Monday, December 4, 2017

*ಝಿಯಾರತ್ತ್ ಕೇಂದ್ರ*
            4⃣5⃣
==================
_ಶೈಖ್ ಮುಹಮ್ಮದ್ ಸ್ವಾಲಿಹ್ (ರ), ನಾಡುಕಾಣಿ ಬೆಟ್ಟ. ವಯಿಕಡವ್, ಆನಮರಿ._ ಮಲಪ್ಪುರಂ
-----------------------
*اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ*
☪☪☪☪☪☪☪☪☪
ದಟ್ಟವಾದ ಕಾಡು, ಎರಡು ದಿಕ್ಕಿನಲ್ಲೂ ಕಾಡಾನೆಗಳ ಸಂಚಾರ, ಧಾರಾಕಾರವಾಗಿ ಸುರಿಯುವ ಮಳೆಯಲ್ಲಿಯೂ, ನಡು ಮಧ್ಯಾಹ್ನದಲ್ಲೂ ಕತ್ತಲು ಕವಿದಿರುವ ವಾತಾವರಣ.
ಜನ ವಾಸವಿಲ್ಲದ ಈ ಕಾಡಿನ ಮಾರ್ಗ ಬದಿಯಲ್ಲಾಗಿದೆ "ಮಖ್ಬರ"ವಿರುವುದು.

ಕಲ್ಲಿಕೋಟೆಯಿಂದ ಊಟಿ ರಾಜ್ಯ ಹೆದ್ದಾರಿಯಲ್ಲಿ ಪ್ರಸಿದ್ದವಾದ "ನಾಡುಕಾಣಿ" ಚುರ'ದಲ್ಲಿರುವ ವಯಿಕಡವ್ ಆನಮರಿ ರಸ್ತೆಯಲ್ಲಿ ಯಾತ್ರಿಕರಿಗೆ ಈ ನಯನ ಮನೋಹರವಾದ ದೃಶ್ಯವನ್ನು ಹಾಗು ಮಖಾಮನ್ನು ಕಾಣಬಹುದು.

*ಯಮನ್'ನಿಂದ 600 ವರ್ಷಗಳ ಹಿಂದೆ ಒಂದು ಸಂಘವಾಗಿ ಇಸ್ಲಾಮಿಕ ಪ್ರಬೋಧನೆಯಾರ್ಥ ಭಾರತಕ್ಕೆ ತಲುಪಿದವರು.*
ಕಲ್ಲಿಕೋಟೆಯಿಂದ ಮಲಬಾತ ದಾರಿಯಾಗಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ 4 ಜನರು ನಿಲಂಬೂರ್'ನ ಹತ್ತಿರದ ವಯಿಕಡವ್ ನಾಡುಕಾಣಿಯಲ್ಲಿ ವಫಾತ್ತ್ ಆದ್ದರು ಎಂದಾಗಿದೆ ಚರಿತ್ರೆ.

ಅಸೌಖ್ಯದಿಂದಾಗಿದೆ ಎಂದೂ, ಕಾಡಾನೆಗಳ ಆಕ್ರಮಣ ದಿಂದಾಗಿದೆ ಎಂದೂ, ಶತ್ರುಗಳೊಂದಿಗೆ ಹೋರಾಡಿಯಾಗಿದೆ ಎಂದು, ಇವರಿಗೆ ಮರಣ ಸಂಭವಿಸಿರುವುದು ಎಂದು ಹೇಳಲಾಗುತ್ತದೆ.

ಇವರಲ್ಲಿ *ಶೈಖ್ ಮುಹಮ್ಮದ್ ಸ್ವಾಲಿಹ್ (ರ)* ರವರ ಮಖ್ಬರಯಾಗಿದೆ ಹೆದ್ದಾರಿಯ ಬದಿಯಲ್ಲಿ ನೆಲೆಗೊಳ್ಳುತ್ತಿರುವುದು.

ಕಲ್ಲು ಬಂಡೆಗಳ ಎಡೆಯಿಂದ ಹರಿಯುತ್ತಿರುವ ಜಲಧಾರೆಯ ಹತ್ತಿರದ ವನದೊಳಗೆ ಒಂದು ಆಶ್ರಯ ಕೇಂದ್ರವಾಗಿದೆ ಇದು.

ಮಹಾನರುಗಳ ಸಹಯಾತ್ರಿಗಳಾಗಿದ್ದ ಮೂರು ಮಹಾತ್ಮರುಗಳ ಖಬರ್'ಗಳು ಇದೇ ಕಾಡುಗಳ ಒಳಗೆ ಎರಡು ಜಾಗಗಳಲ್ಲಿದೆ.

ಮಹಾತ್ಮರಾದ ಮಡವೂರ್ ಸಿ.ಎಂ. ವಲಿಯುಲ್ಲಾಹಿ (ರ) ಈ ಮಖ್ಬರಗಳ ಪರಿಸರದಲ್ಲಿ ಏಕಾಂತ ವಾಸವಾಗಿ ಇಬಾದತ್ತ್'ನಲ್ಲಿ ತಲ್ಲೀನರಾಗಿದ್ದರು. ಎಂದು ಚರಿತ್ರೆ ಇದೆ.
ಮಖಾಮಿನ ಪರಿಪಾಲಕರಾದ "ಹೈದ್ರೂಕ" ಎಂಬವರ ತಂದೆಯವರಿಗೆ ಈ ಮಖ್ಬರದ ಪರಿಸರದಿಂದ ಲಭಿಸಿದ ತಾಮ್ರದ ಫಲಕಗಳಿಂದಾಗಿದೆ ಮಹಾನರುಗಳ ಹೆಸರು ಲಭಿಸುವುದು.

ವಯಿಕಡವ್'ನಿಂದ ಊಟಿಗೆ ಹೋಗುವವರು, ಮರಳಿ ಬರುವವರು ಝಿಯಾರತ್ತಿಗಾಗಿ ತುಂಬಾ  ಜನರು ಇಲ್ಲಿ ವಾಹನ ನಿಲ್ಲಿಸುತ್ತಾರೆ.

ಝಿಯಾರತ್ತ್ ಮಾಡಿ ಮರಳುವಾಗ ಕಾಣಿಕೆ ಡಬ್ಬಿಯಲ್ಲಿ ನೇರ್ಚೆ ಹಾಕುವುದು ರೂಢಿಯಾಗಿದೆ ಇಲ್ಲಿ.

 ಪ್ರಕೃತಿ ಮನೋಹರವಾದ ನೀಲಗಿರಿ ಮಲೆಗಳ ಮದ್ಯೆವಿರುವ ಈ ವನ ಪಾಧೆಯಲ್ಲಿರುವ ದಿನನಿತ್ಯದ ದೃಶ್ಯವಾಗಿದೆ ಇದು.

ವರ್ಷಗಳ ಮೊದಲು ಮಂಬಾಡ್ ಪ್ರದೇಶದ ಕೆಲವು "ಜೂದ" ಯಾತ್ರಿಕರಾದ 'ಆಶಯ' ದಿಕ್ಕಾರಿಗಳಾದ ದುಷ್ಟರು ('ಅ'ಸಲಫಿಗಳು) ಈ ಮಖ್ಬರವನ್ನು ಅರ್ಧರಾತ್ರಿಯಲ್ಲಿ ನೆಲಸಮಗೊಳಿಸಲು ಶ್ರಮಿಸಿರುವುದು, ಅಂದು ಅಸಾಧಾರಣವಾದ ಪ್ರೇರಣಾ ನಿಮಿತ್ತ "ನಿಲಂಬೂರ್ ಎಸ್.ಐ. ಮುಂಜಾನೆ ಈ ಮಖ್ಬರದ ಪರಿಸರ ಪರಿಶೋಧನೆ ಮಾಡಿರುವುದು, ಹಾಗೂ ಆಧಾರ ಸಹಿತ ಆರೋಪಿಗಳನ್ನು ಬಂದಿಸಿರುವುದು, ವಾರ್ತೆಗಳಲ್ಲಿ "ಅತ್ಯಾಚಾರ" ಆರೋಪಿಗಳ ರೀತಿಯಲ್ಲಿ ಇವರ ನೀಚ ಕೆಲಸ ಪ್ರಸಾರಗೊಂಡಿತ್ತು.
ಸಮೂಹದಲ್ಲಿ "ಮುಖ ಕೆಟ್ಟ" ಈ ಘಟನೆ ಕೆಲವೇ ವರ್ಷಗಳ ಹಿಂದೆಯಾಗಿತ್ತು. ಇದೆ ವಹ್ಹಾಬಿಗಳಿಗೆ
ಈಗ ಮೂರನೇ ಸಲವು ಮಖ್ಬರವನ್ನು ನೆಲಸಮಗೊಳ್ಳಿಸಲು ಪರಿಶ್ರಮಿಸಲಾಯಿತು.

*"ಅಲ್ಲಾಹನ ಔಲಿಯಾಗಳೊಂದಿಗೂ, ಶುಹದಾಗಳೊಂದಿಗೂ, ಸರ್ವರು ಬಹುಮಾನಿಸುವ ಸ್ಮಾರಕಗಳೊಂದಿಗೂ ಇಷ್ಟು ಅಧಿಕ ದ್ವೇಷವಿರಲು ವಹ್ಹಾಬಿಗಳನ್ನು ಪ್ರೇರಿಪಿಸುವ ಚಿಂತನೆಗಳು ಏನಾದರೂ ಆಗಲಿ....*
ಅಲ್ಲಾಹನ ಮಹಾತ್ಮರೊಂದಿಗೆ ಯುದ್ಧ ಘೋಷಣೆ ಮಾಡಿದವರೊಂದಿಗೆ ಅಲ್ಲಾಹು ಕೂಡಾ ಯುದ್ಧ ಪ್ರಸ್ತಾಪ ಮಾಡಿದ ವಿಷಯ ನಮಗೆ ಗೊತ್ತಿರುವುದಾಗಿದೆಯಲ್ಲವೇ..

ಅಲ್ಲಾಹು ಅವರ ಮದದ್ ನೀಡಿ ನಮ್ಮನ್ನು ಅನುಗ್ರಹಿಸಲಿ ಆಮೀನ್..

*ಆ ಮಹಾನುಭಾವರುಗಳಿಗೆ ನಮಗೊಂದು 'ಫಾತಿಹಾ' ಓದಿ ಹದ್'ಯ ಮಾಡೋಣ..✋*

ಮಖ್ಬರಗಳನ್ನು ದ್ವಂಸ ಮಾಡುವ ಇಂತಹ ದುಷ್ಟ  ಚಟುವಟಿಗಳು ಮನಸ್ಸಲ್ಲಿ ಉದ್ಭವಿಸುವುದು ವಹ್ಹಾಬಿಗಳ ವಿಶ್ವಾಸಗಳು ತಪ್ಪಾಗಿಸುದರಿಂದಲೇ ಆಗಿದೆ *ವಹ್ಹಾಬಿಗಳೊಂದಿಗೆ ಸಂಬಂಧ ಸ್ಥಾಪಿಸುವುದೋ, ಅವರನ್ನು ಕಂಡಾಗ ನಗುವುದೊ, ಅವರ ಆಚರಣೆಗಳ ವೇಳೆಗಳಲ್ಲಿ ಅವರ ಜೊತೆ ಭಾಗವಹಿಸುವುದೊ, ಬೇಡ ಎಂದು ನಮ್ಮ ಉಲಮಾಗಳು ಹಾಗು ಪೂರ್ವಕಾಲದ ಮಹಾತ್ಮರು ಹೇಳಲು ಕಾರಣ ಕೂಡ ಇದೆ ಆಗಿದೆ.*

ಯಾವುದೇ ರೀತಿಯಲ್ಲೂ ವಹ್ಹಾಬಿಗಳಂತಹ ನೂತನವಾದಿಗಳೊಂದಿಗೆ ಸಂಬಂಧ ಇರಿಸದಿರಲು, ಅಲ್ಲಾಹು ನಮಗೆಲ್ಲರಿಗೂ ಗಟ್ಟಿಯಾದ ಈಮಾನ್ ನೀಡಿ ಅನುಗ್ರಹಿಸಲಿ ಆಮೀನ್.

✍ಕನ್ನಡಕ್ಕೆ ಗಫೂರ್ ಬಾಯಾರ್
🔷🔷🔷🔷🔷🔷🔷🔷🔷🔷



No comments:

Post a Comment