Tuesday, January 16, 2018

*ವಿರೋಧಿಗಳು "ಮರ್ಕಝ್" ಜಾಹಿರಾತನ್ನು ಕೈಗೆತ್ತಿಕೊಂಡಿದ್ದಾರೆ. ನಾವು ಕೂಡಾ ಸಹಕರಿಸಿದರೆ "40' ಕೋಟಿ 400 ಕೋಟಿ ಮಾಡಬಹುದು*
🍂🍂🍂🍂🍂🍂🍂🍂🍂
✍ ಗಫೂರ್ ಬಾಯಾರ್
===================
ಬೇಕಾಗಿದೆ, ಮರ್ಕಝ್'ಗೆ ಕೋಟಿಗಳು. ಮರ್ಕಝ್ ಅದೊಂದು ವರ್ಣನೆಗೆ ನಿಲುಕದ ಅವಿಸ್ಮರಣೀಯ ಕೋಟೆಯಾಗಿದೆ .!
ಈಗಾಗಲೇ ಈ ಕೋಟೆಯಿಂದ 75000ಕ್ಕಿಂತ ಅಧಿಕ ವಿದ್ಯಾರ್ಥಿಗಳು ಕಲಿತು ಹೊರ ಬಂದರು. ಅದರಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಖಾಫಿ ಬಿರುದಾಂಕಿತ  ವಿದ್ವಾಂಸರುಗಳು, 8 ಸಾವಿರಕ್ಕಿಂತ ಅಧಿಕ ಅನಾಥರು, 10 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ದೇಶ-ವಿದೇಶಗಳಲ್ಲಿ ನೌಕರಿ, ನೂರಾರು ಜನರಿಗೆ ಮನೆ, ಸಾವಿರಾರು ಜನರಿಗೆ ಕುಡಿಯುವ ನೀರು ( ಕೊಳವೆ ಬಾವಿ) ನಾಲ್ಕು ಸಾವಿರಕ್ಕಿಂತಲೂ ಅಧಿಕ ಮಸೀದಿಗಳು, ಸಾವಿರಾರು ಮದ್ರಸಾಗಳು, ಸಾವಿರಾರು ರೋಗಿಗಳಿಗೆ ಮದ್ದು ಹಾಗೂ ಧನ ಸಹಾಯ, ನೂರಾರು ಹೆಣ್ಣು ಮಕ್ಕಳಿಗೆ ದಾಂಪತ್ಯ ಜೀವನ. ನೂರಾರು ಕುಟುಂಬಕ್ಕೆ ಪೆನ್ಷನ್ ಹೀಗೆ ಎಣಿಸಿ ಮುಗಿಯದ ಸ್ವಾಂತನ ಕಾರ್ಯಗಳು.

ಇದೆಲ್ಲವೂ ನಡೆಸಿರುವುದು ಉಸ್ತಾದರಿಗೆ ಸಹೃದಯರು ಅವರ ದುಃಖಗಳು ನೀಗಲು, ಅಲ್ಲದಿದ್ದರೆ ದುಃಖಗಳು ನೀಗಿದಕ್ಕೆ ಕೊಟ್ಟ/ ಕೊಡುತ್ತಿರುವ ಕೋಟಿಗಳಿಂದಲೇ ಆಗಿದೆ. ಅಲ್ಲದೆ ಮರ್ಕಝ್'ನಲ್ಲಿ ನೆಟ್ಟ ಹಣದ ಮರದಿಂದ ಕಿತ್ತು ತೆಗೆದದ್ದಲ್ಲ.

ವಿಮರ್ಶಕರು ಮುಂದಿನ ಜನವರಿ ತಿಂಗಳ 5,6,7,ಕ್ಕೆ ನಡೆಯುವ 40ನೇ ವಾರ್ಷಿಕ ಸಮ್ಮೇಳನಕ್ಕೆ ಬಂದು ಸೇರುವ ಜನ ಲಕ್ಷಗಳ ಎಡೆಯಲ್ಲಾದರೂ ಮರ್ಕಝ್' ಕೋಟೆಯನ್ನು ಒಮ್ಮೆ ನೋಡಲು ಬರಬೇಕು.

ಮೊದಲು "ರಹ್ಯಾನ್ ವಾಲಿ" ಎಂದು ಹೆಸರಿಟ್ಟ ಅನಾಥಾಲಯಕ್ಕೆ ಒಂದು ಸುತ್ತು ಹಾಕಬೇಕು. ಅಲ್ಲಿರುವ ಎಳೆಯ ಮಕ್ಕಳ ಹತ್ತಿರ ಅಲ್ಪ‌ ಸಮಯ ಮಾತನಾಡಬೇಕು. ಅವರ ಮಾತಿನ ಆರಂಭದಿಂದ ಕೊನೆಯವರೆಗೆ ಸ್ನೇಹ ನಿಧಿಯಾದ ಓರ್ವ ತಂದೆಯ ಕುರಿತು ನಿಮಗೆ ಕೇಳಲು ಸಾಧ್ಯವಾಗಬಹುದು.
ಅದು ಅವರ ಮರಣಗೊಂಡ ತಂದೆಯ ಕುರಿತಾಗಿರಲಿಕ್ಕಿಲ್ಲ. ಬದಲಾಗಿ ಅವರು ಮರ್ಕಝ್'ಗೆ ತಲುಪಿದ ನಂತರ ಆ ಅನಾಥ ಮಕ್ಕಳಿಗೆ ಅನ್ನವೂ, ವಿದ್ಯಾಭ್ಯಾಸವೂ  ಒಮ್ಮೆಯೂ ಸ್ಥಗಿತವಾಗದೆ ನೀಡುತ್ತಿರುವ, ಜೀವನಂತವಿರುವ ಒಬ್ಬ ತಂದೆಯ ಕುರಿತಾಗಿದೆ. ಅವರು ಆ ಮರ್ಕಝ್ ಕೋಟೆಯೊಳಗೆ ಇದ್ದಾರೆ..

ನೀವು ಹೊರಗಿನಿಂದ ಕೇಳಿ ತಿಳಿದ ಕಾಂತಪುರಂ (ಉಸ್ತಾದ್) ರವರ ಕುರಿತು ಆಗಲಿಕ್ಕಿಲ್ಲ ಅವರು ಹೇಳುವುದು. ಬದಲಾಗಿ ಅವರು ಅನುಭವಿಸಿ ತಿಳಿದ ಅವರ 'ಅಬುಲ್ ಅಯ್ತಾಮ್'ರ ಕುರಿತಾಗಿರುವುದು.

ಅಲ್ಲಿಂದ ಹೊರ ಬಂದು ಸ್ವಲ್ಪ ಬಲಭಾಗಕ್ಕೆ ನಡೆದರೆ ಕಾಣುವ ಕೋಟೆಯೊಳಗಿನ ಇನ್ನೊಂದು ಪ್ಯಾಲೇಸ್ ಎಂದರೆ, ಬಂದೂಕುಗಳ ಶಬ್ದಗಳು ಮಾತ್ರ ಕೇಳಿದ, ಕಾಶ್ಮೀರ್'ನ ಮಣ್ಣಿನಿಂದ ಮರ್ಕಝ್'ನ ಮಣ್ಣಿಗೆ ವಿದ್ಯಾಭ್ಯಾಸ ಗಳಿಸಲು ಬಂದ ಕಾಶ್ಮೀರಿನ ಮಕ್ಕಳಿಗೆ ವಾಸಿಸಲು ಮಾತ್ರ 'ಕಾಶ್ಮೀರ್ ಹೋಂ' ಎಂಬ ಹೆಸರಿನಲ್ಲಿ ಒಂದು ಬೃಹತ್ ಪ್ಯಾಲೇಸ್. ಭಾಷೆ ತಿಳಿಯುದಿಲ್ಲ ಎಂದು ನೆನದು ಅವರೊಂದಿಗೆ ಮಾತನಾಡದಿರಬಾರದು. ಒಳ್ಳೆಯ ಮಲಯಾಳದಲ್ಲಿ ಹೇಳಿದರೆ ತಿಳಿಯುವವರು ಇದ್ದಾರೆ ಅವರ ಜೊತೆಯಲ್ಲಿ. ಸಣ್ಣ ಪ್ರಾಯದಿಂದ ಮರ್ಕಝ್'ಗೆ ತಲುಪಿದವರು ಮರಳಿ ಹೋಗಲು ಮನಸ್ಸು ಸಮ್ಮತಿಸದೆ ಬಂದಾಗ ಅವರು ಈ ಕಾಲಾವಧಿಯ ನಡುವೆ ಮಲಯಾಳ ಭಾಷೆ ಚೆನ್ನಾಗಿ ಕಲಿತರು.
ಅವರಿಗೂ ಶೈಖುನಾರ ಕುರಿತು ಬಹಳಷ್ಟು ಹೇಳಲಿರಬಹುದು. ಶೈಖುನಾರವರ ಕುರಿತು ಪರದೋಷಣೆ ಮಾತ್ರ ಕೇಳಿ ಹೃದಯ ಸತ್ತು ಹೋಗದಿದ್ದರೆ, ಅವರಿಗೆ ಹೇಳಲಿಕ್ಕಿರುವುದು ಕೂಡ ಕೇಳುವುದು ಒಳ್ಳೆಯದು.

ಪರದೂಷಣೆ ಹೇಳುವುದು ಯಾರ ಕುರಿತು ಎಂದು ತಿಳಿದಿದೆಯಲ್ವಾ?
ಸಮಯವಿದ್ದರೆ ಅಲ್ಲಿಂದ ಹೊರಗೆ ಬಂದು ಸುತ್ತಲೂ ಕಾಣುವ ಮರ್ಕಝ್'ನ ಉಳಿದ ಸ್ಥಾಪನೆಗಳಲ್ಲಿಯೂ ಒಮ್ಮೆ ಹತ್ತಿ ನೋಡಿರಿ. ಆಗ ತಿಳಿಯಬಹುದು ಶೈಖುನಾ ಒಂದು ದಿವಸ ಮನೆಯಲ್ಲಿ ಕುಳಿತರೆ ಹಸಿವೆಯಿಂದ ಬಳಲುವ ಸಾವಿರಾರು ಜನರ ಕುರಿತು,
ಆ ಸಾವಿರಾರು ಜನರಲ್ಲಿ ದಿನೇನೇ ಶೈಖುನಾ ಅವರನ್ನು ಕಾಣಲು ತಲುಪುವ ಬಡವರು, ರೋಗಿಗಳು ಬೇರೆಯೇ ಇದ್ದಾರೆ. ಅವರಲ್ಲಿ ಕೇಳಿದರೆ ತಿಳಿಯಬಹುದು ಎಷ್ಟು ವರ್ಷಗಳಿಂದ ಶೈಖುನಾ ಅವರಿಗಾಗಿ ಸಹಾಯಹಸ್ತ ನೀಡುತ್ತಿದ್ದಾರೆ ಎಂದು.
ಅವರು ಅತ್ತುಕೊಂಡು ಮನದಾಳದಿಂದ ಪ್ರಾರ್ಥಿಸುವಾಗ ಬರುವ ಮೊದಲನೆಯ ಮುಖ ಯಾವುದೆಂದು ಅವರ ಉತ್ತರದಿಂದ ನಿಮಗೆ ತಿಳಿಯಬಹುದು.

ಎಲ್ಲವೂ ನೋಡಿ, ತಿಳಿದುಕೊಂಡು ಮರಳಿ ಹೋಗುವ ಸಂದರ್ಭದಲ್ಲಿ ಸಾಧ್ಯವಾದರೆ ನಿಮ್ಮ ಮನಸ್ಸಿನ ಆಸ್ವಾದನೆಗಾಗಿಯಾದರೂ "ವಾಟರ್ ಟ್ರೀಟ್ಮೆಂಟ್ ಪ್ಲಾಂಟನ್ನು" ಒಮ್ಮೆ ನೋಡಿ ಹೋಗಿರಿ.
ನಿಮಗೆ ಸಂಕಲ್ಪಿಸುದರಿಂದಲೂ ಅಧಿಕವಾಗಿದೆ ಒಂದು ದಿನದ ಮರ್ಕಝಿನ ಖರ್ಚು ವೆಚ್ಚಗಳು. ಈ ಹೇಳಿದೆಲ್ಲವೂ ಈ ಪ್ರದೇಶದ ವಿಷಯ ಮಾತ್ರವಾಗಿದೆ.

 ಜಿಲ್ಲೆಯ ಒಳಗೂ, ಹೊರಗೂ ಇನ್ನು ಅನೇಕಾರು ಸ್ಥಾಪನೆಗಳು ಬೇರೆ ಇದೆ. ರಾಜ್ಯದ ಹೊರಗೆ ಇನ್ನು ಹಲವಾರು ಸ್ಥಾಪನೆಗಳು ಇವೆ.
ಈ ಸ್ಥಾಪನೆಗಳು ಎಲ್ಲಾ ನೆಲೆ ನಿಂತು ಹೋಗಬೇಕಾದರೆ ಒಂದು ದಿವಸ ಕಡಿಮೆ‌ ಪಕ್ಷ ಎಷ್ಟು ಲಕ್ಷಗಳು ಖರ್ಚು ಬರಬಹುದೆಂದು ಒಮ್ಮೆ ಮನಸ್ಸಿನಲ್ಲಿ ಲೆಕ್ಕಹಾಕಿದರೆ ಒಳ್ಳೆಯದು.
ಸ್ವಂತ ಕುಟುಂಬದ ಮೂರು ಮಕ್ಕಳನ್ನು ಸಾಕಲು ಕಷ್ಟಪಡುವ ನಿಮ್ಮ ಮನಸ್ಸಿನಲ್ಲಿ, ಸಾವಿರಾರು ಮಕ್ಕಳನ್ನು ಸಾಕಲು ಬೇಕಾದ ಖರ್ಚನ್ನು ಲೆಕ್ಕ ಹಾಕಲು ಪ್ರಯಾಸವಾದೀತು.

 ಆದ್ದರಿಂದ ಮನೆಗೆ ಹೋಗಿ ಮಲಗುವ ಸಮಯದಲ್ಲಿ ಕೋಣೆಯ ಬೆಳಕು ನಂದಿಸಿ ರಾತ್ರಿಯ ನಿಶಬ್ದತೆಯಲ್ಲಿ ಎದೆಗೆ ಕೈ ಇಟ್ಟು ಒಮ್ಮೆ ಆಲೋಚಿಸಿ..

ನಿಮ್ಮ ಒಂದು ದಿನ ಇದಕ್ಕಾಗಿ ವಿನಿಯೋಗಿಸಿದರೆ ನಂತರ ನೀವು ಆ ವಿದ್ವಾಂಸರು ನಡೆಯುವ ಹಾದಿಯಲ್ಲಿ ಮುಳ್ಳುಗಳನ್ನು ಶೇಖರಿಸಿ ಇಡಲಾರರು.

ವಿಮರ್ಶಿಸಲು ಅತೀ ಸುಲಭ, ಆದರೆ ಅದು ಏನೂ ತಿಳಿಯದೆಯೋ, ಕಾಣದೆಯೋ ಆಗಬಾರದು.
 ಚಿಂತಿಸಿ ಸಹೋದರರೇ,
 ಅವರು ಕೂಡಾ ಒಬ್ಬ ಮನುಷ್ಯರಾಗಿದ್ದಾರೆ. ಪ್ರಾಯವಿರುವ ಒಬ್ಬ ಮಹಾ ವಿದ್ವಾಂಸರು. ವಿಮರ್ಶಿಸುವ ಮೊದಲು ತಾನು ವಿಮರ್ಶಿಸುವುದು ಯಾರನ್ನೆಂದೂ, ವಿಮರ್ಶಿಸುವ ನಾವು ಯಾರೆಂದೂ ತಿಳಿದರೆ ಒಳ್ಳೆಯದು.

*ಅಂಗೀಕರಿಸಲು ಮನಸ್ಸು ಅನುಮತಿಸದಿದ್ದರೆ ದೂರ ಸರಿದು ನಿಲ್ಲಿರಿ. ಆ ಪಂಡಿತರಿಗೆ ಹಲವಾರು ಬಡವರ, ನಿರ್ಗತಿಕರ, ಅಬಲೆಯರ ಹಸಿವು ನೀಗಿಸುವ ಯಾತ್ರೆಯಲ್ಲಿದ್ದಾರೆ.*

ಇನ್ನು ಹಲವಾರು ವರ್ಷ ಆ ನೇತೃತ್ವದ ಹಿಂದೆ ನೆಲೆಗೊಳ್ಳಲು ನಮಗೆ ಅಲ್ಲಾಹನು ತೌಫೀಖ್ ನೀಡಲಿ ಆಮೀನ್.

ಅನುವಾದ;

 ಗಫೂರ್ ಬಾಯಾರ್

*ಶೈಕ್ಷಣಿಕ ಜಾಗ್ರತಿಯ ಅನ್ವೇಷಣೆ..*

_ಸುನ್ನೀ ಮರ್ಕಝ್ ರೂಬಿ ಜುಬಿಲಿ.. 05'06'07 ಜನವರಿ 2018. ಮರ್ಕಝ್ ನಗರ್- ಕಾರಂದೂರ್ ಕಲ್ಲಿಕೋಟೆ._
🍁🍁🍁🍁🍁🍁🍁🍁🍁

No comments:

Post a Comment