*ಝಿಯಾರತ್ತ್ ಕೇಂದ್ರ*
4⃣8⃣
👉ಭಾಗ-01
------------------------ *ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ). ನಾಗೂರ್ ಶರೀಫ್, ನಾಗಪಟ್ಟಣಂ. ತಮಿಳುನಾಡು*
〰〰〰〰〰〰〰〰〰
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌
*ಹಿಜರಿ ವರ್ಷ 910 ಜಮಾದುಲ್ ಆಖಿರ್ 10 ಶುಕ್ರವಾರ ದಿನದ ರಾತ್ರಿಯ ಸಮಯದಲ್ಲಿ "ಖುತ್ತುಬುಲ್ ಅಖ್ತಾಬ್ ಅಲ್ ಫರ್ದುಲ್ ಮಜೀದ್ ಅಶೈಖ್ ಅಸ್ಸಯ್ಯಿದ್ ಅಬ್ದುಲ್ ಖಾದಿರ್ ಶಾಹುಲ್ ಹಮೀದ್ ಮಿರಾನ್ ಮುಹ್ಯಿದ್ದೀನ್ ಗಂಜುಸವಾಈ ಗಂಜು ಬಖ್ಶ್ (ಖ:ಸಿ) ರವರು ಜನಿಸಿದರು.*
ವಿಶ್ವ ನೇತಾರರಾದ 'ಸಯ್ಯಿದುಲ್ ವುಜೂದ್' ಮುಹಮ್ಮದ್ ರಸೂಲುಲ್ಲಾಹಿ ﷺ ರವರಿಗೆ ತಲುಪುವ ಮಹನೀಯ ಪರಂಪರೆಯ ಒಂದು ಕೊಂಡಿಯಾಗಿದ್ದಾರೆ ಮಹಾನುಭಾವರು.
ಖುರೈಶಿ ಮನೆತನದಲ್ಲಿ ಹಾಶಿಮ್ ವಂಶದ ಸದಸ್ಯರಾಗಿ ಗೌಸುಲ್ ಅಹ್'ಳಮ್ ಮುಹ್ಯಿದ್ದೀನ್ ಅಬ್ದುಲ್ ಖಾದಿರ್ ಜಿಲಾನಿ (ರ) ಯುವರ ಸಂತಾನ ಪರಂಪರೆಯಲ್ಲಿ 11ನೇಯ ಪೌತ್ರರಾಗಿದ್ದಾರೆ ಮಹಾನವರು.
ತಂದೆಯವರು ಅಶೈಖ್ ಅಸ್ಸಯ್ಯಿದ್ ಅಬೂ ಯೂಸುಫ್ ಹಸ್ಸನ್ ಖುದ್ಸಿ (ರ). ಹಾಗೂ
ಅಸ್ಸಯ್ಯಿದ್ ಹಮಿಮುದ್ದೀನ್ (ರ) ಅವರ ಪುತ್ರಿಯಾದ ಉಮ್ಮ್ ಫಾತಿಮಾ (ರ). ಎಂಬ
ಸದ್ಘುಣರಾದ ಮಾತಾಪಿತರಿಂದ ಉತ್ತರ ಪ್ರದೇಶದ ಅಲಹಬಾದ್'ನ ಹತ್ತಿರ "ಮಾಣಿಕ್ಯಪ್ಪುರ್" ಎಂಬ ಊರಿನಲ್ಲಿ ಮಹಾನವರ ಜನನವಾಯಿತು.
ಮಹಾನರ ಜನನದ ಮೊದಲು ಸಯ್ಯಿದ್ ಯೂಸುಫ್ ಎಂಬ ಹೆಸರಿರುವ ಒಬ್ಬ ಮಗು ಅವರಿಗಿತ್ತು. ಬಾಲ್ಯಕಾಲದಲ್ಲೇ ಆ ಮಗು ಮರಣಗೊಂಡಿತು.
ತಮ್ಮ ಪ್ರೀತಿಯ ಮಗನ ಅಗಲುವಿಕೆಯಿಂದ ಮನ ನೊಂದಿರುವಾಗ ಆ ತಾಯಿಗೆ "ಒಂದು ಅಶರೀರ ವಾಣಿ ಕೇಳಿಸಿತು, ಓ ನನ್ನ ಅಡಿಯಾಳುಗಳೇ..! ನಾನು ದಯಾಪೂರ್ವ ನಿಮಗೆ ರಹ್ಮತ್ ನೀಡಿದೆನಾದರೂ ನನ್ನ ನೀತಿ ಪ್ರಕಾರ ಅದನ್ನು ಮರಳಿ ಪಡೆದಿರುವೆನು.
ಅದರಿಂದ್ದ ನೀವು ಕ್ಷಮಿಸಿರಿ..! ಅದಕ್ಕಿಂತ ಉತ್ತಮವಾದ ಓರ್ವ ಸಂತಾನವನ್ನು ನಾನು ನಿಮಗೆ ಕರುಣಿಸುವೆನು. ಆ ಮಗು ಜಗತ್ತಿನ ಗೌಸ್ ಆಗಿರುವರು.
ಇದನ್ನು ಕೇಳಿದ ದಂಪತಿಗಳು ಅತ್ಯಧಿಕ ಸಂತೋಷಗೊಂಡು, ಆ ಕ್ಷಣವೇ ಅಲ್ಲಾಹನನ್ನು ಸ್ತುತಿಸಿದರು.
*ತಾಯಿಯ ಗರ್ಭದಲ್ಲೇ ಪವಾಡಗಳು (ಕರಾಮತ್ತುಗಳು)*
ಗರ್ಭಸ್ಥ ಶಿಶು ಆಗಿರುವಾಗ ತಂದೆ ಹಸ್ಸನ್ ಖುದ್'ಸಿ (ಖ:ಸಿ) ರವರಿಗೆ ಮಾರಕವಾದ ಖಾಯಿಲೆ ತಗುಲಿ ದೈನಂದಿನ ರೋಗ ಅಧಿಕಗೊಂಡು ಚಿಕಿತ್ಸೆ ಫಲ ಶೂನ್ಯವಾಯಿತು. ಈ ವೇಳೆಯಲ್ಲಿ ಶೈತಾನ್ ವೇಷ ಬದಲಿಸಿ ಬಂದು ಅಲ್ಲಿ ನೆರೆದಿರುವ ಜನರು ಕೇಳುವ ರೀತಿಯಲ್ಲಿ ತಂದೆಯವರ ಬಳಿ ಶೈತಾನ್ ಹೇಳಿದನು; ನಿಮ್ಮ ಪತ್ನಿ ಗರ್ಭ ಧರಿಸಿದ ಮಗುವಿನ ಲಕ್ಷಣ ದೋಷದಿಂದಾಗಿದೆ ಈ ಮಾರಕ ರೋಗ ನಿಮಗೆ ತಗುಲಿರುವುದು. ಇದು ಕೇಳಿ ಅತೀವ ದುಃಖದಲ್ಲಾದ ಪ್ರಿಯ ತಾಯಿಯ ಬಳಿ ಗರ್ಭಸ್ಥ ಶಿಶು ಕರೆದು ಹೇಳಿತು; ತಾಯಿಯವರೇ, ನೀವು ದುಃಖಿಸಬೇಡಿ. ಅಲ್ಲಾಹು ನಿಮ್ಮನ್ನು ಸಹಾಯ ಮಾಡುವನು, ತಂದೆಯವರ ರೋಗವು ಕೂಡಲೇ ವಾಸಿವಾಗಬಹುದು. ಈ ವಿವರವನ್ನು ಮಹದಿಯವರು ತನ್ನ ಪತಿಗೆ ತಿಳಿಸಿದಾಗ ಅವರು ಇನ್ನಷ್ಟು ಸಂತೋಷಭರಿತರಾದರು.
ಅಂದೇ ಆ ತಂದೆಯವರ ಖಾಯಿಲೆಯು ಸಂಪೂರ್ಣವಾಗಿ ವಾಸಿಯಾಯಿತು.
೨. ಗರ್ಭಸ್ಥ ಶಿಶುವಿಗೆ 7 ತಿಂಗಳು ಪ್ರಾಯವಾದಾಗ ಊರಿಡೀ ಬರಗಾಲ ಆವರಿಸಿತು. ಇದರಿಂದ್ದ 3 ದಿವಸಗಳ ಕಾಲ ಮಾತಾಪಿತರಿಗೆ ಹಾಗೂ ಅಲ್ಲಿನ ನಾಗರಿಕರಿಗೆ ಆಹಾರ ಲಭಿಸದಾಯಿತು.
ಆಗ ಗರ್ಭಸ್ಥ ಶಿಶು ಗರ್ಭದಿಂದ ತನ್ನ ಪ್ರೀತಿಯ ತಾಯಿಯನ್ನು ಕರೆದು ಹೇಳಿತು.
ಓ.. ಪ್ರಿಯ ಉಮ್ಮಾ.. ನೀವು ಆಹಾರದ ಪಾತ್ರವನ್ನು ಒಲೆಯಲ್ಲಿ ಇಡಿರಿ. ಅಲ್ಲಾಹನ ಔದಾರ್ಯದಿಂದ ನಿಮಗೆ ಆಹಾರ ಲಭಿಸುವುದು.
ಮಗುವಿನ ಈ ಮಾತು ಆ ತಕ್ಷಣವೇ ಸತ್ಯವಾಯಿತು. ಪಾತ್ರೆಯಲ್ಲಿ ತುಂಬಾನೇ ಆಹಾರಗಳು. ಆ ಕುಟುಂಬದ ಹಸಿವು ನೀಗುವವರೆಗೂ ಅವರು ಭಕ್ಷಿಸಿದರು. ಸ್ವಲ್ಪವೂ ಕಡಿಮೆಯಾಗಿಲ್ಲ. ನಂತರ ಅಲ್ಲಿಯ ಊರಿನವರೆಲ್ಲರೂ ಈ ಆಹಾರದಿಂದ ಹಸಿವು ನೀಗಿಸಿದರು. ಅವರು ಅಲ್ಲಾಹನನ್ನು ಸ್ತುತಿಸಿದರು.
🔹ಮುಂದುವರಿಯುವುದು.
✍ ಗಫೂರ್ ಬಾಯಾರ್
🌿🌿🌿🌿🌿🌿🌿🌿🌿

No comments:
Post a Comment