Tuesday, September 26, 2017

ಮನದಾಳದಿಂದ ಓದಿರಿ

🌹
➖➖➖➖➖➖➖➖
"ಕಾಂತಪುರಂ" ಎಂಬ ಪದ ಸಾಮಾಜಿಕ ತಾಣಗಳಲ್ಲಿ  ನೋಡಿದ ಕೂಡಲೇ ಓಡಿ ಹೋಗಿ ಸಿಸ್ಟಮಿನಿಂದಲೋ  ಮೊಬೈಲಿನಿಂದಲೋ, ಮೊದಲೇ ಸೇವ್ ಮಾಡಿ ಇಟ್ಟಿರುವ ಅಪಹಾಸ್ಯ ಸಂದೇಶಗಳು, ಅಲ್ಲದಿದ್ದರೆ ಕೇಶದ ಚಿತ್ರವಿರುವ ಹಳೆಯ ಫೋಟೋ ಕಮ್ಮೆಂಟ್, ಅದು ಅಲ್ಲದಿದ್ದರೆ ಸಮಾನವಾದ  ಬೇರೆ ಕೆಲವು ಅಶ್ಲೀಲ ಪದಗಳನ್ನು ಹೆಕ್ಕಿ ತೆಗೆದು ಬಂದು ಕಮ್ಮೆಂಟಿನಲ್ಲಿ ಒಂದು ಅಡಿ ಬರಹ ಬರೆದು ಅಬ್ಬ ನಾನೊಂದು ಅಲ್ಲಾಹನ ಬಳಿ ಉತ್ತಮನಾಗುವಂತಹ ಒಂದು ಮಹಾ ಕಾರ್ಯವನ್ನು ಮಾಡಿ ಬಿಟ್ಟೆ ಎಂದು ಮನದೊಳಗೆ ನೆನೆದುಕೊಳ್ಳುವವರು ಇದನ್ನೊಮ್ಮೆ ಸಂಪೂರ್ಣವಾಗಿ ಮನದಾಳದಿಂದ ಓದಿ..

ನಾವು ಎಂದಿಗಾದರೂ ಮನಸ್ಸಿನ ಅಂತರಾಳದಿಂದ ಅಲೋಚಿಸಿದ್ದೇವಾ?
ಯಾತಕ್ಕಾಗಿ ಕಾಂತಪುರಂ (ಉಸ್ತಾದ್) ರನ್ನು ಮಾತ್ರ ನಾವು ಸಂಘಟನೆ ಬೇಧವಿಲ್ಲದೆ ನಮ್ಮ ಶತ್ರು ಲೀಸ್ಟ್ ನಲ್ಲಿ ಮೊದಲನೆಯ ಸಾಲಿನಲ್ಲಿ ಇಟ್ಟಿರುವುದು???

ನಮ್ಮಲ್ಲಿ ಎಷ್ಟು ಜನರಿಗೆ ಅವರನ್ನು ವಿಮರ್ಶಿಸುವ ಧಾರ್ಮಿಕ ಅವಕಾಶವಿದೆ ಎಂದು!
ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ (ಉಸ್ತಾದ್) ಎಂಬ ವ್ಯಕ್ತಿ ಒಂದು ಸಂಘಟನೆಯನ್ನು ಕಟ್ಟಿ ಬೆಳೆಸಿರುವುದು, ಸ್ವಂತವಾಗಿ ಮರ್ಕಝ್ ಹಾಗೂ ಅನೇಕ ಸ್ಥಾಪನೆಗಳನ್ನು ನಿರ್ಮಿಸಿರುವುದು, ಪತ್ರ ಆರಂಭಿಸಿರುವುದು, ಕೇರಳದಿಂದ ಹೊರಗೂ ಸಂಬಂಧ ವೃದ್ದಿಸಿರುವುದು, ದೇಶ ವಿದೇಶಗಳ ಜತೆ ಉತ್ತಮ ಸಂಬಂಧ ಸ್ಥಾಪಿಸಿದ್ದು,
ಇವೆಲ್ಲವೂ ಒಬ್ಬರಿಂದ ಅಸಾದ್ಯವಾದದ್ದು, ಉಸ್ತಾದರು ಒಬ್ಬಂಟಿಯಾಗಿ ಎಲ್ಲವನ್ನೂ ಮುನ್ನಡೆಸುತ್ತಾ ಬಂದಿದ್ದಾರೆ...

 ಯಾವ ಸ್ವಾರ್ಥತೆಯ ಅಳತೆ ಕೋಲು ಇಟ್ಟರೂ, ಅದೇ ಆಸಕ್ತಿ, ಆಗ್ರಹಗಳು ವಿಮರ್ಶಿಸುವವರ ಸಂಘಟನೆ ನಿಲವುಗಳಲ್ಲಿಯು, ಕಾರ್ಯ ಚಟುವಟಿಗೆಗಳಲ್ಲಿಯೂ  ಪ್ರಕಟವಾಗಿಯೇ ಇದೆ.

ಸ್ವಂತ ನಾಯಕ ಹೇಳುವುದು ಸರಿಯೋ ತಪ್ಪೋ ಎಂದು ನೋಡದೆ ಅಕ್ಷರ ಪ್ರತಿ ಅನುಸರಿಸುದಾಗಿದೆ ಹಲವರಿಗೆ ಕಾಂತಪುರಂ ಅನುಯಾಯಿಗಳಲ್ಲಿ ಕಾಣುವ ಒಂದು ದೊಡ್ಡ ಅಪರಾದ!

ನಾಯಕರು ಹೇಳುವುದು ವಿಶ್ವಾಸವಿಟ್ಟು ಅದೇ ಪ್ರಕಾರ ಅನುಸರಿಸುವಂತೆ ಹೇಳದ ಯಾವ ಸಂಘಟನೆಯಾಗಿದೆ ಮುಸ್ಲಿಂ ಸಂಘಟನೆಗಳಲ್ಲಿ ಬಾಕಿ ಉಳಿದಿರುವುದು? ಸಂವಿಧನಾತ್ಮಕವಾಗಿ ಅವಕಾಶ ಕೊಡುವ ವೋಟು ಕೂಡ ಸ್ವಂತ ಪ್ರಸ್ಥಾನದ ನಾಯಕ ಹೇಳುವವರಿಗೆ ಮಾತ್ರ ನಿರ್ಭಂದ ಪೂರ್ವ ವಿಂಗಡಿಸಿ ಕೊಡುವವರಿಗೆ ಯಾವ ಅರ್ಹತೆ ಇದೆಯೆಂಬ ಹೆಸರಿನಲ್ಲಾಗಿದೆ ಕಾಂತಪುರಂ ಉಸ್ತಾದರನ್ನು ವಿಮರ್ಶಿಸಲು ಅರ್ಹತೆ ಇರುವುದು?

ಕರ್ಮ ಶಾಸ್ತ್ರ ತರ್ಕಗಳನ್ನು ಬೀದಿಗಳಲ್ಲಿ ಶಬ್ದ ಮಾಲಿನ್ಯಕರಣಕ್ಕೆ ವೇದಿಕೆ ಮಾಡಿದವರು ಅದರ ಹೆಸರಿನಲ್ಲಿ ಹಲವು ಗ್ರೂಪುಗಳಾಗಿ ವಿಭಜಿತರಾದವರು ಏನು ಹೇಳಿಯಾಗಿದೆ ಕಾಂತಪುರಂ (ಉಸ್ತಾದ್)ರನ್ನು ಅಪಹಾಸ್ಯ ಮಾಡುವುದು?

ಧರ್ಮದಿಂದ ರಾಜಕೀಯಕ್ಕೆ ಬಣ್ಣಬದಲಾಯಿಸುವ ಸಂಘಟನೆಗಳು ಕಾಂತಪುರಂ (ಉಸ್ತಾದ್) ಮಾಡುತ್ತಿರುವ ಸಮರ್ಥ ರಾಜಕೀಯವನ್ನು ಯಾವ ಕಾರಣಕ್ಕಾಗಿ ವಿಮರ್ಶಿಸುವುದು?
ನಿಮ್ಮ ಸಂಘಟನೆಗಳು ಏನು ಬೇಕಾದರೂ ಮಾಡಬಹುದು..
ತಮ್ಮ ಕಾರ್ಯಕರ್ತರಿಗೆ  ಏನು ಬೇಕಾದರೂ ಫತ್ವ ನೀಡಬಹುದು..
ತಮ್ಮ ಸಂಘಟನೆ ಯಾವ ರೀತಿಯ ನಿಲುವನ್ನು ಕೂಡ ವ್ಯಕ್ತಪಡಿಸಬಹುದು...
ಆದರೆ ಕಾಂತಪುರಂ ಉಸ್ತಾದ್ ಮಾತ್ರ ತನ್ನ ಕಾರ್ಯಕರ್ತರಿಗೆ ಏನನ್ನೂ ಹೇಳಕೂಡದು... ಏನು ಮಾಡಬಾರದು, ಯಾರನ್ನು ಕಾಣಬಾರದು
ಇದು ಎಲ್ಲಿಯ ನ್ಯಾಯ...?

ಒಟ್ಟಿನಲ್ಲಿ ಕಾಂತಪುರಂ ಉಸ್ತಾದ್ ಮಾಡುವಂತಹ ಕಾರ್ಯಚಟುವಟಿಕೆಗಳು ಎಲ್ಲರೂ ಮಾಡುವುದೇ ಆಗಿದೆ. ಆದರೆ ತನ್ನ "ನಿಲುವಿನ" ರೀತಿಯಲ್ಲಿ ಮಾತ್ರವೇ ವ್ಯತ್ಯಾಸವಿರುವುದು!
ಅದರಲ್ಲಿಯ ತನ್ನ ವ್ಯಕ್ತಿ ಆಸಕ್ತಿ, ಅತ್ಯಂತಿಕ ಗುರಿಗಳ ಕುರಿತು ಇರುವ ಗುಣಕಾಂಶ ಪರವಾದ ಸಂಶೋಧನೆಗಳು ಒಳ್ಳೆಯದು ಕೂಡಾ ಆಗಿದೆ.
ಕಲಿಮ ಉಚ್ಚರಿಸಿದ ಸ್ವಂತ ಸಹೋದರರನ್ನು ದಾರಿಯಲ್ಲಿ ಕಾಣುವಾಗಲೇ ಮುಶ್ರಿಕುಗಳಾಗಿಯೂ, ಕಾಫಿರುಗಳಾಗಿಯೂ ಚಿತ್ರೀಕರಿಸಿ ಬಿಂಬಿಸುವ ರೀತಿಗೆ ಕೊನೆ ಆಗಬೇಕೆಂದಿದೆ. ( ತಿರುಗಿ ವಿಮರ್ಶಿಸುವವರನ್ನು ಸಂಪೂರ್ಣವಾಗಿ ನೂತನವಾದಿಗಳನ್ನಾಗಿ ಮಾಡುವ ರೀತಿಗಳು ಕೂಡ ಬದಲಾಗಬೇಕು.)

ದ್ವೇಷಗಳು, ಸುಳ್ಳಾರೋಪಗಳು ಎಷ್ಟು ಇದ್ದರೂ ಮುಸ್ಲಿಂ ಸಂಘಟನೆಗಳಲ್ಲಿ ಶಕ್ತರಾದ ಒಬ್ಬ ನೇತಾರರಾಗಿ ಕಾಂತಪುರಂ ಉಸ್ತಾದರು ಉನ್ನತಿಗೇರಿದ್ದರೆ ಅದನ್ನು  ಬೆಲೆಯಿಲ್ಲದ ಅಶ್ಲೀಲ ಪ್ರತಿಭಟನೆಗಳಿಂದಲ್ಲ ಅವರನ್ನು ಎದುರಿಸಬೇಕಾಗಿರುವುದು! ಬದಲಾಗಿ
ಅವರ "ಇವೆಂಟ್ ಮ್ಯಾನೆಜಿಮೆಂಟ್" ಮಾದರಿ ಮಾಡಬೇಕಾಗಿತ್ತು. ಭಾರತದ ಮುಸ್ಲಿಮರ ನಿರ್ನಾಮ ಮಾಡುವಂತಹ ಗುರಿಗಳನ್ನಿಟ್ಟು ಕಾರ್ಯಾಚರಿಸುವಂತಹ  ಫ್ಯಾಸಿಸ್ಟ್ ಗಳೊಂದಿಗೆ ಕೂಡ ಇಲ್ಲದ ಈ ಆಕ್ರೋಶ, ವಿದ್ವೇಶ, ಅಸೂಯೆ, ನಮ್ಮ ಮನಸ್ಸಿನಲ್ಲಿ ಈ ಒಬ್ಬ ವ್ಯಕ್ತಿಯ ಮೇಲೆ ಮಾತ್ರ ಆಗಿದ್ದಕ್ಕೆ ನಾವು ಸ್ವಂತ ಆತ್ಮ ಪರಿಶೋಧನೆ ನಡೆಸಿಬೇಕಾಗಿದೆ.

ಕಾಂತಪುರಂ ಉಸ್ತಾದಾಗಿದೆ ಮೊದಲು ನಾಶ ಹೊಂದಬೇಕಾದ ಕೆಡುಕು, ಎಂದು ನಾವು ಯೋಚಿಸುವುದಾದರೆ ಆ ಯೋಚನೆಯಿಂದಲೇ ಕಾಂತಪುರಂ ಉಸ್ತಾದ್ ಎತ್ತರಕ್ಕೆ ಬೆಳೆದಿದ್ದಾರೆ ಎಂದು ತಿಳಿಯುವುದು ಒಳ್ಳೆಯದು.

ಗುಣಕಾಂಶ ಇಲ್ಲದ ವಿಮರ್ಶನಕ್ಕೆ ಪ್ರವಾದಿಯವರಿಂದಲೇ ﷺ ಮಾದರಿ ಇಲ್ಲ ತಾನೇ!

ನೊಂದ ಒಬ್ಬ ಮುಸಲ್ಮಾನನ ಮನದಾಳದ ಮಾತು....(GB)

No comments:

Post a Comment