Saturday, November 11, 2017

ಪ್ರವಾದಿ(ಸ ಅ)ರವರ ಜನ್ಮ ದಿನವನ್ನು ಗೌರವಿಸುವವರಿಗೂ ಸಂಭ್ರಮ ದಿನವನ್ನಾಗಿ ಮಾಡಿದವರಿಗೂ ಅಪಾರ ಪುಣ್ಯವಿದೆ.
(ನೂತನವಾದಿಗಳ ನಾಯಕ ಇಬ್ ನುತೈಮೀಯ್ಯಾರವರ ಗ್ರಂಥ ಇಖ್ ತಿಳಾಉಸ್ಸಿರಾತಿಲ್ ಮುಸ್ತಖೀವವ್.ಪುಟ- 274)

 ಪ್ರವಾದಿ(ಸ ಅ)ರವರ ಜನ್ಮದಿನವನ್ನು ರಬೀಉಲ್ ಅವ್ವಲ್ ಹನ್ನೆರಡರಂದೇ ಆಚರಿಸಬೇಕು ಅಂದು ಅಸಾಧ್ಯವಾದರೆ ಆ ತಿಂಗಳ ಇತರ ದಿನಗಳಲ್ಲೂ ಆಗಬಹುದು.
(ಇಮಾಮ್ ಇಬ್ ನುಹಜರ್ ಅಲ್ ಅಸ್ಕಲಾನೀ(ರ) ರವರು ಹೇಳಿದ್ದಾರೆಂದು ಗ್ರಂಥ ಅಲ್- ಹಾವೀಲಿಲ್ ಫತಾವಾ ಕಾಂಡ- 1 ಪುಟ 196)

 ಪ್ರವಾದಿ(ಸ ಅ)ರವರ ಜನ್ಮ ದಿನದಂದು ಮಕ್ಕಾದ ಜನತೆ ಪ್ರವಾದಿ(ಸ ಅ)ರವರು ಜನಿಸಿದ ಸ್ಥಳವನ್ನು ಝಿಯಾರತ್ ಮಾಡುತ್ತಿದ್ದರು.
(ಇಮಾಮ್ ಖಸ್ತಲ್ಲಾನೀ(ರ) ರವರ ಗ್ರಂಥ ಅಲ್- ಮವಾಹಿಬುಲ್ಲದುನ್ನಿಯ್ಯ-ಕಾಂಡ-1 ಪುಟ- 132)

 ಅಬೂಬಕ್ಕರ್ ಸಿದ್ದೀಕ್(ರ) ರವರು ಹೇಳುತ್ತಾರೆ.
ಪ್ರವಾದಿ(ಸ ಅ)ರವರ ಮೌಲಿದ್ ಗೆ ಒಂದು ದಿರ್ಹಂ ಖರ್ಚು ಮಾಡಿದವನು ಸ್ವರ್ಗದಲ್ಲಿ ನನ್ನೊಂದಿಗಾಗಿರುವನು.
(ಇಮಾಮ್ ಇಬ್ ನುಹಜರ್ ಅಲ್-ಹೈತಮಿ(ರ) ರವರ ಗ್ರಂಥ ಅನ್ನಿಅ್ ಮತುಲ್ ಕುಬ್ ರಾ)

 ತನ್ನ ಗುಣಗಾನ ಮಾಡಲು ಮದೀನಾದ ಮಸೀದಿಯಲ್ಲಿ ತನ್ನ ಶಿಷ್ಯ ಹಸ್ಸಾನ್(ರ) ರವರಿಗೆ ಒಂದು ಪೀಠವನ್ನೇ ಪ್ರವಾದಿ(ಸ ಅ)ರವರು ನಿರ್ಮಿಸಿಕೊಟ್ಟಿದ್ದರು.
(ಹದೀಸ್ ತಿರ್ಮುದ್ಸಿ- 4/216)

 ಪ್ರವಾದಿ(ಸ ಅ)ರವರು ಜನಿಸಿದಂದು ಸಂತೋಷ ಪ್ರಕಟಿಸಿದ್ದಕ್ಕಾಗಿ ಅವಿಶ್ವಾಸಿ ದುಷ್ಟ ಅಬೂಲಹಬ್ ಗೆ ನರಕದಲ್ಲಿ ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ಇದ್ದರೆ ಪ್ರವಾದಿ ಜನ್ಮ ದಿನದಂದು ಸಂತೋಷ ವ್ಯಕ್ತ ಪಡಿಸಿದ ಸತ್ಯ ವಿಶ್ವಾಸಿಗಳಿಗೆ ಖಂಡಿತ.
ಸ್ವರ್ಗ ಲಭಿಸಬಹುದು.
(ಇಮಾಮ್ ಸುಯೂತೀ (ರ) ರವರ ಗ್ರಂಥ ಅಲ್-ಹಾವೀಲಿಲ್ ಫತಾವಾ ಕಾಂಡ- 1 ಪುಟ- 230)

 ರಬೀಉಲ್ ಅವ್ವಲ್ ನಲ್ಲಿ ಪ್ರವಾದಿ(ಸ ಅ)ರವರ ಜನನದಿಂದ ಸಂತೋಷ ಪ್ರಕಟಿಸುವುದು ಉತ್ತಮವೆಂದು ಧರ್ಮಶಾಸನಗಳು ತಿಳಿಸುತ್ತದೆ.
(ಇಮಾಮ್ ಸುಯೂತೀ(ರ) ರವರ ಗ್ರಂಥ ಅಲ್- ಹಾವೀಲಿಲ್ ಪತಾವಾ ಕಾಂಡ 1 ಪುಟ 226)

 ಮುಸ್ಲಿಮರು ಎಲ್ಲಾ ಸ್ಥಳಗಳಲ್ಲೂ ಪ್ರವಾದಿ(ಸ ಅ)ರವರ ಜನ್ಮದಿನ ಆಚರಿಸಿ ಅವರ ಮೌಲಿದ್ ಓದುತ್ತಾರೆ.
ಪ್ರವಾದಿಯವರ ಬರ್ ಕತ್ ನಿಂದ ಅವರಿಗೆ ಶ್ರೇಷ್ಟತೆ ಲಭಿಸಿದೆ.
(ಇಮಾಮ್ ಸುಖಾವೀ (ರ) ರವರ ಗ್ರಂಥ ಇಆನತುತ್ತಾ-ಲಿಬೀನ್ ಕಾಂಡ 3 ಪುಟ 364)

 ರಬೀಉಲ್ ಅವ್ವಲ್ ಪ್ರವಾದಿ(ಸ ಅ)ರವರು ಜನಿಸಿದ ತಿಂಗಳಾಗಿದ್ದರಿಂದ ಅದಕ್ಕೆ ಮಹತ್ವವಿದೆ.
ಅದನ್ನು ಗೌರವಿಸುವುದು ಕಡ್ಡಾಯವಾಗಿದೆ.
(ಇಮಾಮ್ ಇಬ್ ನುಲ್ ಹಾಜ್ (ರ) ರವರ ಗ್ರಂಥ ಅಲ್- ಮದ್ ಖಲ್ ಕಾಂಡ 2 ಪುಟ 3)

 ಪ್ರವಾದಿ(ಸ ಅ)ರವರ ಜನ್ಮ ದಿನವನ್ನು ಆಚರಿಸುವ ಮೂಲಕ ಕೃತಜ್ಞತೆ ಪ್ರಕಟಿಸುವುದು ನಮಗೆ ಸುನ್ನತ್ತಾಗಿದೆ.
ಅನ್ನದಾನ ಮೊದಲಾದ ಪುಣ್ಯಕರ್ಮಗಳನ್ನು ಏರ್ಪಡಿಸುವುದು ಹಾಗೂ ಜನರು ಒಗ್ಗೂಡಿ ಕೃತಜ್ಞತೆ ಪ್ರಕಟಿಸುವುದು ಸುನ್ನತ್ತಾದ ಕಾರ್ಯವಾಗಿದೆ.
(ಫತಾವ ಸುಯೂಥಿ 1/196 ನೋಡಿರಿ)

 ಹಸ್ಸಾನುಬ್ ನು ಸಾಬಿತ್(ರ) ರವರು, ಅಬ್ದುಲ್ಲಾ ಹಿಬ್ ನು ರವಾಹರವರು, ಕ ಅ್ ಬ್ ಬಿನ್ ಝುಹೈರ್ (ರ) ಗದ್ಯರೂಪದಲ್ಲೂ ಪದ್ಯರೂಪದಲ್ಲೂ ಪ್ರವಾದಿಯವರ ಗುಣಗಾಣಗಳನ್ನು ಹೇಳಿದ್ದಾಗಿ ಹದೀಸ್ ಗ್ರಂಥಗಳಲ್ಲಿ ಸ್ಪಷ್ಟವಿದೆ.

ಇಮಾಮ್ ಖಸ್ತಲ್ಲಾನಿ ಬರೆಯುವುದನ್ನು ನೋಡಿ
'ಇಸ್ಲಾಮಿನ ಜನರು
(ಅಹ್ಲುಲ್ ಇಸ್ಲಾಮ್)
ಪ್ರವಾದಿ ಜನ್ಮ ಮಾಸದಲ್ಲಿ ಒಂದು ಗೂಡಿ ಪ್ರತ್ಯೇಕ ಔತಣವನ್ನೇರ್ಪಡಿಸುತ್ತಿದ್ದರು.
ಸತ್ಕರ್ಮಗಳನ್ನು, ದಾನಧರ್ಮಗಳನ್ನು ಹೆಚ್ಚಿಸುತ್ತಾ ಪ್ರವಾದಿಯವರ ಮೌಲಿದ್ ಪಾರಾಣಲ್ಲಿ ವಿಶೇಷ ಆಸಕ್ತಿ ತೋರಿಸುತ್ತಿದ್ದರು.'
(ಅಲ್ ಮವಾಹಿಬುಲ್ಲದುನ್ನಿಯ್ಯ 148/1)

ಈದ್ ಮಿಲಾದನ್ನು ಸಮರ್ಥಿಸುವ ಇತರ ಕೆಲವು ವಿಷಯಗಳುಃ

ಸುಮಾರು 45 ರಷ್ಟು ದೇಶಗಳು ಪ್ರವಾದಿ(ಸ ಅ)ರವರ ಜನ್ಮ ದಿನವನ್ನು ಆಚರಿಸಲು ಬೇಕಾಗಿ ರಾಷ್ಟ್ರೀಯ ರಜೆಯನ್ನಾಗಿ ಘೋಸಿಸಿದೆ.

 ಕೇರಳ ನದ್ವತ್ತುಲ್ ಮುಜಾಹಿದೀನ್ ನಸ ಪ್ರಧಾನ ಕಾರ್ಯದರ್ಶಿಯಾಗಿದ್ದ A K ಅಬ್ದುಲ್ಲತೀಫ್ ಮೌಲವಿ 1951 ಡಿಸೆಂಬರ್ 12
(ರಬೀವುಲ್ ಅವ್ವಲ್ 12)
ಮಾಡಿದ ರೇಡಿಯೋ ಭಾಷಣವೊಂದರಲ್ಲಿ ಈ ರೀತಿ ಹೇಳುತ್ತಾರೆ:
" ಇಂದು ಜಗತ್ತು ಹದಿನಾಲ್ಕು ಶತಮಾನಗಳ ಮೊದಲು ಲೋಕದ ಜನರೆಲ್ಲರೂ ಪ್ರತ್ಯಾಶಯದೊಂದಿಗೆ ಎರುದುನೋಡುತ್ತಿದ್ದ ಓರ್ವ ಅಸಾಧರಣ ಮಗುವಿನ ಜನ್ಮದಿನವನ್ನು ಆಚರಿಸುತ್ತಿದೆ."

" ಸಹೋದರರೇ, ಲೋಕಾನುಗ್ರಹಿ ಪ್ರವಾದಿ(ಸ ಅ)ರವರ ಜನ್ಮದಿನವಾದ ಈ ರಬೀವುಲ್ ಅವ್ವಲ್ 12 ರಂದು ಸೂರ್ಯೋದಯದಿಂದ ನಜಅಸ್ತಮಾನದ ತನಕ ವ್ಯಾಪಿಸಿಕೊಂಡಿರುವ ಮುಸ್ಲಿಮರ ಸಂತೋಷಭರಿತರಾಗಿ ಆ ಮಹಾನುಭಾವರಾದ ಸಚ್ಚರಿತೆಯನ್ನು ಸ್ಮರಿಸಿ ಸುತ್ತಿಕೀರ್ತನೆಗಳನ್ನು ಹಾಡುತ್ತಾರೆ.
ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಮುಸ್ಲಿಮರು ಲೋಕದ ಆ ಏಕೈಕ ಮಾರ್ಗದರ್ಶಿಯಾಗಿ ಕುರಿತು ಅವರ ಜನ್ಮದಿನದಂದು ಭಕ್ತಿಭಾವ, ಗೌರವಾಧಾರಗಳನ್ನು ಪ್ರಕಟಿಸುವುದರಲ್ಲಿ ಆಶ್ಚರ್ಯವಿಲ್ಲ.
ಅದು ಸ್ವಾಭಾವಿಕವಾಗಿದೆ."
(ಅಲ್-ಮನಾರ್ ಸಂಪುಟ- 1 ಸಂಚಿಕೆ 17)

" ಮುಸ್ಲಿಮ್ ಜಗತ್ತಿನಾದ್ಯಾಂತ ರಬೀವುಲ್ ಅವ್ವಳನ್ನು ಆಚರಿಸಲಾಗುತ್ತದೆ.
ಸಮಗ್ರ ಜಗತ್ತು ಆಚಾರಿಸಬೇಕಾಗಿದೆ.
ಈ ಆಚಾರಣೆಯಿಂದ ಉತ್ತಮ ಕಾರ್ಯಗಳು ಸಾಧ್ಯವಾಗುತ್ತದೆ.
ಇದು ಮಾನವನ ಹೃದಯದಲ್ಲಿ ಪ್ರವಾದಿ ಪ್ರೇಮವನ್ನು ಬೇರೂರುವಂತೆ ಮಾಡುತ್ತದೆ."
(ಅಲ್-ಮುರ್ಶಿದ್, ಸಂಪುಟ 4, ಪುಟ22)

" ರಬೀವುಲ್ ಅವ್ವಲ್ ತಿಂಗಳು ಸಮಾಗತವಾಗಿದೆ.
ಮುಸ್ಲಿಮರೆಲ್ಲರೂ ಆಚರಿಸುವ ಆ ವಸಂತವು ಇದೋ ಸನ್ನಿಹಿತವಾಗಿದೆ."
(ಅಲ್-ಮುರ್ಶಿದ್ ಸಂಪುಟ 4, ಪುಟ 3)

" ಮೌಲಿದ್ ಪಾರಾಣ ಮಾಡುವ ಸ್ಥಳವು ಪುಣ್ಯದಾಯಕವಾಗಿದೆ.
ಅದರಲ್ಲಿ ಪಾಲ್ಗೊಳ್ಳುವ ಅನುಗ್ರಹ ಲಭಿಸಿದವರು ಭಾಗ್ಯವಂತರು.
ಈ ಮಜ್ಲಿಸ್ ನಲ್ಲಿ ಧರ್ಮಜ್ಞಾನಿಗಳಾದ ಅನೇಕ ವಿದ್ವಾಂಸರು ಉಪಸ್ಥಿತರಾಗಿರುವರು."
(ಅಲ್-ಮುರ್ಶಿದ್ ಸಂಪುಟ 4 ಪುಟ 23)

" ಅನುಗ್ರಹ ಲಭಿಸಿದ ಮಾಸ ಹಾಗೂ ದಿನವನ್ನು ಪ್ರಶಂಸಿಸಬೇಕು.
ಹಾಗೆ ಪ್ರಶಂಸಿಸುವುದಕ್ಕೆ ಆಧಾರವೆದೆ."
(ಅಲ್-ಮುರ್ಶಿದ್ ಸಂಪುಟ 1 ಪುಟ 41)

ಸೌದಿ ವಿಧ್ವಾಂಸರಾದ ನಜೀಬ್ ಉಸಾಮ್ ಯಮನಿ
(ಜಿದ್ವಾ)
ಎಂಬವರು ಬರೆದ ಸುದೀರ್ಘ ಮತ್ತು ಗಂಭೀರ ಲೇಖನದ ಅನುವಾದ.

ಪ್ರವಾದಿ(ಸ ಅ)ರವರ ಜನ್ಮದಿನವನ್ನು ಅರಬ್ ರಾಷ್ಟ್ರಗಳು ಸೇರಿದಂತೆ ಜಾಗತಿಕ ಮುಸ್ಲಿಮರು ಆಚರಣೆಯ ದಿನವೆಂದು ಪರಿಗಣಿಸುತ್ತಾರೆ.
ಅರಬಿ ಉಪಗ್ರಹ ಚಾನೆಲ್ ವಿಶೇಷ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುತ್ತವೆ.
ಈ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಇಲಾಖೆಯ ಮುಖ್ಯಸ್ಥರು ಸೇರಿದಂತೆ, ಬೃಹತ್ ಜನಸ್ತೋಮ ಪಾಲ್ಗೊಳ್ಳುತ್ತಿದ್ದಾರೆ.
ಇದರಲ್ಲಿ ಮುಖ್ಯವಾಗಿ ಪ್ರವಾದಿ(ಸ ಅ)ರವರ ಪ್ರಶಂಸೆಯನ್ನೊಳಗೊಂಡ ಚರಿತ್ರೆ ಪಾರಾಯಣ, ವಿಶೇಷತಃ ಪ್ರವಾದಿ(ಸ ಅ)ರವರ ಪ್ರಶಂಸೆಯನ್ನೊಳಗೊಂಡ ಚರಿತ್ರೆ ಪಾರಾಯಣ ಅಥವಾ ಮೌಲಿದ್ ಪಾರಾಯಣವನ್ನು ಮಾಡಲಾಗುತ್ತದೆ.
ಪ್ರವಾದಿ(ಸ ಅ)ರವರ ಜನ್ಮದಿಂದ ಸ್ಮರಣೆಗಳು, ಪ್ರವಾದಿ(ಸ ಅ)ರವರಿಗೆ ಸಂಬಂಧಿಸಿ ಅವತೀರ್ಣವಾದ ಕುರ್ ಆನಿನ ಆಯತ್ ಗಳು, ಐತಿಹಾಸಿಕ ಘಟನೆಗಳು ಪ್ರವಾದಿ(ಸ ಅ)ರವರ ಸಹನೆ, ತ್ಯಾಗ, ಚರ್ಯೆ ಸನ್ಮಾರ್ಗದರ್ಶನದ ನೆನಪುಗಳನ್ನು ಮೆಲುಕು ಹಾಕಲಾಗುತ್ತದೆ.
ತನ್ನಿಮಿತ್ತ ಅವರ ಪಾಪಗಳು ಕ್ಷಮಿಸಲ್ಪಡುವುದು ದೇವನ ಸ್ಮರಣೆಯ ಬಗ್ಗೆ ಅವರಿಗಿರುವ ಆಲಸ್ಯವು ದೂರವಾಗುವುದು.
ಅವರು ಮೌಲಿದ್ ಪಾರಾಯಣ ಮಾಡುವ ಜಾಗದಲ್ಲಿ ಅನುಗ್ರಹದ ದೇವಚರರು
(ಮಲಕ್)
ಉಪಸ್ಥಿತರಾಗಿ, ಅವರನ್ನು ಆಶೀರ್ವದಿಸುತ್ತಾರೆ.
ಇದು ದ್ಸಿಕ್ರ್ ಮತ್ತು ಇಲ್ಮ್ ನ ಸಭೆಯ ಪರಿಣಾಮವಾಗಿದೆಯೆಂದು ಪ್ರವಾದಿ(ಸ ಅ)ರವರ ಉಪದೇಶವಿದೆ.
ಆದ ಕಾರಣ ಮೌಲಿದ್ ಆಚಾರಿಸುವವರು ಪಥಭ್ರಷ್ಟರು ಹಾಗೂ ಮೌಲಿದ್ ನ ಟೀಕಾಕಾರರು ಸತ್ಫಥದಲ್ಲಿದ್ದಾರೆಂಬ ದೃಷ್ಟಿಕೋನವು ಸತ್ಯದೂರವಾಗಿದೆ.

ಅಧಿಕೃತವಾದ ಮೌಲಿದ್ ಆಚಾರಣೆಯ ಯಾವ ಕಾರ್ಯಕ್ರಮಗಳಲ್ಲಿಯೂ ಆಕ್ಷೇಪಾರ್ಹವಾದ ಯಾವ ಪ್ರವೃತ್ತನೆಯನ್ನು ದರ್ಶಿಸಲು ಸಾಧ್ಯವಾಗದು.
ಕಾರಣವೇನೆಂದರೆ, ಈ ಕಾರ್ಯಕ್ರಮಗಳಲ್ಲಿ ನಡೆಯುವುದೆಲ್ಲವೂ ಕುರ್ ಆನ್ ಮತ್ತು ಹದೀಸಿನ ಆಧಾರದಲ್ಲಿದ್ದು, ಸರ್ವರಿಂದ ಅಂಗೀಕರಿಸಲ್ಪಟ್ಟ ಕಾರ್ಯಗಳಾಗಿವೆ.
ಇಂತಹ ಸಭೆಗಲ್ಲಿ ಪಾಲ್ಗೊಳ್ಳುವವರಿಗೆ ಶಾಂತಿ ಹಾಗೂ ಸನ್ಮಾರ್ಗದರ್ಶನ ಲಭಿಸುವುದು.
ಇದು ಒಳಿತು, ಪ್ರವಾದಿ(ಸ ಅ)ರವರ ಅನುಸರಣೆ ಹಾಗೂ ಇಸ್ಲಾಮಿಕ್ ಆದರ್ಶಗಳನ್ನು ಜನರಿಗೆ ತಿಳಿಸಿಕೊಡಲು ಲಭಿಸುವ ಉತ್ತಮವಾದ ಅವಕಾಶವಾಗಿದೆ.

ಆದುದರಿಂದ ಅಲ್ ವತನ್ ದಿನಪತ್ರಿಕೆಯ 529 ನೇ ಸಂಚಿಕೆಯಲ್ಲಿ ಮುಹಮ್ಮದ್ ಸ ಅ್ ದುಲ್ ಗಾಮಿದಿ ಮೌಲಿದ್ ಆಚರಣೆ ಪ್ರವಾದಿ ಚರ್ಯೆಗೆ ವಿರುದ್ಧವಾಗಿದೆಯೆಂದೂ ಅದನ್ನು ಪ್ರವಾದಿ(ಸ ಅ)ರವರು ಆಚರಿಸಿರುವುದಾಗಿ ದೃಢಪಡದ ಕಾರಣ ಬಿದ್ ಅತ್ತಾಗಿದೆಯೆಂದೂ ಅಭಿಪ್ರಾಯಪಟ್ಟಿರುವುದು ವಾಸ್ತವ ವಿರುದ್ಧವಾಗಿದೆ.
ಕಾರಣವೇನೆಂದರೆ, ಪ್ರವಾದಿ(ಸ ಅ)ರವರು ಮಾಡಿರದ, ಆದರೆ ಸಹಬಿಗಳು ಹಾಗೂ ತಾಬಿಉಗಳು ಜಾರಿಗೆ ತಂದದ್ದು ಕೂಡಾ ಇಸ್ಲಾಮಿನಲ್ಲಿ ಅಂಗೀಕೃತವಾದ ಅನೇಕ ಕಾರ್ಯಗಳಿವೆ.
ಈ ಪೈಕಿ ಕುರ್ ಆನ್ ಬರೆದು ಕ್ರೋಢೀಕರಿಸಲ್ಪಟ್ಟ ಸಂಗತಿ ಮೊದಲ ಸ್ಥಾನವನ್ನು ಪಡೆಯುತ್ತದೆ.
ಪ್ರವಾದಿ(ಸ ಅ)ರವರು ಮಾಡಿರದ ಈ ಕಾರ್ಯವನ್ನು ಅನಂತರ ಜಾರಿಗೊಳಿಸುವ ಮೂಲಕ ಕುರ್ ಆನನ್ನು ಸಂರಕ್ಷಿಸಲಾಯಿತು.
ಇಬ್ ನುತೈಮೀಯ್ಯ ತಮ್ಮ ಅಲ್- ಇಖ್ತಳಾಅ್ ಎಂಬ ಗ್ರಂಥದಲ್ಲಿ ಈ ಯಾದಿಯಲ್ಲಿರುವ ಅನೇಕ ಕಾರ್ಯಗಳನ್ನು ಉಲ್ಲೇಖಿಸಿರುವರು.
ಜುಮುಆಕ್ಕೆ ಎರಡು ಬಾಂಗ್ ನ ಸಂಪ್ರದಾಯ ಉಸ್ಮಾನ್(ರ) ರವರ ಆಡಳಿತ ಕಾಲದಲ್ಲಿ ರೂಢಿಗೆ ಬಂತು.
ಬೇರೆ,ಬೇರೆ ಜಮಾಅತ್ ಗಳಾಗಿ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದವರನ್ನು ಉಮರ್(ರ) ರವರು ಒಬ್ಬರೇ ಇಮಾಮರ ಅಧೀನದಲ್ಲಿ ಒಂದೇ ಜಮಾಅತ್ತಾಗಿ ನಿರ್ವಹಿಸಲು ಆದೇಶಿಸಿದರು.
ರಮಳಾನ್ ನ ತರಾವೀಹ್ ನಮಾಝ್ ನಲ್ಲಿ ಖತ್ಮುಲ್ ಕುರ್ ಆನ್ ಕಾರ್ಯಕ್ರಮ ಹಾಕಿಕೊಂಡ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.
ಆದುದರಿಂದ ಪ್ರವಾದಿ(ಸ ಅ)ರವರ ಕಾಲದಲ್ಲಿದ್ದ ಎಲ್ಲವೂ ಬಿದ್ ಅತ್ ಆಗಿದೆಯೆಂಬ ವಾದವು ಆಧಾರರಹಿತವಾಗಿದೆ.
ಇಮಾಮ್ ಶಾಫೀ(ರ) ರವರಿಂದ ಸೇರಿದಂತೆ ಹಲವು ವಿದ್ವಾಂಸರು ಪ್ರವಾದಿ(ಸ ಅ)ರವರ ಕಾಲದಲ್ಲಿಲ್ಲದ ಕಾರ್ಯಗಳನ್ನು ಎರಡು ವಿಧವಾಗಿ ವಿಂಗಡಿಸಿದ್ದಾರೆ.
ಅವುಗಳು ಬಿದ್ ಅತ್ ಮತ್ತು ಬಿದ್ ಅತ್ ಸಯ್ಯಿಅತ್ತಾಗಿದೆ.
ಈ ಪೈಕಿ ಮೌಲಿದ್ ಆಚರಣೆಯು ಇಸ್ಲಾಮಿಕ್ ಪ್ರಮಾಣಗಳಿಗೆ ವಿರುದ್ದವಲ್ಲದ ಬಿದ್ ಅತ್ತುಲ್ ಹಸನದಲ್ಲಿ ಒಳಪಡುತ್ತದೆ.

ಪ್ರವಾದಿ(ಸ ಅ)ರವರು ರಬೀವುಲ್ ಅವ್ವಲ್ 12 ರಂದು ಜನಿಸಿರುವುದಾಗಿ ದೃಢಪಟ್ಟಿಲ್ಲವೆನ್ನುವುದು ಮತ್ತೊಂದು ಆಕ್ಷೇಪವಾಗಿದೆ.
ಆದರೆ ಸ್ವಹೀಹ್ ಮುಸ್ಲಿಮ್
 (5/52)
ಸುನನು ಅಬೂದಾವೂದ್
(2/808)
ಮುಸ್ನದ್ ಅಹ್ಮದ್
(5/297, 299)
ಮುಸ್ತದರಕುಲ್ ಹಾಕಿಮ್
(2/603)
ಸಿರಾತು ಇಬ್ನ್ ಹಾಷಿಂ
(2/154)
ಮುಹಮ್ಮದ್ ಸಾದಿಕ್ ಊರ್ಜುರವರ ಮುಹಮ್ಮದ್
(1/102)
ಮೊದಲಾದ ಗ್ರಂಥಗಲ್ಲಿ ಪ್ರವಾದಿ(ಸ ಅ)ರವರು, ಆನೆ ಯುದ್ಧ ನಡೆದ ವರ್ಷ ರಬೀವುಲ್ ಅವ್ವಲ್  12 ರ ಸೋಮವಾರ ಜನಿದರೆಂದು ಉಲ್ಲೇಖಿತವಿದೆ.
ನಳ್ ರತುನ್ನುಜೂಮ್ ಎಂಬ ಜ್ಞಾನಕೋಶವೂ
(1/195)
ಇದನ್ನೇ ಸಮರ್ಥಿಸುತ್ತದೆ.
ಹೀಗಿರುವಾಗ ಆಧಾರವೇನೆಂದು
(ರಬೀವುಲ್ ಅವ್ವಲ್ ಹನ್ನೆರಡಲ್ಲ ಎಂಬುದಕ್ಕೆ- ಲೇ)
ಪ್ರಶ್ನಿಸದ ಗಾಮಿದಿಯವನ್ನು ಅಂಗೀಕರಿಸಿ, ಮೇಲಿನ ಗ್ರಂಥಗಳನ್ನೆಲ್ಲಾ ತಳ್ಳಿಹಾಕುವುದು ಬುದ್ಧಿವಂತಿಕೆಯೇ.......?

 ಸಂತೋಷಾಚರಣೆಯ ಪುರಾವೆಗಳು :

ಸಂತೋಷಾಚಾರಣೆ ಜನ್ಮದಿನದ ಹೆಸರಿನಲ್ಲಿಯೇ ಅಥವಾ ವಫಾತ್ ನ ಹೆಸರಿನಲ್ಲಿಯೇ ಎಂಬುವುದು ಗಾಮಿದಿಯವರ ಮತ್ತೊಂದು ಆಕ್ಷೇಪಣೆಯಾಗಿದೆ.
ವಾಸ್ತವದಲ್ಲಿ ಇಲ್ಲಿ ಟೀಕಾಕಾರರು ಪ್ರವಾದಿ(ಸ ಅ)ರವರ ಉಪದೇಶವನನ್ನು ಅರಿತುಕೊಳ್ಳಬೇಕಾಗಿದೆ.
ಒಬ್ಬರ ಮರಣದ ಹೆಸರಲ್ಲಿ ಜೋರಾಗಿ ಅಳುವುದು, ವಸ್ತ್ರಗಳನ್ನು ಚಿಂದಿ ಮಾಡುವುದು ಇತ್ಯಾದಿಗಳನ್ನು ಪ್ರವಾದಿ(ಸ ಅ)ರವರು ನಿಷೇಧಿಸಿರುವರು.
ಮಕ್ಕಳು ಅಥವಾ ಗಂಡಂದಿರ ಮರಣದ ಹೆಸರಲ್ಲಿಯೂ ಹೀಗೆ ಮಾಡಬಾರದು.
ಪ್ರವಾದಿ(ಸ ಅ)ರವರ ಮರಣದ ಹೆಸರಲ್ಲಿ ಮುಸ್ಲಿಮರಾರೂ ಸಂತೋಷಾಚರಣೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ.
ಆದರೆ ಜನ್ಮ ದಿನದ ಹೆಸರಲ್ಲಿ ಸಂತೋಷಚಾರಣೆಗೆ ಅಲ್ಲಾಹನೇ ಆದೇಶಿಸಿದ್ದಾನೆ:
" ಅಲ್ಲಾಹನ ಅನುಗ್ರಹ ಮತ್ತು ಕರುಣೆಯ ಹೆಸರಲ್ಲಿ ನೀವು ಪ್ರಸನ್ನರಾಗಿರಿ"
(ಯೂನುಸ್ 58)
ಇಮಾಮ್ ಸುಯೂಥಿ(ರ) ರವರು ಇಸ್ಲಾಮಿನ ಶರೀಅತ್ ನೋವನ್ನು ಉಪೇಕ್ಷಿಸಿ ಸಂತೋಷವನ್ನು ಪ್ರಕಟಿಸಲು ಪ್ರೇರೇಪಿಸುತ್ತದೆಯೆಂದು ಅಭಿಪ್ರಾಯಪಟ್ಟಿದ್ದಾರೆ.

ಮೌಲಿದ್ ಆಚರಣೆಯ ಕ್ರೈಸ್ತರು ಆಚರಿಸುತ್ತಿರುವ ಪ್ರವಾದಿ ಈಸಾ (ಅ ಸ) ರ ಜನ್ಮದಿನಾಚರಣೆಗೆ ಸಮಾನವಾದುದರಿಂದ ಅದನ್ನು ತೊರೆಯಬೇಕೆನ್ನುವುದು ಟೀಕಾಕಾರ ಮತ್ತೊಂದು ಸಂಶೋಧನೆಯಾಗಿದೆ.
ಹಾಗಿದ್ದರೆ ನಮ್ಮದೊಂದು ಪ್ರಶ್ನೆ.
ಪ್ರವಾದಿ(ಸ ಅ)ರವರು ಮುಹರ್ರಮ್ ಹತ್ತರಂದು ಉಪವಾಸ ಅನುಷ್ಠಿಸಿ, ಸಹಾಬಿಗಳು ಕೂಡಾ ಅದನ್ನು ಆಚರಿಸಬೇಕೆಂದು ಆದೇಶಿಸಿದರಲ್ಲಾ❓
ಪ್ರವಾದಿ(ಸ ಅ)ರವರು ಮದೀನಾಕ್ಕೆ ಆಗಮಿಸಿದಾಗ ಯಹೂದ್ಯರಿಗೆ ಉಪವಾಸವಿತ್ತು.
ಅವರು ಅಲ್ಲಾಹನು ಪ್ರವಾದಿ ಮೂಸಾ (ಅ ಸ) ರವರನ್ನು ರಕ್ಷಿಸಿರುವುದಕ್ಕೆ ಕೃತಜ್ಞತೆಯಾಗಿ ಆ ಉಪವಾಸವನ್ನು ಆಚರಿಸುತ್ತಿದ್ದರು.
ಆ ಸಂದರ್ಭ ಪ್ರವಾದಿ(ಸ ಅ)ರವರು ಹೇಳುತ್ತಾರೆ:
" ಮೂಸಾ (ಅ ಸ) ರವರೊಂದಿಗೆ ನಿಮಗಿಂತಲೂ ಹೆಚ್ಚಿನ ಬಾಧ್ಯತೆ ನಮಗಿದೆ "
ಈ ಸಂಭವ ಬುಖಾರಿ ಮತ್ತು ಮುಸ್ಲಿಮ್ ನಲ್ಲಿದೆ.
ಈ ಉಪವಾಸ ಆಚರಣೆ ಆದೇಶದಿಂದ ಪ್ರವಾದಿ(ಸ ಅ)ರವರು ಯಹೂದ್ಯರಿಗೆ ಸಮಾನರಾರೆಂದು ವಿಮರ್ಶಕರು ಹೇಳುತ್ತಾರೆಯೇ..?

ಪವಿತ್ರ ಕುರ್ ಆನಿನ
" ಏಕ ಇಲಾಹನ ದಿನಗಳನ್ನು ನೆನಪಿಸಿಕೊಡಿರಿ "
ಎಂಬ ವಾಕ್ಯ
(ಇಬ್ರಾಹಿಮ್: 5)
ವನ್ನು ಇಬ್ನ್ ಅಬ್ಬಾಸ್ (ರ) ರವರು
' ಅಲ್ಲಾಹನ ಅನುಗ್ರಹಗಳು ದಿನಗಳನ್ನು ನೀವು ನೆನಪಿಸಿಕೊಡಿರಿ"
ಎಂದು ವ್ಯಾಖ್ಯಾನಿಸಿರುವರು.
ಪ್ರವಾದಿ(ಸ ಅ)ರವರ ಜನ್ಮದಿನಕ್ಕಿಂತಲೂ ಉನ್ನತ ಹಾಗೂ ಉದಾತ್ತವಾದ ಅನುಗ್ರಹ ಬೇರೇನಿದೆ....?
ಪ್ರವಾದಿ(ಸ ಅ)ರವರು ಸೋಮವಾರ ಉಪವಾಸ ಆಚರಿಸಿದ ಸಂಭವವನ್ನು ಮುಸ್ಲಿಮ್(ರ) ಉಲ್ಲೇಖಿಸಿದ್ದಾರೆ.
" ನಾನು ಜನಿಸಿದ್ದು ಹಾಗೂ ನನಗೆ ಕುರ್ ಆನ್ ಅವತಿರ್ಣಗೊಳ್ಳಲಾರಂಭಿಸಿದ್ದು ಸೋಮವಾರವಾಗಿದೆ "
ಎಂದು ಪ್ರವಾದಿ(ಸ ಅ)ರವರು ತಮ್ಮ ಉಪವಾಸ ಆಚರಣೆಗೆ ಕಾರಣವೆಂದು ಹೇಳಿರುವರು.
ಪ್ರವಾದಿ(ಸ ಅ)ರವರು ಸೋಮವಾರ ಉಪವಾಸ ಆಚರಿಸಿದ್ದಾರೆ ಎನ್ನುವುದು ಮೌಲಿದ್ ಆಚರಣೆ ಸುನ್ನತ್ತಾಗಿದೆ ಎಂಬುವುದಕ್ಕೆ ಸ್ಪಷ್ಟವಾದ ಆಧಾರವಾಗಿದೆ.
ಸರಳವಾಗಿ ಹೇಳುವುದಾದರೆ ಮೌಲಿದ್ ಆಚರಣೆ ನಿಷೇಧಿಸಲ್ಪಟ್ಟ ಕಾರ್ಯವಲ್ಲ ಎಂಬುದಕ್ಕೆ ಧಾರಾಳ ಪುರಾವೆಯಾಗಿದೆ.

ಹಾಫಿಲ್ ಇಬ್ನ್ ಹಜರ್ ರವರು ಉಪವಾಸ ಆಚರಣೆಯು ಒಂದು ನಿಶ್ಚಿತ ದಿನದಲ್ಲಿ ಕೃತಜ್ಞತೆ ಪ್ರಕಟಿಸಬಹುದೆಂಬ ಗ್ರಹಿಕೆಗೆ ಆಧಾರವಾಗುತ್ತದೆ ಎಂದಿರುವರು.
ಹಾಫಿಳ್ ಇಬ್ನ್ ರಜಬ್ (ರ) ನಮಾಝ್, ಸುಜೂದ್, ಕುರ್ ಆನ್ ಪಾರಾಯಣ ದ್ಸಿಕ್ರ್ ಮೊದಲಾದವುಗಳು ಕೃತಜ್ಞತೆ ಪ್ರಕಟಣೆಗೆ ಸಹಾಯಕವಾಗಿದೆಯೆಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾದಿತ್ವದ ನಂತರ ಪ್ರವಾದಿ(ಸ ಅ)ರವರು ತಮಗಾಗಿ ಅಖೀಕ ನೀಡಿದ ಸಂಭವವನ್ನು ಬೈಹಖಿ(ರ) ವರದಿ ಮಾಡಿದ್ದಾರೆ.
ಜನನದ ಏಳನೇ ದಿನದಂದು ಅವರ ಚಿಕ್ಕಪ್ಪ ಅಬೂತ್ವಾಲಿಬ್ ಪ್ರವಾದಿ(ಸ ಅ)ರವರಿಗಾಗಿ ಅಖೀಕ ನೀಡಿದ್ದಾರೆ.
ಅದನ್ನು ಪುನರಾವರ್ತಿಸುವುದು ಸುನ್ನತ್ತಲ್ಲವಾದ ಕಾರಣ ಪ್ರವಾದಿ(ಸ ಅ)ರವರು ಅಖೀಕ ನೀಡಿರುವುದು ತಮ್ಮನ್ನು ರಹ್ಮತುಲಾಲಿಲ್ ಆಲಮೀನ್ ಆಗಿ ನಿಯೋಗಿಸಿರುವುದಕ್ಕೆ ಕೃತಜ್ಞತೆ ಪ್ರಕಟಣೆಯಾಗಿತ್ತೆಂದು ವಿವರಿಸಲಾಗುತ್ತದೆ.

ಪ್ರವಾದಿ(ಸ ಅ)ರವರು ಜನಿಸಿದ ದಿನ ಅಬೂಲಹಬ್ ಸಂತೋಷಪಟ್ಟಿದ್ದರಿಂದ ಪ್ರತಿಯೊಂದು ಸೋಮವಾರ ರಾತ್ರಿ ಅವನಿಗೆ ಶಿಕ್ಷೆಯಿಂದ ವಿನಾಯಿತಿ ಲಭಿಸುವುದಾದರೆ, ಪ್ರವಾದಿ ಜನ್ಮದಿನದಂದು ಸಂತೋಷ ಪ್ರಕಟಿಸುವ ಮುಸ್ಲಿಮನಿಗೆ ಪ್ರತಿಫಲವಿದೆಯೆಂಬುದರಲ್ಲಿ ಸಂಶಯವಿಲ್ಲವೆಂದು ಇಮಾಮ್ ಶಿಹಾಬುದ್ದೀನುಲ್ ಖಸ್ತಲಾನಿ(ರ) ದಾಖಲಿಸಿರುವರು.
ಇಮಾಮ್ ಸ್ವಾಲಿಹ್ ರವರು ತಮ್ಮ ' ನೈಲುಲ್ ಹುದಾ ವರ್ರಷಾದ"
ಎಂಬ ಗ್ರಂಥದಲ್ಲಿ ಇಮಾಮ್ ಸ್ವದ್ ರುದ್ದೀನುಲ್ ಜಸ್ರಿಯವರಿಂದ ಉಲ್ಲೇಖಿಸುತ್ತಾರೆ:
"ಇಂದು ರೂಢಿಯಲ್ಲಿರುವ ಮೌಲಿದ್ ಆಚರಣೆಯು ಪ್ರವಾದಿಚರ್ಯೆಗೆ ವಿರುದ್ಧವಲ್ಲದ ಕಾರಣ ಅದು ಕರಾಹತ್ ಕೂಡಾ ಅಲ್ಲ.
ಬದಲಾಗಿ, ಪ್ರವಾದಿ(ಸ ಅ)ರವರು ಜನಿಸಿದ ಹೆಸರಲ್ಲಿ ಸಂತೋಷಪಡುವವನಿಗೆ ಅವನ ಸಂಕಲ್ಪ ಶುದ್ಧಿಯ ಪ್ರಮಾಣಕ್ಕನುಗುಣವಾಗಿ ಪ್ರತಿಫಲವು ಲಭಿಸುತ್ತದೆ.
ಅಬೂಸ ಈದುಲ್ ಮುಳಪ್ಫರ್ ಅರಸ ಮೌಲಿದ್ ಸಮಾರಂಭ ಏರ್ಪಡಿಸಿರುವುದನ್ನು ಇಮಾಮ್ ಇಬ್ನ್ ಕಸೀರ್(ರ) ಪ್ರಶಂಸಿದ್ದಾರೆ.
ಈ ಸಮಾರಂಭದಲ್ಲಿ ಪಾರಾಯಣ ಮಾಡುವ ಸಲುವಾಗಿ ಅಬುಲ್ ಖತ್ತಾಬ್ ಇಬ್ನ್ ದಹ್ ಯರವರು' ಅತ್ತನ್ ವೀರ್ ಫೀ ಬಶೀರಿನ್ನದೀರ್  ಎಂಬ ಮೌಲಿದ್ ರಚಿಸಿರುವುದಾಗಿಯೂ ಇಬ್ನ್ ಕಸೀರ್ ದಾಖಲಿಸಿರುವರು.

ಈ ಪುರಾವೆಗಳ ಆಧಾರದಲ್ಲಿ ಇಂದು ರೂಢಿಯಲ್ಲಿರುವ ಮೌಲಿದ್ ಪಾರಾಯಣವನ್ನು ಪ್ರವಾದಿ ಚರ್ಯೆಯನ್ನು ಕುರಿತ ಉಪದೇಶ, ಪ್ರೇಮ ಪ್ರಕಟಣೆ ಅಸ್ವೀಕೃತವೋ ತಳ್ಳಿಹಾಕಲ್ಪಡುವಂತದ್ದೋ ಅಲ್ಲ.
ಬದಲಾಗಿ ಮೌಲಿದ್ ಆಚರಣೆ ಅನೇಕ ಉತ್ತಮವಾದ ಗುಣ ಹಾಗೂ ಒಳಿತುಗಳಿಂದ ಸಮೃದ್ಧವಾಗಿರುವ ಮುಸ್ಲಿಮ್ ಸಮುದಾಯಕ್ಕೆ ಉಪಕಾರ ಲಭಿಸುವ ಒಂದು ಅತ್ಯುತ್ತಮ ಅನುಷ್ಠಾನವಾಗಿದೆ.
ಇದನ್ನು ದಿನಂಪ್ರತಿ ನಿರ್ವಹಿಸಲು ಸಾಧ್ಯವಾಗದವರು ಪ್ರವಾದಿ(ಸ ಅ)ರವರ ಜನ್ಮ ದಿನಾಚರಣೆಯಲ್ಲಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಇದು ಸತ್ಯವಿಶ್ವಾಸದ ಕೊನೆಯ ಶಾಖೆಯಲ್ಲಿ ಒಳಪಡುತ್ತದೆ.
(ಅಲ್-ವತನ್ ದಿನಪತ್ರಿಕೆ, ಸೌದಿ ಅರೇಬಿಯ, ಮಾರ್ಚ್ 23/2002)

♦ಮೌಲಿದ್ ನ ಕುರಿತು Dr. ಯೂಸುಫುಲ್ ಕರ್ಝಾವಿ ರವರ ಫತ್ವಾ:♦

ಪ್ರಶ್ನೆ : ಮೌಲಿದ್ ಆಚರಣೆಯ ವಿಧಿಯೇನು❓
🔽

ಉತ್ತರ: ಮುಸ್ಲಿಮ್ ಸಮುದಾಯಕ್ಕೆ ಉಪಕಾರಪ್ರದವಾದ ಇಂದು ನಡೆಯುತ್ತಿರುವ ಮೌಲಿದ್ ಆಚರಣೆ ಪರಿಗಣನಾರ್ಹ ಮತ್ತು ಅಂಗೀಕಾರಾರ್ಹವಾದ ಯಾದಿಯಲ್ಲಿ ಸೇರುತ್ತದೆ.
ಸಹಾಬಿಗಳು ಪ್ರವಾದಿ(ಸ ಅ)ರವರ ಜನ್ಮದಿನವನ್ನಾಗಲೀ, ಹಿಜಿರಾವನ್ನಾಗಲೀ, ಬದ್ರ್ ಯುದ್ದವನ್ನಾಗಲೀ ಆಚರಿಸುವ ಸಂಪ್ರದಾಯವಿರಲ್ಲವೆಂದು ನಮಗೆ ಗೊತ್ತಿದೆ.
ಇದಕ್ಕೆ ಕಾರಣವೇನು❓
ಅವರು ಪ್ರಸ್ತುತ ಸಂಭವಗಲ್ಲಿ ನೇರವಾಗಿ ಪಾಲ್ಗೊಂಡವರಾಗಿದ್ದರು.
ಪ್ರವಾದಿ(ಸ ಅ)ರವರ ಜತೆಯಲ್ಲಿಯೇ ಜೀವಿಸಿದವರು ಅವರ ಹೃದಯಗಳಲ್ಲಿ ಪ್ರವಾದಿ(ಸ ಅ)ರವರು ಅಚ್ಚಳಿಯದೆ ನೆಲೆಗೊಂಡಿದ್ದರು.

ಸ ಅದ್ ಬಿನ್ ಅಬೀವಕ್ಕಾಸ್ (ರ) ಹೇಳುತ್ತಾರೆ:
" ನಾವು ಮಕ್ಕಳಿಗೆ ಪ್ರವಾದಿ(ಸ ಅ)ರವರ ಯುದ್ಧದ ಚರಿತ್ರೆಗಳನ್ನು ಹೇಳಿಕೊಟ್ಟು ಕಲಿಸುತ್ತಿದ್ದೆವು.
ನಾವು ಅವರಿಗೆ ಕುರ್ ಆನ್ ಕಂಠಪಾಠ ಮಾಡಿಸುವ ಅದೇ ಸ್ಥಾನವನ್ನು ಇದಕ್ಕೂ ನೀಡಿದ್ದೆವು"

ಈ ರೀತಿಯಲ್ಲಿ ಅವರು ತಮ್ಮ ಮಕ್ಕಳಿಗೆ ಉಹ್ದ್, ಖಂದಕ್, ಖೈಬರ್ ಮೊದಲಾದ ಯುದ್ಧಗಳ ಇತಿಹಾಸ ಹಾಗೂ ಪ್ರವಾದಿ(ಸ ಅ)ರವರ ಜೀವನ ಚರಿತ್ರೆಯನ್ನು ಕಲಿಸುತ್ತಿದ್ದುದರಿಂದ ಅವರ ಅವಸ್ಥೆ ಪ್ರತ್ಯೇಕ ಅನುಸ್ಮರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದಕ್ಕೆ ಅತೀತವಾಗಿತ್ತು.
ಕಾರಣವೇನೆಂದರೆ, ಈ ಸಂಭವ ಹಾಗೂ ಪ್ರವಾದಿ(ಸ ಅ)ರವರ ಚರಿತ್ರೆಗಳು ಅವರ ಹೃದಯಗಲ್ಲಿ ಶಾಶ್ವತವಾಗಿ ನೆಲೆಗೊಂಡಿತ್ತು.
ಆದರೆ ಅನಂತರದ ಪೀಳಿಗೆಯ ಅವಸ್ಥೆ ಇದಕ್ಕಿಂತ ತೀರಾ ಭಿನ್ನವಾಗಿದೆ.
ಅವರ ಹೃದಯಗಳಿಂದ ಈ ಚಾರಿತ್ರಿಕ ಸಂಭವ ಹಾಗೂ ಪ್ರವಾದಿ ಚರಿತ್ರೆಗಳು ಮಾಸಲಾರಂಭಿಸಿತು.
ತನ್ನಿಮಿತ್ತ ಅವರ ಮಟ್ಟಿಗೆ ನೇಪಥ್ಯಕ್ಕೆ ಸರಿದ ಈ ಚಾರಿತ್ರಿಕ ಘಟನಾವಳಿಯನ್ನು ಅನುಸ್ಮರಿಸುವಂತೆ ಮಾಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಸಂಜಾತವಾಯಿತು.

ಆದುದರಿಂದ ನಾವು ಮೌಲಿದ್ ಆಚರಿಸುವಾಗ ವಾಸ್ತವದಲ್ಲಿ ಪ್ರವಾದಿ(ಸ ಅ)ರವರ ಚರಿತ್ರೆಯನ್ನು ಜನರಿಗೆ ನೆನಪಿಸಿಕೊಡುತ್ತೇವೆ.
ಹಿಜಿರಾದ ಹೆಸರಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ಹಿಜಿರಾ ಎಂಬ ಅತೀ ಮಹತ್ವದ ಘಟನೆ ಹಾಗೂ ಅದರಿಂದ ಕಲಿಯಬೇಕಾದ ಪಾಠಗಳನ್ನು ಜನರಿಗೆ ನೆನಪಿಸಿಕೊಡುವ ಮೂಲಕ ಅವರನ್ನು ಪ್ರವಾದಿ(ಸ ಅ)ರವರ ಚರಿತ್ರೆಗೆ ನಿಕಟಗೊಳಿಸುತ್ತೇವೆ.

" ನಿಶ್ಚಯವಾಗಿಯೂ ಅಲ್ಲಾಹ್ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿಸುವ ನಿಮಗೆ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ "
(ಅಲ್- ಅಲ್ ಝಾಬ್ 21)

ಶತ್ರುಗಳನ್ನು ವಂಚಿಸಲು ಅಲಿ(ರ) ರವರು ಪ್ರವಾದಿ(ಸ ಅ)ರವರ ಹಾಸಿಗೆಯಲ್ಲಿ ಮಲಗಿ ಅವರಿಗೆ ಮಾಡಿದ ಸಹಾಯ, ಅಸ್ಮಾಅ್(ರ) ರವರು ಕಷ್ಟ ಕಾರ್ಪಣ್ಯಗಳನ್ನು ಸಹಿಸಿ ಸೌರ್  ಬೆಟ್ಟವನ್ನೇರಿದ ಘಟನೆ ಹಾಗೂ ಹಿಜಿರಾದ ಸಂದರ್ಭ ಗುಹೆಯಲ್ಲಿ ಅಡಗಿ ಕೂತಿದ್ದ ಪ್ರವಾದಿ(ಸ ಅ)ರವರ ತವಕ್ಕುಲ್ ಇವೆಲ್ಲವೂ ಹಿಜಿರಾದ ಪಾಠಗಳಾಗಿವೆ.
ನಾವು ಅವೆಲ್ಲವನ್ನು ಕಲಿತು ಮೈಗೂಡಿಸಿಕೊಳ್ಳಬೇಕಾಗಿದೆ.
ಆದುದರಿಂದ ಇಂದಿನ ಮೌಲಿದ್ ಆಚರಣೆ ಇಂತಹ ಅಧ್ಯಯನಗಳನ್ನು ಜನಸಮಕ್ಷಮ ತಲುಪಿಸಲು ಉಪಯುಕ್ತವಾಗಿದೆ.
ಮುಖ್ಯವಾಗಿ ಇದರಲ್ಲಿ ಮುಸ್ಲಿಮರನ್ನು ಇಸ್ಲಾಮಿನೊಂದಿಗೆ ಬಲವಾಗಿ ಜೋಡಿಸುವ ಅನುಕೂಲತೆಯೂ ಇದೆ.
ತನ್ನಿಮಿತ್ತ ಪ್ರವಾದಿಚರಿತ್ರೆಗೆ ನಿಕಟರಾಗುವ ಅವರು ಪ್ರವಾದಿ(ಸ ಅ)ರವರ ಆದರ್ಶವನ್ನು ಅನುಸರಿಸುತ್ತಾರೆ
(ಅಲ್ ಮುಜ್ತಮಾಅ್, ಅರಬಿ ಪತ್ರಿಕೆ)

No comments:

Post a Comment