Saturday, October 7, 2017

☪ಝಿಯಾರತ್ತ್ ಕೇಂದ್ರ☪
            01

ಕುಂಡರ ಮಖಾಂ
ಬೈರಕುಪ್ಪ, ಮಚ್ಚೂರ್.
ಮೂಲ: ಮಲಯಾಳಂ

                 ✍ ಗಫೂರ್ ಬಾಯಾರ್.

ವರ್ಷಗಳಿಂದ ಇಲ್ಲಿಯ ಶಾಂತಿ ಕೇಂದ್ರದ ಕುರಿತು ಕೇಳುತ್ತಿರುವುದು;





ಯಾರಿಗೂ ಯಾವ ಸಮಯದಲ್ಲೂ ಎಷ್ಟು ಹಣ ಖರ್ಚು ಮಾಡಿದರೂ ಇಲ್ಲಿಗೆ ತಲುಪಲು ಸಾದ್ಯವಿಲ್ಲ!

ಭೀಕರವಾದ ವನ್ಯ ಜೀವಿಗಳ ವಿಹಾರ ಕೇಂದ್ರ, ಅರಣ್ಯ ಅಧಿಕಾರಿಗಳ ಕಠಿನ ನಿಯಮಗಳು, ದುಷ್ಕರವಾದ ಯಾತ್ರೆ, ನೀರು, ಆಹಾರ, ವಿಸರ್ಜನಾ ಸೌಕರ್ಯಗಳ ದೌರ್ಲಬ್ಯ, ಪ್ರಸಿದ್ದವಾದ "ಕಬನಿ" ನದಿಯಲ್ಲಿ ಸಾಹಸಿಕವಾದ ಸಂಚಾರ....
ಇದೆಲ್ಲಾ ಝಿಯಾರತ್ತಿಗೆ  ಬರುವವರ ಮುಂದಿರುವ ಪ್ರಯಾಸಗಳಾಗಿವೆ.
ಇದೆಲ್ಲವನ್ನೂ ಸಹಿಸಿ, ಮಖಾಮಿಗೆ ತಲುಪಬೇಕಾದರೆ, ಅರಣ್ಯ ಅಧಿಕಾರಿಗಳ ಒಪ್ಪಿಗೆ ಬೇಕು. ಅದೂ ಕೂಡ ವರ್ಷದಲ್ಲಿ ಎರಡು ಬಾರಿ ಮಾತ್ರ ಹೋಗಲು ಅವಕಾಶ.
4 ಕಿ.ಮೀ, ದೂರದ ದುಸ್ತರವಾದ ನಡೆಯಲು ಕೂಡ ಆಸಾದ್ಯವಾದ ರಸ್ತೆಯಲ್ಲಿ ಸಾಗಬೇಕು.
ಅಲ್ಲಿಂದ ಪುನ: 4 ಕಿ.ಮೀ, ಕಬನಿ ನದಿಯನ್ನು ದೋಣಿಯ ಮೂಲಕ ಹಾಗೂ ನಡೆದುಕೊಂಡೂ ಹೋಗಬೇಕು.
ಸಾಹಸದಿಂದ ಕೂಡಿದ ಯಾತ್ರೆಯಾಗಿದೆ ಇದು.
ಈ ದಾರಿ ಮದ್ಯೆ ನಡೆದು ಹೋಗುವಾಗ, ಕಾಡಾನೆ, ಜಿಂಕೆ, ಕೋತಿ, ಹುಲಿ, ... ಎಂಬಿತ್ಯಾದಿ ಹಲವು ಮೃಗಗಳನ್ನು ನಮಗೆ ಕಾಣಬಹುದು.
ಇದನ್ನೆಲ್ಲ ನೋಡುವಾಗ ಭಯವು ಹುಟ್ಟುವುದು ಸಹಜ. ಉರೂಸ್ ನಡೆಯುವ ದಿನಗಳಲ್ಲಿ ಅವುಗಳು ನಮ್ಮನ್ನು ಉಪದ್ರವಿಸುವುದಿಲ್ಲ ಎಂದು ಅಲ್ಲಿಯ ಊರಿನವರು ಹೇಳುತ್ತಾರೆ.

ಮೈಸೂರು ಮಾರ್ಗವಾಗಿ ಬಂದರೆ ಬೈರಕುಪ್ಪದಲ್ಲಿ ಇಳಿದು, ಮಚ್ಚೂರ್ ಮಾರ್ಗವಾಗಿ 8 ಕಿ.ಮೀ ಮುಂದಕ್ಕೆ ಹೋದರೆ ಭೀಕರವಾದ ವನ ಸಿಗುತ್ತದೆ. ಅಲ್ಲಿ C M ವಲಿಯುಲ್ಲಾಹಿ (ಖ:ಸಿ) ಯವರು ಸರ್ವ ಸಂಗ ಪರಿತ್ಯಾಗಿಯಾಗಿ ಬಂದು ಆರಾಧನೆಯಲ್ಲಿ ಮಗ್ನವಾಗಿದ್ದ ಸ್ಥಳವಿದೆ. ಹಲವರು ಅವರನ್ನು ತಿಳಿದದ್ದು, ಯಾವುದೋ ಒಬ್ಬ ಬುದ್ದಿ ಭ್ರಮೆಯವರು ಎಂದಾಗಿತ್ತು. ಒಮ್ಮೆ ಯಾರೋ
C M ವಲಿಯುಲ್ಲಾಹಿ (ಖ:ಸಿ) ಈ ದಾರಿಯಲ್ಲಿ  ಬರುವುದನ್ನು  ಯಾರಾದರು ನೋಡಿದ್ದೀರಾ? ಎಂದು ವಿಚಾರಿಸಿದಾಗಲೇ ಊರಿನವರಿಗೆ ಅವರ ಗೌರವ ತಿಳಿಯುವುದು. ಕೂಡಲೇ ಊರಿನವರು, ಅವರು ಕುಳಿತು ಕೊಂಡಿದ್ದ ಸ್ಥಳವನ್ನು ಹೋಗಿ ನೋಡಿದಾಗ ಕಾಣುವ ದೃಶ್ಯ ಅಧ್ಬುತವಾಗಿತ್ತು. ಭೀಕರವಾದ ವನಗಳ ನಡುವಿನಲ್ಲಿ, ವನ್ಯ ಜೀವಿಗಳನ್ನು ಸಂರಕ್ಷಿಸುವ ವಲಯಗಳಲ್ಲಿ, ಸೈಯ್ಯದ್ ಅಬ್ದುಲ್ ಬಾರಿ (ಖ:ಸಿ) ತಂಙಳರ ಮಕ್ಬರದ ಹತ್ತಿರ ಕುಳಿತು ಕೊಂಡಿರುವುದು ಕಂಡರು....!!!!
👆ಇದಾಗಿದೆ ಅಲ್ಲಿಯ ಸಂಕ್ಷಿಪ್ತವಾದ ಚರಿತ್ರೆ.
ಅನಿರ್ವಚನೀಯವಾದ ಆತ್ಮ ನಿರ್ವತೀಯವಾದ ಝಿಯಾರತ್ತ್ ಕೇಂದ್ರವಾಗಿದೆ ಇದು.

ಕೆಲವು ಸೂಚನೆಗಳು:

👉ಅಲ್ಲಿ ಅಂತ್ಯ ಹೊಂದಿರುವ ಮಹಾನರವರ ಹೆಸರು, ಸಯ್ಯದ್ ಅಬ್ದುಲ್ ಬಾರಿಯಾಗಿದ್ದಾರೆ (ಖ:ಸಿ)

👉🏿 ಎಲ್ಲಾ ವರ್ಷ ಏಪ್ರೀಲ್ ತಿಂಗಳಲ್ಲಿ ಉರೂಸ್ ಹಾಗೂ ಮಕ್ಬರ ಸಂದರ್ಶನ, ಇರುವುದು.
ಮತ್ತೆ  ಹೋಗುವುದು ಮುಂದಿನ ವರ್ಷವೇ.

👉🏿ಮೃಗಗಳನ್ನು ಕಾಣುವಾಗ ಹೆದರಿಕೆ ಆಗುವವರು ದಯಮಾಡಿ ಹೋಗಬೇಡಿ.

👉🏿ಕೈಯಲ್ಲಿ ಆಹಾರ, ಪಾನೀಯಗಳು ಇರಬೇಕು.

👉ಸ್ವಂತ ವಾಹನವಿರುವುದು ಉತ್ತಮ. ಬಾರ್ಡರ್ ನಲ್ಲಿ ತಪಾಸಣೆ ಇದೆ.

👉ರೂಟ್, ಮೈಸೂರ್- ಮಾನಂದವಾಡಿ-
ಬಾವಲಿ ಚೆಕ್ಕ್ ಪೋಸ್ಟ್- ಬೈರಕುಪ್ಪ- ಮಚ್ಚೂರ್ ಮಸ್ಜಿದ್.

👉 ಕೋಯಿಕೋಡ್ ಮಾರ್ಗವಾಗಿ ಹೋಗುವುದಾದರೆ:

👉 ದಾರಿಯಲ್ಲಿ ಇರುವ ಬೇರೆ ಕೆಲವು ಮಕ್ಬರಗಳು👇🏾

0⃣1⃣ಮಡವೂರ್ ಮಖಾಂ,

0⃣2⃣ಒದುಂಗಕಾಡ್ ಮಖಾಂ,

0⃣3⃣ ಚುರತ್ತಿಲ್ ಮಖಾಂ,
( 4ನೇ ತಿರುವು)
👆🏼ಇಲ್ಲಿ ಕೂಡ CM ವಲಿಯುಲ್ಲಾಯಿಯವರು (ಖ:ಸಿ) ಅಲ್ಲಾಹುವಿನ ಆರಾಧನೆಯಲ್ಲಿ ನಿರತರಾಗಿದ್ದರು.

0⃣4⃣ಕಾಟ್ಟಿಕುಳಂ ಮಖಾಂ,

0⃣5⃣ ಬಾವಲಿ ಮಖಾಂ.

✋ಆ ಮಹಾನ್ ಅವರುಗಳ
ಹೆಸರಿನಲ್ಲಿ ಒಂದೊಂದು ಫಾತಿಹಾ ಓದಿ ಹದ್'ಯಾ ಮಾಡುವಿರಿ ತಾನೇ....😊
ಮಹಾತ್ಮರುಗಳ ಬರ್ಕತ್ತ್ ನಿಂದ  ಅಲ್ಲಾಹು ನಮ್ಮ ದ್ವಿಲೋಕ ಜೀವನವನ್ನು ವಿಜಯಗೊಳಿಸಲಿ,
ಆಮೀನ್....
.................................
     ಕನ್ನಡಕ್ಕೆ,
✍ಗಫೂರ್ ಬಾಯಾರ್.
🔵🔵🔵🔵🔵🔵🔵🔵

No comments:

Post a Comment