Monday, November 6, 2017

*ಝಿಯಾರತ್ತ್ ಕೇಂದ್ರ*
    🌷2⃣9⃣🌷
➖➖➖➖➖➖

✍ಗಫೂರ್ ಬಾಯಾರ್.
➖➖➖➖➖➖➖
ರಾಫಿಉ ಇಬ್ನು ಹಬೀಬ್ ರ. ಇಚ್ಚಿಲಂಗೋಡು, ಬಂದ್ಯೋಡು. ಉಪ್ಪಳ.
〰〰〰〰〰〰〰
🕌 ಹಿಜರಿ ವರ್ಷ 37ರಲ್ಲಿ ಮದೀನದಿಂದ ಮಾಲಿಕ್ ಇಬ್ನು ದೀನಾರ್ ರ. ರವರ ಸಂಘದೊಂದಿಗೆ ಆಗಮಿಸಿದ *ರಾಫಿಉ ಇಬ್ನು ಹಬೀಬ್ ರ.* ಎಂಬ ಮಹಾನವರು, ಮಾಲಿಕ್ ಇಬ್ನು ದೀನಾರ್ ರ. ರವರ ಸಹೋದರ ಪುತ್ರರಾಗಿದ್ದಾರೆ.

 ಮಹಾನವರು ಇಚ್ಚಿಲಂಗೋಡು ಆಸ್ಥಾನವಾಗಿ ದೀನಿ ಪ್ರಬೋಧನೆ ನಡೆಸಿದರು. ಅಂದು ಅಲ್ಲಿಯ ಜನರು ಕೊಟ್ಟ ಸ್ಥಳದಲ್ಲಿ ತನ್ನ ಪರ್ಣಶಾಲೆ ಮತ್ತು ಪ್ರಭೋದನೆ ಪ್ರವರ್ತನೆಗಳಿಗೂ, ಆರಾಧನೆಗೂ ಕೇಂದ್ರ ಸ್ಥಳವನ್ನಾಗಿ ಮಾಲಿಕ್ ಇಬ್ನು ದೀನಾರ್ ಎಂಬ ಹೆಸರಿನಲ್ಲಿ ಮಸ್ಜಿದ್ ನಿರ್ಮಿಸಿದರು.

ಹಿಜರಿ 73ರ ಜಮಾದುಲ್ ಆಖಿರ್ 17ಕ್ಕೆ ಮಹಾನವರು ವಫಾತಾದರು.

 ಉಮರ್ ರ. ಉಸ್ಮಾನ್ ರ. ಅಲಿ ರ. ಅಬ್ದುಲ್ಲ ರ. ಅಬ್ದುದುರಹ್ಮಾನ್ ರ. ಮೊದಲಾದ ಪ್ರಮುಖರು ಪಕ್ಕದಲ್ಲಿರುವ ಮಖ್ಬರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಾರೆ.

5 ವರ್ಷಕ್ಕೊಮ್ಮೆ ನಡೆಯುವ ಉರೂಸು ಸೂರ್ಯೋದಯದಿಂದ ಮರುದಿನ ರಾತ್ರಿವರೆಗೆ ಮುಂದುವರಿಯುದರಿಂದ *ಉದಯಾಸ್ತಮಾನ ಉರೂಸು* ಎಂಬ ಹೆಸರಿನಲ್ಲಿ ತಿಳಿಯಲ್ಪಡುತ್ತದೆ.

ದಾರಿ: ಮಂಗಳೂರಿಂದ ಕಾಸರಗೋಡಿಗೆ ಹೋಗುವ ದಾರಿಯಲ್ಲಿ ಸಿಕ್ಕುವ ಬಂದ್ಯೋಡಿನಿಂದ ಎಡಕ್ಕೆ 8 ಕಿಲೋ ಮೀ ಸಂಚರಿಸಿದರೆ ಇಚ್ಚಿಲಂಗೋಡು ಮಖಾಂ ತಲುಪುತ್ತದೆ.

✍ ಗಫೂರ್ ಬಾಯಾರ್
🍁🍁🍁🍁🍁🍁🍁

No comments:

Post a Comment