Tuesday, September 26, 2017

ಅಸೂಯೆಗಾರರೇ ಬರಲಿದೆ ಒಂದು ದಿನ



🎓ಕಾಂತಪುರಂ ಉಸ್ತಾದರು ಭಾರತದ ಪ್ರಧಾನ ಮಂತ್ರಿಯನ್ನು  ಭೇಟಿ ಮಾಡಿದರೆ BJP  ಜತೆ  ಒಪ್ಪಂದ...

🎓P T A ರಹೀಮರನ್ನು ಕಂಡರೆ ಎಡಪಕ್ಷದವರ ಜೊತೆ ಒಪ್ಪಂದ....

🎓  ಬಿಜೆಪಿ ಅಭ್ಯರ್ಥಿಯಾಗಿರುವಂತಹ ಬಾದುಷಾ ತಂಗಳ್ ತನ್ನ ರಾಜಕೀಯ ನಿಲುವನ್ನು ಗಟ್ಟಿಮಾಡಲೆಂದು ಎಪಿ ಉಸ್ತಾದರ ಹೆಸರು ಉಚ್ಚರಿಸಿದರೆ ಉಸ್ತಾದರು ಬಿಜೆಪಿ ಬೆಂಬಲಿಗ.

🎓ಉಮ್ಮನ್ ಚಾಂಡಿಯನ್ನು ಕಂಡರೂ, ಕುಂಞಾಲಿ  ಕುಟ್ಟಿಯನ್ನು ಕಂಡರೂ.... ಉಸ್ತಾದರ  ವಿರುದ್ದವಾಗಿ  ಬೊಗಳಿ ಸಂದೇಶಗಳನ್ನು ಹರಿಯಬಿಡುವ  ಹಲವರನ್ನು ನಮ್ಮ ಸಮುದಾಯದಲ್ಲಿ ಕಾಣಬಹುದು.

🌎ವಿಶ್ವದ ಹಲವು ರಾಷ್ಟ್ರಗಳ ನೇತಾರರು ಉಸ್ತಾದರನ್ನು ಕಾಣುವುದು, ಆಮಂತ್ರಿಸುವುದು,
ಇವೆಲ್ಲವೂ ಕಾಂತಪುರಂ ಉಸ್ತಾದರು ಇಂಡಿಯನ್ ಮುಸಲ್ಮಾನರ ನೇತಾರರು ಎಂಬ ನೆಲೆಯಲ್ಲಿ ಆಗಿದೆ.

ಅಲ್ಲದೆ ಕೇರಳ ಹಾಗೂ ಕರಾವಳಿ ಭಾಗದಲ್ಲಿ ಅತ್ತಿತ ಅಲೆದಾಡಿ, ಪಂಡಿತ ಸಮೂಹವನ್ನು  ನಿಂದಿಸುತ್ತಾ,
ಪರದೂಷನೆಯನ್ನೇ ನಿತ್ಯ ಕಾಯಕ ಮಾಡಿದ ಒಂದು ಸಮೂಹ  ಇದಕ್ಕೆಲ್ಲ ಅರ್ಹರಲ್ಲವೆಂದು ಸಾಮಾನ್ಯ ಬುದ್ದಿ   ಇರುವ ಜನರಿಗೂ, ಎಲ್ಲಾ ದೇಶಗಳ ಪಂಡಿತ ಸಮೂಹಕ್ಕೂ ಗೊತ್ತಿರುವಂತಹ ವಿಷಯವಾಗಿದೆ.
 ಅದಕ್ಕೆ ಉಸ್ತಾದರ ಮೇಲೆ ಅಸೂಯೆಪಟ್ಟು ಯಾವುದೇ ಪ್ರಯೋಜನವಿಲ್ಲ.
ಕಾರಣ ಈ  ವಯಸ್ಸಿನಲ್ಲೂ  ಕಾಂತಪುರಂ ಉಸ್ತಾದರು ಬಿಡುವು ಇಲ್ಲದೆ ಸಮುದಾಯಕ್ಕೆ ಬೇಕಾಗಿ ಹಲವಾರು ಜೀವ ಕಾರುಣ್ಯ ಕೆಲಸಗಳಲ್ಲಿ ನಿರತರಾಗಿದ್ದಾರೆ. ನಿರ್ಮಾಣದಲ್ಲಿ ಇರುವಂತಹ, ಹಾಗೂ ನಿರ್ಮಿಸಿದಂತಹ ಹಲಾವರು ಮಸೀದಿಗಳು, ಲೆಕ್ಕವಿಲ್ಲದಷ್ಟು ವಿದ್ಯಾನಿಲಯಗಳು, ದಅವಾ, ದೀನೀ ಬೋಧನಾ ಕಾರ್ಯಕ್ರಮಗಳು, ಇವನ್ನೆಲ್ಲಾ ನಡೆಸಿಕೊಂಡು ಬರಲು ಕಾಂತಪುರಂ ಉಸ್ತಾದ್ ಅಲ್ಲದೆ ಬೇರೆ ಯಾರಿದ್ದಾರೆ.?

ಅದರಿಂದ್ದ ನೀವು ನಿಮ್ಮ ಕಾಯಕವಾದ ಅಪವಾದಗಳು, ಪರದೊಷಣೆಗಳು ಮುಂದುವರೆಸುತ್ತಾ ಹೋಗಿ..
ನಿಮ್ಮ ಅಸೂಯೆಯಿಂದಾಗಿ ಉಸ್ತಾದರಿಗೆ ಯಾವುದೇ ನಷ್ಟ ಸಂಭವಿಸಲ್ಲ.  ಬದಲಾಗಿ
ಉಸ್ತಾದರ ಕೀರ್ತಿ ಬಾನೆತ್ತರಕ್ಕೆ ಹಾರುತ್ತಿದೆ..
ಅದೂ ನಿಮ್ಮ ಖರ್ಚಿನಲ್ಲಿ..

ಆದರೆ ಮರೆಯದಿರಿ...
 ಒಂದು ದಿನ ಬರಲಿದೆ
ಅಸೂಯೆಗಳನ್ನೂ, ಪರದೂಷಣೆಗಳನ್ನೂ ವಿಚಾರಣೆ ನಡೆಸುವಂತಹ ನ್ಯಾಯಾಲಯ,
ನಿಮ್ಮ ನಾಲಗೆ ಹಿಡಿದು ಕಟ್ಟುವಂತಹ ನ್ಯಾಯಾಲಯ,   ಅಂದು ನೀವು ಹಲ್ಲು ಕಚ್ಚಿ ಯಾವುದೇ ಪ್ರಯೋಜನವಿಲ್ಲ. ಅನುಭವಿಸಲೇಬೇಕಾಗುತ್ತದೆ.
ಪ್ರತಿಯೊಂದಕ್ಕೂ ಉತ್ತರಿಸಲೇಬೇಕಾಗುತ್ತದೆ.

✍🏻ಗಫೂರ್ ಬಾಯಾರ್.

No comments:

Post a Comment