Monday, December 4, 2017

*ಝಿಯಾರತ್ತ್ ಕೇಂದ್ರ​*
      4⃣8⃣
     👉ಭಾಗ-03
------------------------
*ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ) ನಾಗೂರ್ ಶರೀಫ್, ನಾಗಪಟ್ಟಣಂ. ತಮಿಳುನಾಡು.*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

*ಅಲ್ಲಾಹ್* ಎಂಬ ಪರಮ ಗುರಿ ಪ್ರಾಪ್ತಿ ಗಳಿಸುವ ಚಿಂತೆ ಮಾತ್ರವಾಗಿತ್ತು.

ಆ ಸಾತ್ವಿಕ ಜೀವನ ಎಲ್ಲರಿಗೂ ಮಾದರಿಯೋಗ್ಯವಾಗಿತ್ತು. ಇಲಾಹಿಯೆಡೆಗೆ ಇರುವ ಪ್ರಯಾಣಕ್ಕೆ  ಅಡ್ಡಿಪಡಿಸುವವರಿಗೆ ಅವರು ಕನಿಷ್ಟ ಬೆಲೆ ಕೂಡಾ ಕಲ್ಪಿಸುತ್ತಿರಲಿಲ್ಲ. ಪ್ರಾಪ್ತರಾದ ಗುರುವನ್ನು ಹುಡುಕುತ್ತಾ ಮೈಲುಗಳು ದಾಟಿಯಾದರೂ ಕಂಡು ಹಿಡಿಯುತ್ತಿದ್ದರು.
ಹಿಜರಿ ವರ್ಷ 928ರ ನಂತರ ಶೈಖನ್ನು ಹುಡುಕಿಕೊಂಡು ಹೊರಟಿರುವ ಶಾಹುಲ್ ಹಮೀದ್ (ಖ:ಸಿ) ರವರು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ.ಆಗಲೇ ಅಧ್ಯಾತ್ಮಿಕತೆಯ ಉನ್ನತ ಸ್ಥಾನಕ್ಕೆರಿದ ಮಹಾನರಾಗಿದ್ದರು.

(ಜ್ಞಾನಿಗಳು ಎಂದು ಸ್ವತಃ ತನ್ನನ್ನು ತಾನೇ ಹೇಳಿಕೊಂಡು ನಡೆಯುವ ಅಲ್ಪಜ್ಞಾನಿಗಳು ಈ ಸಾತ್ವಿಕ ಜೀವನವನ್ನು ಕಲಿಯುತ್ತಿರುತ್ತಿದ್ದರೆ ಅವರ ಜೀವನವು ಕೂಡಾ ಧನ್ಯವಾಗುತ್ತಿತ್ತು.)

ಕಣ್ಣು ಮುಚ್ಚಿ ಕತ್ತಲು ಮಾಡುವವರು ಸ್ವಾರ್ಥವನ್ನು ಬಿಟ್ಟು ಒಳ್ಳೆಯ ಮನಸ್ಸಿನೊಂದಿಗೆ ಚಿಂತಿಸಬೇಕು.
ಪರಿವರ್ತನೆಗೆ ತಯಾರಾಗಬೇಕು. ಎಂದು
ಆ ಯಾತ್ರೆಯಲ್ಲಿ ಜೊತೆಗಿದ್ದ ಸಹಯಾತ್ರಿಕರಾಗಿದ್ದ ಬಾಲಿಗ್ ಊರಿನವರಾದ "ಮುಈನುದ್ದೀನ್' (ಖ:ಸಿ) ಎಂಬವರೊಂದಿಗೆ ಶೈಖವರು ಉಪದೇಶಿಸಿದರು.

ಅಲ್ಲಾಹನ ಭಯ ಮತ್ತು ಭಕ್ತಿ ಯಾವಾಗಲೂ ಜೀವನದಲ್ಲಿ ಅಳವಡಿಸಬೇಕಾದ ಕಾರ್ಯವಾಗಿದೆ.
ಇಸ್ಲಾಮಿನಲ್ಲಿ 2 ಭಾಗಗಳು‌ ಮಾತ್ರ ಇರುವುದು, ಅದು ಬಾಹ್ಯ ಮತ್ತು ಆಂತರಿಕ ಇವೆರಡೂ ಸಂಶುದ್ಧಿಯಾಗಿರಬೇಕು. ಹೀಗೆ ಶರೀಅತ್ತ್ ಮತ್ತು ತ್ವರೀಖತ್ತ್ ಸಮನ್ವಯಪಡುವುದಾಗಿದೆ ಪರಿಪೂರ್ಣ ದೀನುಲ್ ಇಸ್ಲಾಂ ಎಂಬ ಅರಿವು ವಿಶ್ವಕ್ಕೆ ಕಲಿಸಿದರು.

ಮಹಾನುಭಾವರು ದೀರ್ಘವಾದ ಯಾತ್ರೆ ಮುಂದುವರಿಸಿ, ಮಧ್ಯಪ್ರದೇಶ'ದ ಗ್ವಾಲಿಯರ್'ನ ಹಲವಾರು ಶಿಷ್ಯಂದಿರುಗಳ ಆತ್ಮೀಯ ಕೇಂದ್ರವೂ ಹಾಗು ತನ್ನ ಆತ್ಮೀಯ ಗುರುವೂ ಆದ "ಆಶೈಖ್ ಅಸ್ಸಯ್ಯಿದ್ ಮುಹಮ್ಮದುಲ್ ಗೌಸ್ (ಖ:ಸಿ) ರವರ ಸನ್ನಿದಿಗೆ ತಲುಪಿ ಬೈಅತ್ತ್ ಗೈದರು.
ನಂತರದ ಒಂದೊಂದು ನಿಮಿಷಗಳೂ ಅವರ್ಣಿಯಮಯವಾಗಿತು.
ಆತ್ಮೀಯ ಜ್ಞಾನದ ಜೊತೆ, ಮುಖದಲ್ಲಿ ಮಂದಹಾಸವು, ಪರಮಾನಂದವು ಕಾಣುವ ಅದ್ಬುತ ನಿಮಿಷಗಲಾಗಿತ್ತು.

ಶಿಷ್ಯನ ಪ್ರತಿಭೆಯನ್ನು ಲಕ್ಷ್ಯ ಸ್ಥಾನಕ್ಕೆ ತಲುಪಿಸಲು ಗುರುವಿಗೆ ಅನಾಯಾಸವಾಯಿತು.
ಆ ಆತ್ಮೀಯ ಹೂದೋಟದಲ್ಲಿ ಸುಮಾರು 10 ವರ್ಷದ ಜೀವನದಿಂದ ಅಲ್ಲಾಹನನ್ನು ತಿಳಿಯುವ ರೀತಿಯಲ್ಲಿ ತಿಳಿದು, ಗುರಿ ಮುಟ್ಟಿದ ಶಿಷ್ಯನನ್ನು ತನ್ನ ಖಿಲಾಫತ್ತ್ ನೀಡಿ ಅನುಗ್ರಹಿಸಿದರು.

ತದನಂತರ 400ರಷ್ಟು ಫಕೀರುಗಳೊಂದಿಗೆ ಶೈಖ್ ಶಾಹುಲ್ ಹಮೀದ್ (ಖ:ಸಿ) ರವರು ಒಳ್ಳದ ಮನಸ್ಸಿನಿಂದ ತನ್ನ ಊರಿಗೆ ಹೊರಟರು.
ಊರಿಗೆ ತಲುಪಿ ಪ್ರಿಯ ಮಾತಾಪಿತರುಗಳನ್ನು ಕಂಡು ಅನುಗ್ರಹವನ್ನು ಪಡೆದರು.

ನಂತರ ಹಜ್ಜ್ ಕರ್ಮಕ್ಕಾಗಿ ಹರಂ ಶರೀಫ್'ಗೆ ಹೋದರು. ಸುಮಾರು 7 ವರ್ಷದವರೆಗೆ ಅಲ್ಲಿ ತಂಗಿದರು. ಆಮೇಲೆ ಹಡಗು ಮೂಲಕ  ಕಣ್ಣೂರು, ಕಲ್ಲಿಕೋಟೆ, ಪೊನ್ನಾನಿ, ಮಾಲ್'ದ್ವೀಪ್, ಶ್ರೀಲಂಕಾ ಮೊದಲಾದ ಹಲವು ಸ್ಥಳಗಳಲ್ಲಿ ಯಾತ್ರೆಕೈಗೊಂಡು ಕೊನೆಗೆ ನಾಗವೃಕ್ಷಗಳ ನಾಡಾದ "ನಾಗೂರ್" ಎಂಬ ಊರಿಗೆ ತಲುಪಿ ಅಲ್ಲಿ ವಾಸ್ತವ್ಯ ಹೂಡ್ಡಿದರು.

ಆ ಊರಿಗೆ ಆಗಮಿಸಿದ ಸುಂದರನಾದ ಯುವಕನನ್ನು ಕಂಡು  ವಿವಾಹ ಆಲೋಚನೆಯೊಂದಿಗೆ  ಬಂದಂತಹ ಕೆಲವು ಮಾತಾಪಿತರುಗಳ ಹತ್ತಿರ, "ನನ್ನ ಹೃದಯದಲ್ಲಿ ಅಲ್ಲಾಹನಿಗೆ ಮಾತ್ರವೇ ಸ್ಥಾನವಿರುವುದು" ಎಂದು ಹೇಳಿ ಅವರನ್ನು ಹಿಂದಿರುಗಿಸುತ್ತಿದ್ದರು.

*ಅದ್ಬುತ ಬಾಲಕ ಯೂಸುಫ್ ಜನಿಸುವರು*

 ಪಾಕಿಸ್ತಾನ್'ನ ಲಾಹೋರ್ ನಗರದ ಅತೀ ದೊಡ್ಡ ಸಂಪತ್ತಿನ ಒಡೆಯರು  ಮಾರ್ಗದರ್ಶಿಯೂ ಆಗಿದ್ದ ನೂರುದ್ದೀನ್ ಮುಫ್ತಿ (ಖ:ಸಿ) ಎಂಬವರು.
ಹಲವಾರು ಸುಖ ಸೌಕರ್ಯಗಳು ಇದ್ದರೂ, ಮಧ್ಯ ವಯಸಾದರೂ ಕೂಡಾ ಮಕ್ಕಳು ಇಲ್ಲದಿದ್ದರಿಂದ್ದ ಅತೀವ ದುಃಖದಲ್ಲಿದ್ದರು. ಹಲವಾರು ಮಹಾತ್ಮರುಗಳಿಗೆ ಸೇವೆ ಮಾಡಿ ದುವಾ ಮಾಡಿಸುತ್ತಿದ್ದರು. ನಿಮಗೆ ಸಂತಾನ ಭಾಗ್ಯವಿಲ್ಲ ಎಂದು ಕೆಲವು ಮಹಾತ್ಮರು ಹೇಳಿದ್ದರು. ಈ ಸಂದರ್ಭದಲ್ಲಾಗಿತು ಶಾಹುಲ್ ಹಮೀದ್ (ಖ:ಸಿ) ರವರ ಹೆಸರು ಮತ್ತು ಪ್ರಸಿದ್ದಿಯನ್ನು ಅರಿತ ಅವರು ಒಮ್ಮೆ ಮಹಾನವರನ್ನು ಸಮೀಪಿಸಿ ಅವರ ಪಾದಗಳಲ್ಲಿ ಮುಖವನ್ನು ಒತ್ತಿಟ್ಟು ಕಣ್ಣೀರಿನೊಂದಿಗೆ ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸಲು ಆವಶ್ಯಪಟ್ಟರು.
ಸಾತ್ವಿಕರಾದ ನೂರುದ್ದೀನ್ ಮುಫ್ತಿ (ಖ:ಸಿ)ರವರ ಮನೋವೇದನೆಯನ್ನು ಮನಗಂಡ ಮಹಾನರು ಅವರನ್ನು ಸಂತೈಸಿದರು.
ನಂತರ ಅವರ ಮತ್ತು ಪತ್ನಿಯ ಕುಲ ಮಹಿಮೆಯನ್ನು, ಪರಿಶುದ್ಧಿಯನ್ನು ತಿಳಿದ ಮಹಾನರು ತನ್ನ ಪವಾಡದಿಂದ ಅವರಿಗೆ ಒಬ್ಬ ಸಂತಾನನನ್ನು ಕರುಣಿಸಲು ಪ್ರಾರ್ಥಿಸಲು ಸಮ್ಮತಿಸಿದರು.

ಚಿಂತಾಮಗ್ನರಾಗಿ ಅಲ್ಪ ಸಮಯ ತಲೆ ತಗ್ಗಿಸಿ ಕುಳಿತ ನಂತರ ಮುಫ್ತಿ (ಖ:ಸಿ)ಯವರೊಂದಿಗೆ ಮಹಾನರು ವೀಳ್ಯದೆಲೆ ಮತ್ತು ಅಡಿಕೆಯನ್ನು ಕೊಂಡು ಬರಲು ಹೇಳಿದರು. ಮಹಾನುಭಾವರು ಅಲ್ಲಾಹನ ನಾಮ ಉಚ್ಛರಿಸಿ ಅದನ್ನು ಬಾಯಿಗೆ ಹಾಕಿದರು.
ಸ್ವಲ್ಪ ಸಮಯದ ವರೆಗೆ ಧ್ಯಾನದಲ್ಲಿ ಕುಳಿತ ನಂತರ ತನ್ನ ಬಾಯಿಯಲ್ಲಿರುವ ವೀಳ್ಯದೆಲೆ ಮತ್ತು ಅಡಿಕೆಯನ್ನು ತೆಗೆದು ನೂರುದ್ದೀನ್ ಮುಫ್ತಿ (ಖ:ಸಿ)ಯವರಿಗೆ ಕೊಟ್ಟು, ಪತ್ನಿಯ ಬಾಯಿಗೆ ಹಾಕಿ ಕೂಡಲೇ ನುಂಗಲು ನಿರ್ದೇಶಿಸಿದರು. ಮಹದಿ ಹಾಗೆ ಮಾಡಿದರು.

ನಂತರ..

🔹ಮುಂದುವರಿಯುವುದು.

✍ಗಫೂರ್ ಬಾಯಾರ್
✳✳✳✳✳✳✳✳✳


No comments:

Post a Comment