*ಸುನ್ನತ್ ಜಮಾಅತ್'ನ ಐಕ್ಯ ಖಂಡಿತ ಕಾಲದ ಬೇಡಿಕೆ -ಈಡೇರಲೆಂಬುವುದೇ ವಿಶ್ವಾಸಿಯ ಹಾರೈಕೆ*......
ಹೌದು.ಇಸ್ಲಾಂ ಧರ್ಮ ಎಂದೆಂದಿಗೂ ಐಕ್ಯತೆಯನ್ನು ಪ್ರೋತ್ಸಾಹಿಸುತ್ತದೆ.ಅದು ಎಲ್ಲಾ ಪ್ರವಾದಿಗಳ ಕಾಲದಲ್ಲು ಸಾಭೀತಾಗಿರುವ ಕಟುಸತ್ಯವಾಗಿದೆ.ಅದನಂತರ ಬಂದಂತಹ ಎಲ್ಲಾ ಇಮಾಮ್'ಗಳು ಅದನ್ನು ಪ್ರೋತ್ಸಾಹಿಸಿದವರೇ ಆಗಿದ್ದಾರೆ.ಅಂತಹ ಪರಂಪರೆಯನ್ನು ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳು ಅದನ್ನು ಮುಂದುವರೆಸುತ್ತಲೇ ಬಂದಿದ್ದರು.ಆದರೇ, 20ನೇ ಶತಮಾನದ ಆರಂಭ ಘಟ್ಟದಲ್ಲೀ ಕೆಲಕ್ರಿಮಿಗಳ ಜನನವಾಗಿ ಅಹ್ಲ್-ಸುನ್ನತ್ ವಲ್ ಜಮಾಅತ್'ನ ಸುಂದರ ಆಶಯ ಆದರ್ಶಗಳನ್ನು ಪ್ರಶ್ನಿಸಿ ಪರಂಪರಾಗತವಾಗಿ ಬಂದಿದ್ದ ಐಕ್ಯದ ಆಲದಮರಕ್ಕೆ ಕೊಡಲಿಯೇಟು ಇಟ್ಟಿದ್ದಲ್ಲದೇ ನೈಜ ಮುಸ್ಲಿಮರ ಆಚರಣೆಗಳಿಗೆ ಸಂಶಯವನ್ನು ಕಲಬೆರೆಕೆ ಮಾಡಿ ಐಕ್ಯತೆಯನ್ನು ಮುರಿಯಲು ಶ್ರಮಿಸಿದರು.ಇದನ್ನು ಕಟುವಾಗಿ ಅಂದಿನ ಉಲಮಾಗಳು ವಿರೋದಿಸುವುದರೊಂದಿಗೆ ಇಂತಹ ಕ್ರಿಮಿಗಳನ್ನು ಒಬ್ಬರೇ ವಿರೋಧಿಸುವ ಬದಲು ಸಾಂಘಿಕವಾಗಿ ಎದುರಿಸಿದರೆ ಒಳ್ಳೆಯ ಪಲಿತಾಂಶ ದೊರೆಯುವುದೆಂದು ಮನಗಂಡು 1926ರಲ್ಲಿ ವರಕ್ಕಲ್ ಮುಲ್ಲಕೋಯ ತಂಙಳ್(ನ.ಮ)ರವರ ನೇತೃತ್ವದಲ್ಲಿ ರಚನೆಯಾದ ಸಂಘಟನೆಯೇ *ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ*.
ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ನಿರೀಕ್ಷೆಯಂತೆಯೇ ಒಳ್ಳೆಯ ಪಲಿತಾಂಶವನ್ನು ಕೊಡುತ್ತಾ ಮುಂದೆ ಸಾಗುತ್ತಲೆ ಇತ್ತು.ಇದನ್ನು ಮನಗಂಡ ವಿರೋದಿಗಳು ಪವಿತ್ರ ಸಂಘಟನೆಗೆ ಹುಳಿಹಿಂಡಲು ಶ್ರಮಿಸುತ್ತಲೇ ಇದ್ದರು.ಈ ಪರಿಶ್ರಮದ ಫಲವಾಗಿ 1989ರಲ್ಲಿ ಸಮಸ್ತ ವಿಭಜನೆಯಾಯ್ತು.ಅದನಂತರ ತಾಜುಲ್ ಉಲಮಾ(ನ.ಮ)ಮತ್ತು ಸುಲ್ತಾನುಲ್ ಉಲಮಾರವರ ನೇತೃತ್ವದಲ್ಲಿ ಪುನರ್ರಚಿಸಲಾಯಿತು.ಕಾರಣ;ಸುನ್ನತ್ ಜಮಾಅತ್'ನ ಆಶಯ ಆದರ್ಶದಲ್ಲಿ ಅಣುಇಂಚಿನಷ್ಟು ಬದಲಾವಣೆ ಮಾಡಲು ಸಾಧ್ಯವಿಲ್ಲಾವೆಂದಾಗಿತ್ತು.
ಎನಿಹೌವ್..ಕಾರಣ ಏನೇ ಇರಲಿ ಭಿನ್ನತೆಯ ಕಾಲದಲ್ಲಿ ಕಾರ್ಯದರ್ಶಿಯವರಾಗಿದ್ದ ಶಂಸುಲ್ ಉಲಮಾ(ನ.ಮ)ರವರು ಸುನ್ನತ್ ಜಮಾಅತ್'ನ ಐಕ್ಯತೆಗೆ ಆಗ್ರಹಿಸಿದ್ದರು.ಅವರನ್ನು ಪ್ರೀತಿಸುವ ವರ್ಗವೆಂದು ಕರೆಯಲ್ಪಡುವವರು ಅವರ ಆಗ್ರಹವನ್ನು ಈಡೇರಿಸಲು ಮುಂದಾಗಿಲ್ಲ ಎಂಬ ಸಂಶಯವೇ ಸುನ್ನೀವಿಶ್ವಾಸಿಗಳದ್ದಾಗಿದೆ.ಆದರೇ,ಸುನ್ನತ್ ಜಮಾಅತ್'ನ ಐಕ್ಯವಾಗಬೇಕೆಂಬ ಮಾತು ಎಲ್ಲಾ ಕಾಲದಲ್ಲು ತಾಜುಲ್ ಉಲಮಾ(ನ.ಮ),ನೂರುಲ್ ಉಲಮಾ(ನ.ಮ) ಮತ್ತು ಸುಲ್ತಾನುಲ್ ಉಲಮಾ ಹೇಳುವುದರೊಂದಿಗೆ ಪ್ರಾಯೋಗಿಕವಾಗಿಯು ಅದಕ್ಕನುಗುಣವಾಗಿ ನಡೆದುಕೊಂಡಿದ್ದರು.ಅದರ ಉದಾಹರಣೆ ಎಂಬಂತೆ ಭಿನ್ನತೆಯ ನಂತರ ಉಳ್ಳಾಲ ಉರೂಸಿಗೆ ಆಮಂತ್ರಿಸಲು ಉಳ್ಳಾಲ ತಂಙಳ್(ನ.ಮ)ರವರು ಕನ್ನಿಯತ್ ಉಸ್ತಾದ್(ನ.ಮ)ರವರನ್ನು ಆಮಂತ್ರಿಸಲು ಹೋಗಿದ್ದರು,ಅದನಂತರ ಪಂಪ್ವೆಲ್'ನ ಮಸ್ಜಿದ್ ಉದ್ಘಾಟನೆಯ ಸಂದರ್ಭದಲ್ಲಿ ಮರ್ಹೂಮ್ ಮುಹಮ್ಮದಲಿ ಶಿಹಾಬ್ ತಂಙಳ್,ತಾಜುಲ್ ಉಲಮಾ(ನಮ)ಮತ್ತು ಸುಲ್ತಾನುಲ್ ಉಲಮಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಐಕ್ಯತೆಯ ಮುನ್ಸೂಚನೆ ನೀಡಿದ್ದರು.ಅದೇತರಹ ಸುಲ್ತಾನುಲ್ ಉಲಮಾ ಸುನ್ನೀಐಕ್ಯವನ್ನು ಸ್ವಾಗತಿಸುತ್ತಲೇ ಬಂದಿದ್ದರು.ಆದರೆ ಇದುವರೆಗೆ ಅಂತಹ ಒಂದು ಪ್ರಸ್ತಾಪ ಚೇಳಾರಿಸಮಸ್ತದಿಂದ ಬರದೇ ಇದ್ದರಿಂದ ಸುನ್ನೀಐಕ್ಯ ನೆನೆಗುದಿಗೆ ಬಿದ್ದಿತ್ತು.ಆದರೇ ಇತ್ತೀಚಿಗೆ ಆಯ್ಕೆಗೊಂಡ ಬಹುಮಾನ್ಯರಾದ ಜಿಫ್ರಿ ತಂಙಳ್ *ಸುನ್ನೀ ಐಕ್ಯ*ಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ...*ಅಲ್'ಹಮ್ದ್'ಲಿಲ್ಲಾಹ್*.....
ಸುನ್ನೀ ಐಕ್ಯಕ್ಕೆ ಬಹುಮಾನ್ಯರಾದ ಜಿಫ್ರಿತಂಙಳ್ ಹಸಿರು ನಿಶಾನೆ ತೋರಿಸಿದ್ದರಿಂದ ಸುನ್ನೀಉಲಮಾಗಳಲ್ಲಿ ಮತ್ತು ಸುನ್ನೀವಿಶ್ವಾಸಿಗಳಲ್ಲಿ ಸಂತಸ ಮನೆಮಾಡಿದೆ.ಆದರೆ,ಸಮಯ ಸಿಕ್ಕಾಗಲೆಲ್ಲ ಮುಸ್ಲಿಂ ಐಕ್ಯಬೇಕೆಂದು ಡಂಗೂರ ಸಾರುವವರಿಗೆ ಇದೇಕೋ ಪತ್ಯವಾಗಿಲ್ಲವೆಂದು ಅನಿಸುತ್ತದೆ.ಕಾರಣ,ಇವರ ಬೇಳೆ ಬೇಯಲು ಇಲ್ಲಿ ಸುನ್ನೀಭಿನ್ನತೆಯೇ ಬೇಕೆಂಬುವುದಾಗಿದೆ.ಏನೇಇರಲಿ *ಸುನ್ನೀ ಐಕ್ಯ*ಯಿಂದ ಲಾಭವಲ್ಲದೇ ನಷ್ಟವಂತು ಇಲ್ಲ...
*ಸುನ್ನೀ ಐಕ್ಯದಿಂದಾಗುವ ಲಾಭಗಳು*
●ಮೊದಲನೇಯದಾಗಿ ಆಖಿರ ವಿಜಯ;ಕಾರಣ ನೆಬಿ(ಸ್ವ.ಅ)ರವರ ಆಸಾರ್ ನಿಜವೆಂದು ಗೊತ್ತಿದ್ದು ಅದನ್ನು ಕೇವಲ ವ್ಯಕ್ತಿವೈರಾಗ್ಯಕ್ಕಾಗಿ ನಿಂದಿಸುವುದನ್ನು ತಪ್ಪಿಸಬಹದು ಮತ್ತು ಪರಸ್ಪರ ಆಲಿಮ್'ಗಳ ವಿಷಮಾಂಸ ಸೇವನೆ ನಿಲ್ಲಿಸಬಹುದು.
●ಸುನ್ನತ್ ಜಮಾಅತ್'ನ ಆಶಯದಲ್ಲಿ ಹೊಸರೂಪ ಬರದಂತೆ ಕಡಾಕಂಡಿತವಾಗಿ ನಿಲ್ಲುವಾಗ ಹೊಸ ಮಸೀದಿ ಮತ್ತು ಮದ್ರಸ ನಿರ್ಮಿಸಬೇಕಾಗಿ ಬರುವುದು.ಆದರೆ ಐಕ್ಯಗೊಂಡರೆ ಅದರ ಹಣದಿಂದ ಸಮುದಾಯದ ಏಳಿಗೆಗಾಗಿ ಬಳಸಬಹುದು.
●ಪರಸ್ಪರ ಮರುತ್ತರ ನೀಡಲು ವೇದಿಕೆ ಕಟ್ಟಬೇಕಾದ ಆವಶ್ಯಕತೆಯಿಲ್ಲ.
●ಮುಸ್ಲಿಂಗಳಿಗೆ ವಕ್ಪ್ ಬೋರ್ಡ್ನಿಂದ ಮಸೀದಿ ಮದ್ರಸಗಳಿಗೆ ಬರುವ ಅನುದಾನ ಹಂಚಿಕೆ ಆಗುವುದಿಲ್ಲ.
●ಸುನ್ನತ್ ಜಮಾಅತ್ ಐಕ್ಯದಿಂದ ನೂತನವಾದಿಗಳನ್ನು ಮತ್ತು ನಕಲಿಧರ್ಮರಕ್ಷಕರನ್ನು ಹೊರಗಿಟ್ಟು ಆಡಳಿತ ನಡೆಸಬಹುದು.
●ದೊಡ್ಡ ತಲೆನೋವಾಗಿರುವ ನಕಲಿ ತ್ವರೀಕತ್'ಗಾರರನ್ನು ರಾಜಕೀಯ ಪಕ್ಷದವರಂತೆ ದ್ವಜ ನೀಡಿ ಸ್ವಾಗತಿಸುವ ದುರ್ಗತಿ ಸುನ್ನತ್ ಜಮಾಅತ್'ಗೆ ಇರುವುದಿಲ್ಲ.
●ಸಂಶಾಯಾಸ್ಪದವಾಗಿ ಮರಣಹೊಂದಿದ ಮರ್ಹೂಮ್ ಸಿ.ಎಮ್ ಉಸ್ತಾದರ ಮರಣದ ತನಿಖೆಯನ್ನು ಉನ್ನತ ತನಿಖಾ ತಂಡಕ್ಕೆ ನೀಡುವಂತೆ ಆಗ್ರಹಿಸಲು ಐಕ್ಯತೆಯಿಂದ ಸಾಧ್ಯವಿದೆ.
●ಊರಿನಲ್ಲಿ ಒಂದು ಸಮಾಧಾನ ಮತ್ತು ಪರಸ್ಪರ ಸಹಬಾಳ್ವೆ ಇರುತ್ತದೆ.
ಇದು ಐಕ್ಯತೆಯಿಂದಾಗುವ ಲಾಭಗಳ ಸ್ಯಾಂಪಲ್ ಅಷ್ಟೆ.ಸುನ್ನೀ ಐಕ್ಯವನ್ನು ಬಹುಕಾಲದಿಂದ ಆಶಿಸಿ ಬರುತ್ತಿರುವ ಸುನ್ನೀವಿಶ್ವಾಸಿಗಳಿಗೆ ಆ ಸುಸಂಧರ್ಭ ನೋಡುವ ಘಳಿಗೆ ಶೀಘ್ರವೇ ಬರಲಿ.ಅಲ್ಲಾಹು ಎಲ್ಲಾ ಮಹಾತ್ಮರ ಬರಕತ್'ನಿಂದ ಸುನ್ನತ್ ಜಮಾಅತ್'ಅನ್ನು ಐಕ್ಯಪಡಿಸಲಿ..ಆಮೀನ್
ಸುನ್ನೀ ಐಕ್ಯಂ ಜಿಂದಾಬಾದ್..
ಸುಲ್ತಾನುಲ್ ಉಲಮಾ...ಜಿಫ್ರೀ ತಂಙಳ್ ಜಿಂದಾಬಾದ್....
(ಧೀರ್ಘಕಾಲದ ನಂತರ ಸುನ್ನೀ ಐಕ್ಯ ಆಗ್ರಹಿಸಿ ಬರಹಲೋಕದತ್ತ..)
🖊..... ಶಮೀರ್ ಶಂಸುದ್ದೀನ್ ಶೃಂಗೇರಿ.
No comments:
Post a Comment