ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, October 7, 2017
ಎಪಿ ಉಸ್ತಾದ್ ಮತ್ತು ಮುಹ್'ಜಿಝತ್: ಆರೋಪಕ್ಕೊಂದು ಪ್ರತ್ಯುತ್ತರ
ಎಪಿ ಉಸ್ತಾದರನ್ನು ಗುಣಗಾನ ಮಾಡುವ ಅಬ್ದುಲ್ ಖಾದರ್ ಮದನಿ ಉಸ್ತಾದರ ಪ್ರಭಾಷಣವನ್ನು, ಜನರ ಮಧ್ಯೆ ಅಪಾರ್ಥ ಗೊಳಿಸಿ, ಎಪಿ ವಿಭಾಗದವರು ಎಪಿ ಉಸ್ತಾದರನ್ನು ಪ್ರವಾದಿಗಳಿಗಿಂತಲೂ ಮಿಗಿಲಾಗಿ ಕಾಣುತ್ತಾರೆಂದು ಅಲವಿ ದಾರಿಮಿ ಯವರು ಆರೋಪಿಸಿದ್ದಾರೆ. ಅಲವಿ ದಾರಿಮಿ ಯವರ ಆರೋಪ ಮತ್ತು ಮದನಿ ಉಸ್ತಾದರ ಪ್ರಭಾಷಣದ ಸತ್ಯಾಂಶ ಈ ರೀತಿ ಇದೆ.
ಮದನಿ ಯವರು ತನ್ನ ಪ್ರಭಾಷಣದಲ್ಲಿ ಹೇಳುತ್ತಾರೆ, "ಪ್ರವಾದಿ ﷺ ರಿಗೆ ಅಲ್ಲಾಹನು ಕೊಟ್ಟ ಹಲವಾರು ಮುಹ್'ಜಿಝತ್ ಗಳಲ್ಲೊಂದಾಗಿದೆ "ಹೇಳಿದ್ದನ್ನು ತಿದ್ದುಪಡಿ ಮಾಡದಿರುವುದು". ಇಂತಹ ಒಂದು ಮುಹ್',ಜಿಝತನ್ನು ಎಪಿ ಉಸ್ತಾದ್ ಗೆ ಅಲ್ಲಾಹನು ಕರಾಮತ್ ಆಗಿ ಕೊಟ್ಟಿದ್ದಾನೆ" ಎಂದು.
ಹೌದು, ಇದರಲ್ಲಿ ತಪ್ಪೇನಿದೆ? ಎಪಿ ಉಸ್ತಾದ್ ಗೆ ಮುಹ್'ಜಿಝತ್ ಇದೆ ಎಂದು ಅವರು ಎಲ್ಲೂ ಹೇಳಿಲ್ಲ ತಾನೇ. ಒಂದು ವೇಳೆ ಹಾಗೇನಾದರು ಹೇಳಿದ್ದರೆ, ಅದನ್ನು ತಪ್ಪೆಂದು ಹೇಳಬಹುದಿತ್ತು. ಕಾರಣ, ಮುಹ್'ಜಿಝತ್ ಪ್ರವಾದಿ ಗಳಿಗೆ ಮಾತ್ರ ಅಲ್ಲಾಹನು ಕೊಟ್ಟ ಅಸಾಧಾರಣ ಶಕ್ತಿಯಾಗಿದೆ. ಅಲ್ಲಾಹನು, ಪ್ರವಾದಿ ಗಳಿಗೆ ಮುಹ್'ಜಿಝತ್ ಎಂಬ ಅಸಾಧಾರಣ ಶಕ್ತಿಯನ್ನು ಕೊಟ್ಟಂತೆ, ವಲಿಯ್ಯ್ (ಅಲ್ಲಾಹನ ಇಷ್ಟದಾಸರು) ಗಳಿಗೆ ಕರಾಮತ್ ಎಂಬ ಅಸಾಧಾರಣ ಶಕ್ತಿಯನ್ನೂ ಕೊಟ್ಟಿದ್ದಾನೆ.
ಪ್ರವಾದಿ ಗಳಲ್ಲಿರುವಂತಹ ಅಸಾಧಾರಣ ಶಕ್ತಿಗಳೆಲ್ಲವೂ ಅವುಲಿಯಾಗಳಲ್ಲಿ ಇಲ್ಲದಿದ್ದರೂ, ಅವುಲಿಯಾಗಳಲ್ಲಿ ಇರುವ ಕರಾಮತ್ ಎಂಬ ಅಸಾಧಾರಣ ಶಕ್ತಿಗಳು, ಪ್ರವಾದಿ ಗಳ ಮುಹ್'ಜಿಝತ್ ನೊಂದಿಗೆ ಸಾಮ್ಯತೆ ಇರಬಹುದು. ಹಾಗೆ ವಿಶ್ವಾಸವಿರಿಸಿದ ಮಾತ್ರಕ್ಕೆ ಅದು "ಪ್ರವಾದಿ ಗಳೊಂದಿಗಿನ ಹೋಲಿಕೆ" ಎಂಬ ಅಪಾದನೆಯು ಶುದ್ಧ ಮೂರ್ಖತನವಾಗಿದೆ.
ಉದಾ: ಪ್ರವಾದಿ ಈಸಾ (ಅ) ರವರಿಗೆ ಅಲ್ಲಾಹು ಮರಣ ಹೊಂದಿದವರನ್ನು ಪುನರುಜ್ಜೀವನ ಗೊಳಿಸುವಂತಹ ಅಸಾಧಾರಣ ಶಕ್ತಿಯನ್ನು ಮುಹ್'ಜಿಝತ್ ಆಗಿ ಕೊಟ್ಟಿದ್ದಾನೆ. ಅದರಂತೆ, ಮುಹ್ಯುದ್ದೀನ್ ಶೈಖ್ (ರ) ರವರು ಸತ್ತ ಪ್ರಾಣಿಯನ್ನು ಪುನರುಜ್ಜೀವನ ಗೊಳಿಸಿದ ಚರಿತ್ರೆಯನ್ನು ನಾವು ಕೇಳಿದ್ದೇವೆ. ಮನುಷ್ಯರನ್ನು ಪುನರುಜ್ಜೀವನ ಗೊಳಿಸಿದ ಹಲ್ಲಾಜ (ರ) ರವರ ಚರಿತ್ರೆಯನ್ನೂ ಕೇಳಿದ್ದೇವೆ. ಮುಹ್ಯುದ್ದೀನ್ ಶೈಖ್ ಮತ್ತು ಹಲ್ಲಾಜ (ರ) ರವರ ಪುನರುಜ್ಜೀವನ ಗೊಳಿಸಿದ ಕರಾಮತ್, ಪ್ರವಾದಿ ಈಸಾ (ಅ) ರವರ ಪುನರುಜ್ಜೀವನ ಗೊಳಿಸುವ ಮುಹ್'ಜಿಝತ್ ಗೆ ಸಮಾನವಾಗಿದೆ ಎಂಬ ಕಾರಣಕ್ಕೆ, ಮುಹ್ಯುದ್ದೀನ್ ಶೈಖ್ ಮತ್ತು ಹಲ್ಲಾಜ (ರ) ರವರನ್ನು ಪ್ರವಾದಿ ಗಳಿಗೆ ಸಮಾನಾಂತರಿಸಲಾಗುತ್ತದೆ ಎಂದು ಯಾರಾದರೂ ಅಪಾದಿಸಿದರೆ, ಅದೆಷ್ಟು ಮೂರ್ಖತನದ ವಾದವೋ, ಅದರಂತೆ, ಎಪಿ ಉಸ್ತಾದ್ ಗೆ ಅಲ್ಲಾಹು ಕೊಟ್ಟ ವಿಷೇಶ ಶಕ್ತಿ, ಪ್ರವಾದಿ ﷺ ರ ಮುಹ್'ಜಿಝತ್ ನೊಂದಿಗೆ ಸಾಮ್ಯತೆ ಇದ್ದ ಮಾತ್ರಕ್ಕೆ ಪ್ರವಾದಿ ﷺ ರೊಂದಿಗೆ ಸಮಾನಾಂತರಿಸಲಾಗುತ್ತದೆ ಎಂಬ ಅಪಾದನೆಯೂ ಅಷ್ಟೇ ಮೂರ್ಖತನದ್ದಾಗಿದೆ.
ಮದನಿ ಉಸ್ತಾದರ ಪ್ರಭಾಷಣದಿಂದ ವಿವಾದಿಸಲ್ಪಟ್ಟ ಮತ್ತೊಂದು ವಿಷಯವಾಗಿದೆ,
1.24 ಲಕ್ಷ ಪ್ರವಾದಿ ಗಳಲ್ಲಿ ನಮ್ಮ ಪ್ರವಾದಿ ﷺ ರು ವಿಷೇಶ ವ್ಯಕ್ತಿಯಾದಂತೆ, ಮಲಾಯಿಕುಗಳಲ್ಲಿ ಜಿಬ್ರೀಲ್ (ಅ) ವಿಶೇಷ ವ್ಯಕ್ತಿಯಾದಂತೆ, ಅವುಲಿಯಾಗಳಲ್ಲಿ ಅಲಿ (ರ) ವಿಷೇಶ ವ್ಯಕ್ತಿಯಾದಂತೆ, ಇಂದು ಭೂಲೋಕದಲ್ಲಿ ಜೀವಿಸುವ ವ್ಯಕ್ತಿಗಳಲ್ಲಿ ಎಪಿ ಉಸ್ತಾದ್ ವಿಷೇಶ ವ್ಯಕ್ತಿಯಾಗಿದ್ದಾರೆ ಎಂದು ಎಪಿ ಉಸ್ತಾದರನ್ನು ಬಣ್ಣಿಸಿದ್ದು. ಇದರಲ್ಲಿ ತಪ್ಪೇನಿದೆ?. ಮದನಿ ಯವರು ಎಪಿ ಉಸ್ತಾದರನ್ನು ಪ್ರವಾದಿ ಗಳಿಗೋ, ಮಲಾಯಿಕುಗಳಿಗೋ, ಅಲಿ (ರ) ರವರಿಗೋ ಹೋಲಿಸಿದ್ದಲ್ಲ. ಬದಲಾಗಿ, ಎಲ್ಲಾ ವಿಭಾಗದಲ್ಲೂ ವಿಷೇಶ ವ್ಯಕ್ತಿಗಳು ಇರುವಂತೆ, ಇಂದಿನ ಕಾಲದಲ್ಲಿ ಎಪಿ ಉಸ್ತಾದ್ ವಿಶೇಷ ವ್ಯಕ್ತಿಯಾಗಿದ್ದಾರೆಂದು ಹೇಳಲು ಉದಾಹರಣೆಗಾಗಿ ಮೇಲಿನದ್ದನ್ನು ಹೇಳಿದ್ದಾರೆ ಅಷ್ಟೇ.ಉದಾ: ಪೂರ್ವಿಕರಾದ ಪ್ರವಾದಿ ಗಳ ಸ್ಥಾನವಾಗಿದೆ, ಇಂದಿನ ಕಾಲದ ಉಲಮಾಗಳದ್ದು ಎಂದರೆ, ಅದು ಉಲಮಾಗಳನ್ನು ಪ್ರವಾದಿ ಗಳಿಗೆ ಸಮಾನಾಂತರಿಸಿದಂತಾಗದಂತೆ.
ಸಂಶುಲ್ ಉಲಮಾರನ್ನು ಕಾಲಘಟ್ಟದ ಮುಜದ್ದಿದ್ ಎಂದು ಎಸ್ಕೆ ವಿಭಾಗದವರು ಬಣ್ಣಿಸುತ್ತಾರೆ. ನಾವದನ್ನು ಪೂರ್ವಿಕರಾದ, ಹತ್ತು ಲಕ್ಷಕ್ಕೂ ಮಿಕ್ಕ ಹದೀಸ್ ಗಳ ಜ್ಙಾನವಿರುವ ಇಮಾಮ್ ಅಬೂಹನೀಫ (ರ), ಇಮಾಮ್ ಶಾಫಿ (ರ), ಮಾಲಿಕಿ (ರ) ಮುಂತಾದ ಮುಜದ್ದಿಗಳಿಗೆ ಸಮಾನಾಂತರಿಸಲಾಗುತ್ತಿದೆ ಎಂದು ಎಲ್ಲೂ ಹೇಳುವುದಿಲ್ಲ. ಅದರಂತೆ, ಸಲಫಿ ನೇತಾರ ಹುಸೈನ್ ಸಲಫಿ ಯವರು ಒಮ್ಮೆ ತಮ್ಮ ಪ್ರಭಾಷಣದಲ್ಲಿ ಪ್ರವಾದಿ ﷺ ರನ್ನು ಮುತ್ತು-ಮಾನಿಕ್ಯ ಎಂದು ಸಂಭೋದಿಸಿದ್ದರು. ಇದನ್ನು ನಾವು ಪ್ರವಾದಿ ﷺ ರನ್ನು ಮುತ್ತು-ಮಾನಿಕ್ಯ ದೊಂದಿಗೆ ಸಮಾನಾಂತರಿಸಲಾಗಿದೆ ಎಂದು ಆಪಾದಿಸುವುದಿಲ್ಲ. ಕೆಲವೊಂದು ಅಲಂಕಾರಿಕ ಪದದ ಅರ್ಥವನ್ನು, ಉದಾಹರಣೆಯನ್ನು ಅರ್ಥೈಸಲು ಸಾದ್ಯವಾಗದವನನ್ನು ಶತಮೂರ್ಖ ಎನ್ನದೆ ವಿಧಿಯಿಲ್ಲ.
ಸಮುದಾಯದ ದಾರಿ ತಪ್ಪಿಸಲು, ಎಪಿ ವಿಭಾಗದ ವಿರುದ್ಧ ಸುಳ್ಳು ಹೇಳಿ ಅಲವಿ ದಾರಿಮಿ ಯವರು ಮಾಡಿದ ಗಂಭೀರ ಆರೋಪವಾಗಿದೆ ಈ ಕೆಳಗಿನದ್ದು.
ಸುಳ್ಳು No 1: ಎಪಿ ಉಸ್ತಾದರನ್ನು ದೇವನಾಗಿಯೂ, ಪ್ರವಾದಿ ಯಾಗಿಯೂ, ಅದರಲ್ಲೂ ಮುಹ್'ಜಿಝತ್ ಇರುವವರಲ್ಲಿ ಪ್ರಮುಖರಾಗಿಯೂ ಚಿತ್ರೀಕರಿಸಲಾಗುತ್ತದೆ.
ಸುಳ್ಳು No 2: ಪ್ರವಾದಿ ﷺ ರ ಎಲ್ಲಾ ಮುಹ್'ಜಿಝತನ್ನು ಎಪಿ ಉಸ್ತಾದ್ ಗೆ ಕರಾಮತ್ ಆಗಿ ಕೊಡಲಾಗಿದೆ.
ಈ ರೀತಿ ಹೇಳುವುದಾಗಿ ಮದನಿ ಉಸ್ತಾದರ ಪ್ರಭಾಷಣದಿಂದ ತೋರಿಸಲು ದಾರಿಮಿ ಸಹಿತ ಯಾರಿಗೂ ಸಾದ್ಯವಿಲ್ಲ. ಆದರ್ಶ ಹೋರಾಟವನ್ನು ಆದರ್ಶದಿಂದ ಎದುರಿಸಲಾಗದಾಗ, ಸುಳ್ಳು ಹೇಳಿ ಜನರನ್ನು ವಂಚಿಸುವ ಇಂತಹ ಪ್ರಯತ್ನಗಳು ಖಂಡನೀಯ.
ಅಲ್ಲಾಹನೇ, ಉಸ್ತಾದರಿಗೆ ಆಫಿಯತ್ ನೊಂದಿಗಿನ ದೀರ್ಘಾಯುಷ್ಯವನ್ನು ನೀಡಿ ಅನುಗ್ರಹಿಸು.
ಶತ್ರುಗಳ ಶತ್ರುತ್ವದಿಂದ ಉಸ್ತಾದರನ್ನು, ಉಸ್ತಾದ್ ನೇತೃತ್ವ ಕೊಡುವ ಪ್ರಸ್ತಾನವನ್ನೂ ಸಂರಕ್ಷಿಸು, ಆಮೀನ್.
ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.
Subscribe to:
Post Comments (Atom)
No comments:
Post a Comment