*_ #ಮರ್ಕಝು_ಸಖಾಫತ್ತಿ_ಸುನ್ನಿಯ್ಯ ಕಾರಂದೂರ್ ನಗರ್ ಕಲ್ಲಿಕೋಟೆ_*
📚📚📚📚📚📚📚📚📚
*40' ವರ್ಷ*
*200' ರಷ್ಟು ಮುಖ್ಯ ಸಂಸ್ಥೆಗಳು*
*35,000' ವಿದ್ಯಾರ್ಥಿಗಳು*
*1,00,000' ಪೂರ್ವ ವಿದ್ಯಾರ್ಥಿಗಳು*
*11,000 ಸಖಾಫಿ ಬಿರುದದಾರಿಗಳಾದ ವಿದ್ವಾಂಸರು*
*10' ಸ್ವಾಂತನ ಪದ್ಧತಿಗಳು*
===================
✍ ಗಫೂರ್ ಬಾಯಾರ್
➖➖➖➖➖➖➖
*ಭಾರತದ ಇಸ್ಲಾಮಿಕ್ ನವೋತ್ಥಾನದ ಮುನ್ನಡೆಯ ಹಾದಿಗೆ ದಾರಿ ದೀಪವಾದ "ಮರ್ಕಝ್" ನ ದೀನೀ ಸೇವೆಯ ಪರಿಶ್ರಮವನ್ನಾರಂಭಿಸಿ ನಲ್ವತ್ತು ವರ್ಷಗಳು ಸಲ್ಲುತ್ತಿದೆ.*
*ಈ ಹಂತದಲ್ಲಿ ಧಾರ್ಮಿಕ, ಸಾಮೂಹಿಕ, ಸಂಸ್ಕಾರಿಕ, ವಿದ್ಯಾಭ್ಯಾಸ ರಂಗಗಳ ಮುನ್ನಡೆಗೂ, ಪುರೋಗತಿಗೂ ಇರುವ ಅನಂತ ಅವಕಾಶಗಳನ್ನು ಕಳೆದ 40 ವರ್ಷಗಳಿಂದ ಮುಸ್ಲಿಂ ಸಮೂಹಕ್ಕಾಗಿ "ಮರ್ಕಝ್" ತೆರೆದಿಟ್ಟಿದೆ.*
ಕೇರಳದ ಪಾರಂಪರ್ಯ ಮುಸ್ಲಿಂ ಸಮೂಹವನ್ನು ಮುಖ್ಯವಾಹಿನಿಗೆ ತರುವಲ್ಲಿ ಮಾದರಿಯೋಗ್ಯವಾದ ಪಾತ್ರವಹಿಸಲು ಸಾಧ್ಯವಾಗಿರುವುದು ಮರ್ಕಝ್'ನ ಶಿಲ್ಪಿ ಕಾಂತಪುರಂ ಉಸ್ತಾದರ ನೇತೃತ್ವದಿಂದ ಮಾತ್ರ.
1978ರಲ್ಲಿ ಸಮಸ್ತ ಕೇರಳ ಸುನ್ನಿ ಯುವಜನ ಸಂಘದ ಆಶ್ರಯದಲ್ಲಿ ಕಲ್ಲಿಕೋಟೆಯ ಕಾರಂದೂರ್'ನಲ್ಲಿ "ಮರ್ಕಝ್"ಗೆ ಶಿಲಾನ್ಯಾಸ ಹಾಕಿದ ಸಮಯಗಳಲ್ಲಿ ಹಲವು ಕಾರಣಗಳಿಂದ ಕೇರಳೀಯ ಸಮೂಹದಲ್ಲಿ ಹಿನ್ನಡೆ ಅನುಭವಿಸಬೇಕಾಗಿ ಬಂದ ಸುನ್ನಿ ಸಮೂಹದ ಅಭಿವೃದ್ಧಿಗೆ ಮತ್ತು ಏಳಿಗೆಗೆ ಅಗತ್ಯವಿರುವ ಎಲ್ಲವನ್ನೂ ಮರ್ಕಝ್ ನೀಡಿತು. ಅರಿವು, ಸಾಮಾಜಿಕ ಪ್ರಜ್ಞೆ, ಆಹಾರ, ಅರೋಗ್ಯ ಮೊದಲಾದ ಮೂಲಭೂತ ಅಗತ್ಯಗಳನ್ನೆಲ್ಲ ಪೊರೈಸುವಲ್ಲಿ ಮರ್ಕಝ್ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿರ್ಣಾಯಕ ಪಾತ್ರ ವಹಿಸಿದೆ.
ಮರ್ಕಝ್'ನ ದಿಟ್ಟ ನೇತೃತ್ವದಿಂದಾಗಿ ಸುನ್ನಿ ಸಮೂಹವು ಅಂಜಿಕೆ, ಅಳುಕು ಮತ್ತು ಯಾರ ಮುಲಾಜಿಗೂ ಒಳಗಾಗದೆ ಎದೆಗಾರಿಕೆಯಿಂದ ಮುನ್ನಡೆಯಲು ಆತ್ಮಸ್ಥೈರ್ಯ ನೀಡಿತು.
ಸಮುದಾಯದ ಅವಕಾಶಗಳನ್ನು ಅಧಿಕಾರ ಕೇಂದ್ರಗಳ ಆಯಕಟ್ಟಿನ ಸ್ಥಾನಗಳನ್ನು ಅಲ್ಪಸಂಖ್ಯಾತರು ಮಾತ್ರವಿರುವ ನೂತನವಾದಿಗಳು ವಶಪಡಿಸಿಕೊಂಡ ಒಂದು ಕಾಲಘಟ್ಟವಿತ್ತು.
ಅನರ್ಹವಾದ ತಸ್ತಿಗೆಗಳಲ್ಲಿ ಸಮುದಾಯದ ಕಾರ್ಡ್ ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದರು.
ಮಾತ್ರವಲ್ಲ, ಪಾರಂಪರ್ಯವಾಗಿ ಸುನ್ನಿ ವಿಶ್ವಾಸಿಗಳು ಕಟ್ಟಿಸಿದ ಆರಾಧನಾಲಯಗಳನ್ನು ಕೂಡ ನೂತನವಾದಿಗಳು ವಶಪಡಿಸಿಕೊಂಡಿದ್ದರು. (ಕಲ್ಲಿಕೋಟೆ ಜಿಲ್ಲೆಯಲ್ಲೇ 12ರಷ್ಟು ಸುನ್ನಿ ಮಸೀದಿಗಳನ್ನು ವಹಾಬಿಗಳು ತಮ್ಮರಾಜಕೀಯ ಸ್ವಾದೀನ ಮೂಲಕ ವಶಕ್ಕೆ ತೆಗೆದುಕೊಂಡಿದ್ದರು.)
ಸುನ್ನಿಗಳದ್ದು ಪೊಳ್ಳುವಾದವೆಂದು ಚಿತ್ರಿಸಲು ತಂತ್ರ ಹೆಣೆಯುತ್ತಿದ್ದರು.
*ಆದರೆ, ಅಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಒಂದು ನಿಯೋಗದ ಹಾಗೆ "ಮರ್ಕಝ್'ಗೆ ನೇತೃತ್ವ ನೀಡುತ್ತಿರುವ ಕಾಂತಪುರಂ ಉಸ್ತಾದರು ಮಧ್ಯ ಪ್ರವೇಶಿಸಿ ಆದರ್ಶ ಪ್ರತಿಬದ್ದತೆ ಮತ್ತು ಸೇವಾ ಮನೇೂಭಾವದ ಯುವ ವಿದ್ವಾಂಸರೊಂದಿಗೆ ಧರ್ಮ ಪರಿಷ್ಕರಣವಾದಿಗಳ ಪೊಳ್ಳುವಾದವನ್ನು ಆಧಾರ ಸಮೇತ ಬಯಲಿಗೆಳೆದು "ಅಹ್ಲ್ ಸುನ್ನತ್ ವಲ್" ಜಮಾಅತಿನ ನೈಜ ಆದರ್ಶವನ್ನು ಸಾಮಾನ್ಯ ಜನತೆಗೆ ಮನವರಿಕೆಯಾಗುವಂತೆ ಮಾಡಿದರು.*
*ನಂತರ #ಮರ್ಕಝ್ ಆಶ್ರಯದಲ್ಲಿ ದೇಶದೆಲ್ಲೆಡೆ ಧಾರ್ಮಿಕ ಸಂಸ್ಥೆಗಳಿಗೆ ಅವರು ಅಡಿಪಾಯ ಹಾಕಿದರು.*
*ಆ ಶ್ರಮ #ಮರ್ಕಝ್'ನ ಕಾರ್ಯಚಟುವಟಿಗಳಿಗೆ ಶಕ್ತಿ ತುಂಬಿತು ಮತ್ತು ಸುನ್ನಿಗಳ ವಿದ್ಯಾಭ್ಯಾಸ ಬೆಳವಣಿಗೆಗೆ ದಾರಿ ದೀಪವಾಯಿತು. ಅರಿವು ಮತ್ತು ಸಂಘಟನಾ ಅನುಭವದೊಂದಿಗೆ ಸೇವಾ ಮನೇೂಭಾವವನ್ನೂ ಹೊಂದಿದ ಯುವ ವಿದ್ವಾಂಸರನ್ನು ರೂಪಿಸುವ ಉನ್ನತ ವಿದ್ಯಾಲಯವಾಗಿ ಮರ್ಕಝ್ ಮಾರ್ಪಟ್ಟಿರುತ್ತದೆ.*
#ಮರ್ಕಝ್'ನ ನೇತೃತ್ವದ ಸುನ್ನಿ ಸಮೂಹದ ಅಭಿವೃದ್ಧಿ ಮತ್ತು ಏಳಿಗೆಯನ್ನು ಕಂಡು ಮೂಕ ವಿಸ್ಮಿತರಾದ
ನವೀನವಾದಿಗಳು ಮತ್ತು ಅವರ ನವೋಸ್ಥಾನ ವಾದಗಳು ಮೌಲ್ಯ ಕಳೆದುಕೊಂಡು ಅಪಶಬ್ದವಾಯಿತು.
ದೇಶದ ಕುಗ್ರಾಮಗಳಿಂದ ಆಗಮಿಸಿ ಮರ್ಕಝ್'ನಲ್ಲಿ ಕಲಿತು ಜಾಗತಿಕ ಮಟ್ಟದಲ್ಲಿ ಇಸ್ಲಾಮಿಕ ಚರ್ಚಾ ಕೂಟಗಳ ವೇದಿಕೆಗೂ ಸಭೆಗಳಿಗೂ ತಲುಪಲು ಸಾಧ್ಯವಾಗಿರುವುದು ಸಂತೇೂಷದ ಸಂಗತಿ.
ಜಾತ್ಯತೀತ ಕೇರಳದ ಮುಂದೆಯೂ, ಅಥವಾ ದೇಶಿಯ ನೆಲೆಯಲ್ಲೂ ಸಾರ್ವಜನಿಕವಾಗಿಯೂ, ಸಮೂಹದ ಮುಂದೆ ಇಸ್ಲಾಮನ್ನು ಅದರ ಕುರುವುಗಳನ್ನು ಇಸ್ಲಾಮಿನ ನೈಜ ಆಶಯ ಮತ್ತು ಆದರ್ಶದಿಂದ ಯಥಾವತ್ತಾಗಿ ಮಂಡಿಸಲು ಈ ಜ್ಞಾನ ಗೇಹಕ್ಕೆ ಸಾಧ್ಯವಾಗಿದೆ.
ಸುನ್ನಿ ಸಮೂಹಕ್ಕೆ ಅಂತರಾಷ್ಟ್ರೀಯ ಮಟ್ಟದ ಇಸ್ಲಾಮಿಕ್ ವಿದ್ಯಾಲಯಗಳನ್ನು ಪರಿಚಯಸುವಲ್ಲಿ ಮರ್ಕಝ್ ನಿರ್ಣಾಯಕ ಸ್ಥಾನ ವಹಿಸಿದೆ. ಎಂಬುದು ನಿಸ್ಸಂಶಯ ಹೇಳಬಹುದು.
ಈ ಎಲ್ಲ ಕಾರಣದಿಂದ ಮರ್ಕಝ್ ಒಂದು ವಿಸ್ಮಯವಾಗಿ ನೆಲೆಗೊಳ್ಳುತ್ತದೆ.
*ಸುನ್ನತ್ ಜಮಾಅತಿನ ಶ್ರೇಯೇೂಭಿವೃದ್ಧಿಗೆ ಅವಿಶ್ರಾಂತವಾಗಿ ಹಗಲಿರುಳೂ ಶ್ರಮಿಸುತ್ತಿರುವ ಸುಲ್ತಾನುಲ್ ಉಲಮಾ ಕಾಂತಾಪುರಂ ಎ.ಪಿ ಉಸ್ತಾದರೊಂದಿಗೆ ದೀನಿನ ಎಲ್ಲಾ ಖಾದಿಮ್'ಗಳಿಗೂ ಸರ್ವಶಕ್ತನಾದ ಅಲ್ಲಾಹನು ಅರ್ಹವಾದ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್.*
🌷🌷🌷🌷🌷🌷🌷🌷🌷
ಶೈಕ್ಷಣಿಕ ಜಾಗೃತಿಯ ಅಭಿಯಾನ
ಮರ್ಕಝ್ 40ನೇ ವಾರ್ಷಿಕ ರೂಬಿ ಜೂಬಿಲಿ ಸಮ್ಮೇಳನ. 04,5,6,7 2018 ಜನವರಿ ಮರ್ಕಝ್ ನಗರಿ, ಕಾರಂದೂರ್, ಕಲ್ಲಿಕೋಟೆ.
♒♒♒♒♒♒♒♒♒

No comments:
Post a Comment