Monday, December 4, 2017

*ಝಿಯಾರತ್ತ್ ಕೇಂದ್ರ​*
      4⃣8⃣
     👉ಭಾಗ-04
------------------------
*ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ) ನಾಗೂರ್ ಶರೀಫ್ ನಾಗಪಟ್ಟಣ, ತಮಿಳುನಾಡು*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌

ವೀಳ್ಯದೆಲೆಯನ್ನು ಆ ಮಹದಿಯ ಬಾಯಿಗೆ ಹಾಕಿ ಕೂಡಲೇ ನುಂಗಲು ನಿರ್ದೇಶಿಸಿದರು.
ಮಹಾತ್ಮೆ ಆ ಪ್ರಕಾರ ಮಾಡಿದರು.

ನಂತರ ಹೇಳಿದರು, ಇದರಿಂದ ನಿಮಗೊಂದು ಗಂಡು ಮಗು ಜನಿಸಲಿದೆ ಎಂದೂ, ನನ್ನ ಮರಣಗೊಂಡ ಸಹೋದರ ಯೂಸುಫ್'ರವರ ಹೆಸರು ಮಗುವಿಗೆ ನಾಮಕರಣ ಮಾಡಬೇಕೆಂದು ನಿರ್ದೇಶಿಸಿದರು.
5ನೇ ಪ್ರಾಯದಲ್ಲಿ ಖುರ್'ಆನ್ ಕಂಠಪಾಠ ಮಾಡುವರೆಂದೂ, 7ನೇ ವಯಸ್ಸಿನಲ್ಲಿ ತನ್ನ ಜನನಕ್ಕೆ  ಕಾರಣ ಯಾರೆಂದು ಅನ್ವೇಷಣೆ ಮಾಡುವರೆಂದು, ತನಗೆ ಅವರು ಏನು ಹದ್'ಯ ನೀಡಿರುವುದೆಂದು ಕೇಳುವಾಗ ಈ 'ಮಿಸ್'ವಾಕನ್ನು' ಕೊಡಬೇಕೆಂದು ಸೂಚಿಸಿದರು, ಆ ಮಹಾತ್ಮರ ಬಳಿ ಹೋಗಲು ಸಮ್ಮತ ಕೇಳಿದರೆ ನೀವು ಅನುಮತಿ ನೀಡಬೇಕೆಂದೂ ಹೇಳಿ ಶೈಖ್'ರವರು ಯಾತ್ರೆ ಹೇಳಿ ಅಲ್ಲಿಂದ ಹೊರಟು ಹೋದರು.

ನಂತರ ಆ ಮಗು ಜನಿಸಿತು. ಹೇಳಿದ ಪ್ರಕಾರ ಯೂಸುಫ್ (ಖ:ಸಿ) ಎಂಬ ಹೆಸರು ಇಡಲಾಯಿತು. ಶೈಖ್'ರವರು ಸೂಚಿಸಿದ ಹಾಗೆ 7 ನೇ ವಯಸ್ಸಾದಾಗ ಮಹಾತ್ಮರನ್ನು ಅನ್ವೇಷಿಸಿದಾಗ, ಮಾತಾಪಿತರು ವಿವರಿಸಿ ಕೊಟ್ಟರು. ನಂತರ ತಂದೆತಾಯಿಯವರ ಸಮ್ಮತದೊಂದಿಗೆ ನಾಗೂರ್ ಪಟ್ಟಣಕ್ಕೆ ತಲುಪಿದರು.

*ಮಹಾನುಭಾವರಿಗೆ ವಿಷ ಉಣಿಸಲಾಗುತ್ತದೆ.*

ಶೈಖ್ ಅವರನ್ನು ವಧಿಸಲು ತೀರ್ಮಾನಿಸಿ ಅಲ್ಲಿಯ ರಾಜನು ದೊಡ್ಡದೊಂದು ಸತ್ಕಾರ ಕೂಟವನ್ನು ಏರ್ಪಡಿಸಿದನು.
ಮಹಾನುಬಾವರನ್ನು ಸಮೀಪಿಸಿ ರಾಜನು ಹೇಳಿದನು: ನೀವು ಹಾಗೂ ನಿಮ್ಮ ಶಿಷ್ಯಂದಿರು ನನ್ನ ಮನೆಗೆ ಬಂದು ಆಹಾರ ಸೇವಿಸಿ ನನಗೆ ಅನುಗ್ರಹಿಸಬೇಕು.
ಶೈಖರು ತನ್ನ ಶಿಷ್ಯರೊಂದಿಗೆ ರಾಜನ ಆಮಂತ್ರಣ ಸ್ವೀಕರಿಸಿ ಅರಮನೆಗೆ ಹೋದರು.
ಆಹಾರವನ್ನು ಕೊಂಡುಬಂದಾಗ ಮಹಾನುಬಾವರು ಬಿಸ್ಮಿ ಹೇಳಿ ಸೇವಿಸಿದರು.
ಶಿಷ್ಯರೊಂದಿಗೆ ಆಹಾರ ತಿನ್ನಬಾರದೆಂದು ನಿರ್ದೇಶಿಸಿದರು.
ಶೈಖ್'ವರು ಒಂದು ಹಿಡಿ ಅನ್ನ ಸೇವಿಸಿದಾಗ ಅದರಲ್ಲಿದ್ದ ವಿಷ ರಾಜನ ಪಾದಕ್ಕೆ ತಲುಪಿತು. ಎರಡನೇ ಹಿಡಿ ಸೇವಿಸಿದಾಗ ವಿಷ ಕಾಲಿನ ಗಂಟಿನ ವರೆಗೆ ತಲುಪಿತು. ಮೂರನೇ ಹಿಡಿ ಸೇವಿಸಿದಾಗ ವಿಷ ಶರೀರ ಮೊತ್ತ ವ್ಯಾಪಿಸಿ ಕ್ಷಣಾರ್ಧದಲ್ಲಿ ರಾಜನು ಮರಣ ಹೊಂದಿದನು.
ಪ್ರಿಯತಮನ ಆಕಸ್ಮಿಕವಾದ ಸಾವಿನಿಂದ ಸ್ಮೃತಿಗೆಟ್ಟ ಪ್ರಿಯ ಪತ್ನಿಯ ಅಟ್ಟಹಾಸವನ್ನು, ಸಂಕಟವನ್ನು ಕಂಡು ಶೈಖವರಿಗೆ ದಯೆ ತೋರಿತು.
ಮಹಾನುಭಾವರು ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಏನದ್ಬುತ ರಾಜನಿಗೆ ಜೀವ ಮರಳಿ ಸಿಕ್ಕಿತು.

        *ವಫಾತ್ತ್*

ಆತ್ಮಜ್ಞಾನ ಗೋಪುರವಾದ ಮಾಣಿಕ್ಯಪುರದ ನಿರದೀಪ ಹಿಜರಿ ವರ್ಷ 978 ಜಮಾದುಲ್ ಆಖಿರ್ 10ಕ್ಕೆ ಶುಕ್ರವಾರ ರಾತ್ರಿ ತಹಜ್ಜುದ್ ನಮಾಜಿನ ಸಮಯದಲ್ಲಿ ಇಹಲೋಕ ಯಾತ್ರೆಯಾದರು.

ದಕ್ಷಿಣ ಭಾರತದ ತಮಿಳುನಾಡಿನ ಕಾವೇರಿ ನದಿ ತೀರದ ಪುಣ್ಯ ಝಿಯಾರತ್ತ್ ಕೇಂದ್ರವಾಗಿದೆ ಈ ನಾಗೂರ್.

*16ನೇ ಶತಮಾನದಲ್ಲಿ ವಫಾತ್ತ್ ಆದಂತಹ  ಶೈಖ್'ವರುಗಳ ದರ್ಗಾ ಶರೀಫ್'ನ 5 ಚಿನ್ನದ ಮಿನಾರಗಳು ದರ್ಗಾದ  ಆಕರ್ಷಣೆಯಾಗಿದೆ. ಹಿಂದೂ ಧರ್ಮದ ರಾಜನಿಗೆ ಮಾರಣ ನಿಮಿತ್ತ ಉಂಟಾದ ಮಾರರೋಗದಿಂದ ಮಹಾತ್ಮರ ಮುಖಾಂತರ ಸುಖ ಪ್ರಾಪ್ತಿಸಿದರಿಂದ್ದ ಪ್ರತಿಫಲವಾಗಿ ನೀಡಿದ 3000 ಎಕ್ಕರೆ ಸ್ಥಳ ಮತ್ತು ದರ್ಗಾ ಇಂದು ಜಾತಿಮತ ಭೇದವಿಲ್ಲದೆ ಸಮಸ್ತ ಜನತೆಯ ಅಭಯಕೇಂದ್ರವಾಗಿ ಮಾರ್ಪಟ್ಟಿದೆ. ಕಾವೇರಿ ನದಿ ತೀರದ 5 ಸಾವಿರದಷ್ಟು ಕ್ಷೇತ್ರಗಳ ನಡುವಿನಲ್ಲಿ ತಲೆ ಎತ್ತಿ ನಿಂತಿರುವ ಪುಣ್ಯ ಮಖಾಮ್ ಶರೀಫ್ ಮತ ಸೌಹಾರ್ಧದ ಮಹಾ ಪ್ರತೀಕವಾಗಿದೆ.*

*ಜೀವಿತ ಕಾಲದ ಹಾಗೆ ವಫಾತ್ತಿನ ನಂತರವೂ ಮಹಾನುಭಾವರ ಪವಿತ್ರ ಸನ್ನಿದಿಗೆ ತಲುಪುವವರಿಗೆ ಉದ್ದೇಶ ಸಫಲವಾಗುವುದು ಖಂಡಿತವಾಗಿದೆ*

*ಅಲ್ಲಾಹು ಗೌರವಿಸಿದವರನ್ನು, ಅವರ ಸರಣಿಯನ್ನು ನಿಷೇಧಿಸುವ ಹತಭಾಗ್ಯರಿಗೆ ನಾಗೂರ್ ದರ್ಗಾ ಶರೀಫ್ ಯಾವಾಗಲೂ ಸಿಂಹ ಸ್ವಪ್ನವಾಗಿದೆ.*
*ಅದೇ ರೀತಿ ವಿಶ್ವಾಸಿ ವೃಂದಕ್ಕೆ ಸಾಂತ್ವನದ ಕೇಂದ್ರವೂ ಆಗಿದೆ.*

🔹ಮುಗಿಯಿತು.

✍ಗಫೂರ್ ಬಾಯಾರ್
✒✒✒✒✒✒✒✒✒



No comments:

Post a Comment