Tuesday, March 20, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣1⃣
**********************

*صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

ತನ್ನ ಉಪಾಯ ಫಲಿಸುತ್ತಿದೆಯೆಂಬುದು ಮನವರಿಕೆಯಾದಾಗ *ಜಅಫರ್* ಒಳಗೊಳಗೆ ನಗುತ್ತಾ ಹೇಳಿದ.

ನಾನು ನಿನಗೆ ⬇

ಒಂದು ಮದ್ದು ಕೊಡುತ್ತೇನೆ.
ಅದನ್ನು ಅವರ ಅರಿವಿಗೆ ಬಾರದಂತೆ ಆಹಾರದಲ್ಲಿ ಬೆರೆಸಿ ಕೊಡಬೇಕು. ಆ ಮದ್ದು ಅವರ ಹೊಟ್ಟೆ  ಸೇರಿದರೆ ಮತ್ತೆ ಅವರಿಂದ ನಿನ್ನನ್ನು ದೂರ ಮಾಡಲು ಯಾರಿಂದಲೂ ಸಾದ್ಯವಿಲ್ಲ ಎಂದನು.

ಸಹೇೂದರನ ಕುತಂತ್ರದ ಅರಿವಿರದ ಆ ಸ್ತ್ರೀ ಹಿಂದೆ ಮುಂದೆ ಯೇೂಚಿಸದೆ ಸರಿ ಎಂದು ಒಪ್ಪಿದರು.

ಅದರಂತೆ ಮರುದಿನ *ಜಅಫರ್* ಒಂದು ಚಿಕ್ಕ ಪೊಟ್ಟಣವನ್ನು ತಂದು *ಜಅದ(ರ)* ರವರ ಕೈಗೊಪ್ಪಿಸಿದನು.

*ಜಅದ(ರ)* ಪೊಟ್ಟಣವನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಒಂದು ರೀತಿಯ ಪುಡಿ ಇತ್ತು.

*ಹಸನ್ (ರ) ರವರ ದಿನ ಚರ್ಯೆಗಳನ್ನು ಚೆನ್ನಾಗಿ ಬಲ್ಲ ಆ ಮಹಿಳೆ ಆ ಪುಡಿಯನ್ನು ಹಸನ್ (ರ)ರವರ ಹೊಟ್ಟೆ ಸೇರಿಸಲು ಒಂದು ಉಪಾಯ ಕಂಡು ಕೊಂಡರು.*

ದಿನನಿತ್ಯ *ತಹಜ್ಜುದ್* ನಮಾಜಿಗೆಂದು ರಾತ್ರಿ ಏಳುವ *ಹಸನ್ (ರ)ರವರಿಗೆ* ತಮ್ಮ ಕೊಠಡಿಯಲ್ಲಿದ್ದ ಹೂಜಿಯಿಂದ ನೀರು ಕುಡಿಯುವ ಅಭ್ಯಾಸವಿತ್ತು.
ಆ ನೀರಿನಲ್ಲಿ ತನ್ನ ಸಹೇೂದರ ಔಷಧವೆಂದು ಹೇಳಿ ಕೊಟ್ಟಿದ್ದ ಮಾರಕವಾದ ಆ ವಿಷವನ್ನು ಬೆರೆಸಿದರು..!

ಆ ವಿಷದ ಒಂದಂಶದಿಂದ ಎಂತಹ ಬಲಶಾಲಿಯಾದ ಆನೆಯನ್ನಾದರೂ ಕೂಡ ಕೆಲವೇ ನಿಮಿಷಗಳ ಅಂತರದಲ್ಲಿ ಕೊಲ್ಲಬಹುದಿತ್ತು.
ಅಷ್ಟರಮಟ್ಟಿಗೆ ಮಾರಕವಾದ ವಿಷವಾಗಿತ್ತು ಆ ಪುಡಿ.

ಆ ರಾತ್ರಿಯೂ ಎಂದಿನಂತೆ *ಬಹುಮಾನ್ಯರಾದ ಹಸನ್(ರ)* ತಡರಾತ್ರಿ ಎದ್ದು ಸ್ನಾನ ಮಾಡಿ ವುಲೂಅ್ ಮಾಡಿ ಬಂದವರು, ವಿಷ  ಬೆರೆಸಲ್ಪಟ್ಟ ನೀರಿನ ಹೂಜಿಯನ್ನು ಕೊಂಡೊಯ್ದು ಮುಸಲ್ಲೆಯಲ್ಲಿ ಕುಳಿತರು. ಆ ಹೂಜಿಯ ಮುಚ್ಚಳ ತೆರೆದರು.

*ಜಅದ(ರ)* ನಿದ್ರಿಸದೆ ಇದನ್ನೆಲ್ಲ ಗಮನಿಸುತ್ತಾ ತನ್ನ ಸಹೇೂದರ ಕೊಟ್ಟ ಮದ್ದನ್ನು ಬೆರೆಸಿದ ಆ ನೀರನ್ನು ಕುಡಿದರೆ ಖಂಡಿತವಾಗಿಯೂ ತನ್ನ ಪ್ರಿಯತಮನಿಗೆ ತನ್ನ ಮೇಲೆ ಪ್ರೇಮ ಹೆಚ್ಚಾದೀತೇ? ಇಲ್ಲವೇ?

ಒಂದು ವೇಳೆ ಪುಡಿ ಬೆರೆಸಿರುವುದರಿಂದ ನೀರಿನಲ್ಲೇನಾದರೂ ವಾಸನೆಯೇೂ ಅಥವಾ ರುಚಿಯಲ್ಲಿ ವ್ಯತ್ಯಾಸವೇೂ ಕಂಡು ಬಂದು ಕುಡಿಯದಿದ್ದರೇನು ಗತಿ? ಎಂದೆಲ್ಲ ಯೇೂಚಿಸುತ್ತಾ ತೊಳಲಾಡುತ್ತಿದ್ದರು.

(ಆದರೆ ಯಾವುದು ಯಾವಾಗ ಯಾರಿಂದ ಎಲ್ಲಿ ಹೇಗೆ ನಡೆಯಬೇಕೆಂದು ಜಗದೊಡೆಯನಾದ ಅಲ್ಲಾಹನ ವಿಧಿಯಿದೆಯೇೂ ಅದು ಘಟಿಸಬೇಕಾದ ಸಮಯ ಸನ್ನಿಹಿತವಾದಾಗ ಅದು ಸಂಭವಿಸದಿರಲಾರದು.)

*ಬಹುಮಾನ್ಯರಾದ ಸಯ್ಯಿದ್ ಹಸನ್ (ರ) ರವರು ಆ ಹೂಜಿಯ ಮುಚ್ಚಳ ತೆರೆದು ಬಾಯಿಗಿಟ್ಟು ಒಂದೆರಡು ಗುಟುಕು ನೀರು ಕುಡಿಯುತ್ತಿದ್ದಂತೆ ಗಂಟಲಿನಿಂದ ಹೊಟ್ಟೆಯ ತನಕ ಅಂದರೆ ಆ ನೀರು ಹೇೂದ ಭಾಗವೆಲ್ಲ ತಟಸ್ಥವಾದಂತಾಗಿ ಉರಿಯಲಾರಂಭಿಸಿತು.  ಸಹಿಸಲಾಗದೆ ಕೈಲಿದ್ದ ಹೂಜಿಯನ್ನು ನೆಲದಲ್ಲಿಟ್ಟು ಎದೆಯನ್ನು ಉಜ್ಜುತ್ತಾ ಎದ್ದು ನಿಂತರು.*
*ಎದೆ ನೋವಿನೊಂದಿಗೆ ಉರಿ ಸಹಿಸಲಾಗದಿದ್ದರೂ ಅಹ್ಲ್'ಬೈತಿನ ಕಣ್ಮಣಿಯಾದ ಆ ಮಹಾನ್ ಚೇತನ ತಹಜ್ಜುದ್ ನಮಾಝ್'ಗೆ ಅಲ್ಲಾಹು ಅಕ್ಬರ್ الله اكبر ಎಂದು ಕೈ ಕಟ್ಟಿದರು.*

ಆದರೆ ಅಸಹನೀಯವಾದ ವೇದನೆಯ ಕಾರಣ ನಮಾಝ್ ಮುಂದುವರೆಸುವುದಿರಲಿ ನಿಲ್ಲಲಿಕ್ಕೂ ತ್ರಾಣವಿಲ್ಲದೆ  ಯಾ ಅಲ್ಲಾಹ್... ಎಂದು ನರಳುತ್ತಾ ಕುಸಿದು ಬಿದ್ದರು.

ಅದೇ ಸಮಯಕ್ಕೆ ಪಕ್ಕದ ಕೊಠಡಿಯಲ್ಲಿ ತಹಜ್ಜುದ್ ನಮಾಝ್'ಗೆ ಅಣಿಯಾಗುತ್ತಿದ್ದ *ಹುಸೈನ್ (ರ) ರವರು* ಈ ನರಳಾಟವನ್ನು ಕೇಳಿ ಧಾವಿಸಿ ಬಂದು ಬಾಗಿಲ ಹತ್ತಿರ ನಿಂತು ಸಲಾಂ ಹೇಳಿದರು.

ನೋವಿನಿಂದ ಮಲಗಿ ಒದ್ದಾಡುತ್ತಿದ್ದ *ಹಸನ್ (ರ) ರವರು* ತಮ್ಮ ಪತ್ನಿ *ಜಅದ(ರ)ರೊಂದಿಗೆ* ಹೇಳಿದರು ಪ್ರಿಯೇ, ನೀನು ತುಸು ಆಚೆ ಹೋಗು.
ನನ್ನ ಸಹೇೂದರನಲ್ಲಿ ನನಗೆ ಸ್ವಲ್ಪ ಮಾತನಾಡಲಿಕ್ಕಿದೆ ಎಂದಾಗ *ಜಅದ(ರ)* ಅಲ್ಲಿಂದ ಹೊರ ಹೇೂದರು.

ಸಲಾಂಗೆ ಉತ್ತರಿಸಿದ *ಹಸನ್(ರ)ರವರು, ಹುಸೈನ್ (ರ) ರನ್ನು* ಒಳಗೆ ಕರೆದರು.
ಒಳಗೆ ಆಗಮಿಸಿದ *ಹುಸೈನ್ (ರ)* ನೋವಿನಿಂದ ಒದ್ದಾಡುತ್ತಿದ್ದ ತಮ್ಮ ಸಹೋದರನ ಹತ್ತಿರ ಕೇಳಿದರು.
ಏನಾಯಿತು ನಿಮಗೆ? ಏನು ಸಂಭವಿಸಿತು?

*ಹಸನ್ (ರ)ರವರು ಆ ಹೂಜಿಯತ್ತ ಬೆರಳು ತೋರಿಸಿದರು. ತಕ್ಷಣ ಹುಸೈನ್ (ರ)ರವರು ಆ ಹೂಜಿಯನ್ನು ಬೆಳದಿಂಗಳ ಬೆಳಕಿನಲ್ಲಿ ಪರಿಶೀಲಿಸುವ ಸಲುವಾಗಿ ಹೂಜಿಯನ್ನು ಹೊರಗೆ ಕೊಂಡೊಯ್ಯುವಾಗ ಕೈತಪ್ಪಿ ಹೂಜಿ ನೆಲಕ್ಕೆ ಬಿದ್ದ ಕಾರಣ ಹೂಜಿಯ ನೀರು ಹುಸೈನ್ (ರ)ರವರ ಕಾಲಿಗೆ ಚಿಮ್ಮಿ ಅವರ ಕಾಲು ಸುಟ್ಟಿತು. ಆಗ ಹುಸೈನ್(ರ)ರಿಗೆ ಈ ನೀರಿನಲ್ಲಿ ಮಾರಕವಾದ ವಿಷ ಬೆರೆಸಲಾಗಿದೆಯೆಂದು  ಮನವರಿಕೆಯಾಯಿತು.*

ತಮ್ಮ ಸಹೋದರನನ್ನು ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰

No comments:

Post a Comment