Saturday, October 7, 2017

ಬದ್ರ್ ಆಂಡ್ ಹೆಸರಲ್ಲಿ ನಡೆಯುವ ಸತ್ಕಮ೯:-


👉🏻 ಬದ್ರ್ ಶುಹದಗಳ ಮದ್ಹ್
👉🏻 ಸ್ವದಖ
👉🏻 ಅನ್ನದಾನ

ಇದೆಲ್ಲವೂ ನೆಬಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರವರ ಹದೀಸ್ ನಿಂದ ಸ್ಥಿರ ಪಟ್ಟಿದ ವಿಚಾರವೇ ಆಗಿದೆ.
👉🏻 ಬದ್ರ್ ಶುಅದಗಳ ಮದ್ಹ್:-
ಪರಿಶುದ್ಧ ಕುರ್ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ:
وَلَا تَحْسَبَنَّ الَّذِينَ قُتِلُوا فِي سَبِيلِ اللَّهِ أَمْوَاتًا ۚ بَلْ أَحْيَاءٌ عِندَ رَبِّهِمْ يُرْزَقُونَ.
"ಅಲ್ಲಾಹನ ಮಾಗ೯ದಲ್ಲಿ ವಧಿಸಲ್ಪಟ್ಟವರನ್ನು ಮರಣ ಹೊಂದಿದವರೆಂದು ನೀವು ಖಂಡಿತ ಭಾವಿಸಬಾರದು.ಅವರು ತಮ್ಮ ಪ್ರಭುವಿನ ಬಳಿ ಜೀವಂತವಾಗಿದ್ಧಾರೆ.ಅವರಿಗೆ ಆಹಾರ ಕೊಡಲಾಗುತ್ತಿದೆ."

"ಅಲ್ಲಾಹನು ಅವರ ಆತ್ಮಗಳಿಗೆ ದೇಹಗಳ ತ್ರಾಣ ನೀಡುವನು.ಅವರು ಭೂಮಿ,ಆಕಾಶ, ಸ್ವಗ೯ ಮುಂತಾದ ತಾವಿಚ್ಛಿಸಿದ ಕಡೆಗಳಿಗೆ ಸಂಚರಿಸುತ್ತಿರುವರು.ಅವರ ಅಪ್ತರಿಗೆ ನೆರವನ್ನು ನೀಡುವರು.(ತಫ್ಸೀರುಲ್ ಮಳ್ಹರಿ)

ಇಮಾಂ ಬುಖಾರಿ ತನ್ನ ಸ್ವಹೀಹ್ ನಲ್ಲಿ
 حدثنا مسدد حدثنا بشر بن المفضل حدثناخالد بن ذكوان قال قالت الربيع بنت معوذ بن عفراء جاء النبي صلى الله عليه وسلم فدخل حين بني علي فجلس على فراشي كمجلسك مني فجعلت جويريات لنا يضربن بالدف ويندبن من قتل من آبائي يوم بدر إذ قالت إحداهن وفينا نبي يعلم ما في غد فقال دعي هذه وقولي بالذي كنت تقولين.
*ರುಬಯ್ಯ ಬಿನ್ತು ಮುಆವ್ವಿಝ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ:
"ನನ್ನ ಮದುವೆಯ ದಿನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮನೆಗೆ ಬಂದಾಗ ನಮ್ಮ ಹೆಣ್ಣು ಮಕ್ಕಳು ದಫ್ಪ್ ಭಾರಿಸುತ್ತಾ ಬದ್ರ್ ಯುದ್ಧದಲ್ಲಿ ಹುತ್ಮಾತ ಆದ ನಮ್ಮ ತಂದೆ ಯವರ ಬಗ್ಗೆ (ಮದ್ಹ್)ಹಾಡುತ್ತಿದ್ದರು. ಆಗ ಒಬ್ಬಳು ಹೇಳಿದಳು ನಾಳೆಯ ವಿಚಾರ ತಿಳಿಯುವ ಪ್ರವಾದಿಯು ನಮ್ಮಲ್ಲಿದ್ಧಾರೆ.ಅವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರು ಹೇಳಿದರು.ಅದು ಬೇಡ,ನೀವು ಮುಂಚೆ ಹೇಳಿದ್ಧನ್ನೇ ಮುಂದುವರಿಸಿ".
(ಸ್ವಹೀಹುಲ್ ಬುಖಾರಿ)

ಮಲಕುಗಳ ವಿಭಾಗದಲ್ಲಿ ಶ್ರೇಷ್ಠರು ಯಾರು:
ರಾಫೀ ಬಿನ್ ಖಾದಿಜ್ ರಳಿಯಲ್ಲಾಹು ಅನ್ಹು ಹೇಳಿದರು:
"ದೇವದೂತರಾದ ಜಿಬ್ರೀಲ್ ಅಲೈಹಿ ಸಲಾಂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಬಳಿ ಕೇಳಿತು. ಬದ್ರ್ ಯುದ್ಧದಲ್ಲಿ ಪಾಲ್ಗೊಂಡವರನ್ನು ನೀವು ಹೇಗೆ ಪರಿಗಣಿಸುತ್ತಿರಿ.? ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಹೇಳಿದರು: ನಮ್ಮಲ್ಲಿ ಅತ್ಯುತ್ತಮರು.ದೇವದೂತರಾದ ಜಿಬ್ರೀಲ್ ಹೇಳಿದರು: ನಮ್ಮಲ್ಲಿಯೂ ಹಾಗೇನೆ.ಬದ್ರ್ ಯುದ್ಧ ದಲ್ಲಿ ಪಾಲ್ಗೊಂಡ ದೇವದೂತ ರು ದೇವದೂತರಲ್ಲಿ ಅತ್ಯುತ್ತಮರು."
(ಇಬ್ನು ಮಾಜ)

👉🏻 ಸ್ವದಖ:-
ಆಯಿಶಾ ರಳಿಯಲ್ಲಾಹು ಅನ್ಹ ರವರು ಹೇಳುತ್ತಾರೆ: "ಅಲ್ಲಾಹನ ರಸೂಲರ ಬಳಿ ಒಬ್ಬ ವ್ಯಕ್ತಿ ಹೇಳಿದರು ನನ್ನ ತಾಯಿ ಮರಣ ಹೊಂದಿದ್ದಾರೆ ಅವರು ಏನನ್ನೂ ವಸಿಯ್ಯತ್ ಮಾಡಲಿಲ್ಲ ನಾನು ಅವರ ಹೆಸರಲ್ಲಿ ಸ್ವದಖ  ಪ್ರತಿಫಲ ಲಭಿಸುವುದೇ.?ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರು ಹೇಳಿದರು: ಲಭಿಸುತ್ತದೆ " (ಸ್ವಹೀಹುಲ್ ಮುಸ್ಲಿಂ)
ಇಮಾಂ ನವವಿ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ: ಮಯ್ಯಿತ್ ನ ಹೆಸರಲ್ಲಿ ಸ್ವದಖ ಗೈದರೆ ಪ್ರತಿಫಲ ಲಭಿಸುತ್ತದೆ."(ಶರ ಅ್ ಮುಸ್ಲಿಂ)

👉🏻 ಅನ್ನದಾನ
ಪರಿಶುದ್ಧ ಕುರ್೯ನ್ ನಲ್ಲಿ ಅಲ್ಲಾಹನು ಹೇಳುತ್ತಾನೆ.
" ಅವರು ಅಲ್ಲಾಹನಲ್ಲಿರುವ ಒಲವಿನಿಂದ ಬಡವರಿಗೂ, ಅನಾಥರಿಗೂ,ಸೆರೆಯಾಳುಗಳಿಗೂ ಉಣ ಬಿಡಿಸುತ್ತಾರೆ ".(ಸೂರತುಲ್ ಅಲ್ ಇನ್ಸಾನ್)
ಇಬ್ನ್ ಉಮರ್ ರವರಿಂದ ನಿವೇದನೆ : " ಒಬ್ಬ ವ್ಯಕ್ತಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರೊಂದಿಗೆ ಕೇಳಿದರು ಇಸ್ಲಾಮಿನಲ್ಲಿ ಉತ್ತಮ ಕಾಯ೯ ಯಾವುದು.? ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರು ಹೇಳಿದರು:ಉಣ ಬಡಿಸುವುದು".
➖➖➖➖➖➖ಅಹ್ಲ್ ಸುನ್ನದ ಗೆಳೆಯ ರೇ ಈ ಕಾಯ೯ ಗಳಲ್ಲವೇ ನಮ್ಮ ನಿಮ್ಮ ಊರುಗಳಲ್ಲಿ ನಡೆಯುವುದು.
📝ಯು.ಎಂ ಮುಕ್ಕಚ್ಚೇರಿ.

No comments:

Post a Comment