲದೆ ತಾಂಡವಾಡುತ್ತಿರುವ ಈ ಕಾಲಘಟ್ಟದಲ್ಲಿ ವರದಿಯಾದ ಮೇಲಿನ ಹದೀಸ್ ಗಮನಾರ್ಹ._
*(ಅಂದರೆ ಯಾವುದೇ ಸಮಯ ಅಥವಾ ಸಂದರ್ಭದಲ್ಲಿ ನಮಗೇನಾದರೂ ಅವಘಡ ಸಂಭವಿಸಿದರೆ ಅಸಹನೆಯಿಂದ ಧೃತಿಗೆಟ್ಟು ವಿಚಲಿತರಾಗಿ ಅಲ್ಲಾಹನ ವಿಧಿಯನ್ನು ದೂಷಿಸದೆ ಕರುಣಾಳುವಾದ ಅಲ್ಲಾಹನಿಂದ ದೊರೆಯಲಿರುವ ಅಪಾರವಾದ ಪ್ರತಿಫಲದ ನಿರೀಕ್ಷೆಯಲ್ಲಿ ಸಹನೆ ಮತ್ತು ತಾಳ್ಮೆಯಿಂದ ಸಹಿಸಿದರೆ ಇಹವಷ್ಟೇ ಅಲ್ಲ ಪರಲೇೂಕ ವಿಜಯವೂ ನಿಶ್ಚಿತ.)*
ಹಾಗಾಗಿ ಅವಘಡ ಸಂಭವಿಸಿದಾಗ..
*إنا لله وإنا إليه راجعون*
*ಎನ್ನುತ್ತಾ..*
*(ಅಲ್ಲಾಹನ ವಿಧಿಯಲ್ಲಿ ವಿಶ್ವಾಸವನ್ನರ್ಪಿಸಿ "ನಾವೆಲ್ಲರೂ ಅಲ್ಲಾಹನಿಂದ ಮತ್ತು ಅಲ್ಲಾಹನಿಗಾಗಿ ಇರುವವರು. ಮತ್ತು ಒಂದಲ್ಲ ಒಂದು ದಿನ ಅವನ ಬಳಿಗೆ ಮರಳಬೇಕಾದವರು"*
*ಎಂಬ ಪರಿಜ್ಞಾನದಿಂದ ಮೇಲಿನ ವಚನವನ್ನು ಮರೆಯದೆ ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳಬೇಕು)*
*********************
ಹಾನಿಯಾ (ರ) ರವರ ಮಾತನ್ನು ಕೇಳಿದ ಶರಕ್ ಇಬ್ನು ಅವಾಅ (ರ)
ತುಸು ಹೊತ್ತು ಯೇೂಚಿಸಿ ನಂತರ ಹೇಳಿದರು...
"ಉಬೈದ್'ನನ್ನೇ ಕೊಂದರೆ ಎಲ್ಲ ಸಮಸ್ಯೆಗಳೂ ಪರಿಹಾರವಾದೀತು ಅಲ್ಲವೇ..!"
ಅದು ಹೇಗೆ..?
ಅವನನ್ನು ಕೊಲ್ಲಲು ನಮ್ಮಿಂದ ಸಾಧ್ಯವೇ? ಎಂದು ಕೇಳಿದರು ಹಾನಿಯಾ(ರ)..
ಆಗ ಶರಕ್ ಇಬ್ನು ಅವಾಅ(ರ). ಹೇಳಿದರು, ನಾವು ಒಂದು ಕೆಲಸ ಮಾಡೇೂಣ.
ನಾಳೆ ನಾನು ಜ್ವರದಿಂದ ಬಳಲುತ್ತಿದ್ದೇನೆಂದು ಉಬೈದ್'ನಿಗೆ ತಿಳಿಸಿದರೆ ಖಂಡಿತವಾಗಿಯೂ ಅವನು ನನ್ನನ್ನು ಭೇಟಿಯಾಗಲೆಂದು ಇಲ್ಲಿಗೆ ಬರುವನು.
ಆಗ ನೀವಿಬ್ಬರೂ ಖಡ್ಗದೊಂದಿಗೆ ಮರೆಯಲ್ಲಿ ಅಡಗಿ ಕುಳಿತುಕೊಳ್ಳಿ. ಹಾಗೆ ಅವನು ನನ್ನೊಂದಿಗೆ ಮಾತನಾಡುತ್ತಿರುವಾಗ ತಕ್ಕ ಸಮಯ ನೇೂಡಿ ನಾನು *ಸ್ವಲ್ಪ ನೀರು ತನ್ನಿ..* ಎನ್ನುತ್ತೇನೆ.
ಆಗ ನೀವಿಬ್ಬರೂ ಧಾವಿಸಿ ಅವನ ಮೇಲೆರಗಿ ಅವನ ಕತೆ ಮುಗಿಸಬೇಕು. ಅವನನ್ನು ಕೊಂದರೆ ಮತ್ತೆ ಸದ್ಯದ ಮಟ್ಟಿಗೆ ಯಾರಿಗೂ ಭಯ ಪಡಬೇಕಿಲ್ಲ.
ಶರಕ್ ಇಬ್ನು ಅವಾಅ (ರ) ರವರ ಮಾತಿಗೆ ಹಾನಿಯಾ (ರ) ಸಮ್ಮತಿಸಿದರು.
ಹೀಗೆ ಮರುದಿನ ಶರಕ್ ಇಬ್ನು ಅವಾಅ (ರ) ರವರು ಜ್ವರದಿಂದ ಬಳಲುತ್ತಿದ್ದಾರೆಂದು
ಉಬೈದ್'ನಿಗೆ ಸುದ್ದಿ ತಲುಪಿಸಲಾಯಿತು. ಆಗ
ಉಬೈದ್ ಒಬ್ಬನೇ ಬಂದನು..
ಶರಕ್ (ರ)ರೊಂದಿಗೆ ಉಬೈದ್ ಅನಾರೇೂಗ್ಯದ ಕುರಿತು ಮಾತನಾಡುತ್ತಿರುವಾಗ, ಶರಕ್ (ರ) ತಕ್ಕ ಸಮಯ ನೇೂಡಿ ಸ್ವಲ್ಪ *ನೀರು ತನ್ನಿ* ಎಂದರು ಜೇೂರಾಗಿ.. ⤵
*ಮುಂದುವರಿಯುವುದು..*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment