Saturday, November 4, 2017

*ಝಿಯಾರತ್ತ್ ಕೇಂದ್ರ*
       👉 22
〰〰〰〰〰〰〰
ಅಲಿಯ್ಯುಲ್ ಕೂಫಿ ರ.
ಪೆರುಙತ್ತೂರು, ಕಣ್ಣೂರು
〰〰〰〰〰〰〰
✍ ಗಫೂರ್ ಬಾಯಾರು
〰〰〰〰〰〰〰

🕌ಹಿಜರಿ ವರ್ಷ ಆರನೇ ಶತಮಾನದಲ್ಲಿ ಅಂದರೆ 800 ವರ್ಷಗಳ ಮೊದಲು ಕೇರಳಕ್ಕೆ ಆಗಮಿಸಿದ ಆಬಿದು ಮತ್ತು ವಲಿಯ್ಯು ಆಗಿದ್ದರು *ಅಲಿಯ್ಯುಲ್ ಕೂಫಿ ರ.*

ಕೇರಳದ ಕಣ್ಣೂರು ಜಿಲ್ಲೆಯ ತಲೆಶ್ಯೇರಿ, ನಾದಾಪುರಮ್ ಮಾರ್ಗದಲ್ಲಿ ಪೆರುಙತ್ತೂರು ಜುಮಾಅತ್ತ್ ಮಸೀದಿಯ ಪಶ್ಚಿಮ ಭಾಗದಲ್ಲಾಗಿದೆ ಮಖಾಂ ಇರುವುದು.

ಇರಾಖಿನ ಕೂಫಿಯಲ್ಲಾಗಿದೆ ಶೈಖ್ ಅಲಿಯವರ ರ. ರವರ ಜನನ. ಸ್ವತಃ ಊರಿನಿಂದ ಕರಾಮತ್ತಿನ ಮುಖಾಂತರ ಕಡಲಿನಲ್ಲಿ ಈಜಿ ಕೊಂಡಾಗಿದೆ
ಮಹಾನವರು ಭಾರತಕ್ಕೆ ತಲುಪಿರುವುದು. ಪೆರುಙತ್ತೂರಿನ ಪರಿಸರ ಪ್ರದೇಶವಾದ *ಕನಕ ಮಲೆ* ಎಂಬ ಸ್ಥಳದಲ್ಲಾಗಿದೆ ಅವರ ಮೊದಲು ಪ್ರವೇಶ.

ಇಲ್ಲಿ ಒಂದು ಗುಹೆಯಲ್ಲಾಗಿತ್ತು ಅವರ ವಾಸಸ್ಥಳ!.  ಈ ಗುಹೆಯಿಂದ
ಪೆರುಙತ್ತೂರ್ ನದಿಗೆ ಒಂದು
ಸುರಂಗ ಇತ್ತಂತೆ.

ಪೆರುಙತ್ತೂರು ಜುಮಾಅತ್ತ್
ಮಸೀದಿ ಮತ್ತು ಸಮೀಪವಿರುವ ದೊಡ್ಡ ಕೆರೆಯನ್ನು ಮಹಾನವರು ನಿರ್ಮಿಸಿರುದಾಗಿ ಚರಿತ್ರೆ ಇದೆ
ಅಲ್ಲಿರುವ ಮಸೀದಿ ಒಂದು ಅದ್ಬುತವಾಗಿದೆ ನೋಡಲೇ ಬೇಕಾದ ಮಸೀದಿಯಾಗಿದೆ.
ಆ ಮಸೀದಿಗೆ ಹಲವು ವಿಶೇಷತೆಗಳಿವೆ.

ಪೆರುಙತ್ತೂರಿನ ಮಸೀದಿಯ ಅಂಗಣದಲ್ಲೇ ತನ್ನನ್ನು ದಫನ್ ಮಾಡಬೇಕೆಂದೂ, ಅಲ್ಲಿ ಬೇರೆ ಯಾರನ್ನೂ ದಫನ್ ಮಾಡಬಾರದೆಂದು ಆ ಮಹಾನರ ( *ವಸಿಯ್ಯತ್ತ್*) ಅಂತಿಮ ನುಡಿ ಆಗಿದ್ದಂತೆ!.

ಆದರೂ ಈ ನಿರ್ದೇಶದ ವಿರುದ್ಧವಾಗಿ ಪೆರುಙತ್ತೂರು ಖಾಝಿಯವರ ಖಬರನ್ನು ಆ ಮಹಾನವರ ಪಕ್ಕದಲ್ಲೇ ಮಾಡಲಾಗಿತ್ತು.
ಆದರೆ ಮರುದಿನ ಬೆಳಿಗ್ಗೆ ನೋಡುವಾಗ ಆ ಖಬರ್ ಕಟ್ಟಡದ ಹೊರಗೆ ಇತ್ತು!.

ಈ ಕರಾಮತ್ತಿನ ಕುರುಹುಗಳು ಈಗಲೂ ಅಲ್ಲಿ ಈಗಲೂ ಕಾಣಲು ಸಿಗಬಹುದು.
ಮಹಾನವರ ಮುಖಾಂತರ
ಹಲವಾರು ಜನರು ಇಸ್ಲಾಂ  ಸ್ವೀಕರಿಸಿದ್ದಾರೆ.

ಹಲವಾರು ಜನರುಗಳು ದಿನಾಲೂ ಇಲ್ಲಿಗೆ ಝಿಯಾರತ್ತಿಗೆ ಬರುತ್ತಾರೆ.

ಮಹಾನವರ ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ವಿಜಯಗೊಳಿಸಲಿ ಆಮೀನ್.

✍ಗಫೂರ್ ಬಾಯಾರ್
〰〰〰〰〰〰〰


No comments:

Post a Comment