Tuesday, January 16, 2018

*#ತಾಯಿನಾಡಿನ_ವಿಮೇೂಚನೆಗಾಗಿ #ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್(ರ)*
♻♻♻♻♻♻♻♻♻
✍ ಗಫೂರ್ ಬಾಯಾರ್
------------------------

_ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._

     ಲಿಬಿಯಾದ ಪೂರ್ವ ದಿಕ್ಕಾದ ಬರ್ಕ ಎಂಬ ಪ್ರದೇಶದ ತಬರುಕ್ ಸಮೀಪದ ಜಾನ್ ಸೂಳರ್ ಎಂಬ ಹಳ್ಳಿಯಲ್ಲಿ ನಿಫ ಗೇೂತ್ರದಲ್ಲಿ 1862 ರಲ್ಲಿ ಜನಿಸಿದ ಉಮರ್ ಮುಖ್ತಾರ್(ರ) ರವರ ಹದಿನಾರನೆ ವಯಸ್ಸಿನಲ್ಲಿ ತಂದೆ ಇಹಲೇೂಕ ತ್ಯಜಿಸಿದಾಗ ಹುಸೈನ್ ಅಲ್ ಖರನೈನಿ(ರ) ಎಂಬ ಸೂಫಿ ಸಂತರ ಆಶ್ರಯದಲ್ಲಿ ಬೆಳೆದರು.

      ಹುಸೈನ್ ಅಲ್ ಖರನೈನಿ ಎಂಬ ಮಹಾತ್ಮರ ಆಶ್ರಯದಲ್ಲಿ ಬೆಳೆದುದರಿಂದ ಬಹು ಬೇಗನೆ ಕುರ್ಆನಿನಲ್ಲಿ ಪಾಂಡಿತ್ಯಗಳಿಸಿ ಕುರ್ಆನ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಸನೂಸಿ ಹಾದಿಯಲ್ಲಿ ಪ್ರಸಿದ್ಧರಾದರು.

*ಇಟಲಿಯ ದಾಳಿ*

1911ರ ಇಟಲಿ-ತುರ್ಕಿ ಯುದ್ಧದ ಸಮಯದಲ್ಲಿ ಇಟಲಿ ಸೇನೆಯ ಒಂದು ವಿಭಾಗದ ಸೇನಾಧಿಪತಿ ಲ್ಯೂಜಿ ಪರಾವೆಲ್ಲಿ ಎಂಬಾತನ ನೇತೃತ್ವದ ಸೈನ್ಯ ಲಿಬಿಯನ್ ಗಡಿ ದಾಟಿ (ಅಂದು ಲಿಬಿಯ ಓಟೇೂಮನ್ ಆಡಳಿತದ ತುರ್ಕಿಗಳ ನಿಯಂತ್ರಣದಲ್ಲಿತ್ತು.)
     ಹಾಗೆ ದಂಡೆತ್ತಿ ಬಂದ ಇಟಲಿ ಪಡೆ ಲಿಬಿಯನ್ನರು ಶರಣಾಗಬೇಕೆಂದೂ ತಪ್ಪಿದರೆ ಲಿಬಿಯಾದ ರಾಜದಾನಿಯಾದ ಟ್ರಪೇೂಲಿಯನ್ನೇ ನಾಶ ಮಾಡುವುದಾಗಿ ಬೆದರಿಕೆ ಹಾಕಿದರು. ಈ ಬೆದರಿಕೆಯಿಂದ ವಿಚಲಿತರಾದ ಬಹುತೇಕ ಟ್ರಪೇೂಲಿಯನ್ನರು ಅಲ್ಲಿಂದ ಪಲಾಯನ ಮಾಡಿದರು.

      ತದನಂತರ ಟ್ರಪೇೂಲಿಯ ಮೇಲೆ ಮೂರು ದಿನಗಳ ಕಾಲ ನಿರಂತರ ಬಾಂಬ್ ದಾಳಿ ನಡೆಸಿದ ಇಟಲಿ ಸೇನೆ ಟ್ರಪೇೂಲಿಯನ್ನು ತನ್ನ ವಶಕ್ಕೆ ಪಡೆದು ಟ್ರಪೇೂಲಿಯನ್ನರನ್ನು ತನ್ನ ಗುಲಾಮರನ್ನಾಗಿಸಿತು. ಇದರಿಂದ ರೊಚ್ಚಿಗೆದ್ದ ಉಮರ್ ಮುಖ್ತಾರ್ (ರ) ತಾಯಿ ನಾಡಿನ ವಿಮೇೂಚನೆಗಾಗಿ ಜನರನ್ನು ಸಂಘಟಿಸಿ ಇಟಲಿಯ ವಿರುದ್ಧ ಸಮರ ಸಾರಿದರು.

*ಮುಂದುವರಿಯುವುದು...*
🔖🔖🔖🔖🔖🔖🔖🔖🔖

No comments:

Post a Comment