Saturday, November 4, 2017

ಝಿಯಾರತ್ತ್ ಕೇಂದ್ರ
         👉�13👈
➖➖➖➖➖➖➖➖
*ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ಪರವಣ್ಣ.. ತಿರೂರ್, ಮಲಪ್ಪುರಂ*
➿➿➿➿➿➿➿➿

✍ ಗಫೂರ್ ಬಾಯಾರ್

ಬುಖಾರಿ ಪರಂಪರೆಯ ಸಾದಾತ್ತುಗಳಲ್ಲಿ ಮೊದಲನೇಯದಾಗಿ ಕೇರಳಕ್ಕೆ ಆಗಮಿಸಿದ ಮಹಾನರಾದ ಅಸ್ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ (ಖ:ಸಿ) ಅವರ ಮಗನಾದ ಇಸ್ಮಾಯಿಲ್ ಬುಖಾರಿ (ಖ:ಸ)(ಚೆ0ಬಿಟ್ಟ ಪಳ್ಳಿ, ಕೊಚ್ಚಿ)

ಅವರ 2ನೇಯ ಮಗನಾಗಿದ್ದಾರೆ ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ)..

ಹಿಜರಿ ವರ್ಷ ಸುಮಾರು 998ರಲ್ಲಿ ಜನಿಸಿದರು..
ತಂದೆಯ ಹಾಗೆ ಅಘಾತ ಪಾಂಡಿತ್ಯದ ರುವಾರಿಯಾದ ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ)ರವರು ಇಸ್ಲಾಂ ಮತ ಧರ್ಮ ಪ್ರಭೋಧನಾ ರಂಗದಲ್ಲಿ ಕರ್ಮ ನಿರತರಾದ ವ್ಯಕ್ತಿತ್ವವಾಗಿದ್ದರು.

ಕಣ್ಣೂರು ವಳಪಟ್ಟಣ ಎಂಬ ಊರಿನಿಂದ ಇಸ್ಲಾಂ ಮತ ಪ್ರಭೋದನೆಗಾಗಿ ಮಲ ಪ್ಪುರಂ ಜಿಲ್ಲೆಯ ಪರವಣ್ಣ ಎಂಬಸ್ಥಳಕ್ಕೆ ತಲುಪಿದರು. ಅಲ್ಲಿ ಮತ ಪ್ರಭೋದನೆ ಕಾರ್ಯದಲ್ಲಿ ನಿರತರಾದರು. ಪರವಣ್ಣಎಂಬ ಸ್ಥಳವಾಗಿತ್ತು ಬಹುಮಾನ್ಯರ ದೀನಿ ದಅವಾ ಕೇಂದ್ರ.

ಇವರ ಪರಂಪರೆಯಾಗಿದೆ ಕೇರಳದಲ್ಲಿ ಇರುವ *ಬುಖಾರಿ ಸಾದಾತ್ತ್* ವಂಶದವರು.

  ಪ್ರಮುಖ ಪಂಡಿತರು, ಸೂಫಿವರ್ಯರು ಹಾಗು ದೀನಿ ದಾಇಯು ಆದ ಮಹಾನವರು ಹಿಜರಿ ವರ್ಷ 1077 ರಲ್ಲಿ ವಫಾತಾದರು.

ಪರವಣ್ಣ ಜುಮಾ ಮಸೀದಿಯ ಸಮೀಪವಾಗಿದೆ ಮಹಾನವರು ಅಂತ್ಯ ವಿಶ್ರಮ ಗೊಳ್ಳುತ್ತಿರುವುದು.

  ಮಹಾನವರಿಗೆ ಸಯ್ಯದ್ ಅಬ್ದು ರಹ್ಮಾನ್ ಬುಖಾರಿ (ಖ:ಸಿ), ಸಯ್ಯದ್ ಇಸ್ಮಾಯಿಲ್ ಬುಖಾರಿ (ಖ:ಸಿ) ಎಂಬ ಸಂತಾನಗಳು ಇದ್ದರು.

ಸಯ್ಯದ್ ಅಬ್ದುರಹ್ಮಾನ್ ಬುಖಾರಿ (ಖ:ಸಿ) ರವರು ಹಜ್ಜ್ ಯಾತ್ರೆ ವೇಳೆಯಲ್ಲಿ ಮದೀನದಲ್ಲಿ ವಫಾತ್ತಾದರು.

ಸಯ್ಯದ್ ಇಸ್ಮಾಯಿಲ್ ಬುಖಾರಿ (ಖ:ಸಿ)ರವರು ಕರುವನ್ ತಿರುತ್ತಿ ಎಂಬ ಸ್ಥಳದಲ್ಲಾಗಿದೆ ಅಂತ್ಯ ವಿಶ್ರಮ ಗೊಳ್ಳುತ್ತಿರುವುದು.

🕌ಮಹಾತ್ಮಾರುಗಳ ಮಖ್ಬರಗಳನ್ನು  ಝಿಯಾರತ್ತ್ ಮಾಡಲು, ಚರಿತ್ರೆಯನ್ನು ಅರಿಯಲು ಅಲ್ಲಾಹು ನಮನ್ನು ಅನುಗ್ರಹಿಸಲಿ ಆಮೀನ್..

✍ _ಗಫೂರ್ ಬಾಯಾರ್_
💎💎💎💎💎💎💎💎

No comments:

Post a Comment