👉ಎಸ್ ಕೆ ಇಸ್ಲಾಮಿಯ ಮೂರನೇ ಪ್ರಶ್ನೆ (ನಮ್ಮ ಸಲಪಿ ಗಳು ಇದೇ ಪ್ರಶ್ನೆ ಕೇಳುತ್ತಾರೆ)
➡❓ಹಿಂದುಗಳ ದೇವಸ್ಥಾನಗಳ ಬಳಿ ಭಿಕ್ಷೆ ಬೇಡುತ್ತಿದ್ದ, ಕೂದಲು ಜಡೆ ಕಟ್ಟಿದ ಓಚಿರ ಕುಪ್ಪ ಸ್ವಾಮಿ ಎಂಬ ಹಿಂದು ಭಿಕ್ಷುಕ ಸತ್ತಾಗ ಆತನನ್ನು ಎಪಿಗಳು ಸಮಾಧಿ ಮಾಡಿ ದರ್ಗಾ ಕಟ್ಟಿ ಉರೂಸ್ ಮಾಡಿ ಹಣ ಸಂಪಾದನೆ ಮಾಡುತ್ತಾರೆ ಎಂದು.
ಅವರು ವಲಿಯ್ಯ್ ಎಂದು ಹೇಳಲು ನಿಮ್ಮಿಂದ ಸಾಧ್ಯವೇ...??❓
👉ಥೇಟ್ ಪಕ್ಕಾ ಸಲಪಿ ಗಳಂತೆ ಒಬ್ಬ ವಲಿಯ್ಯ್ ರನ್ನು ಹಿಯಾಳಿಸುತ್ತಾರೆ....❗
♻👉 ಆದರೆ ಇವರು ಯಾರು ಎಂದು ಇವರ ಊರಿನವರೇ ಹೊರತಂದ ಪುಸ್ತಕದಲ್ಲಿ
ಇವರ ಚರಿತ್ರೆ ಇದೆ.
➡👉ತಮಿಳುನಾಡು ರಾಜ್ಯದ
ತಿರುನಲ್ ವೇಲಿ ಜಿಲ್ಲೆಯ ಕಡಯನೂರು ಪಟ್ಟಣದ ಹ್ರದಯ ಭಾಗದಲ್ಲಿರುವ ದೊಡ್ಡ ಜುಮಾ ಮಸೀದಿಯ ಪರಿಸರದಲ್ಲಿ ವಾಸಿಸುವ
'ರಾವುತ್ತರ್' ಕುಟುಂಬದ ಮಹಾ ಮೈದೀನ್ ರಾವತ್ತರ ಪುತ್ರ ಅಬ್ದುರ್ರಹ್ಮಾನ್ ರಾವತ್ತರ್ ಮತ್ತು ಎರೆಶೋಲಿ ಕುಟುಂಬದ ಮೀರಾ ಬೀವಿಯ ಮೊದಲ ಸಂತಾನ ವಾಗಿ ಕ್ರಿಶ್ತಶಕ 1894ರಲ್ಲಿ ಜನಿಸಿದರು.
♻👉 ತಂದೆ ಪ್ರಖ್ಯಾತ ಬಟ್ಟೆ ವ್ಯಾಪಾರಿ ಯಾಗಿದ್ದು ಒಳ್ಳೆಯ ಭಕ್ತರಾಗಿದ್ದರು
ಆಲಿಮ್ ಗಳನ್ನು ಅತ್ಯಧಿಕ ಆದರಿಸುವ ವ್ಯಕ್ತಿ ಕೂಡ ಆಗಿದ್ದರು.
👉ಗೋತ್ರ ನಾಮ ಗಂಡು ಮಕ್ಕಳಿಗೆ ಹಾಕುವ ಪದ್ದತಿ ಚಾಲ್ತಿಯಲ್ಲಿರುವುದರಿಂದ
ಮಗುವಿಗೆ 'ಮುಹಮ್ಮದ್ ಮಸ್ ಊದ್ ರಾವತ್ತರ್ ಎಂದು ನಾಮಕರಣ ಮಾಡಲಾಯಿತು.
♻👉☝ಈ ವ್ಯಕ್ತಿಯಾಗಿದ್ದಾರೆ ಈ ಎಸ್ ಕೆ ಇಸ್ಲಾಮಿಗಳು ಮತ್ತು ಸಲಪಿಗಳು ಪರಿಹಾಸ್ಯ ಮಾಡುವ ..
'ಓಚಿರ ಉಪ್ಪಾಪ'
👉ಇಂತಹ ಪೂರ್ಣ ಚರಿತ್ರೆ ಇರುವ ಒಬ್ಬ ಮುಸ್ಲಿಮನನ್ನು ಖಾಲಿ ಎಪಿ ಉಸ್ತಾದರನ್ನು ಅವರು ಮಖಾಮ್ ಉದ್ಘಾಟನೆಗೆ ಕರೆದರು ಎಂಬ ಒಂದೇ ಕಾರಣಕ್ಕಾಗಿಇವರು ಸ್ವಾಮಿ ಅಂತ ಕರೆದು ಕಾಫಿರ್ ಮಾಡುವುದು.
👉ನಹೂಝ್ ಬಿಲ್ಲಾ👈
♻👉ಈ ಮುಹಮ್ಮದ್ ಮಸ್ ಊದ್ ರಾವತ್ತರ್ ಎಂಬ ಹೆಸರಿನ ಓಚಿರ ಉಪ್ಪಾಪ
ಅತ್ಯಂತ ಸೂಕ್ಷಮತೆಯಿಂದ ಜೀವಿಸಿ ಅಪಾರವಾಗಿ ಅಲ್ಲಾಹನ ಸ್ಮರಣೆಯಲ್ಲೇ ಕಾಲ ಕಳೆದು ವಲಿಯ್ಯ್ ಆಗಿ ಜದ್ಬ್ ನ ಅವಸ್ಥೆಗೆ ತಲುಪಿದ್ದರು.
ಹಾಗಾಗಿ ದುನಿಯಾದ ಯಾವುದೇ ಚಿಂತೆ ಇಲ್ಲದೆ ಕೇವಲ ಅಲ್ಲಾಹನ ಸ್ಮರಣೆಯಲ್ಲೇ ದಿನ ಸುಡುತ್ತಿದ್ದರು
ಯಾವುದೇ ಅವುಲಿಯಾಗಳು ಅವರು ಅಲ್ಲಾಹನನ್ನು ಪ್ರೀತಿಸಿ ಪ್ರೀತಿಸಿ ಕೊನೆಗೆ ಅವರ ಹ್ರದಯದಲ್ಲಿ ಅಲ್ಲಾಹನ ಸ್ಮರಣೆ ಮಾತ್ರ
ಜಾಗ ಹಿಡಿದಾಗ ಅವರಲ್ಲಿ ಕೆಲವರು ತಮ್ಮ ಸ್ಥಿಮಿತ ಕಳೆದು ಕೊಳ್ಳುತ್ತಾರೆ
ನೋಡುವವರಿಗೆ ಅವರೊಬ್ಬ ಹುಚ್ಚರಂತೆ ಕಾಣುತ್ತಾರೆ
ಆದರೆ ಅಲ್ಲಾಹನ ರಾಯಲ್ (ಸ) ಹೇಳುತ್ತಾರೆ
ಉಡುಪುಗಳು ಸುಕ್ಕುಗಟ್ಟಿದ ಕೂದಲು ಜಡೆ ಕಟ್ಟಿದ ಅದೆಷ್ಟೋ ದಾಸರು ಇದ್ದಾರೆ.
ಅವರು ಅಲ್ಲಾಹನಲ್ಲಿ ಶಪಥ ಹಾಕಿ ಕೇಳಿದರೆ
ಅಲ್ಲಾಹು ಅವರ ದುಆ ಕ್ಕೆ ಆ ನಿಮಿಷ ಉತ್ತರ ನೀಡುವನು.(ಹದೀಸ್)
👉ಅಂದರೆ ಕೆಲವೊಂದು ಅವ್ ಲಿಯಾಗಳು
ಜನರ ಕಣ್ಣಿಗೆ ಮತಿಭ್ರಮಣೆ ಹೊಂದಿದವರಂತೆ ಕಂಡರೂ ಅವರು ಅಲ್ಲಾಹನ ಇಷ್ಟ ಭಕ್ತರಾಗಿರುತ್ತಾರೆ.
♻👉ಅಂತಹ ಒಬ್ಬ ಭಕ್ತರಾಗಿದ್ದರು ಈ ಓಚ್ಚರ ಉಪ್ಪಾಪ.
No comments:
Post a Comment