*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘 *ಪ್ರವಾದಿಯವರ ಬಹುಪತ್ನಿತ್ವ 🏘🏘🏘 ಸತ್ಯಾಂಶವೇನು...?* 🏘🏘🏘🏘🏘🏘🏘🏘🏘🏘🏘🏘🏘
*﷽*
*ಸಂಚಿಕೆ* 0⃣4⃣
💥 ಮತ್ತೊಂದು ಪತ್ನಿಯಾದ ಉಮ್ಮು ಸಲ್ಮಾ(ರ.ಅ) ನಾಲ್ಕು ಮಕ್ಕಳಿರುವ ಓರ್ವೆ ವಿಧವೆಯಾಗಿದ್ದರು. ತನ್ನ ಅನುಚರನಾದ ಪತಿಯೂ ಇಸ್ಲಾಮಿಗಾಗಿ ಮರಣಹೊಂದಿದಾಗ ಉಮ್ಮು ಸಲಮಾರವರನ್ನು ವಿವಾಹವಾಗಿ ಆ ಕುಟುಂಬದ ಸಂಪೂರ್ಣವಾದ ಸಂರಕ್ಷಣೆಯನ್ನು ಪ್ರವಾದಿಯವರೇ ವಹಿಸಿಕೊಂಡರು. ಪ್ರವಾದಿಯವರ ವಫಾತಿನ ನಂತರ ಬಹಳ ವರ್ಷ ಉಮ್ಮು ಸಲಮ (ರ.ಅ)ರವರು ಜೀವಿಸಿದ್ದಾರೆ.
💥 ಕ್ರಿ.ಶ 626 ರಲ್ಲಿ ನಡೆದ ಬನೂ ಮುಸ್ತಲಿಖ್ ಯುದ್ದದಲ್ಲಿ ಶತ್ರುಪಾಲಯದಿಂದ ಬಹಳಷ್ಟು ಜನರನ್ನು ಸೆರೆಯಾಳುಖಳಾಗಿ ಹಿಡಿಯಳಾಗಿತ್ತು. ಅದರಲ್ಲಿ ಗೋತ್ರದ ನಾಯಕನಾದ ಹಾರಿಸ್ ಹಾಗೂ ಮಗಳಾದ ಜುವೈರಿಯ್ಯಾರವರೂ ಇದ್ದರು. ಜುವೈರಿಯ್ಯಾರವರ ಪತಿ ಮರಣ ಹೊಂದಿದ್ದರು. ತನ್ನ ವಿಧವೆಯಾದ ಮಗಳನ್ನು ವಿವಾಹವಾಗಬೇಕೆಂದು ಹಾರಿಸ್ ಪ್ರವಾದಿಯವರೊಂದಿಗೆ ಅಪೇಕ್ಷಿಸಿದರು. ಆ ಅಪೇಕ್ಷೆಯನ್ನು ಸ್ವೀಕರಿಸಿ ಪ್ರವಾದಿಯವರು ಜುವೈರಿಯ್ಯಾರವರನ್ನು ವಿವಾಹವಾದರು. ಆ ವಿವಾಹದ ಕಾರಣದಿಂದ ಗೋತ್ರದವರೆಲ್ಲರೂ ಸೆರೆಮನೆಯಿಂದ ವಿಮೋಚಿತರಾಗಿ ಇಸ್ಲಾಂ ಸ್ವೀಕರಿಸಿದರು.
*(ಮುಂದುವರೆಯುವುದು)*
🌻⭐⭐⭐☀☀☀✨
No comments:
Post a Comment