*ಝಿಯಾರತ್ತ್ ಕೇಂದ್ರ*
4⃣8⃣
👉ಭಾಗ-02
------------------------
*ಖುತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ) ನಾಗೂರ್ ಶರೀಫ್ ನಾಗಪಟ್ಟಣಂ, ತಮಿಳುನಾಡು*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌
ಆ ಊರಿನ ಎಲ್ಲರ ಹಸಿವೂ ನೀಗಿದ ಕಾರಣದಿಂದ ಅವರು ಅಲ್ಲಾಹನನ್ನು ಸ್ತುತಿಸಿದರು.
ಒಂದು ದಿನ ರಾತ್ರಿ ತಹಜ್ಜುದ್ ನಮಾಝ್ ಮಾಡಲು ನೀರು ಸೇದಲು ಬಾವಿಯ ಹತ್ತಿರ ತಲುಪಿದ ಪ್ರಿಯ ತಾಯಿಯವರ ಕೈಯಿಂದ ನೀರಿನ ಕೊಡ ಬಾವಿಯೊಳಗೆ ಬಿತ್ತು. ಇನ್ನು ಏನು ಮಾಡುವುದೆಂದು ಅಲೋಚಿಸಿ ತನ್ನ ತಹಜ್ಜುದ್ ನಮಾಝ್ ಮೊಟಕಾಗಬಹುದೋ ಎಂದು ಭಯಭೀತರಾಗಿ ಮನಸ್ಸು ಚಂಚಲಗೊಳ್ಳಲು ಪ್ರಾರಂಭವಾದಾಗ ಆ ತಾಯಿಯ ಗರ್ಭಸ್ಥ ಶಿಶು; *ಓ.. ಉಮ್ಮಾ.. ನೀವು ಭಯಪಡದಿರಿ, ಎಂದಾಗಲೇ ಆ ತಾಯಿ ನೋಡುತ್ತಲೇ ತನ್ನ ಕಾಲಿನ ಹತ್ತಿರ ನೀರು ತುಂಬಿದ ನೀರಿನ ಕೊಡ ಕಾಣಲಾಯಿತು. ಅದ್ಭುತದೊಂದಿಗೆ ಅದಕ್ಕಿಂತಲೂ ಮಿಗಿಲಾದ ಸಂತೋಷದೊಂದಿಗೆ ಮಹದಿಯವರು ಅಲ್ಲಾಹನಿಗೆ ಸ್ತುತಿ ಅರ್ಪಿಸಿದರು.*
ಫಾತಿಮಾ ಬೀವಿ (ರ) ರವರು 6 ತಿಂಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಖಿಳ್'ರ್ ನಬಿ (ಅ) ರವರು ಪ್ರತ್ಯಕ್ಷಪಟ್ಟು ಹೇಳಿದರು; *ಓ.. ಫಾತಿಮಾ: (ರ) ನಿಮ್ಮ ಉದರದಲ್ಲಿರುವ ಮಗು ಓರ್ವ ಖುತುಬ್ ಆಗಿದ್ದಾರೆ. ಹಾಗೆಯೇ ಹಲವಾರು ವಿಶೇಷತೆಗಳು ಹೇಳಿದ ನಂತರ, ಮಗುವಿಗೆ ಅಬ್ದುಲ್ ಖಾದಿರ್ ಎಂದು ನಾಮಕರಣ ಮಾಡಲು ನಿರ್ದೇಶಿಸಿದರು.*
ಹೀಗೆ ಗರ್ಭಸ್ಥದಲ್ಲೇ ಅದ್ಬುತಗಳ ಸರ್ವಸ್ವವಾದರು.
ಜೀವರಾಶಿಗೆ ಸಂಪೂರ್ಣವಾಗಿ ಸನ್ಮಾರ್ಗ ನೀಡಿ ಸತ್ಯದೆಡೆಗೆ ದಾರಿ ತೋರಿಸಿದ ಆತ್ಮಜ್ಞಾನ ಜ್ಯೋತಿಯಾಗಿದ್ದಾರೆ ನಾಗೂರ್'ದಾನ ಮಹಾನವರು.
ಮಹಾ ಅದ್ಬುತಗಳಾಗಿ ಎ.ಡಿ.1489ರಲ್ಲಿ ಆ ತಾಯಿ ಮಗುವಿಗೆ ಜನ್ಮವಿತ್ತರು. ಕಂದನನ್ನು ಖಿಳ್'ರ್ ನಬಿ (ಅ) ಕೈಗೆತ್ತಿದರು.
ಪವಿತ್ರ ನಾಲಗೆಯಿಂದ ಅಝಾನ್ ಕೊಟ್ಟರು. ಸಯ್ಯಿದ್ ಅಬ್ದುಲ್ ಖಾದಿರ್ ಎಂದು ನಾಮಕರಣ ಮಾಡಿದರು. ಜೊತೆಗಿದ್ದ ಇಲ್ಯಾಸ್ ನಬಿ (ಅ) ರವರು ಮೂರು ಬಾರಿ ಹೆಸರನ್ನು ಉಚ್ಛರಿಸಿದರು. ನಂತರ ಇಬ್ಬರೂ ಅಪ್ರತ್ಯಕ್ಷರಾದರು.
ಶೈಶವ ದಶಕಗಳ ಮಹಾ ಅದ್ಬುತಗಳಲ್ಲಿ ಒಂದು, ರಮಳಾನ್ ತಿಂಗಳಲ್ಲಿ ಕಾರ್ಮೋಡವೃತವಾದ ಆಕಾಶವಾದರಿಂದ್ದ ಚಂದ್ರನನ್ನು ಕಾಣಲು ಸಾಧ್ಯವಾಗದೆ ಜನರು ಬೇಸರದಲ್ಲಿದ್ದ ಸಂದರ್ಭ..
ನಿದ್ರೆಯಿಂದ ಎಚ್ಚೆತ್ತ ಕೂಡಲೇ ಎದೆಹಾಲು ಕುಡಿಯುವ ವಾಡಿಕೆ ಇರುವ ಮಗುವಿಗೆ ಪ್ರಿಯ ಮಾತೆಯು ಎಷ್ಟೇ ಎದೆಹಾಲು ಉಣಿಸಲು ಶ್ರಮಿಸಿದರೂ ಕುಡಿಯದೆ ಇರುವಾಗಲೇ ವಿಷಯ ತಿಳಿಯುದು. ಅಂದು ಉಪವಾಸ ಆರಂಭವಾಗಿದೆ ಎಂದು, ಈ ವಿಷಯವನ್ನು ಜನರಿಗೆ ತಿಳಿಸಲಾಯಿತು. ಅಂದು ಉಪವಾಸವಾಗಿದೆ ಎಂದು ಊರಿಡೀ ಘೋಷಣೆ ಮಾಡಲಾಯಿತು. ಇದರಿಂದ್ದ ಮಗು ಪ್ರಸಿದ್ಧರಾದರು.
ಮಗುವನ್ನು ಕಾಣಲು ಬರುವವರು ಮಗುವನ್ನು ಎತ್ತಿ, ಅಲ್ಲಾಹುವೇ ಈ ಮಗುವಿನ ಮುಖಾಂತರ ನಮ್ಮ ಸಮಸ್ಯೆಗಳಿನ್ನು ಪರಿಹರಿಸು ಎಂದು ಬೇಡಿದ ಕೂಡಲೇ ಅವರ ಕಾರ್ಯಗಳು ನೆರವೇರುತ್ತಿತ್ತು.
*ಬಾಲ್ಯ ಕಾಲ*
ಬಾಲ್ಯಕಾಲ ಜೀವನವೇ ಪರಿಶುದ್ಧಿಯಿಂದಲೂ, ಸೂಕ್ಷ್ಮತೆಯಿಂದಲೂ ಕೂಡಿತ್ತು.
ಸಾಮಾನ್ಯ ಮಕ್ಕಳಂತೆ ವಿನೋದಗಳಲ್ಲಿ ನಿರತರಾಗುವ ಅಭ್ಯಾಸವಿರುತ್ತಿರಲಿಲ್ಲ.
ಉಳಿದ ಮಕ್ಕಳು ಆಡುವ ಸಂದರ್ಭದಲ್ಲಿ ಮಗುವಾದ ಅಬ್ದುಲ್ ಖಾದಿರ್ (ರ) ಯಾವುದಾದರೂ ವೃಕ್ಷದ ಕೆಳಗೆ ಕುಳಿತು ನೀಲಾಕಾಶವನ್ನು ನೋಡಿ ಅಲ್ಲಾಹನ ಚಿಂತೆಯಲ್ಲಿ ಮಗ್ನರಾಗುತ್ತಿದರು.
ಹೀಗೆ ಇರುವಾಗ ಒಮ್ಮೆ ಒಂದು ಮರದ ಬುಡದಲ್ಲಿ ಧ್ಯಾನಮಗ್ನವಾಗಿದ್ದ ಮಗುವನ್ನು ಸಮೀಪಿಸಿ ಬಾಯಿ ತೆರೆಯಲು ಒಬ್ಬರು ಆವಶ್ಯಪಟ್ಟರು. ಮಗು ಬಾಯಿ ತೆರೆದಾಗ 3 ಸಲ ತನ್ನ ಉಗುಳು ನೀರನ್ನು ಮಗುವಿನ ಬಾಯಿಗೆ ಉಗುಳಿದರು.
ಶುಭ್ರವಸ್ತ್ರದಾರಿಯಾದ ಆ ಮನುಷ್ಯನ ಹತ್ತಿರ ನೀವು ಯಾರೆಂದು ಕೇಳಿದಾಗ, ನಾನಾಗಿದ್ದೇನೆ *ಖಿಳ್'ರ್* (ಅ) ಎಂದು ಉತ್ತರಿಸಿದರು.
ಇದರ ನಂತರವೂ ಹಲವು ಸಲ ಖಿಳ್'ರ್ ನಬಿ (ಅ) ರನ್ನು ಭೇಟಿಯಾಗಿದ್ದರು.
*ವಿದ್ಯಾಭ್ಯಾಸ*
ಯುವತ್ವಕ್ಕೆ ತಲುಪಿದ ಮಹಾನವರು ವಿದ್ಯಾಭ್ಯಾಸವನ್ನು ಅತೀ ವೇಗದಲ್ಲಿ ಪೂರ್ತಿಗೊಳಿಸಿದರು.
*ಖುರ್'ಆನ್, ತಫ್'ಸೀರ್, ಹದೀಸ್, ಫಿಖ್ಹ್, ಚರಿತ್ರೆ, ಭೂಗೋಳ ಶಾಸ್ತ್ರ, ಗಣಿತ, ತತ್ವ ಶಾಸ್ತ್ರ, ತರ್ಕ ಮೊದಲಾದ ಸರ್ವ ಜ್ಞಾನಗಳಲ್ಲಿಯೂ ತೇರ್ಗಡೆ ಹೊಂದಿದವರಾಗಿದ್ದರು.*
ಬಾಲ್ಯಕಾಲದಿಂದಲೇ ಅತಿ ಕಡಿಮೆ ಮಾತನಾಡುವ ಅಭ್ಯಾಸವಾಗಿತ್ತು ಅವರದ್ದು. ಕಲಿಯುವ ಪ್ರಾಯದಲ್ಲಿಯೂ ಮಾತು, ಭಾವನೆ, ಕಾರ್ಯ ಚಟುವಟಿಕೆ ಎಂಬಿತ್ಯಾದಿಗಳಲ್ಲಿ ಓರ್ವ ಸೂಫಿಯ ರೀತಿಯ ನಡತೆಯಾಗಿತ್ತು.
ದಿನ ಕಳೆದಂತೆ ಅಲ್ಲಾಹನನ್ನು ತಿಳಿಯುವ ಆಗ್ರಹ ವರ್ಧಿಸಿಸುತಿತ್ತು. ಇದಾಕ್ಕಾಗಿ ಒಬ್ಬ ಸಿರಾತುಲ್ ಮುಸ್ತಕೀಂ ಆದ ಹಾದಿಯನ್ಮು ತೋರಿಸುವವರನ್ನು ಅನ್ವೇಷಣೆ ಮಾಡುತ್ತಿದ್ದರು. ಇದಕ್ಕಿರುವ ದಾರಿಗಳನ್ನು ಪ್ರಿಯ ಮಾತಾಪಿತರು ಸಿದ್ದಪಡಿಸಿ ಕೊಟ್ಟರು.
ಹೀಗೆ ಹಿಜರಿ ವರ್ಷ 928 ಜುಮಾದುಲ್ ಆಖಿರ್'ನ ಒಂದು ಸೋಮವಾರದಂದು ಉತ್ತಮವಾದ ಗುರುವನ್ನು ಹುಡುಕುತ್ತಾ ಯಾತ್ರೆ ಹೊರಟರು.
18 ವರ್ಷ ಪ್ರಾಯಕ್ಕೆ ತಲುಪಿದ ಮಹಾನರು ತನ್ನ ಮಾತಾಪಿತರನ್ನು, ಸ್ನೇಹಿತರನ್ನು, ಕುಟುಂಬದವರನ್ನು ಊರಿನವರನ್ನು, ತನ್ನ ಮುಂದೆ ಒಂದು ನೆರಳಾಗಿ ಮಾತ್ರ ಕಂಡರು. ಅವರಿಗೆ ತನ್ನ ಹೃದಯದಲ್ಲಿ *"ಅಲ್ಲಾಹ್"* ಎಂಬ ಪರಮ ಗುರಿ ಪ್ರಾಪ್ತಿಸುವ ಚಿಂತೆ ಮಾತ್ರವಾಗಿತ್ತು.
🔹ಮುಂದುವರಿಯುವುದು
✍ಗಫೂರ್ ಬಾಯಾರ್
♻♻♻♻♻♻♻♻♻

No comments:
Post a Comment