Sunday, September 24, 2017

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-19

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣9⃣
➖➖➖➖➖➖➖➖➖

ಖಾಲಿದ್ ಇಬ್ನು ವಾಲಿದ್(ರ) ಯಮಾಮ ರಣಾಂಗಣಕ್ಕೆ ಪಯಣ ಬೆಳೆಸಿದರು‌..⤵

 ತಂಡ *ಅಕ್ರುಬಾ* ಎಂಬ ಸ್ಥಳಕ್ಕೆ ತಲುಪಿ ಅಂದು ಅಲ್ಲಿಯೇ ತಂಗಿದರು.

ಆದರೆ *ಮುಸೈಲಿಮನ* ಗುಪ್ತಚರ ಇಲಾಖೆಯವರು *ಇಸ್ಲಾಮಿಕ ಸೈನ್ಯ* ಬರುವುದನ್ನು ತಿಳಿದುಕೊಡು ಈ ಮಾಹಿತಿಯನ್ನು *ಮುಸೈಲಿಮ*ನಿಗೆ ತಿಳಿಸಲು ಯಮಾಮಕ್ಕೆ ಹೋದರು.

ಅದೇ ವೇಳೆ ಅರಮನೆಯಲ್ಲಿ *ಆಬಿದ್'*ಗೆ ನಿದ್ರೆ ಬಾರದೇ ಇರುವುದರಿಂದ *ಫರ್ಹನಾಝ್* ಕೂಡ ನಿದ್ರಿಸದೆ ಅವನನ್ನು ಮಲಗಿಸಲು ಪ್ರಯತ್ನಿಸುತ್ತಿರುವಾಗ
ಯಾರೋ ಗೇಟು ತೆರೆಯುವಂತೆ  ಶಬ್ದ ಕೇಳಿಸಿತು. ಆಗ ಅವಳು ಕಿಟಿಕಿಯಿಂದ ಹೊರಗಡೆ ಇಣುಕಿ ನೋಡಿದ್ದಾಗ.. ಸೈನಿಕರು ಬಹಳ ಗೌರವದಿಂದ ಗೇಟನ್ನು ತೆರೆದು ಕೊಟ್ಟು ಬದಿಗೆ ನಿಲ್ಲುವುದು. ವಯಸ್ಸಾದ ವ್ಯಕ್ತಿಯೊಬ್ಬರು ಮುಂದೆಯೂ, ಇಬ್ಬರು ಯುವಕರು ಹಿಂದೆಯೂ ಒಳಗೆ ಪ್ರವೇಶಿಸುವುದು ಕಾಣಿಸಿತು.

 *ಮುಸೈಲಿಮನ* ಮಗನ ಪತ್ನಿ ಎಂದು ಹೇಳಿದರೂ ರಾತ್ರಿ ನನಗೆ ಗೇಟು ತೆರೆದು ಕೊಡದ ಸೈನಿಕರು ಇಂದು ಇವರಿಗೆ ಇಷ್ಟೊಂದು ಆತಿಥ್ಯ ನೀಡುವುದರಲ್ಲಿ ಏನೋ ರಹಸ್ಯ ಅಡಗಿದೆ.
ಅದು ನನಗೆ ತಿಳಿಯಬೇಕು ಎಂದು *ಫರ್ಹನಾಝ್* ಚಿಂತಿಸಿದಳು.

ಬಳಿಕ *ಫರ್ಹನಾಝ್* ಮೆಲ್ಲ ಮೆಲ್ಲನೆ ಕೊಠಡಿಯಿಂದ ಹೊರಗೆ ಬಂದು, *ಮುಸೈಲಿಮನು* ಮಲಗುವ ಕೋಣೆಯ ಹಿಂದೆಯಿರುವ ಪರದೆಯ ಹಿಂದೆ ಅಡಗಿ ನಿಂತಳು.

ಆಗ ಆ ಮೂವರು *ಮುಸೈಲಿಮನ* ಕೋಣೆಯ ಒಳಗೆ ಪ್ರವೇಶಿಸಿದರು. ಅವರಲ್ಲಿದ್ದ ವೃದ್ದನ ಹೆಸರು *ನಹಾರ್ ರಜ್ಜಾಲಿ ಇಬ್ನು ಉರ್'ತ್ತುಬ* ಎಂದಾಗಿತ್ತು.

( *ನಹಾರ್ ರಜ್ಜಾಲಿ ಇಬ್ನು ಉರ್'ತ್ತುಬ*ರನ್ನು ಚುಟುಕಾಗಿ ಪರಿಚಯಿಸಬೇಕಾಗುತ್ತದೆ)👇👇

*ನಹಾರ್ ರಜ್ಜಾಲಿ*
ನೆಬಿ (ﷺ) ರವರ ಮುಂದೆ ಕುಳಿತು ಪರಿಶುದ್ಧ ಖುರ್'ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿದ *ಹಾಫಿಲ್*ಗಳಲ್ಲಿ ಓರ್ವರಾಗಿದ್ದರು. ಅವರನ್ನು *ನೆಬಿ (ﷺ)ರು* ಇಸ್ಲಾಮಿಕ ಪ್ರಭೋದನೆಗಾಗಿ ಯಮಾಮಕ್ಕೆ ಕಳುಹಿಸಿದ್ದರು.
ನಹಾರ್ ಯಮಾಮಕ್ಕೆ ತಲುಪಿ *ನೆಬಿ (ﷺ) ರ* ಪರವಾಗಿ ಭಾಷಣ ಮಾಡುತ್ತಿದ್ದರು. *ಮುಸೈಲಿಮನು* ಕಳ್ಳ ಪ್ರವಾದಿ ಎಂದು ಧೈರ್ಯದಿಂದ ಭಾಷಣ ಮಾಡುತ್ತಿದ್ದರು.

ಅವನ ಪ್ರಭೋದನೆಯನ್ನು ಕಂಡು *ಮುಸೈಲಿಮನು,* ನಹಾರ್ ಈ ರೀತಿ ಹೇಳುತ್ತಾ ಬಂದರೆ ನನಗೆ ಉಳಿಗಾಲವಿಲ್ಲ, ಹಾಗಾಗಿ ಅವನನ್ನು ತನ್ನ ಪಕ್ಷಕ್ಕೆ ಸೇರಿಸಿದರೆ ಬೇರೆ ಯಾವುದೇ ಪ್ರಭೋದನೆಯನ್ನು ನಾನು ಮಾಡಬೇಕಾಗಿಲ್ಲ.! ಎಂದು ವಕ್ರದಾರಿ ಹಿಡಿದು *ನಹಾರ್'*ನನ್ನು ತನ್ನ ಬುಟ್ಟಿಗೆ ಹಾಕಲು ಶ್ರಮಪಟ್ಟನು..

ಹಾಗೆ ಒಂದು ದಿನ ರಾತ್ರಿ ನಹಾರ್'ನನ್ನು ಗುಟ್ಟಾಗಿ ಅರಮನೆಗೆ ಆಮಂತ್ರಿಸಿದ ಮುಸೈಲಿಮ ಹೇಳಿದನು *"ನಹಾರ್, ನಿನಗೆ ಜೀವನ ಪರ್ಯಂತ ಜೀವಿಸಲು ಬೇಕಾದಷ್ಟು ಚಿನ್ನಾಭರಣ ಮತ್ತು ಹಣವನ್ನು ನಾನು ಕೊಡುತ್ತೇನೆ. ಆದರೆ ನೀನು ನನ್ನ ಪಕ್ಷದವನಾಗಿ ನನಗೆ ಬೇಕಾಗಿ ವಾದಿಸಬೇಕು..!"*

ಹೀಗೆ ಹಣ, ಒಡವೆಗಳ ಮೋಹದಿಂದ *ಮುಸೈಲಿಮನ* ಆಮಿಷಕ್ಕೆ ಬಲಿಯಾಗಿ *ನಹಾರ್* ನೈಜ ದೀನಿನ ಆದರ್ಶವನ್ನು ಹಣದ ಮುಂದೆ ಅಡವಿಟ್ಟು ಲೋಕದ ಅತೀ ದೊಡ್ಡ ಮೋಸಗಾರನಾದನು..

*ಪ್ರವಾದಿ (ﷺ)* ರವರು ಸ್ವತಃ ಹೇಳಿ ರವಾನಿಸಿದ ಪ್ರಭೋದಕ *ನಹಾರ್* ಮುಸೈಲಿಮನ ಹಣದ ವ್ಯಾಮೋಹದ ಮುಂದೆ ತನ್ನ ಈಮಾನನ್ನು ಮಾರಿದನು. ನಂತರ *ನೆಬಿ (ﷺ)ರವರ* ವಿರುದ್ಧವಾಗಿ ಭಾಷಣ ಮಾಡಲು ಪ್ರಾರಂಭಿಸಿದನು.

ಮುಸೈಲಿಮನಿಗೆ ಬೇಕಾಗಿ *ಖುರ್'ಆನ್*ನ ಆಯತ್'ಗಳನ್ನು ಬದಲಿಸಿ ಹೊಸ ಕಿತಾಬ್ ಮಾಡಿ ಕೊಟ್ಟನು.

ಮುತ್ತು ಮುಹಮ್ಮದ್ ಮುಸ್ತಫಾ (ﷺ)ರ ವಫಾತಿನ ನಂತರವೂ *ನಹಾರ್* ಮುಸೈಲಿಮನ ಪರವಾಗಿ ಪ್ರಬೋಧಕನಾಗಿ ಜೀವಿಸುತ್ತಿದ್ದನು..

ಆ ಮೋಸಗಾರ *ನಹಾರ್* ಆಗಿದೆ ಮುಸೈಲಿಮನ ಮನೆಯ ಒಳಗೆ ಪ್ರವೇಶಿಸಿರುವುದು.

*ನಹಾರ್:* ಬಹಳ ಗೌಪ್ಯವಾಗಿ ಒಂದು ವಿಷಯ ಹೇಳಲು ಬಂದಿರುವೆನು..

*ಮುಸೈಲಿಮ:* ಏನದು??⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

No comments:

Post a Comment