Monday, December 4, 2017

*ಝಿಯಾರತ್ತ್ ಕೇಂದ್ರ*
   🕌 4⃣3⃣🕌
     🔷ಭಾಗ- 02
〰〰〰〰〰〰〰〰〰
*ಹಝ್ರತ್ತ್ ಟಿಪ್ಪು ಸುಲ್ತಾನ್ (ರ), ಶ್ರೀರಂಗಪಟ್ಟಣ, ಮೈಸೂರು.*
➖➖☪☪☪☪➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🕌🕌🕌🕌🕌🕌🕌🕌🕌

ಏರನಾಡ್ ಹಾಗು ವಳ್ಳುವನಾಡ್ ಎಂಬ ಊರಿನ ಕೆಲವು ಪ್ರದೇಶಗಳಲ್ಲಿ ತೆರಿಗೆ ವಸೂಲಿ ಮಾಡಲು ಈ ಕಳ್ಳ ತ್ವರೀಕತ್ತ್'ಗಾರನಿಗೆ "ಪಾರ್ಶಿ" ಭಾಷೆಯಲ್ಲಿ ಬರೆದ ಅನುಮತಿ ಪತ್ರವನ್ನು ಕೊಟ್ಟಿದ್ದರು.

ಈ ಕಳ್ಳ ಶೈಖ್ ಹಾಗೂ ಟಿಪ್ಪು (ರ) ರವರ ಮರಣದ ನಂತರ ಈತನ ಅನುಯಾಯಿಗಳು ತೆರಿಗೆ ವಸೂಲು ಮಾಡುತ್ತಿದ್ದರು.
ಈ ತೆರಿಗೆ ವಸೂಲಿಯು ಹಲವು ವರ್ಷಗಳವರೆಗೆ ಮುಂದುವರಿಯಿತು.

1788 ಮೇ 26ಕ್ಕೆ ಪಾಲಕ್ಕಾಡ್ ಆಸ್ಥಾನದಲ್ಲಿ ಕೊಚ್ಚಿ ರಾಜನೊಂದಿಗೆ ರಾಜಕೀಯ ಚರ್ಚೆ ನಡೆಸಿದ ಟಿಪ್ಪು (ರ) ರವರು, ತಿರುವಿತಾಂಕೂರ್ ರಾಜನಿಗೆ ಬ್ರಿಟಿಷರ ವಂಚನೆಯ ಕುರಿತು ತಾಕೀತು ನೀಡಿದ್ದರು. ಅವರಿಗೆ ರಾಜಕೀಯವಾಗಿ  ಸಹಾಯ ನೀಡುವುದನ್ನು ತಡೆದರು.
ಆದರೂ ತಿರುವಿತಾಂಕೂರ್ ರಾಜನು ಟಿಪ್ಪು (ರ)ರವರ ಮಾತನ್ನು ಅನುಸರಿಸಲಿಲ್ಲ.

1789 ಫೆಬ್ರವರಿಯಲ್ಲಿ ಟಿಪ್ಪು (ರ) ರವರು ಪುನಃ ತಾಮರಶ್ಯೇರಿ ದಾರಿಯಾಗಿ ಮಲಬಾರಿಗೆ ತಲುಪಿದರು.
ತನ್ನ ಆಡಳಿತವನ್ನು ಜನರ ಜೀವನ ಶೈಲಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಿದರು.
ಒಬ್ಬ ಮಹಿಳೆ ಹತ್ತು ಪುರುಷರ ಪತ್ನಿಯಾಗುವುದು ಹಾಗು ಕೀಲು ಜಾತಿಯ ಹೆಂಗಸರು ಎದೆಯ ಭಾಗವನ್ನು ಮುಚ್ಚದೆ ತೆರೆದು ನಡೆಯುವಂತಹ ಕೆಲವು ಆಚಾರಗಳನ್ನು  ನಿಷೇದಿಸಿಕೊಂಡು ವಿಜ್ಞಾಪನೆ ಹೊರಡಿಸಿದರು.

ಅದೇ ರೀತಿ ಚಾಲಿಯಂ'ನಿಂದ ತಾನೂರ್ ವರೆಗೂ
*"ಸುಲ್ತಾನ್ ಎಂಬ ಹೆಸರಿನಲ್ಲಿ ರಸ್ತೆಯನ್ನು ನಿರ್ಮಿಸಿದರು.*
ಕುಟ್ಟನಾಡ್'ನಲ್ಲಿ ನಾಯರ್ ಜಾತಿಗೊಳಪಟ್ಟ ಸೈನಿಕರೊಂದಿಗೆ ನ್ಯಾಯಕ್ಕಾಗಿ ಹೋರಾಡಿದರು.
ಪಯಂಗಾಡಿ ಎಂಬ ಸ್ಥಳದಲ್ಲಿ *ಸುಲ್ತಾನ್ ಕಾಲುವೆಯನ್ನು ನಿರ್ಮಿಸಿದರು.*

ದಕ್ಷಿಣ ಮಲಬಾರ್ ಯಾತ್ರೆಗೈದು ತಲಸ್ಸೇರಿ, ಧರ್ಮಡಂ, ಕಣ್ಣೂರು, ಕುಟ್ಟಿಯಾಡಿ, ವಯನಾಡ್ ಎಂಬಿತ್ಯಾದಿ ಸ್ಥಳಗಳಲ್ಲಿ ಹೊಸ ಆಡಳಿತದೊಂದಿಗೆ ಪರಿಷ್ಕರಣೆ ತಂದರು. ವಯನಾಡಿನಲ್ಲಿ
ಬತ್ತೇರಿ ನಗರವನ್ನು ನಿರ್ಮಿಸಿ ಅದನ್ನು *ಸುಲ್ತಾನ್ ಬತ್ತೇರಿ* ಎಂದು ಹೆಸರಿಟ್ಟರು.

ಕಣ್ಣೂರಿನ ಮುಸ್ಲಿಂ ರಾಜ ಕುಟುಂಬ ಸದಸ್ಯರಾದ *ಅರಕಲ್ ಬೀವಿಯವರ ಮಗಳನ್ನು ಟಿಪ್ಪು (ರ) ರವರ ಮಗನಾದ ಅಬ್ದುಲ್ ಖಾಲಿದ್ ವಿವಾಹವಾದರು.*

ಚಾವಕ್ಕಾಡ್'ನಲ್ಲಿ ಕೆಲವು ಮುಸ್ಲಿಂ ನಾಮಧಾರಿಗಳು ಟಿಪ್ಪು (ರ) ರವರನ್ನು ವಿರೋಧಿಸಿ ರಂಗಪ್ರವೇಶಗೈದಾಗ ಅವರ ಜೊತೆಗೆ ಸಂಘರ್ಷಗಳು ಪ್ರಾರಂಭಗೊಂಡವು.
ಆ ಸಂಘರ್ಷದಲ್ಲಿ ಸೋತವರು ಹೆದರಿ ಹಾರಿದ ಕೊಳವನ್ನು "ಚಾಟ್ಟುಕುಳಂ" ಎಂದೂ ಹೋರಾಟದಲ್ಲಿ ಮಡಿದು ಶಿರಸ್ಸು ಬಿದ್ದ ಸ್ಥಳವನ್ನು "ಮಣತ್ತಲ" ಎಂಬ ಹೆಸರಿನಲ್ಲಿ ಇಂದು ತಿಳಿಯಲ್ಪಡುತ್ತದೆ.

1786-87 ಕಾಲದಲ್ಲಿ ಶ್ರಿರಂಗಪಟ್ಟಣದಲ್ಲಿ ಟಿಪ್ಪು ರ.ರವರು *ಮಸ್ಜಿದ್ ಅಹ್'ಲಾ ಕಟ್ಟಿಸಿದರು* ಆ ಮಸ್ಜಿದ್'ನಲ್ಲಿ ಮುದರ್ರಿಸ್, ಖಾಝಿ ಹಾಗೂ ಮುಫ್ತಿಯಾಗಿ ಪುತ್ತನಂಗಾಡಿ (ಪೆರಿಂದಲ್'ಮಣ್ಣ್) ಯ ವಿಕಲಾಂಕರಾದ (ಕಾಲು ಇಲ್ಲದ) ಅಬ್ದುಲ್ಲ ಮುಸ್ಲಿಯಾರ್ (ಖ:ಸಿ) ಎಂಬ ಮಹಾನರನ್ನು ನೇಮಿಸಿದರು.

ಹತ್ತು ವರ್ಷಗಳಷ್ಟು ಕಾಲ ಅಲ್ಲಿ ಸೇವೆಗೈದ ಅವರು ನಂತರ ಆ ಊರಿಗೆ ವಿದಾಯ ಹೇಳಿದರು.

1799 ಮೇ 14ಕ್ಕೆ ಟಿಪ್ಪು ಸುಲ್ತಾನ್ (ರ) ರವರು ಶಹೀದ್ ಅದರು.
( 1808ರಲ್ಲಿ ಜಿಫ್ರಿ (ರ) ರವರ ವಫಾತ್ತ್ ಹಾಗೂ 1830 ರಲ್ಲಿ ಅಬ್ದುಲ್ಲಾ ಮುಸ್ಲಿಯಾರ್. ಖ:ಸಿ ರವರೂ ವಫಾತ್ತ್ ಆದರು.

ಟಿಪ್ಪು ಸುಲ್ತಾನ್ (ರ) ರವರು ತನ್ನ ಕುಟುಂಬದವರೊಂದಿಗೆ ರಾಜ(ಸುಲ್ತಾನ್) ಪ್ರೌಢಿಯೊಂದಿಗೆ   ಶ್ರೀರಂಗಪಟ್ಟಣದ "ಟಿಪ್ಪು ಗುಂಬಝ್" ಎಂಬ ಮಖಾಮಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ.

🔰ಮುಗಿಯಿತು

✍ಗಫೂರ್ ಬಾಯಾರ್
🌾🌾🌾🌾🌾🌾🌾🌾🌾


No comments:

Post a Comment