*ನಜೀಮ್ ದುಬೈರವರ ಮಾತಿನಿಂದ*,
ಸಣ್ಣದೊಂದು ನಿದ್ದೆಯ ಬಳಿಕ ಮೊಬೈಲ್ ನೋಡಿದಾಗ ಒಂದು ನಂಬರ್ ನಿಂದ ಹಲವು ಕರೆಗಳು ಬಂದಿದ್ದವು. ನಂಬರ್ ಗೆ ಕಾಲ್ ಮಾಡಿದಾಗ ಆ ಭಾಗದಿಂದ ಕ್ಷೀಣ ಸ್ವರದಿಂದ "ಕಾಂತಪುರಂ ಉಸ್ತಾದ್ ಹೇಗಿದ್ದಾರೆ?" ಎಂಬ ಪ್ರಶ್ನೆ. ನಾನು ಹೇಳಿದೆ ಉಸ್ತಾದರಿಗೆ ರಾಹತ್. ತಾವು ಯಾರು? "ತಮಗೆ ನನ್ನ ಪರಿಚಯವಿಲ್ಲ. ದುಬೈ ದೇರಾದಲ್ಲಿನ ಇಂತಿಂತಹ ಸೂಪರ್ ಮಾರ್ಕೆಟಿನ ಇಂತಿಂತಹ ವ್ಯಕ್ತಿಯಾಗಿದ್ದೇನೆ" ಎಂದು ಪರಿಚಯ ಹೇಳಿದ. ನನಗೆ ಪರಿಚಯ ಸಿಗಲಿಲ್ಲ. ನಾನು ಉಸ್ತಾದರಿಗೆ ಸೌಖ್ಯವೆಂದು ಹೇಳಿಯೂ ಆತನಿಗೆ ಒಂದು ಅಸಮಾಧಾನವಿರುವಂತೆ ಆತನ ಮಾತಿನಿಂದ ತಿಳಿಯಿತು. ನಾನು ಕೂಡಲೇ ಆತನನ್ನು ನೋಡಲು ಆ ಸೂಪರ್ ಮಾರ್ಕೆಟ್ ಗೆ ಹೋದೆ.
ಕೆಲಸದ ಒತ್ತಡದೆಡೆಯಲ್ಲಿ ನನ್ನನ್ನು ಕಂಡಾಗ ಕಣ್ಣೀರು ಸುರಿಸುತ್ತಾ ಆ ವ್ಯಕ್ತಿ "ಉಸ್ತಾದರಿಗೆ ಹೇಗೆ ಇದೆ ? ನಿಜ ಹೇಳು..." ನಾನು ಉಸ್ತಾದರಿಗೆ ಯಾವುದೇ ತೊಂದರೆಯಿಲ್ಲವೆಂದೂ ಸಾಧಾರಣವಾಗಿ ನಡೆಸುವ ಚೆಕ್ ಅಪ್ ಗಾಗಿ ಹೋದದ್ದೆಂದೂ ಆತನಿಗೆ ಮನವರಿಕೆ ಮಾಡಿ ಕೊಟ್ಟೆ. ಯಾವುದೋ "ಸುನ್ನಿ" ವಾಟ್ಸಾಪ್ ಗ್ರೂಪಿನಲ್ಲಿ ಉಸ್ತಾದರ ಕುರಿತು ಕೀಳಾಗಿ ಚಿತ್ರೀಕರಿಸಿ ಉಸ್ತಾದರಿಗೆ ಮೇಜರ್ ಸರ್ಜರಿ ಬೇಕೆಂದೂ ಇನ್ನು ಉಸ್ತಾದರು ಹೆಚ್ಚು ಕಾಲ ಜೀವಿಸಲಾರರೆಂದೂ ಯಾರೋ ಮೂರ್ಖರು ಸಂತಸ ಪಡುವುದು ಕಂಡಾಗ ಪಾಪ! ಆ ಸಾಧು ವ್ಯಕ್ತಿಗೆ ಸಹಿಸಲಾಗಲಿಲ್ಲ. ರೋಗವನ್ನೂ ಕೂಡಾ ಆಚರಿಸುವುದನ್ನು ಕಂಡು ಆ ವ್ಯಕ್ತಿ ತುಂಬಾ ದುಃಖ ಪಟ್ಟರು.
ಹಾಗೆ ಪಾಪ ಆ ವ್ಯಕ್ತಿ ಸೂಪರ್ ಮಾರ್ಕೆಟ್ಟಿಗೆ ಬಂದ ಯಾರಿಂದಲೋ ನನ್ನ ನಂಬರ್ ಕಲೆಕ್ಟ್ ಮಾಡಿ ನನಗೆ ಕಾಲ್ ಮಾಡಿದ್ದ. ಉಸ್ತಾದರನ್ನು ಅತೀ ಹೆಚ್ಚು ಪ್ರೀತಿಸುವ ಆ ವ್ಯಕ್ತಿಯ ಕುರಿತು ಇನ್ನಷ್ಟು ವಿಷಯಗಳನ್ನು ತಿಳಿಯಲು ಬೇಕಾಗಿ ನಾನು ಆತನೊಂದಿಗೆ ಮಾತನಾಡಿದಾಗ ನಿಜಕ್ಕೂ ನಾನು ದಂಗಾಗಿ ಹೋದೆ. ಆ ವ್ಯಕ್ತಿ ಇಷ್ಟರ ವರೆಗೆ ಉಸ್ತಾದರನ್ನು ಮುಖಃತ ಭೇಟಿಯಾಗಿಲ್ಲ. ಉಸ್ತಾದರು ಇರುವ ಮಜ್ಲಿಸ್ ನಲ್ಲಿಯೂ ಭಾಗವಹಿಸಲಿಲ್ಲ. ನಿರ್ಗತಿಗರಿಗೂ ಅನಾಥರಿಗೂ ಅಶರಣರಿಗೂ ಬೇಕಾಗಿ ಜೀವಿಸುವ ಓರ್ವ ವ್ಯಕ್ತಿಯಾಗಿದ್ದಾರೆ ಕಾಂತಪುರಂ- ಎಂದು ಮಾತ್ರವೇ ಒಬ್ಬ ಜನರಲ್ ಸುನ್ನಿಯಾದ ಆತನಿಗೆ ತಿಳಿದಿರುವುದು...
ಆತ ಉಸ್ತಾದರ ಕುರಿತು ಹೇಳುವುದನ್ನು ನಾನು ಆಶ್ಚರ್ಯ ಚಕಿತನಾಗಿ ನೋಡಿ ನಿಂತಾಗ ಆತ ಕಣ್ಣೀರನ್ನು ಒರೆಸುತ್ತಾ ಹೇಳುತ್ತಲೇ ಇದ್ದ " ಯಾಕೋ ಗೊತ್ತಿಲ್ಲ ನನಗೆ ಆ ಮನುಷ್ಯನೊಂದಿಗೆ ಬಹಳ ಗೌರವ, ಅವರಿಗೆ ರೋಗವೆಂದು ತಿಳಿದಾಗಲೇ ನಾನು ಮನೆಗೆ ಕರೆ ಮಾಡಿ ಆಕೆಯೊಂದಿಗೆ ಉಸ್ತಾದರಿಗೆ ಬೇಕಾಗಿ ಪ್ರಾರ್ಥಿಸಲು ಹೇಳಿದ್ದೇನೆ. ನಾನು ಮತ್ತು ನನ್ನಾಕೆ ಉಸ್ತಾದರ ಆಫಿಯತಿಗೆ ಬೇಕಾಗಿ ನೋಂಬ್ ಹರಕೆ ಮಾಡಿದ್ದೇವೆ."..... ಆತ ಕಾಣದಂತೆ ನಾನು ನನ್ನ ಕಣ್ಣೀರು ಒರೆಸಿದೆ.😓
ಇಂತಹ ವ್ಯಕ್ತಿಗಳ ಮನಸ್ಸಿನಾಳದ ಪ್ರಾರ್ಥನೆಯಾಗಿದೆ ಕಾಂತಪುರಂ ಉಸ್ತಾದರ ಶಕ್ತಿ.!!!
ಎಷ್ಟೆಷ್ಟು ಯತೀಮುಗಳು, ನಿರ್ಗತಿಕರು ಹಾಗೂ ನಿರಾಶ್ರಿತರಿಗೆ ಬೇಕಾಗಿಯಾಗಿದೆ ಉಸ್ತಾದರು ಕಷ್ಟ ಪಡುವುದು.!!!!
ಅವರೆಲ್ಲರ ಪ್ರಾರ್ಥನೆಯಾಗಿದೆ ಈ ವಯಸ್ಸಿನಲ್ಲೂ ಆ ಮಹಾ ಮನುಷ್ಯರನ್ನು ಮುನ್ನಡೆಸುವುದು.👌
ಶೈಖುನಾರಿಗೆ ನೀನು ಆಫಿಯತ್ ನೊಂದಿಗಿನ ದೀರ್ಘಾಯುಷ್ಯವನು ಕರುಣಿಸು ಅಲ್ಲಾಹ್.... ಆಮೀನ್
ನಜೀಮ್ ತಿರುವನಂತಪುರಂ
ದುಬೈ
07.11.2017
✍ *ನೌಷಾದ್ ಉಮರ್ ಟಿ.ಎ*
No comments:
Post a Comment