Saturday, October 7, 2017

ಭಾರತಕ್ಕೆ ಇಸ್ಲಾಂ



ಅದು ಮಲಬಾರ್ ಪ್ರಾಂತ್ಯದ ರಾಜ ಚೇರಮಾನ್ ಪೆರುಮಾಳ್ ಅದೊಂದು ದಿನ ರಾತ್ರಿ ತನ್ನ ವೈಭವೋಪೇತ ಅರಮನೆಯ ಮೇಲ್ಮಹಡಿಯಲ್ಲಿ, ರಾತ್ರಿ ನಿಶಬ್ಧ ಇರುಳಲ್ಲಿ ಕಳೆಯುತ್ತಿದ್ದ......!

ಕಾರ್ಗತ್ತಲನ್ನು ಆಕರ್ಷಿಸುವ ಮಿಂಚು ಹುಳಗಳ ಸೌಂದರ್ಯ ನೋಟ ಜೀರುಂಡೆಗಳ ಶಬ್ಧದ ನಡುವೆ ಕಾನನದಿಂದ ವನ್ಯ ಮ್ರಗಗಳ ಅರಚಾಟ ಚೀರಾಟ.....!

ನೀಲಾಕಾಶದ ಬೆಳ್ಳಿಮೋಡಗಳ ನಡುವೆ ನಕ್ಷತ್ರಗಳ ಮಿನುಗಾಟ ನೋಡುತ್ತ ಕುಳಿತಿರುವಾಗ,
ಅಧೋ  ಆಕಾಶದಲ್ಲಿ ನೆಲೆಯೂರಿದ ಚಂದ್ರ ಇಬ್ಬಾಗವಾಹಿತು.....!

ದಿಟ್ಟಿಸಿದ ಆ ಕಣ್ಣುಗಳು ಮತ್ತಷ್ಟು ಅಗಲಿಸಿ ಮತ್ತೆ ಮತ್ತೆ ಅದ್ಭುತವನ್ನು ನೋಡುತ್ತಿದ್ದರೆ ,ನೋಡು ನೋಡುತ್ತಲೇ ಇಬ್ಭಾಗವಾದ ಚಂದ್ರ  ಒಂದಾಗುವುದನ್ನು ಕಂಡು ಬೆಕ್ಕಸ ಬೆರಗಾದರು.....!

 ತಾನು ಕಾಣುತ್ತಿರುವುದು ನೈಜ ಘಟನೆಯೋ ಅಥವಾ ಕನಸಲ್ಲೊ ಎಂಬ ಕಲ್ಪನೆ ಯೊಂದಿಗೆ ಕೈಯನ್ನು ಮೈಯೊಡನೆ ಸ್ಪರ್ಶಿಸಿ ನೋಡುತ್ತಾರೆ.......ಈ ಅಮಾನುಷವಾದ ಸತ್ಯ ಘಟನೆಗೆ ಸಾಕ್ಷಿಯಾದ ಚೇರಮಾನ್ ರಾಜ ದಿನಾಂಕವನ್ನು ತನ್ನ ದಿನಚರಿಯಲ್ಲಿ ಬರೆದಿಡುತ್ತಾರೆ.
ಇದಾದ ಸುಮಾರು ದಿನಗಳ ನಂತರ ಅರಬ್ ಯಾತ್ರಿಕರು ಶ್ರೀಲಂಕಾದ ಆದಂ ಬೆಟ್ಟವನ್ನು ಸಂದರ್ಶಿಸಿ  ಕೇರಳದೆಡೆಗೆ ಆಗಮಿದಸಿದಾಗ ಕೊಡಂಗಲ್ಲೂರ್ ...ಚೇರಮಾನ್ ಪೆರುಮಾಳ್ ಅರಮನೆಗೊಂದು ಭೇಟಿ .. .!

ಅರಬ್ ಲೋಕದ ಕ್ಷೇಮ  ಸಮಾಚಾರ ವನ್ನು ಈ ಯಾತ್ರಿಕರಲ್ಲಿ ಕೇಳಿ ತಿಳಿಯಲು ಮುಂದಾಗುತ್ತಾರೆ... ಕೇರಳದ ರಾಜ ಚೇರಮಾನ್ ಪೆರುಮಾಳ್......

 ಮಾತುಕತೆ ಆರಂಬಿಸಿದ ಅರಬ್ಬರು ತಮ್ಮ ಊರಿನಲ್ಲಿ ಒಂದು ಕೆಟ್ಟ ಸಮಾಚಾರವಿದೆ  ಮಕ್ಕಾದಲ್ಲಿ ಮುಹಮ್ಮದ್  (ಸ.ಅ) ಎಂಬ ಕಳ್ಳ ಪ್ರವಾದಿ ಆಗಮಿಸಿ  ನಮ್ಮ  ದೇವರುಗಳನ್ನೆಲ್ಲ ನಿರ್ಜೀವ ಎನ್ನತ್ತಾನೆ...! ಅದೆಷ್ಟೋ ಸಾವಿರ ವರ್ಷಗಳಿಂದ ತಾತ ಮುತ್ತಾತಂದಿರು ಪೂಜಿಸಿದ ಸಾಮಾಗ್ರಿಗಳನ್ನು ಅವುಗಳಲ್ಲಿ ಶಕ್ತಿ ಇಲ್ಲ ...ಸರ್ವ  ಶಕ್ತನಾದ ಅಲ್ಲಾಹು ವನ್ನು ಆರಾದಿಸಿ ಎಂಬ ಏಕ ದೈವ ವಿಶ್ವಾಸದ ಬಗ್ಗೆ ಜನರಲ್ಲಿ ಅರಿವು ಮೂಡಿಸಲೆತ್ನಿಸುತ್ತಿದ್ದಾರೆಂಬ ವಾದ ಇವರದಾಗಿತ್ತು.

ಪ್ರವಾದಿ ಸ.ಅ ರ ಬಗ್ಗೆ ಕುತೂಹಲ ಗೊಂಡ ಚೇರಮಾನ್ ಪೆರುಮಾಳ್ ..ಪ್ರವಾದಿಗಳೆಂದರೆ ಅಮಾನುಷ...ಶಕ್ತಿ ಉಳ್ಳವರಾಗಿರುತ್ತಾರೆ.ಅಸಾಧಾರಣತ್ವ ವನ್ನು ಆಥವಾ ಅದ್ಭುತ ಶಕ್ತಿಗಳೇನಾದರೂ ಮಾಡುತ್ತಿದ್ದಾರೆಯೇ ಎಂದಾಗ ಅರಬ್ ಯಾತ್ರಿಗಳು ಪ್ರವಾದಿ ಸ.ಅ ರಿಂದ ಉಂಟಾಗುವ ಹಲವಾರು ಮುಹ್ಜಿಝತ್ ಗಳ ವಿವರಣೆ ಕೊಡತ್ತಾರೆ.

ಅದರಲ್ಲಿ ಒಂದಾಗಿತ್ತು ಚಂದ್ರನನ್ನು ಇಬ್ಬಾಗವಾಗಿಸಿದ್ದು ಈ ಯಾತ್ರಿಗಳನ್ನು ಪ್ರವಾದಿ ಸ.ಅ.ರು ಅಬೂ ಕುಬೈಸ್ ಪರ್ವತದ ತಳಭಾಗದಲ್ಲಿ ನಿಲ್ಲಿಸಿ ಚಂದ್ರನನ್ನು ಎರಡು ಹೋಳಾಗಿಸಿ ಮತ್ತೆ ಯತಾಸ್ಥಿತಿಗೆತಂದರೆನ್ನುತ್ತಾರೆ....ಇದನ್ನು ಕೇಳಿದ ಚೇರಮಾನ್ ರಾಜ..ತಾನು ಕಂಡ ಸತ್ಯಘಟನೆ ಮತ್ತು ಈ ವ್ಯಕ್ತಿಗಳೇಳಿದ ಚಂದ್ರನ ಇಬ್ಬಾಗವಾದ ದಿನಾಂಕ ಒಂದೇ ಆಗಿತ್ತು....

ಮತ್ತೆ ಚೇರಮಾನ್ ಪೆರುಮಾಳ್ ರಾಜನ‌ ಮನದಾಳದಲ್ಲಿ ಹುದುಗಿದ್ದೊಂದೇ ಆ ಪ್ರವಾದಿಯನ್ನು ನೋಡ್ಬೇಕು ..ಆದಷ್ಟು ಬೇಗನೆ ಆ ಸಾನಿಧ್ಯವನ್ನು ತಲುಪಬೇಕು...!

ಚೇರಮಾನ್ ಪೆರುಮಾಳ್ ಏನೇ ವಿಷಯಗಳಿದ್ದರು  ಮೊದಲಿಗೆ ತನ್ನ ಸಹೋದರಿ  ಶ್ರೀದೇವಿಗೆ ತಿಳಿಸಿ ಮುಂದಿನ ಹೆಜ್ಜೆ ಇಡುವರು...,

ಮನಸ್ಸಲ್ಲೇಕೊ ಅಸಮದಾನ ತನ್ನ ಸಹೋದರಿ ಅಸಮ್ಮತಿ ವ್ಯಕ್ತ ಪಡಿಸಿದರೆ ...ಹೀಗೆ ಅಪಾರ ಕನಸು ನನಸುಗಳೊಂದಿಗೆ ಸಹೋದರಿಯ ಸನ್ನಿಧಿಯಲ್ಲಿ ತನ್ನ ಅಹವಾಲು ಆಕಾಂಕ್ಷೆ ಗಳನ್ನಿಡುತ್ತಿದ್ದಂತೆ, ಸಹೋದರಿಯು ಚೇರಮಾನ್ ರಾಜ ನೊಂದಿಗೆ ಒಬ್ಬಂಟಿಯಾಗಿ ಗೊತ್ತು ಗುರಿಯಿಲ್ಲದ ವರ ಜೊತೆ ಹೋಗಬೇಡಿ ಒಟ್ಟಿಗೆ ತನ್ನ ಮಗ ಕೋಹಿನ್ನೂರ್ ರಾಜಕುಮಾರನನ್ನು ಮಕ್ಕಾದೆಡೆ ಕರೆದು ಕೊಂಡು ಹೋಗಲು  ಸೂಚನೆ ನೀಡಿದರು.

ಹಾಗೆಯೇ ಅರಬ್ ಪ್ರಯಾಣಕ್ಕೆ ಮುಂದಾದರು.ಕೇರಳದ ತಲಶೇರಿಯ, ಪೋಯನಾಡ್ ( ಹೋದ ಊರು) ಊರಿನಿಂದ ಸೌದಿ ಅರೇಬಿಯಾಗೆ  ಯಾತ್ರೆ ಆರಂಬಿಸಿದ ಚೇರಮಾನ್  ಪೆರುಮಾಳ್ ರಾಜ...ದೀರ್ಘ 28ದಿನಗಳ ಪ್ರಯಾಣದ ನಂತರ ಸೌದಿ ಅರೇಬಿಯಾ ತಲುಪಿದಾಗ ರಾಜನಿಗೆ ..ಭವ್ಯ ಸ್ವಾಗತ ಪ್ರವಾದಿ ಮುಹಮ್ಮದ್ ಸ.ಅ ರ ಸನ್ನಿಧಿಯಲ್ಲಿ ಅಬೂಬಕರ್ ಸಿದ್ದೀಕ್ ರ.ಅ ಉಮರ್ ರ.ಅ ಉಸ್ಮಾನ್ ರ.ಅ ಒಳಗೊಂಡ ಸದಸ್ಸಿನಲ್ಲಿ,
ಪ್ರವಾದಿ ಸ.ಅ ಚೇರಮಾನ್ ಪೆರುಮಾಳ್  ನೋಡುತ್ತಲೇ ಶುಂಠಿ,ಚಿಕ್ಕು ,ಕರಿಮೆಣಸಿನ ನಾಡ ಮಲಬಾರಿನ  ರಾಜನಿಗಿದೋ ಸ್ವಾಗತ  .....! ತನ್ನನ್ನು ನೋಡುತ್ತಲೇ ಏನು ಕೇಳದೆ  ಈ ರೀತಿಯಲ್ಲಿ ಹೇಳಿದಾಗ ಚೇರಮಾನ್ ಪೆರುಮಾಳರಿಗೆ ಪ್ರವಾದಿ ಸ.ಅ ರ ಮುಖ ಚಹರೆಯಿಂದ ತಿಳಿಯಲು ಸಾಧ್ಯವಾಯಿತು.ಇದೇ ನಾನು ಕಲ್ಪನೆ  ಮಾಡಿಕೊಂಡ ಮುಹಮ್ಮದ್  (ಸ.ಅ)   ದೀರ್ಘವಾಗಿ ಯೋಚಿಸದೆ
ಗಟ್ಟಿ ನಿರ್ಧಾರಕ್ಕೆ ಬಂದರು,
ಇದು ತಾನು ಉದ್ದೇಶೀಸಿದ ಅಲ್ಲಾಹನ ಪ್ರವಾದಿ..(ಸ.ಅ).. ಅಶ್ಹದು ಅನ್ಲಾಹಿಲಾಹ ಇಲ್ಲಲ್ಲಾಹ್ ವಹನ್ನಕ ರಸೂಲುಲ್ಲಾ ಎಂಬ ಶಹಾದತ್ ಉಚ್ಚರಿಸಿ ಇಸ್ಲಾಂ ನೆಡೆಗೆ ಆಗಮಿಸುತ್ತಾರೆ‌..

ಅಲ್ಲಿಂದ ದೀರ್ಘ5ವರ್ಷಗಳ ಸಮಯ ಪ್ರವಾದಿ ಮುಹಮ್ಮದ್ (ಸ.ಅ) ಸನ್ನಿಧಿಯಲ್ಲಿ ಸಹಾಬಿಗಳೊಂದಿಗೆ ಕಾಲ ಕಳೆದರು ಈ 5 ವರ್ಷದಲ್ಲಿ ಮಕ್ಕಾದಿಂದ ಮದೀನ ಹಿಜ್ರಾ ಹೋಗುವ ಸಮಯ ಪ್ರವಾದಿ ಸ.ಅ ರೊಂದಿಗೆ ಚೇರಮಾನ್ ಪೆರುಮಾಳ್ ಇದ್ದರು ....
..ನಂತರ ಇಸ್ಲಾಂ ಭಾರತದಲ್ಲಿ ಪ್ರಚಾರಮಾಡಲೆಂದು
ಮಾಲಿಕಿದೀನಾರ್ (ರ.ಅ)ನೇತ್ರತ್ವದಲ್ಲಿ ಭಾರತವನ್ನು ಗುರಿಯಾಗಿಸಿ ಹೊರಟಾಗ ಒಮಾನ್ನ ಮಸ್ಕತ್ ನಲ್ಲಿರುವ ಶಹರ್ ಮಹಲ್ಲಾ ಎಂಬ ಪ್ರದೇಶ ತಲುಪುತ್ತಿದ್ದಂತೆ ಚೇರಮಾನ್ ಪೆರುಮಾಳ್ ರಾಜನ ದೇಹದಲ್ಲಿ  ಶಕ್ತವಾದ ಜ್ವರ  ಕಾಣಿಸಿ ಕೊಳ್ಳುತ್ತದೆ. ದಿನಗಳು ಉರುಳಿದಂತೆ ಉಲ್ಭಣ ಗೊಂಡ ರಾಜನ ಕಾಯಿಲೆ ಶಮನವಾಗುವ ಲಕ್ಷಣವೇ ಕಂಡಿಲ್ಲ ಅಲ್ಲೇ ಕೊನೆಯುಸಿರೆಳೆಯುತ್ತಾರೆ... ಚೇರಮಾನ್ ರಾಜ ಒಮಾನ್ ದೇಶದ ಮಸ್ಕತ್ ನ ಶಹರ್ ಮಹಲ್ಲಾದ ಕಬರ್  ಸ್ಥಾನದ ಮೀಝಾನ್ ಕಲ್ಲಿನ ಮೇಲೆ ಅರಬಿ ಭಾಷೆಯಲ್ಲಿ ಬರೆದ ಮಲಿಕುಲ್ ಹಿಂದ್ ಚೇರಮಾನ್ ಪೆರುಮಾಳ್ ( ಭಾರತದ ರಾಜ ಚೇರಮಾನ್ ಪೆರುಮಾಳ್) ನಂತರ ತಾಜುದ್ದೀನ್ ಎಂಬ ಮರುನಾಮಕರಣ ದೊಡನೆ ತಾಜುದ್ದೀನ್ ಎಂದರೆ ಕಿರೀಟ ದರ್ಮದ ಕಿರೀಟ ಎಂಬ ಅರ್ಥ ಉಳ್ಳ ಹೆಸರಾಗಿದೆ ...

ಹಾಗೆಯೇ ಕೋಹಿನೂರ್ ರಾಜಕುಮಾರನ ಹೆಸರನ್ನು ಸೈಫುದ್ದೀನ್ ಮೊಹಮ್ಮದಲಿ ಎಂದು ಮರುನಾಮಕರಣ ಮಾಡಲಾಗಿತ್ತು.
ಚೇರಮಾನ್ ರಾಜನ ಮರಣದೊಂದಿಗೆ ಯಾತ್ರೆಯನ್ನು ಮೊಟಕು ಗೊಳಿಸಿದ ಮಾಲಿಕಿದೀನಾರ್(ರ.ಅ) ಸಂಘ ಮದೀನಾದೆಡೆಗೆ ಹಿಂತಿರುಗಿದರು.
ಮುಂದಿನ ವರ್ಷ ಪ್ರವಾದಿ ಸ.ಅ ರ ಅನುಮತಿಯೊಂದಿಗೆ ಹಿಜಿರಾ 5 ನೇ ವರ್ಷ ಮಾಲಿಕಿದೀನಾರ್ (ರ.ಅ) ನೇತ್ರತ್ವ ದೊಂದಿಗೆ 14 ಜನರು ಮತ್ತು ಕೋಹಿನೂರ್ ರಾಜಕುಮಾರ್ ರೊಂದಿಗೆ..ಭಾರತದೆಡೆಗೆ
ಸುಮಾರು 28 ದಿನಗಳ ಪ್ರವಾಸದ ನಂತರ ಕೇರಳದತ್ತ ಆಗಮಿಸುತ್ತಾರೆ.

ಕೊಡಂಗಲ್ಲೂರ್ ಅರಮನೆ ಲಕ್ಷ್ಯ ದೊಂದಿಗೆ ದಂಡೆಯಲ್ಲಿ ನಿಂತಾಗ ಮಾಲಿಕಿದೀನಾರ್ (ರ.ಅ)ಒಬ್ಬರನ್ನು ಕಾಣುತ್ತಾರೆ.
ಟವಲ್ ಒಂದನ್ನು ಸುತ್ತಿದ ಅರ್ದ ನಗ್ನ ನಾದ  ಆ ವ್ಯಕ್ತಿಗೆ  ಭಾಷೆ ತಿಳಿಯಲ್ಲ ಎಂಬ ಕಾರಣ ತಮಗಿದ್ದ ದಾಹವನ್ನು ಕೈ ಸನ್ನೆಯ ಮೂಲಕ ತೋರಿಸಿದ ಮಾಲಿಕಿದೀನಾರ್(ರ.ಅ) ತಂಡಕ್ಕೆ..ತೆಂಗಿನ ಮರ ಏರಿದ ವ್ಯಕ್ತಿ ಎಳನೀರು  ಕೊಟ್ಟು ಕುಡಿಯಲೇಳಿ ಅನತಿ ದೂರದಲ್ಲಿ ನಿಲ್ಲುತ್ತಾರೆ .
ತಾನು ಕೀಳು ವರ್ಗವಾಗಿರುವುದರಿಂದ  ಸಾಮಾನ್ಯ ಜನಗಳ ಜೊತೆ ಬೆರೆಯದೆ ದೂರ ನಿಂತು ಕೊಳ್ಳುವುದು ಇವರಿಗೆ ರೂಡಿಯಾಗಿತ್ತು.

ಎಳನೀರು ಕುಡಿದು ತಮ್ಮ ದಾಹವನ್ನು ತೀರಿಸಲು ಕಾರಣರಾದ ಆ ವ್ಯಕ್ತಿಯನ್ನು ಹತ್ತಿರಕ್ಕೆ ಕರೆಯುತ್ತಾರೆ ಮಾಲಿಕಿದೀನಾರ್ (ರ ಅ).ಕೀಳು ಜಾತಿಯವರಾದ  ಅಪ್ಪು ಎಂಬ  ಹೆಸರಿನ ಈವ್ಯಕ್ತಿಯನ್ನು ಹತ್ತಿರಕ್ಕೆ ಕರೆದ ಮಾಲಿಕಿದೀನಾರ್  (ರ.ಅ) ಅಪ್ಪುಗೆಯಿಂದ ತನ್ನ ಶರೀರದೊಂದಿಗೆ ತಬ್ಬಿದಾಗ ತನ್ನ ಜೀವನದಲ್ಲಿ ನಡೆಯದೇ ಇರುವ ಒಂದು ಅದ್ಭುತ ಘಟನಗೆ ಸಾಕ್ಷಿಯಾದ ಅಪ್ಪು ವಿನಲ್ಲಿ ರೋಮಾಂಚನ ಉಂಟಾಯಿತು.!

 ಮಾಲಿಕಿದಿನಾರ್ (ರ ಅ) ರವರಿಗೆ  ಭಾರತದಲ್ಲಿ ಕೀಳುಜಾತಿ ಮತ್ತು ಮೇಲ್ವರ್ಗ ಎಂಬ ಭೇದಗಳಿರುವುದು  ತಿಳಿದಿರಲಿಲ್ಲ.
 ನೋಡಲು ಕಪ್ಪು ವರ್ಣದ  ಕೀಳು ಜಾತಿಯವನಾದ ಅಪ್ಪು ಮಾಲಿಕಿದಿನಾರ್ (ರ  ಅ) ಅಪ್ಪಿಕೊಂಡಾಗ ತನ್ನ ಮನಸು ತಿಳಿಯದೇ ಕಣ್ಣೀರು ಭೂಮಿಯನ್ನು ಸ್ಪರ್ಶಿಸಿತು.
ಭಾರತದ ಭೂಮಿಯಲ್ಲಿ  ಹಾಗೆ ಮೊದಲಿಗನಾಗಿ ಅಶ್ಹದು ಅನ್ಲಾಹಿಲಾಹ ಇಲ್ಲಲ್ಲಾಹ್ ವಹನ್ನಕ ರಸೂಲುಲ್ಲಾ ಎಂಬ ಶಹಾದತ್ ಕಲಿಮ ಉಚ್ಚರಿಸಿದ ಮೊದಲ ವ್ಯಕ್ತಿ ಅಪ್ಪು ಕೊಡಂಗಲ್ಲೂರ್..!
 ಅರಮನೆಯತ್ತ ಕೋಹಿನ್ನೂರ್ ರಾಜ ಮತ್ತು 14 ಮುಸ್ಲಿಮರೊಂದಿಗೆ

ಭಾರತ ದೇಶದೊಳಗೆ ಪ್ರಪ್ರಥಮವಾಗಿ ಇಸ್ಲಾಂ ಸ್ವೀಕರಿದ ವ್ಯಕ್ತಿ  ಅಪ್ಪು  ಹೆಸರನ್ನು ಅಬ್ದುಲ್ ರೆಹ್ಮಾನ್ ಎಂದು ಮರುನಾಮ ಕರಣ ಮಾಡಲಾಯಿತು,.,.,.,ಅಪ್ಪು( ಅಬ್ದುಲ್ ರೆಹಮಾನ್) ವಿನೊಂದಿಗೆ
ಕೊಡಂಗಲ್ಲೂರ್ ಅರಮನೆ ಪ್ರವೇಶೀಸಿ  ....ಚೇರಮಾನ್ ಪೆರುಮಾಳ್ (ತಾಜುದ್ದೀನ್) ಅವರ ಮರಣ ದುಃಖ ವಾರ್ತೆಯನ್ನು ಮನೆಯವರ ಮುಂದಿಡುತ್ತಾರೆ..

ತಾಜುದ್ದೀನ್ ನಂತರದ ಹಿಂದು ರಾಜರು ಅರಮನೆಯಲ್ಲಿ ಮುಸ್ಲಿಮರಿಗೆ ಆಶ್ರಯ ನೀಡಿ ಭೋಜನವನ್ನು ನೀಡಿ ಸತ್ಕರಿಸಿದ ತಾಜುದ್ದೀನ್ ರಾಜರ ಕುಟುಂಬಕ್ಕೆ

ಮಾಲಿಕಿದೀನಾರ್ (ರ ಅ) ತಮ್ಮ ಬೇಡಿಕೆಯನ್ನಿಡುತ್ತಾರೆ ........,......*ತಾಜುದ್ದೀನ್ ಮರಣಾನಂತರದ ರಾಜ ನೊಂದಿಗೆ ತನಗೆ ನಮಾಝ್ ನಿರ್ವಹಿಸಲು
ಮಸೀದಿಯ ಅವಷ್ಯಕಥೆಯನ್ನು ಮುಂದಿಡುತ್ತಾರೆ.
ಹಾಗೆ ಮಾಲಿಕಿದೀನಾರ್ (ರ ಅ) ರೊಂದಿಗೆ  ನಿಮಗಿಷ್ಟವಾದ ಸ್ಥಳವನ್ನು ಆಯ್ದು ಕೊಳ್ಳಿ ಎಂದು ಕೊಡಂಗಲ್ಲೂರ್ ರಾಜ ಸಮ್ಮತ ನೀಡುತ್ತಾರೆ....!

ಆದರೆ ಅರಬ್ ನಿಂದ ಬಂದ ಮುಸ್ಲಿಮರಲ್ಲಿ ಮಸೀದಿ ನಿರ್ಮಿಸಲು ಹಣ ವಿಲ್ಲ. ಇವತ್ತು ನಾವು ಕಾಣುತ್ತಿರು ಸ್ವಪ್ನ ಭೂಮಿ ಯಾಗಿ ಗಲ್ಫ್ ಮಾರ್ಪಟ್ಟಿದ್ದು1960 ರಲ್ಲಿ ಪೆಟ್ರೋಲಿಯಂ  ಕಂಡು ಹಿಡಿದ ಮೇಲೆ  ಅದಕ್ಕಿಂತ ಮೊದಲು ಅರಬ್ ರಾಷ್ಟ್ರದ ವಾಣಿಜ್ಯ ಬೆಳೆ ಕೇವಲ ಖರ್ಜೂರವಾಗಿತ್ತು.ಮೀನು ಹಿಡಿಯುವುದು  ಅರಬಿಗಳ ಮುಖ್ಯ ಕಸುಬಾಗಿತ್ತು. ಹಳೇ ಕಾಲದಲ್ಲಿ
ವ್ಯಾಪಾರಕ್ಕಾಗಿ ಭಾರತಕ್ಕೆ ಅರಬಿಗಳು ಬರುವಾಗ ನಮ್ಮ  ಮುತ್ತಾತಂದಿರು ಅವರಿಗೆ ವೀಸಾ ಒದಗಿಸುವ ಪದ್ದತಿ ಇತ್ತು.
ಹೀಗೆ ದಾರಿದ್ರ್ಯ ಹೊಂದಿದ ಅರಬಿಗಳಿಗೆ ಮಸೀದಿ ನಿರ್ಮಿಸಲು
ದೇವಸ್ಥಾನಕ್ಕೆ ಎತ್ತಿಟ್ಟಿದ್ದ ಕಲ್ಲನ್ನು ಮಸೀದಿಗೆ ದಾನ ಮಾಡಿ ಮತಸೌಹಾರ್ಧವನ್ನು ಕಲಿಸಿದ ಮಾನವ ಸಂಸ್ಕಾರದ ಮೌಲ್ಯ ಗಳನ್ನು ಎತ್ತಿ ಹಿಡಿದ  ಹಿಂದು ದರ್ಮ...

ಇವತ್ತಿಗೂ ನೀವು ನೋಡಬಹುದು ಭಾರತದ ಮೊದಲ ಮಸೀದಿ ಕೊಡಂಗಲ್ಲೂರ್ ಚೇರಮಾನ್ ಮಸೀದಿ ಉಳಿದ ಭಾಗಗಳನ್ನು ಒಡೆದು ಹೊಸದಾಗಿ ನಿರ್ಮಿತವಾದರೂ ಒಳಬಾಗ ಮೊದಲಿನ ಹಳೇಯ ಕಟ್ಟಡ ಹಾಗೇ ಇದೆ.
ಹೀಗೆ ಮುಸ್ಲಿಂ ಸಮುದಾಯಕ್ಕೆ ಪ್ರಪಂಚದ ಯಾವ ಬಾಗದಿಂದಲೂ ನೋಡಲು ಸಾದ್ಯವಾಗದ ಅತ್ಯಂತ ಸುಂದರ ಸಂಸ್ಕಾರ ವನ್ನು ಮಾಲಿಕಿದೀನಾರ್ (ರ ಅ) ಮತ್ತು ಅನುಯಾಹಿಗಳು ನೋಡಲು ಸಾಧ್ಯವಾಗಿದ್ದು,
ಬಾರತಾಂಬೆಯ ಮಡಿಲಲ್ಲಿ ಹಿಂದು ದರ್ಮದ ಅನುಯಾಯಿಗಳಿಂದ,
14 ಅರಬ್ಬರನ್ನೊಳಗೊಂಡ ಮುಸ್ಲಿಮರಲ್ಲಿ ಇಬ್ಬರು ಸ್ತ್ರೀಗಳಿದ್ದರು
ಉಳಿದ 10 ಜನರಿಗೆ ಮದುವೆಯಾಗಿರಲಿಲ್ಲ .ಆ ಸಮಯ
73 ಒಳಜಾತಿಗಳಿದ್ದ ಹಿಂದೂ ದರ್ಮೀಯರು ಮುಂದೆ ನಿಂತು ಮದುವೆಯನ್ನು ಮಾಡಿಸುತ್ತಾರೆ .
ಅಷ್ಟು ದಿನ ಅಂಬಿಕಾ ಆಗಿದ್ದವಳು ಆಮೀನಾ ಆಗಿ ಮಾರ್ಪಟ್ಟಳು.ಆಶಾ ಆಗಿದ್ದವಳು ಹಲೀಮ ಆದಳು...
ಹೀಗೆ ಸರ್ವವನ್ನು  ನೀಡಿ ಸ್ವೀಕರಿಸಿದ ಭಾರತಾಂಬೆಯ ಹಿಂದುಗಳನ್ನು ಪ್ರತಿಯೊಬ್ಬ ಮುಸ್ಲಿಂ ಗೌರವಿಸಲೇ ಬೇಕು....

ಕೆಲವೊಮ್ಮೆ ತನ್ನ ಮನೆತನದ ಹೆಸರಿನಿಂದ ಅಭಿಮಾನ ಪ್ರಕಟಿಸುವ ಓ ಮುಸ್ಲಿಮರೇ ಉಮರ್ ಖಾಳಿ(ರ ಉ) ಎಂಬ ಅದ್ಭತ ಕವಿಯ ಕವಿತೆಯಿಂದ ತಿಳಿಯಬಹುದು ನೀವೆಲ್ಲರು ಒಂದೊಮ್ಮೆ ನಿಮ್ಮ ಮುತ್ತಾತಂದಿರ ಕಾಲದಲ್ಲಿ ನಾಯರ್,ನಂಬಿಯಾರ್,ಹೊಲೆಯರು,ಮಾದಿಗ ಕುಟುಂಬಕ್ಕೆ ಸೇರಿದವರು.
ಕೇವಲ ಅಹ್ಲು ಬೈತ್ ತಂಗಳ್  ಕುಟುಂಬ (ಪ್ರವಾದಿ ಕುಟುಂಬದವರು) ಬಿಟ್ಟು ಉಳಿದವರೆಲ್ಲರು ಇಲ್ಲಿನ ಹಿಂದೂ ಕುಟುಂಬಕ್ಕೆ ಸೇರಿದ ವರು.

ನಿಮ್ಮ ಅಹಂಕಾರದ ಅಭಿಮಾನವನ್ನು ದೂರವಾಗಿಸಿ  ಇಸ್ಲಾಂ ನಲ್ಲಿ ಮೇಲು ಕೀಳು ಭಾವನೆಗಳಿಲ್ಲದ ದರ್ಮ ವೆಂದು
ಸಾರಿ ಹೇಳುವ ಅದ್ಭುತ ಸಾಲುಗಳ ಒಡೆಯ ಉಮರ್ ಖಾಳಿ (ರ ಅ)

ಭಾರತಕ್ಕೆ ಇಸ್ಲಾಂ/ ಹಾಗು ವಿಶ್ವದ ಇತರೆಡೆ ಇಸ್ಲಾಂ

ಮೇಲು ಕೀಳಿಲ್ಲದ ಇಸ್ಲಾಂ ಗೆ  ನಿನ್ನೆ ಆಗಮಿಸಿದ ಚರ್ಮಣ..ನಾಳೆ ಮಸೀದಿಯಲ್ಲಿ ಖುತ್ಬಾ ನಿರ್ವಹಿಸುವ ಉಸ್ತಾದ್ ಗೆ ಮುಸ್ಸಾಫಾತ್ ನೀಡಲು ಅವಕಾಶ ಕೊಟ್ಟ ಧರ್ಮ ......!

ಅಷ್ಟಕ್ಕೇ ಸಾಲದು
ಅನ್ಯ ಧರ್ಮದ ಕೀಳು ಜಾತಿಯಲ್ಲಿದ್ದ ಚರ್ಮಣ,ಕುರ್ ಆನ್ ಪಾರಾಯಣ ಮಾಡುತ್ತಾ..ತಾನು ನಮಾಝ್ಗೆ ನೇತ್ರ್ ತ್ವ ವಹಿಸಲು ಕಲಿಸಿದ ಇಸ್ಲಾಂ...!

 ಅದೆಷ್ಟೋ ಜನರ ಸಮ್ಮುಖದಲ್ಲಿ ನಮಾಝ್ಗೆ ಮುಂದಾಳತ್ವ ನೀಡಲು ಇಸ್ಲಾಂ ನಲ್ಲಿ   ತಿಳುವಳಿಕೆ ಇದ್ದರೆ ಸಾಕು ಒಳ ಜಾತಿಗಳ ತಕರಾರಿಲ್ಲ.

ಇಸ್ಲಾಂ ನ ಆದರ್ಶ ವನ್ನು ನೋಡಿ  ಮುಸ್ಲಿಂ ರಾಗುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ .ಇದು ಭಾರತ ಮಾತ್ರವಲ್ಲ ವಿಶ್ವದ ಉದ್ದ ಅಗಲಕ್ಕೂ ಕೇಳುತ್ತಿರುವ ಮತ್ತು ನೋಡುತ್ತಿರುವ ವಿಶಯವಾಗಿದೆ‌.

ಭಾರತದಲ್ಲಿ 17 ಕೋಟಿ ಮುಸ್ಲಿಂ ಸಮುಧಾಯದವರಿದ್ದಾರೆ,ಕೆಲವೊಮ್ಮೆ ನೀವು ಕೇಳಿರಬಹುದು....

ಇದೆಕ್ಕೆಲ್ಲ ಕಾರಣ ಬಹು ಪತ್ನಿತ್ವ ಹಾಗು ಜನಸಂಖ್ಯಾ ನಿಯಂತ್ರಣದಲ್ಲುಂಟಾದ  ಕೊರತೆ,ಭಾರತ ದೇಶದಲ್ಲಿ ಮುಸ್ಲಿಂ ಸಮುದಾಯ ಬಹು ಪತ್ನಿತ್ವ ಅಸ್ತಿತ್ವ ದಲ್ಲಿರುವು ಕೇವಲ ಶೇಖಡ ಎರಡರಷ್ಟು ಮಾತ್ರ ....!

ಯೂರೋಪ್ ದೇಶಗಳನ್ನೊಮ್ಮೆ ನೋಡೋಣ !

ವಿಶ್ವದ ವಾಣಿಜ್ಯ ನಗರ ಲಂಡನ್ ಇರುವ ಬ್ರಿಟನ್.
ಮುಸ್ಲಿಂ ಸಮುದಾಯವನ್ನು ಅತ್ಯಂತ ಕಡೆಗಣಿಸುವ ಮತ್ತು ಕೀಳಾಗಿ ನೋಡುವ ಒಕ್ಕೂಟ.

 ಇಲ್ಲಿ ಬೆಳೆಯುತ್ತಿರುವ ಇಸ್ಲಾಂ ವೇಗ ವು  ಅಲ್ಲಿನ ಆಡಳಿತಕ್ಕೆತಲೆನೋವಾಗಿ ಪರಿಣಮಿಸಿದೆ.ಲಂಡನ್ ನಗರದ ಇತ್ತೀಚಿನ ವರದಿಗಳ ಪ್ರಕಾರ ಇಲ್ಲಿ ಚರ್ಚ್ ಗಳಿಗಿಂತ ಹೆಚ್ಚು ಮಸೀದಿಗಳಿವೆ,ಶೇಖಡಾ ಇಪ್ಪಕ್ಕಿಂತ ಹೆಚ್ಚಿನ ಪ್ರಮಾಣದ ಮುಸ್ಲಿಮರಿದ್ದಾರೆ ಬ್ರಿಟನ್ ಕೇಂದ್ರವಾದ ಇಂಗ್ಲೇಂಡಿನಲ್ಲಿ.

 ಫ್ರಾನ್ಸ್ ಕೇವಲ 15 ವರ್ಷ ಕಳೆದರೆ ಇಸ್ಲಾಂ ರಾಷ್ಟ್ರ ಆಗುವ ಎಲ್ಲಾ ಸೂಚನೆಗಳಿವೆ.
 2050 ರ ವೇಳೆಗೆ ಜರ್ಮನಿ ಇಸ್ಲಾಮೀ ಕರಣ ಗೊಳ್ಳಲಿದೆ ಎಂದು ಮಾದ್ಯಮದ ಮುಂದೆ ಬಹಿರಂಗವಾಗಿ ಹೇಳಿಕೊಂಡಿದೆ... ..ಹೀಗೆ ಯೂರೋಪ್  ಒಕ್ಕೂಟದ 28  ರಾಷ್ಟ್ರಗಳಲ್ಲಿ ಶೇಖಡಾ ತೊಂಬತ್ತರಷ್ಟು ಇಸ್ಲಾಂ ರಾಷ್ಟ್ರ ವಾಗುವ ಸೂಚನೆಯನ್ನು ನೀಡಿದೆ..!

ಆಫ್ರಿಕಾ
ವಿಶ್ವದ ಎರಡನೇ ದೊಡ್ಡ ಖಂಡದಲ್ಲಿ
ಒಟ್ಟು 54 ರಾಷ್ಟ್ರಗಳಿವೆ ಇದರಲ್ಲಿ 15 ಕ್ಕಿಂತ ಹೆಚ್ಚಿನ ದೇಶಗಳಲ್ಲಿ ಶೇಖಡಾ 50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ.ವರ್ಣಭೇದ ವಿಲ್ಲದ ಇಸ್ಲಾಂ,ಆಫ್ರಿಕಾ ಖಂಡದ ಕಪ್ಪು ಜನರ ಮನದಾಳದಲ್ಲೂ ನೆಲೆಯೂರಿ ನಿಂತಿದೆ.

ಏಷ್ಯಾಖಂಡ

ಏಷ್ಯಾದಲ್ಲಿ ವಿಶ್ವದ ಶೇಖಡ 62ರಷ್ಟು ಮುಸ್ಲಿಮರಿದ್ದಾರೆ.

48ರಾಷ್ಟ್ರಗಳನ್ನೊಳಗೊಂಡ ಏಷ್ಯಾ ಖಂಡದ ಜನಸಂಖ್ಯೆ ಯಲ್ಲಿ ಇಸ್ಲಾಂ ಮೊದಲ ಸ್ಥಾನದಲ್ಲಿದೆ.

ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರ ಜನ್ಮ ನಾಡಾದ ಮಕ್ಕಾ ಒಳಗೊಂಡ ಏಷ್ಯಾಖಂಡದ
ಉದ್ದ ಅಗಲಕ್ಕೂ ಇಸ್ಲಾಂ ಗಣನೀಯ ಬೆಳವಣಿಗೆಯನ್ನು ನೋಡಬಹುದು.

ಯೂರೋಪ್ ಮತ್ತು ಏಷ್ಯಾ ಮದ್ಯೆ ಇರುವ ರಷ್ಯಾದ ಸೇನಾಪಡೆಯಲ್ಲಿ ಶೇಖಡಾ 40ರಷ್ಟು ಮುಸ್ಲಿಮರಿದ್ದಾರೆ....ಹೇಗೆ ಸಾಧ್ಯವಾಯಿತು..ಇದೆಲ್ಲ?

ಮುಸ್ಲಿಮರನ್ನು ವ್ಯಂಗ್ಯಮಾಡುವ ಆಧುನಿಕ ಜಗತ್ತಿನ ಒಡೆಯರಾದ ಅಮೇರೀಕಾ ಇದರಿಂದ ಹೊರತಾಗಿಲ್ಲ ....
1970ರ ದಶಕದಲ್ಲಿ ಕೇವಲ 10000 ದೊಳಗಿದ್ದ ಮುಸ್ಲಿಮರ ಸಂಖ್ಯೆ.ಇವತ್ತು 30 ಲಕ್ಷ ದಾಟಿದೆ
ಇದೆಕ್ಕೆಲ್ಲ ಕಾರಣ ಪರಿಶುದ್ದ ಮತ್ತು ಪವಿತ್ರ ಕುರ್ ಆನ್ ಸಂದೇಶ ವಾಣಿಯಾಗಿದೆ.

 ಕುರ್ ಆನ್ ಅದ್ಯಯನ ಮಾಡಲು ಹೊರಟ ಪಾಶ್ಚಾತ್ಯರು ತಂಡೋಪ ತಂಡವಾಗಿ ಇಸ್ಲಾಂ ನೆಡೆ ಆಗಮಿಸುತ್ತಿದ್ದಾರೆ..,

ವಿಶ್ವದ ಅತ್ಯಂತ ಪ್ರಸಿದ್ದ ಕ್ರೀಡಾಪಟುಗಳು,ಪ್ರತಿಭಾವಂತ ವಿದ್ವಾಂಸರು..ಇಸ್ಲಾಂ ನೆಡೆಗೆ ಬರುತ್ತಿರುವುದನ್ನು ನಾವು ವಿಶ್ವದ ಉದ್ದ ಅಗಲಕ್ಕೂ ನೋಡಬಹುದು.

ಭಯೋತ್ಪಾದಕ ರೆಂಬ ಹಣೆ ಪಟ್ಟಿ ಇಸ್ಲಾಂ ನ ಆದರ್ಶವನ್ನು ಕುಗ್ಗಿಸಲು ಹೊರಟ ರಾಷ್ಟ್ರಗಳು ಮುಸ್ಲಿಮರ ಒಳ ಪ್ರವೇಶ ನಿಶೇದಿಸುತ್ತಾರೆ...

ಇದು ಮುಸ್ಲಿಮರ ಮನಸ್ಸಿಗೆ ಅತೀವ ನೋವನ್ನುಂಟು ಮಾಡುತ್ತಿರುವ ವಿಶಯವಾದರೂ...

ಎಲ್ಲಾ  ವಿಷಯಗಳನ್ನು ಕಾಣುವ ಮತ್ತು ಕೇಳುತ್ತಿರುವ ಶರ್ವ ಶಕ್ತನಾದ ಅಲ್ಲಾಹುವಿನ ಮೇಲಿರುವ  ವಿಶ್ವಾಸವೇ *ಇಸ್ಲಾಂ
ವಿಜಯಕ್ಕೆ* ಕಾರಣವಾಗಿದೆ...

ಅಬ್ದುಲ್ ರಶೀದ್ ಪಿಎ
 ಕೊಡಗು
rasheed766@gmail.com

No comments:

Post a Comment