ಪೂರ್ವಜರು ದೇಶಪ್ರೇಮಿಯಾಗಿ ಕಂಡ ಟಿಪ್ಪು (ಖ.ಸಿ) ರವರು ನಮ್ಮ ಕಣ್ಣಿಗೆ ಮತಾಂಧರಾಗಿ ಕಾಣಿಸದಿರಲಿ.....
ಹೌದು.ದೇಶ ಸ್ವಾತಂತ್ರವಾಗಿ 68ವರ್ಷಗಳು ಕಳೆದುಹೋದವು.ಆದರೆ ಸ್ವಾತಂತ್ರಕ್ಕಾಗಿ ಹೋರಾಡಿದವರ ನೆನಪುಗಳು ಹಸಿಯಾಗಿದೆ ಮತ್ತು ಅವರ ಚಾಪುಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಇಂದಿನ ತಲೆಮಾರಿಗೆ ದೇಶಪ್ರೇಮದ ಸಂದೇಶವನ್ನು ಸಾರುತ್ತಿದೆ.ಅಂತಹವರ ಸಾಲಿಗೆ ಸೇರುವವರಾಗಿದ್ದಾರೆ "ನೂರು ದಿನ ಇಲಿಯಾಗಿ ಬಾಳುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕಬೇಕು"ಎಂಬ ತತ್ವವನ್ನು ಹೇಳಿ ಅದರಂತೆ ಜೀವನ ನಡೆಸಿ ವೀರಮರಣ ಹೊಂದಿದ "ಮೈಸೂರಿನ ಹುಲಿ ಶಹೀದೆ ಮಿಲ್ಲತೆ ಟಿಪ್ಪು ಸುಲ್ತಾನ್ (ಖ.ಸಿ)".ಅವರ ಜನ್ಮದಿನವನ್ನು 68ವರ್ಷಗಳ ನಂತರ ಕರ್ನಾಟಕ ಸರ್ಕಾರ ಕಣ್ಣು ತೆರೆದು ಒಂದು ಸರ್ಕಾರಿ ಆಚರಣೆಯಾಗಿ ಘೋಷಿಸಿರುವುದು ಒಂದು ಸಂತಸದ ವಿಷಯವೆ ಸರಿ.
ಟಿಪ್ಪು ಸುಲ್ತಾನ್ (ಖ.ಸಿ) ನಾಮವೆ ಅಂತಹದು.ಹೇಳುವಾಗಲೇ ಒಂದು ಆವೇಶ, ಗತ್ತು ಮತ್ತು ಗಾಂಭೀರ್ಯ ಕೂಡಿಯೇ ಬರುತ್ತದೆ.ಅದೇ ತರಹ ಅಂದು ತಕ್ಕಡಿ ಹಿಡಿದು ವ್ಯಾಪರಕ್ಕೆಂದು ಬಂದು ನಮ್ಮನ್ನು ಗುಲಾಮರಾಗಿ ಆಳಿದ ಬ್ರಿಟೀಷರಿಗೂ ಕೂಡ ಈ ನಾಮ ಕೇಳಿದೊಡನೆ ನಿದ್ರೆಯಲ್ಲೂ ಕೂಡ ಬೆಚ್ಚಿಬೀಳುತ್ತಿದ್ದರೆಂದರೆ ಅತಿಶಯೋಕ್ತಿಯಲ್ಲಿ.ಅವರ ಸಾಹಸಯಶೋಗಾಥೆಯ ಬಗ್ಗೆ ತಿಳಿದವರೆ ಆಗಿದ್ದೇವೆ ನಾವುಗಳು.ಅದೇತರಹ ಇವರ ಧೈರ್ಯ ಮತ್ತು ಆಡಳಿತ ಶೈಲಿ ಬ್ರಿಟೀಷರಿಗೆ ಕಬ್ಬಿಣದಕಡಲೆಯಾಗಿತ್ತು.ಆದ್ದರಿಂದಲೆ ಒಡೆದು ಆಳುವ ನೀತಿಗೆ ಪ್ರಸಿದ್ದರಾಗಿದ್ದ ಬ್ರಿಟೀಷರು ಭಾರತದಲ್ಲಿ ಇರುವಾಗಲೂ ಮತ್ತು ಭಾರತ ಬಿಟ್ಟು ತೊಲಗುವಾಗಲೂ ಕೂಡ ಸರ್ವ ಧರ್ಮ ಸ್ನೇಹಿಯಾಗಿದ್ದ ಟಿಪ್ಪು (ಖ.ಸಿ) ರವರನ್ನು ಇತಿಹಾಸ ತಿರುಚಿ ಮತಾಂಧನಾಗಿ ಚಿತ್ರಿಕರಿಸಿ ಭವ್ಯ ಭಾರತವನ್ನು ಬಿಟ್ಟು ತೊಲಗಿದರು.
ಆದರೆ, ಇತ್ತೀಚಿನ ದಿನಗಳಲ್ಲಿ ಆ ತಿರುಚಿದ ಇತಿಹಾಸವನ್ನು ಸತ್ಯವೆಂದು ನಂಬಿ ಬ್ರಿಟೀಷರ ಏಜೆಂಟರಂತೆ ಕೆಲವರು ವರ್ತಿಸುತ್ತಿರುವುದು ಖೇದನೀಯವಾಗಿದೆ.ಟಿಪ್ಪುರವರು ಮತಾಂಧರಾಗಿದ್ದಾರೆ ಅವರ ಆಡಳಿತದಲ್ಲಿ ಬರೀ ಮುಸ್ಲಿಮರೇ ತುಂಬಿರಬೇಕಾಗಿತ್ತು.ಆದರೆ, ಸಂಸ್ಥಾನದ ಮುಖ್ಯ ಹುದ್ದೆಗಳಲ್ಲಿ ಇತರ ಸಮುದಾಯದವರು ಇದ್ದರು ಎಂಬುದು ಗಮನಾರ್ಹ ಮತ್ತು ಬ್ರಿಟೀಷರ ಏಜೆಂಟರಿಗೆ ಇತಿಹಾಸದ ಪಾಠವಾಗಿದೆ.ಮೈಸೂರಿನ ಹುಲಿ ಮತಾಂಧರೇ ಆಗಿದ್ದರೆ ನಮ್ಮ ಊರಿನ ಅಂದರೆ ಶೃಂಗೇರಿ ಶಾರದ ಪೀಠಕ್ಕೆ ಮರಾಠರು ಆಕ್ರಮಣ ಮಾಡಲು ಮತ್ತು ಚಿನ್ನಾಭರಣ ಲೂಟಿ ಮಾಡಲು ಬಂದಾಗ ಅವರೆದುರು ಹೋರಾಡಿ ಮಠದ ಆಸ್ತಿ-ಪಾಸ್ತಿಗಳನ್ನು ರಕ್ಷಿಸುತ್ತಿರಲಿಲ್ಲ.ಅದೇ ತರಹ,ಕೇರಳದ ಗುರುವಾಯರ ದೇವಸ್ಥಾನಕ್ಕೆ 110 ಎಕರೆ ಜಾಗವನ್ನು ಓರ್ವ ಮುಸ್ಲಿಮ್ ವ್ಯಕ್ತಿಯಿಂದ ಖರೀದಿಸಿ ದಾನ ಕೊಟ್ಟವರಾಗಿದ್ದಾರೆ ಮೈಸೂರಿನ ಹುಲಿ.ಓರ್ವ ಮುಸ್ಲಿಮ್ ಎಂಬ ಕಾರಣಕ್ಕಾಗಿ ಇತಿಹಾಸ ತಿರುಚಿ ದೇವಾಲಯ ಮತ್ತು ಚರ್ಚುಗಳನ್ನು ಒಡೆದ ಮತಾಂಧನಾಗಿ ಚಿತ್ರಿಸುತ್ತಿದ್ದಾರೆ.ಅಷ್ಟೆ ಅಲ್ಲದೆ ರೈತರ ಪರವಾಗಿ, ನೊಂದವರ ಪರವಾಗಿ ಮತ್ತು ದಲಿತರ ಪರವಾಗಿ ಅನೇಕ ಕ್ರಾಂತಿಗಳನ್ನು ಮಾಡಿದ್ದರು.
ಎನಿಹೌವ್, ಭಾರತದ ಮುಸಲ್ಮಾನರ ಅನಿಷೇಧ್ಯ ನಾಯಕ ಖಾಯಿದುಝ್ಝಮಾನ್ ಸುಲ್ತಾನುಲ್ ಉಲಮಾರ ಕರ್ನಾಟಕ ಯಾತ್ರೆ ಏತಕ್ಕಾಗಿ ಎಂದು ಕೇಳಿದ್ದವರಿಗೆ, ಕರ್ನಾಟಕ ಸರ್ಕಾರ ಟಿಪ್ಪು ಸುಲ್ತಾನ್(ಖ.ಸಿ) ರವರ ಜನ್ಮದಿನವನ್ನು ಒಂದು ಸರ್ಕಾರಿ ಆಚರಣೆಯಾಗಿ ಘೋಷಣೆ ಮಾಡಿದ್ದು ಒಂದು ಉತ್ತರವಾಗಿ,ಲೇಟ್ ಆದರು ಲೇಟಸ್ಟ್ ಆಗಿ ಎದೆ ತಟ್ಟಿ ಪ್ರಯೋಜನ ಹೇಳುತ್ತಿದೆ.ಅಲ್ ಹಂದುಲಿಲ್ಲಾಹ್...
ಇನ್ನು ಮಾನ್ಯ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಲ್ಲಿ ಹೇಳಲಿಕ್ಕಿರುವುದು ಟಿಪ್ಪು ಸುಲ್ತಾನ್ (ಖ.ಸಿ) ರವರ ಜನ್ಮ ದಿನವನ್ನು ವಿರೋಧಿಸಿದ ಮತಾಂಧರನ್ನು ನೀವು ಎಷ್ಟು ವಿರೋಧಿಸಿದಿರೋ ಅದೇ ತರಹ ಲೋಕಾನುಗ್ರಾಹಿ ಮುಹಮ್ಮದ್ ಮುಸ್ತಫ (ಸ್ವ.ಅ) ರವರ ಜನ್ಮದಿನವನ್ನು ವಿರೋಧಿಸುವ ಮುಜ, ಜಮ ಮತ್ತು ತಬ್ಲೀಗ್'ಗಳನ್ನು ವಿರೋಧಿಸಿ ಪ್ಯೂರ್ ಸುನ್ನಿಯಾಗಿ ಬಾಳಲು ಯತ್ನಿಸಿ..ಇನ್ ಶಾ ಅಲ್ಲಾಹ್
ಅದೇ ತರಹ ಸರ್ವ ಧರ್ಮ ಭಾಂಧವರಲ್ಲಿ ಹೇಳಲಿಕ್ಕಿರುವುದು ನಮ್ಮ ಪೂರ್ವಜರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಜಾತಿ-ಧರ್ಮವೆಂದು ನೋಡದೆ ಹೋರಾಡಿದರು.ಆದರೆ, ನಾವಿಂದು ಕೇವಲ ಜಾತಿ-ದರ್ಮದ ಹೆಸರಲ್ಲಿ, ಕೇವಲ ಮೂಖ ಪ್ರಾಣಿಯ ಹೆಸರಲ್ಲಿ ಮತ್ತು ಮಸೀದಿ-ಮಂದಿರದ ಹೆಸರಲ್ಲಿ ಕಚ್ಚಾಡುತ್ತಿದ್ದೇವೆ.ಹೀಗೆ ಆದರೆ ಮುಂದೊಂದು ದಿನ ಬ್ರಿಟೀಷರು ಮತ್ತೆ ನಮ್ಮನ್ನಾಳುವ ಕಾಲ ದೂರವಿಲ್ಲ.ಇನ್ನಾದರು ಭವ್ಯ ಭಾರತ ಕಟ್ಟುವವರು ನಾವಾಗೋಣ.ಸೃಷ್ಟಿಕರ್ತನಾದವನು ಅದಕ್ಕೆ ಸನ್ಮನಸ್ಸು ನೀಡಿ ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ.......
✒.....ಶಮೀರ್ ಶಂಸುದ್ದೀನ್ ಶೃಂಗೇರಿ
No comments:
Post a Comment