Wednesday, December 6, 2017

🌿 *ಕೃಷಿ ; ಮಹತ್ವವಿರುವ ಸುನ್ನತ್* 🌾
============================
*ಬಹು ದೊಡ್ಡ ಪ್ರತಿಫಲವನ್ನು ವಾಗ್ದಾನ ಮಾಡಿರುವ ಒಂದು ಸತ್ಕರ್ಮವಾಗಿದೆ ಕೃಷಿ. ಅದರಲ್ಲಿ ಪ್ರಾಮಾಣಿಕತೆಯಿದ್ದರೆ...*

ನಬಿﷺ ಹೇಳಿದರು; "ಯಾವೊಬ್ಬ ಮುಸ್ಲಿಮನಾದರೂ, ಒಂದು ಮರವನ್ನು ನೆಟ್ಟರೆ, ಒಂದು ಬೀಜವನ್ನು ಹೂತು ಅದರಿಂದ ಒಂದು ಪಕ್ಷಿಗಳೋ, ಮನುಷ್ಯರೋ, ಪ್ರಾಣಿಗಳೋ ಭಕ್ಷಿಸಿದರೆ ಅದು ಅವನಿಗೆ ದಾನದ ಪುಣ್ಯ ಲಭಿಸದೇ ಇರದು." (ಬುಖಾರಿ:2320, ಮುಸ್ಲಿಂ:1553)

ನಬಿﷺ ಹೇಳಿದರು; "ಮುಸ್ಲಿಮಾದ ಒಬ್ಬ ವ್ಯಕ್ತಿ ಒಂದು ಮರವನ್ನು ನೆಟ್ಟು ಅದರಿಂದ (ಏನಾದರೂ) ಯಾರಾದರೂ ಭಕ್ಷಿಸಿದರೆ, ಅದು ಅವನಿಗೆ ದಾನ ನೀಡಿದ ಪುಣ್ಯ ಲಭಿಸುವುದು. ಅದರಿಂದ ಕಳ್ಳತನವಾದರೂ ಅದೂ ಕೂಡಾ ದಾನವಾಗಿದೆ. *(ಒಂದು ಬರಹವನ್ನು ಬರೆದವನ ಹೆಸರು ಅಳಿಸಿ ಅಥವಾ ಬೇರೆ ಹೆಸರು ಹಾಕಿ ರವಾನಿಸುವುದು ಕೂಡಾ ಇದರಲ್ಲಿ ಸೇರುವುದು).*
ಅದರಿಂದ ಪ್ರಾಣಿಗಳು,ಪಕ್ಷಿಗಳು ಭಕ್ಷಿಸಿದರೂ ಅದೂ ಕೂಡಾ ದಾನವಾಗಿದೆ. ಅದರಿಂದ ಯಾರು ಏನು ತೆಗೆದರೂ ಅದು ಅಂತ್ಯ ದಿನದವರೆಗೂ ದಾನವಾಗಿದೆ." (ಮುಸ್ಲಿಂ:1552)

ಇಮಾಂ ನವವೀ رضي الله عنه ಹೇಳಿದರು; "ಈ ಹದೀಸ್ ಕೃಷಿ ಮತ್ತು ವೃಕ್ಷಗಳನ್ನು ನೆಡುವುದರ ಮಹತ್ವನ್ನು ವ್ಯಕ್ತಪಡಿಸುತ್ತದೆ. ತಾನು ನೆಟ್ಟ ಮರಗಳು, ಸಸಿಗಳು ಅದು ಇರುವವರೆಗೂ ಅದಕ್ಕೆ ಕಾರಣವಾದ ವ್ಯಕ್ತಿಗೆ ಪ್ರತಿಫಲವು ಲಭಿಸುತ್ತಲಿರುವುದು ಎಂದು ಈ ಹದೀಸ್ ನಿಂದ ತಿಳಿಯಬಹುದು.
ಬಹಳ ಒಳ್ಳೆಯ ಸಂಪಾದನೆ ಯಾವ ಮಾರ್ಗದಿಂದ ಲಭಿಸುವುದು ಎಂದು ಪಂಡಿತರೆಡೆಯಲ್ಲಿ ಅಭಿಪ್ರಾಯ ವ್ಯತ್ಯಾಸವಿದೆ. ವ್ಯಾಪಾರ, ಕೈ ಕೆಲಸಗಳು, ಕೃಷಿ ಮುಂತಾದ ಹಲವು ಅಭಿಪ್ರಾಯಗಳು ಹೇಳಿದ್ದರಲ್ಲಿ ಕೃಷಿಯಾಗಿದೆ ಬಹಳ ಮಹತ್ವವಾದ ಸಂಪಾದನೆ ಮಾರ್ಗವೆಂಬ ಅಭಿಪ್ರಾಯವಾಗಿದೆ ಸರಿ. (ಶರ್ಹುನ್ನವವಿ:10/213)

ನಬಿﷺ ಹೇಳಿದರು; " ಅಂತ್ಯದಿನ ಸಂಭವಿಸುವಾಗ ನಿಮ್ಮ ಕೈಯಲ್ಲಿ ಒಂದು ಸಣ್ಣ ಖರ್ಜೂರದ ಸಸಿ ಇದ್ದರೆ, ಅದನ್ನು ನೆಡಲು ಸಾಧ್ಯವಾದರೆ ಅವನು ಮಾಡಲಿ." (ಅಹ್ಮದ್:12902)

ಅಬ್ದುಲ್ಲಾಹಿ ಇಬ್ನು ಸಲಾಮ್ رضي الله عنه ಹೇಳಿದರು; "ಒಂದು ಕಣಿವೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೆ, ದಜ್ಜಾಲ್ ನ ಆಗಮನವಾಗಿದೆ ಎಂಬ ವಾರ್ತೆ ಕೇಳಿದರೂ ವಿಚಲಿತನಾಗದಿರು. ನಿನ್ನ ಕೃಷಿಯನ್ನು ನೀನು ಒಳ್ಳೆಯದಾಗಿಸು. ಖಂಡಿತವಾಗಿಯೂ ಜನರಿಗೆ ಅದರ ನಂತರವೂ ಜೀವನವಿದೆ." (ಸ್ವಹೀಹ್:9)

ಅಮ್ಮಾರ್ ಇಬ್ನು ಕುಸೈಮಾ رضي الله عنه ಹೇಳಿದರು; "ಉಮರ್ ಇಬ್ನು ಖತ್ತಾಬ್ ಒಂದು ದಿನ ನನ್ನ ತಂದೆಯೊಡನೆ ಹೇಳಿದರು: 'ನಿಮ್ಮ ಭೂಮಿಯನ್ನು ಯಾಕಾಗಿ ಕೃಷಿ ಮಾಡದೇ ಬಿಟ್ಟಿರುವುದು?'
ನನ್ನ ತಂದೆ ಹೇಳಿದರು; 'ನಾಳೆ ಮರಣಹೊಂದಲು ಪ್ರಾಯವಿರುವ ವೃದ್ಧನಾಗಿದ್ದೇನೆ ನಾನು.'
ಉಮರ್ رضي الله عنه ಹೇಳಿದರು; 'ನೀವು ಹೇಗಾದರೂ ಕೃಷಿ ಮಾಡಲೇಬೇಕು.' ನನ್ನ ತಂದೆಯೊಂದಿಗೆ ಆ ಭೂಮಿಯ ಲ್ಲಿ ಉಮರ್ رضي الله عنه ಕೃಷಿಯನ್ನು ಮಾಡಿದ್ದು ನಾನು ನೋಡಿದ್ದೇನೆ." (ಸ್ವಹೀಹ್:9)
             ✍ *ಇಕ್ಬಾಲ್ ಜಿ.ಕೆ.ಗುಲ್ವಾಡಿ*
*❗ಬೆಂಕಿ ಕಟ್ಟಿಗೆಯನ್ನು ಸುಡುವಂತೆ, ಅಸೂಯೆ ಸತ್ಕರ್ಮಗಳನ್ನು ನಾಶ ಮಾಡುವುದು❗*
ಅಲ್ಲಾಹು ನಮ್ಮೆಲ್ಲರಿಗೂ ಸತ್ಕರ್ಮವನ್ನು ಮಾಡಲು ತೌಫೀಖ್ ನೀಡಲಿ, ಆಮೀನ್..
🍁🍁🍁🍁🍁🍁🍁🍁🍁🍁
🔹ನಬಿ ﷺ ರವರ ಮೇಲೆ ಒಂದು ಸ್ವಲಾತ್
💫اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله🌹
〰〰〰〰〰〰〰〰〰〰

No comments:

Post a Comment