Tuesday, November 7, 2017

*ಐಕ್ಯತೆ ಕಾಲದ ಬೇಡಿಕೆಯಲ್ಲ, ಧಾರ್ಮಿಕತೆಯ ಅವಶ್ಯಕತೆಯಾಗಿದೆ..!*

ನಾವು ಐಕ್ಯರಾಗುವೆವು..
ಅದು 👇🏾ಈ ವಿಷಯದಲ್ಲಿ..

ಪ್ರವಾದಿ ﷺ ರನ್ನು ಗುಣಗಾನ ಮಾಡುವ *(ಮೌಲಿದ್ ಓದುವ)* ವೇದಿಕೆಯಲ್ಲಿ..
ಪ್ರವಾದಿ ﷺ ಸುನ್ನತ್ ಮಾಡಿದ *ಕೂಟು ಝಿಯಾರತ್* ನ ಕಾರ್ಯಕ್ರಮದಲ್ಲಿ..
ಪ್ರವಾದಿ ﷺ ರ ಚರ್ಯೆಯಾದ *ತಲೆ ಮರೆಸುವ* ವಿಷಯದಲ್ಲಿ..
ಪ್ರವಾದಿ ﷺ ರ ಕಾಲದಿಂದಲೂ ಅನುಸರಿಸುತ್ತಾ ಬರಲಾಗುತ್ತಿರುವ *ಅರಬಿ ಖುತ್ಬಾ* ಓದುವ ವಿಷಯದಲ್ಲಿ..
ಇಸ್ಲಾಮಿನಲ್ಲಿ ಸ್ವೀಕಾರ್ಹವಾದ *ಮಝ್ಹಬ್* ಅಂಗೀಕರಿಸುವ ವಿಷಯದಲ್ಲಿ..
ಪ್ರವಾದಿ ﷺ ರ *ಆಸಾರ್* ಗಳನ್ನು ಗೌರವಿಸುವ ವಿಷಯದಲ್ಲಿ...

*ಐಕ್ಯತೆಯ ಒಂದನೇ ಮೆಟ್ಟಿಲು ☝🏽ಇದಾಗಿದೆ. ಇದರಲ್ಲಿ ಐಕ್ಯತೆಗೆ ಸಿದ್ದರಿರುವವರೊಂದಿಗೆ ಇತರ ವಿಷಯದಲ್ಲಿನ ಐಕ್ಯತೆ ಬಗ್ಗೆ ಪರಿಶೀಲಿಸಬಹುದು.*

*ಐಕ್ಯತೆ ಬೇಕು..! ಅದು ಕಾಲದ ಬೇಡಿಕೆಗಾಗಿಯಲ್ಲ, ಅಲ್ಲಾಹನ ಸಂಪ್ರೀತಿಗಾಗಿ ಯಾಗಿರಬೇಕು.*
ಕಾಲಕ್ಕೆ ಹಲವಾರು ಬೇಡಿಕೆ ಇರಬಹುದು. ಅದನ್ನು ಈಡೇರಿಸುವ ಧಾರಿ ಧಾರ್ಮಿಕ ಚೌಕಟ್ಟು ಮೀರುವಂತಾಗಬಾರದು.

ಧಾರ್ಮಿಕ ವಿಷಯದಲ್ಲಿ ಐಕ್ಯತೆಗೆ ಸಿದ್ದರಿಲ್ಲದವರೊಂದಿಗೆ, ಕೇವಲ ಕಾಲದ ಬೇಡಿಕೆಗಾಗಿ ಮಾತ್ರ ಐಕ್ಯರಾಗಲು ನಾವು ಸಿದ್ದರಿಲ್ಲ.
*ಕಾಲಕ್ಕಾಗಿಯೋ, ಜನರಿಗಾಗಿಯೋ ಮನುಷ್ಯರಾದ ನಮ್ಮನ್ನು ಸೃಷ್ಟಿಸಲಾಗಿಲ್ಲ. ನಮ್ಮನ್ನು ಸೃಷ್ಟಿಸಲ್ಪಟ್ಟದ್ದು ಅಲ್ಲಾಹನಿಗಾಗಿ ಮಾತ್ರವಾಗಿದೆ. ಅಲ್ಲಾಹನ ಧರ್ಮದ ನೈಜ ಪಥವಾದ ಸುನ್ನತ್ ಜಮಾಹತ್ ಸಂರಕ್ಷಣೆಗಾಗಿ ಐಕ್ಯರಾಗೋಣ, ಅದು ಧಾರ್ಮಿಕತೆಯ ಅವಶ್ಯಕತೆಯಾಗಿದೆ.*

SSF ನ ಗುರಿ, ಸುನ್ನತ್ ಜಮಾಹತ್ ಸಂರಕ್ಷಣೆಗಾಗಿ ಕಾರ್ಯಾಚರಿಸಿ, ಅಲ್ಲಾಹನ ಸಂಪ್ರೀತಿ ಗಳಿಸುವುದಾಗಿದೆಯೇ ಹೊರತು, ಕಾಲದ ಬೇಡಿಕೆಗಳಿಗೆಲ್ಲಾ ಸ್ಪಂದಿಸುವುದು SSF ನ ಲಕ್ಷ್ಯವಲ್ಲ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment