ಝಿಯಾರತ್ತ್ ಕೇಂದ್ರ
▶ 16 ◀
➖➖➖➖➖➖➖
*ಖಾಝಿ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ (ಪೊಸೋಟ್ ತಂಗಳ್)* (ಖ:ಸಿ) ಪೊಸೋಟು, ಮಂಜೇಶ್ವರ
➖➖➖➖➖➖➖
✍ _ಗಫೂರ್ ಬಾಯಾರ್_
🔹🔹🔺🔺🔸🔸🔻🔻
🌷ಪೊಸೋಟ್ ತಂಗಳ್ ಎಂದು ಅರಿಯಲ್ಪಡುವ ಮಹಾನರು
ಆತ್ಮೀಯ ರಂಗದಲ್ಲಿ ಜ್ವಲಿಸುವ ನಕ್ಷತ್ರವಾದ ಪಂಡಿತ ಶ್ರೇಷ್ಠರಾಗಿದ್ದರು.
🌷 ತನ್ನ ಕಾರ್ಯಚಟುವಟಿಕೆಗಳಿಂದಲೂ, ಮಂದಸ್ಮಿತವಾದ ವದನದಿಂದಲು, ಜನರನ್ನು ಆಕರ್ಷಿಸುತ್ತಿದರು.
26.09.2015 ರಂದು ಶನಿವಾರ ಮುಂಜಾನೆ ಕಲ್ಲಿಕೋಟ್ಟೆ ಆಸ್ವತ್ರೆಯಲ್ಲಿ ವಫಾತ್ತ್ ಆದ ಮಹಾನರಾದ ಪೊಸೋಟ್ ತಂಗಳರು (ಖ:ಸಿ).
🌷ಪೊಸೋಟು ಜುಮಾಅತ್ತ್ ಮಸೀದಿಯಲ್ಲಿ ಮುದರ್ರಿಸ್ ಆಗಿ ಕೆಲಸ ಆರಂಭಿಸಿದರಿಂದಲೇ ತಂಗಳರು ಕಾಸರಗೋಡು ಹಾಗು ದಕ್ಷಿಣ ಕನ್ನಡದವರಿಗೆ ಪ್ರಿಯರಾಗಿದ್ದರು. ಮುಂದುವರಿದು ಕಾಸರಗೋಡು ಮತ್ತು ಮಂಗಳೂರು ಪರಿಸರಗಳಲ್ಲಿ ಇಸ್ಲಾಮಿಕ ಮುನ್ನಡೆಗಳಿಗೆ ಪ್ರಧಾನ ಪಾತ್ರವಹಿಸಿದರು.
🌷 21/09/1961( ಮೊಹರಂ 24) ರಂದು ಮಲಪ್ಪುರಂ ಜಿಲ್ಲೆಯ ಕಡಲುಂಡಿಯ ತರವಾಡ್ ಮನೆಯಲ್ಲಾಗಿತು ಜನನ.
🌷ತಂದೆಯವರು: ಅಹ್ಮದುಲ್ ಬುಖಾರಿ.
ತಾಯಿಯವರು: ತೃಕರಿಪ್ಪುರ್
ಶಾಹುಲ್ ಹಮೀದ್ ತಂಗಳರವರ ಹಿರಿಯ ಮಗಳಾದ ಫಾತಿಮಾ ಇಂಬಿಚ್ಚಿ ಬೀವಿ.
🌷ಕರುವನ್ತುರುತ್ತಿ ಮದ್ರಸದಲ್ಲಿ ಮೂರುವರೆ ವಯಸ್ಸಿನಿಂದ ತಂದೆಯವರಿಂದ ದೀನೀ ವಿಧ್ಯಾಭ್ಯಾಸ ಆರಂಭಿಸಿದರು. ತಂದೆಯವರು ಮನೆಗೆ ಅಧ್ಯಾಪಕರನ್ನು ಕರೆದು ಇಂಗ್ಲಿಷ್, ಲೆಕ್ಕ, ಮಲಯಾಳಂ, ಹಾಗು ಇನ್ನಿತರ ವಿಷಯಗಳನ್ನೆಲ್ಲ ಬಾಲ್ಯದಲ್ಲೇ ಕಲಿಸಿದರು.
🌷 *ಅಲ್ ಫಿಯ ಮತ್ತು ಫತ್ಹುಲ್ ಮುಈನ್ ಗ್ರಂಥದವರೆಗೆ ತಂದೆಯರಿಂದಲೇ ಕಲಿತುಕೊಂಡಿರುವುದು. ತದನಂತರ
ಸೂಫಿಯಾದ ಪಂಡಿತ ಶ್ರೇಷ್ಠರಾದ ಬಿರಾನ್ ಕೋಯ ಮುಸ್ಲಿಯಾರ್ (ರ) ರವರ ಕೊಡಂಬುಝದಲ್ಲಿರುವ ದರ್ಸ್ ನಲ್ಲಿ ಸೇರಿದರು.11ನೇ ವಯಸ್ಸಿನಲ್ಲಿ ಆರಂಭಿಸಿದ ಅಲ್ಲಿಯ ದರ್ಸ್ ಜೀವನ 8 ವರ್ಷಗಳ ಕಟಲ ಮುಂದುವರಿಯಿತು. ಬಹಳಷ್ಟು ಸೂಕ್ಷ್ಮತೆಯ ಜೀವನದ ಒಡೆಯನಾದ ಬಿರಾನ್ ಕೋಯ (ರ) ರವರ ಶಿಕ್ಷಣ ಪೊಸೋಟು ತಂಗಳವರನ್ನು ಆತ್ಮೀಯವಾಗಿ ಉನ್ನತಿಗೆ ತಲುಪಿಸಿತು.
1981 ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವೆಲ್ಲೂರ್ ಬಾಖಿಯತ್ತಿಗೆ ಹೋದರು.
🌷ಬಾಖವಿ ಬಿರುದ ಲಭಿಸಿದ ನಂತರ ಮಹಾನವರು ಪಡಿಕೊಟ್ಟುಮ್ಪಡಿ ಹಾಗು ಆಕೋಡ್ ಎಂಬಿ ಸ್ಥಳಗಳಲ್ಲಿ 2 ವರ್ಷ ದರ್ಸ್ ನಡೆಸಿದರು.
ಈ ಸಂದರ್ಭದಲ್ಲಾಗಿದೆ ತಾಜುಲ್ ಉಲಮಾ (ರ) ರವರು ಖಾಝಿಯಾದ *ಪೊಸೋಟು ದರ್ಸ್* ಗೆ ಬರಲಿಕ್ಕಾಗಿ ಕರೆದರು. ಈ ಕ್ಷಣ ಒಲ್ಲದ ಮನಸ್ಸಿನಿಂದ ಸ್ವೀಕರಿಸಿ ಬಂದ ಮಹಾನವರು ಸುಮಾರು 12 ವರ್ಷ ಕಾಲ ಪೊಸೋಟು ಮುದರಿಸರಾಗಿ ಸೇವೆ ನಿರ್ವಹಿಸಿದರು. ಈ ಕಾರಣದಿಂದಾಗಿ ಉಮರುಲ್ ಫಾರೂಖ್ ತಂಗಳ್ ಎಂಬವರು *ಪೊಸೋಟು ತಂಗಳ್* ಎಂಬ ಹೆಸರಿನಲ್ಲಿ ಪ್ರಸಿದ್ದರಾದರು.
🌷ಪೊಸೋಟು ಮಸೀದಿಯಲ್ಲಿಯ ದರ್ಸ್ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತಾದರೂ ಸಂದರ್ಶಕರ ಬಾಹುಲ್ಯ ನಿಮಿತ್ತ ಮಹಲ್ಲಿನ ಸೇವನೆ ಕೊನೆಗೊಳ್ಳಸಿ
ಹೊಸಂಗಡಿ ಎಂಬ ಸ್ಥಳದ ಸಮೀಪ *ಬುಖಾರಿ ಕಾಂಪೌಂಡ್* ಕೇಂದ್ರೀಕರಿಸಿ 1997ರಲ್ಲಿ *ಮಳ್ಹರ್ ನೂರಿಲ್ ಇಸ್ಲಾಮಿತ್ತಅಲೀಮಿ* ಎಂಬ ವಿದ್ಯಾ ಸ್ಥಾಪನೆಯನ್ನು ಆರಂಭಿಸಿದರು.
🌷25 ಮಕ್ಕಳಿಗೆ ಅರ್ಹವಾದ ಸೌಕರ್ಯವಿರುವ 1500 ಚದರಅಡಿ ವಿಸ್ತೀರ್ಣವಿರುವ ಒಂದು ಮಸೀದಿ ದರ್ಸ್ ನಿಂದ ಆರಂಭಿಸಿದ ಸ್ಥಾಪನೆಯಿಂದ ಇಂದು 12 ಕ್ಕಿಂತ ಹೆಚ್ಚು ಸ್ಥಾಪನೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲ್ಲದೆ ಮಳ್ಹರಿನ ಅದೀನದಲ್ಲಿ ಹತ್ತಿರದ ಪ್ರದೇಶಗಳಲ್ಲಿ ಹಲವು ಮಸೀದಿ ಮತ್ತು ದರ್ಸುಗಳು ಕಾರ್ಯಾಚರಿಸುತ್ತಿದೆ.
🌷ಪೊಸೋಟು ದರ್ಸ್ ನಲ್ಲಿರುವಾಗ ಅಲ್ಲಿನ ಯುವಕರನ್ನು ಸಂಘಟಿಸಿ ಸಂಘಟನೆ ಕಟ್ಟಿ ಬೆಳಸಿ ಸಂಘಟನಾ ರಂಗಕ್ಕೆ ಬಂದ ಸಯ್ಯಿದರು ನಂತರ SYS ನಲ್ಲಿ ಕಾರ್ಯ ನಿರತರಾದರು.
2001 ರಲ್ಲಿ SYS ನ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದರು. 9 ವರ್ಷ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರು.
2010 ರಲ್ಲಿ ಸಮಸ್ತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಮಹಾನರು ನಂತರ ಸಮಸ್ತ ಖಚಾಂಜಿಯಾಗಿ ವಫಾತ್ತಿನವರೆಗೆ ಕಾರ್ಯಾಚರಿಸುತ್ತಿದ್ದರು.
🌷 ಸಮಸ್ತ ಕಾಸರಗೋಡು ಜಿಲ್ಲಾ ಅಧ್ಯಕ್ಷ, ಸೆಕ್ರೇಟರಿ, ಸ್ಥಾನಗಳಲ್ಲಿ ಇದ್ದ ಮಹಾನವರು ಕೇಂದ್ರ ಮುಶಾವರ ಸದಸ್ಯ ಕೂಡ ಆಗಿದ್ದರು. ಜಿಲ್ಲೆಯ 40 ರಷ್ಟು ಮಹಲ್ಲುಗಳಲ್ಲಿ ಖಾಝಿ ಇಲ್ಲದ ಮಹಲ್ಲುಗಳು ಬೈಅತ್ತ್ ಗಾಗಿ ಮಹಾನರನ್ನು ಸಮೀಪಿಸಿದಾಗ ಬೇಡಡುಕ-ಕುಟ್ಟಿಕೋಲ್ ಹಾಗು ಮಂಜೇಶ್ವರ- ಕುಂಬ್ಳೆ ಸಂಯುಕ್ತ ಜಮಾಅತ್ತ್ ಖಾಝಿ ಸ್ಥಾನ ವಹಿಸಿದರು.
ನಂತರ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ತ್ ಖಾಝಿಯಾಗಿ ನೇಮಕಗೊಂಡರು.
🌷ಆತ್ಮೀಯ ಚಿಕಿತ್ಸಾ ರಂಗದಲ್ಲಿಯೂ ಶಕ್ತವಾದ ಸಾನಿದ್ಯವಾಗಿದ್ದ ಮಹಾನರು ಹಲವಾರು ಆತ್ಮೀಯ ಸದಸ್ಸುಗಳಿಗೆ ನೇತೃತ್ವ ಕೊಟ್ಟರು.
🌷ಮಳ್ಹರ್ ನಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಬಹಳ ಪ್ರಸಿದ್ಧವಾಗಿದೆ. ಕೊನೆಯದಾಗಿ ಕಳೆದ ವರ್ಷದ ರಮಳಾನ್ 21ರ ಸ್ವಲಾತ್ತಿಗೆ ನೇತೃತ್ವ ಕೊಟ್ಟ ಕೆಲ ಸಮಯದ ನಂತರ ಯಾವುದೋ ಒಂದು ರೋಗಗ್ರಸ್ತರಾಗಿ ಕಲ್ಲಿಕೋಟೆಯ ಮನೆಯಲ್ಲಿ ವಿಶ್ರಾಮದಲ್ಲಿ ಇದ್ದರು.
🌷ಅಹ್ಮದುಲ್ ಬುಖಾರಿ (ರ) ಯವರ ಮಕ್ಕಳಲ್ಲಿ ಹಿರಿಯರಾಗಿದ್ದರು ಪೊಸೋಟು ತಂಗಳ್ ರವರು.
ಮ'ದೀನ್ ಅಕಾಡಮಿಯ ಸಾರಥಿ ಎಂಬ ನೆಲೆಯಲ್ಲಿ ಪ್ರಸಿದ್ದರಾದ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ, ಸಯ್ಯಿದತ್ತ್ ಮೈಮೂನ ಬೀವಿ, ಸಯ್ಯದ್ ಇಸ್ಮಾಯಿಲ್ ಬುಖಾರಿ, ಸಯ್ಯದ್ ಅಬ್ದುಲ್ಲಾ ಬುಖಾರಿ, ಸಯ್ಯಿದತ್ತ್ ರೈಹಾನತ್ತ್, ಸಯ್ಯಿದತ್ತ್ ಉಮ್ಮು ಹಬೀಬ, ಸಯ್ಯದ್ ಶಿಹಾಬುದ್ದೀನ್ ಬುಖಾರಿ ಎಂಬವರು ಸಹೋದರ, ಸಹೋದರಿಯರು.
🌷 ವಿದ್ಯಾಭ್ಯಾಸ ಮುಗಿಯುವ ಮೊದಲೇ ಕೌಟುಂಬಿಕ ಜೀವನಕ್ಕೆ ಹೆಜ್ಜೆ ಇಟ್ಟರು.
ತಾಜುಲ್ ಉಲಮಾ ಉಳ್ಳಾಲ ತಂಗಳರ (ಖ:ಸಿ) ಮಗಳ ಮಗನಾದ ಚೆರುಕುಂಞಕೋಯ ತಂಗಳವರ ಎರಡನೆಯ ಮಗಳು ಉಮ್ಮುಲ್ ಹನಿಯ್ಯ ಯಾಗಿದ್ದಾರೆ ಮಡದಿ.
ನಾಲ್ಕು ಮಕ್ಕಳು, ಹಿರಿಯ ಮಗನಾದ ಸಯ್ಯದ್ ಅಬ್ದುರ್ ರಹ್ಮಾನ್ ಶಹಿರ್ ತಂಗಳ್ ಲತೀಫಿಯವರು ಮಳ್ಹರ್ ಸ್ಥಾಪನೆಗೆ ಈಗ ನೇತೃತ್ವ ಕೊಡುತ್ತಾ ಇದ್ದಾರೆ. ಇನ್ನುಳಿದ 3 ಹೆಣ್ಣು ಮಕ್ಕಳಾಗಿದ್ದಾರೆ.
ಮಡಕರ ಸುಹೈಲ್ ಅಸ್ಸಖಾಫ್ ಸಖಾಫಿಯವರ ಪತ್ನಿ ಸಯ್ಯಿದತ್ತ್ ರಫಿದ ಬೀವಿ, ಪೊಟ್ಟಕಾಡ್ ಸಯ್ಯಿದ್ ಫಸಲ್ ಸಅದಿ ಜಿಫ್ರಿಯವರ ಸಹಧರ್ಮಿಣಿ ಸಯ್ಯಿದತ್ತ್ ನಫೀಖ ಬೀವಿ, ಹಾಗು ಮಳ್ಹರಿನ ಪ್ರಧಾನ ಮುದರಿಸ್ ಕೂಡ ಆದ ಸಯ್ಯಿದ್ ಜಲಾಲುದ್ದೀನ್ ಬುಖಾರಿಯವರ ಮಡದಿ ಸಯ್ಯಿದತ್ತ್ ಶಮೀಮ ಬೀವಿ.
🌷ದೀನಿ ಸೇವನೆ ರಂಗದಲ್ಲಿ ಸಯ್ಯಿದರು ಸರಿಸಾಟಿ ಇಲ್ಲದ ಪ್ರತಿಭೆಯಾಗಿದ್ದವರು. ಮತಪಂಡಿತ, ಪ್ರಭಾಷಣೆಗಾರ, ಆತ್ಮೀಯ ನಾಯಕರ, ಭೂ ಶಾಸ್ತ್ರ, ವೈದ್ಯ ಶಾಸ್ತ್ರ, ಮೊದಲಾದ ರಂಗದಲ್ಲಿ ಜ್ಞಾನಿ ಆಗಿದ್ದರು.
ಮಹಾನರು ಕಳೆದ ವರ್ಷ ದುಲ್ಹಜ್ಜ್ 13 (ಅಯ್ಯಾಮುತ್ತಶ್ರಿಖ್) ದಿನದಂದು ಆ ಪ್ರಶೋಭಿತವಾದ ಮಂದಹಾಸ ಮುಖದ ಒಡಯರಾದ ಆ ದಿವ್ಯ ಬೆಳಕು ನಂದಿ ಹೋಯಿತು.
(ಇನ್ನಾಲಿಲ್ಲಾಹ್..)
🌷ಮಹಾನರು ಮಂಜೇಶ್ವರಕ್ಕೆ ಹತ್ತಿರ ಮಳ್ಹರ್ ಕಂಪೌಂಡಿನಲ್ಲಿ ಅಂತ್ಯ ವಿಶ್ರಮದಲ್ಲಿದ್ದಾರೆ. ಅವರ ಮಖ್ಬರ ನೆಲೆಗೊಳ್ಳುವ ಸ್ಥಳವು ಅತೀ ದೊಡ್ಡ ಝಿಯಾರತ್ತ್ ಕೇಂದ್ರವಾಗಿ ಮಾರ್ಪಟ್ಟಿದೆ.
🌷ಮಹಾನರ ಬರಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಜೀವನ ಸಂತೋಷಕರವಾಗಿಸಲಿ..
ಆಮೀನ್....
🌷✍ ಗಫೂರ್ ಬಾಯಾರ್
🌷🌷🌷🌷🌷🌷🌷

No comments:
Post a Comment