Monday, December 4, 2017

*ಝಿಯಾರತ್ತ್ ಕೇಂದ್ರ​*
      ✳4⃣7⃣✳
ಕುಂಬೋಳ್ ಸದಾತ್ತುಗಳು
------------------------
*​ಸಯ್ಯಿದ್ ಮುಹಮ್ಮದ್ ಫಝಲ್ ಪೂಕೋಯ ತಂಙಳ್ (ಖ:ಸಿ) ಕುನ್ನಿಲ್ ಕುಂಬೋಳ್, ಕಾಸರಗೋಡು.​*
     👉ಭಾಗ-02
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
✳✳✳✳✳✳✳✳✳

ಕೇರಳ ಹಾಗೂ ಕರ್ನಾಟಕದ ಸದಾತ್ತುಗಳು, ವಿದ್ವಾಂಸರು ಫಝಲ್ ಪೂಕೋಯ ತಂಙಳ್ (ಖ:ಸಿ)ರವರ ಹತ್ತಿರ ಅಭೇದ್ಯವಾದ ಸಂಬಂಧವಿರುವರಾಗಿದ್ದರು. ಪಂಡಿತ ಶಿರೋಮಣಿ ಸೂರ್ಯ ತೇಜಸ್ಸು ಶಂಸುಲ್ ಉಲಮಾ ಈ.ಕೆ. ಉಸ್ತಾದವರು (ಖ:ಸಿ), ಪಾಪ್ಪಂಕೋಯ ಹೌಸ್'ನ ನಿತ್ಯ ಸಂದರ್ಶಕರಲ್ಲಿ ಒಬ್ಬರಾಗಿದ್ದರು.
ಫಝಲ್ ಪೂಕೋಯ ತಂಙಳ್ (ಖ:ಸಿ)ರವರ, ಜೀವನ ಕಾಲದಲ್ಲಿಯೂ, ವಫಾತ್ತಿನ ನಂತರವೂ ಹಲವಾರು ಮಹಾತ್ಮರಾದ ಪಂಡಿತ ಶ್ರೇಷ್ಠರು ಕುಂಬೋಳ್'ಗೆ ತಲುಪಿರುತ್ತಾರೆ.

 ಮಹಾನರಿಗೆ 9 ಮಕ್ಕಳಿದ್ದಾರೆ.
5 ಪುತ್ರರು, 4 ಪುತ್ರಿಯರು. ಓರ್ವ ಪುತ್ರಿ ಬಾಲ್ಯದಲ್ಲೇ ಮರಣಗೊಂಡಿದ್ದರು.
ಮಹಾನರ 5 ಗಂಡು ಮಕ್ಕಳು ದೀನಿ ಸೇವನೆ ರಂಗದಲ್ಲಿ ನಿರತರಾಗಿದ್ದಾರೆ.

(ಹಿರಿಯ ಮಗನಾದ ಸಯ್ಯಿದ್ ಅಟ್ಟಕೋಯ ತಂಙಳರು ಅತ್ಯುತ್ತಮ ಭಾಷಣಕಾರರೂ, ಆಲ್ ಇಂಡಿಯಾ ಸುನ್ನೀ ಎಜ್ಯುಕೇಷನ್ ಬೋರ್ಡಿನ ಉಪಾಧ್ಯಕ್ಷರೂ, ಸ'ಅದಿಯಾ ಒಳಗೊಂಡ ಹಲವಾರು ಸ್ಥಾಪನೆಯ ಅಧ್ಯಕ್ಷರು, ಹಾಗೂ ಎ.ಪಿ. ಉಸ್ತಾದರ ನಾಯಕತ್ವದ  ಸಮಸ್ತ ಕೆಂದ್ರ ಮುಶಾವರ ಸದಸ್ಯರೂ ಆಗಿದ್ದಾರೆ.

ಎರಡನೆಯ ಪುತ್ರರಾದ ಸಯ್ಯಿದ್ ಕುಂಞಿ ಕೋಯ ತಂಙಳ್ ರವರು ತನ್ನ ತಂದೆಯಯವರ ಅದೇ ಮಾರ್ಗದಲ್ಲಿ ಸಂಚರಿಸಿ ವಲಿಯ್ಯ್ ಆಗಿದ್ದಾರೆ. ಅವರನ್ನು ದಿನನಿತ್ಯ ನೂರಾರು ಜನರು ಸಂದರ್ಶಿಸುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳೊಂದಿಗೆ  ಬರುತ್ತಾರೆ. ತಂಙಳ್ ರವರ ಆತ್ಮೀಯ ಚಿಕತ್ಸೆಯ ಮೂಲಕ ಸಾವಿರಾರು ಜನರಿಗೆ ಆಶ್ವಾಸನೆಯು ಲಭಿಸಿರುತ್ತದೆ.
ಈಗಲೂ ಅಲ್ಲಿ ಜನ ನಿಬಿಡವಾಗಿದೆ.

ಮೂರನೆಯ ಪುತ್ರರಾದ ಸಯ್ಯಿದ್ ಅಲಿ ತಂಙಳ್ ರವರು ಹಲವಾರು ಮಹಲ್ಲ್'ನ ಗೌರವರಾಧ್ಯಕ್ಷರಾಗಿದ್ದಾರೆ.
ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.

ನಾಲ್ಕನೆಯ ಮಗನಾದ ಸಯ್ಯಿದ್ ಸಿರಾಜುದ್ದೀನ್ ತಂಙಳರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.

ಕಿರಿಯ ಮಗನಾದ ಸಯ್ಯಿದ್ ಜಅಫರ್ ತಂಙಳ್ ರವರು ನಾಡುಗಳಲ್ಲಿ ಜಲಾಲಿಯ್ಯ ರಾತ್ತಿಬ್'ಗೆ ನೇತೃತ್ವ ನೀಡುತ್ತಾ ದೀನೀ ಪ್ರಭೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೀಗೆ ಎಲ್ಲಾ ಪುತ್ರರು ದೀನಿ ರಂಗದಲ್ಲಿಯೂ, ಸಾಮಾಜಿಕ ಸೇವಾ ರಂಗದಲ್ಲಿಯೂ ತಲ್ಲೀನರಾಗಿದ್ದಾರೆ.)

ಹಿಜರಿ ವರ್ಷ 1392ರ ದುಲ್'ಹಜ್ಜ್ 27ಕ್ಕೆ ತನ್ನ 67'ನೇ ಪ್ರಾಯದಲ್ಲಿ ಸಯ್ಯಿದ್ ಫಝಲ್ ಪೂಕೋಯ ತಂಙಳ್ (ಖ:ಸಿ)ರವರು ಕುಂಬೋಳ್'ನಲ್ಲಿ ಇಹಲೋಕ ವಾಸ ತ್ಯಜಿಸಿದರು. ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಹೂನ್....

ಪಾಪ್ಪಂ ಕೋಯ ನಗರ್, ಬದ್ರಿಯ ಜುಮಾ ಮಸ್ಜಿದ್'ನ ಸಮೀಪ "ಮುಘಲ್ ಶಿಲ್ಪಕಲಾ ಮಾದರಿಯಲ್ಲಿ ನಿರ್ಮಿಸಿದ ಮಖಾಂ ಶರೀಫ್'ನಲ್ಲಿ ಮಹಾನವರು ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ.

'ಕುಂಬೋಳ್' ಎಂಬುದು ಕೇವಲ ಸ್ಥಳ ನಾಮ ಎಂಬುದಕ್ಕಿಂತ ಬದಲು  ಸಾವಿರಾರು ಬಡ,ಅನಾಥ ನಿರ್ಗತಿಕರ ಆಶಾ ಕೇಂದ್ರವೆಂದು ವಿಶ್ಲೇಷಿಸಬಹುದು.
ಇದರ ಮುಂಚೂಣಿಯಲ್ಲಿ ಕುಂಬೋಳ್ ಸದಾತ್ತುಗಳು ಸದಾ ನೆರಳಿನ ಹಾಗೆ ಇರುತ್ತಾರೆ.

*ಯಾ.. ಅಲ್ಲಾಹ್.. ದೀರ್ಘಕಾಲ ಪರಿಶುದ್ಧ ಇಸ್ಲಾಮಿಗೂ, ನಾಡಿಗೂ ನೇತ್ರತ್ವ ನೀಡಲು ನೀನು ಅವರಿಗೆ ಹಿಮ್ಮತ್ ನೀಡಿ ಅನುಗ್ರಹಿಸು... ಆಮೀನ್.*

💎ಮುಗಿಯಿತು.
ಅನುವಾದ:
✍ಗಫೂರ್ ಬಾಯಾರ್
♻♻♻♻♻♻♻♻♻

No comments:

Post a Comment