Saturday, October 7, 2017

*ಬೀವಿ ಆತಿಕಾ (ರ)*

ಭಾಗ--4

📝ಮುನೀರ್ ಸಖಾಫಿ, ಸಾಲೆತ್ತೂರು.


*ಒಂದನೇ ಪ್ರಶ್ನೆಯ 2 ನೇ ಉತ್ತರ.*

ಉಮರ್ (ರ)ರವರಿಗೆ ಆತಿಕ ಬೀವಿಯನ್ನು ವಿವಾಹವಾದಲ್ಲಿ ತಂತ್ರ ಪೂರ್ವಕ ಮಸೀದಿ ಪ್ರವೇಶವನ್ನು ತಡೆಯಬಹುದೆಂಬ ದೃಢ ವಿಶ್ವಾಸವಿತ್ತು.ಅದರಲ್ಲಿ ಅವರು ಯಶಸ್ಸು ಕಂಡರು.
ಇಮಾಮ್ ಉಂದುಲುಸೀ (ರ) ಬರೆಯುತ್ತಾರೆ;
(ಲೇಖನ ಧೀರ್ಘವಾಗುವ ಭಯದಿಂದ ಅರಬಿ ಉದ್ಧರಣೆ ನೀಡುವುದಿಲ್ಲ.ಅಗತ್ಯವಿರುವವರಿಗೆ ಬೇಕಾದಲ್ಲಿ ಕಳುಹಿಸಿ ಕೊಡುವೆನು:ಲೇ)
ಆತಿಕ ಬೀವಿ ಪತಿಯಾದ ಉಮರ್ (ರ)ರಲ್ಲಿ ಮಸೀದಿಗೆ ಹೋಗಲು ಅನುಮತಿ ಕೇಳುವಾಗಲೆಲ್ಲಾ ಉಮರ್ (ರ)ಮೌನವಾಗುತ್ತಿದ್ದರು.ಆಗ ಆತಿಕ ಬೀವಿ ಹೇಳುವರು;ನೀವು ತಡೆಯದಿದ್ದಲ್ಲಿ ನಾನು ಖಂಡಿತಾ ಹೋಗುವೆನು".ಅಲ್ಲಾಹನ ದಾಸಿಯರಾದ ಸ್ತ್ರೀಯರನ್ನು ಅಲ್ಲಾಹನ ಮಸೀದಿಗಳಿಂದ ನೀವು ತಡೆಯದಿರಿ" ಎಂಬ ಪ್ರವಾದಿ ವಚನಕ್ಕೆ ವಿರುದ್ಧವಾಗುದನ್ನು ತಪ್ಪಿಸಲು ಉಮರ್ (ರ)ಮಸೀದಿಯಿಂದ ಅವರನ್ನು ತಡೆಯುತ್ತಿರಲಿಲ್ಲ.
ಒಂದು ದಿನ  ಆತಿಕ ಬೀವಿ ಸುಬಹಿ ನಮಾಝಿಗೆ ಮಸೀದಿಗೆ ಹೂರಟರು.ಸ್ವಲ್ಪ ಮುಂಚೆಯೇ ಮಸೀದಿಗೆ ತೆರಳಿದ ಉಮರ್ (ರ) ದಾರಿ ಮಧ್ಯೆ ಇರುಳು ಕೂಡಿದ ಪ್ರದೇಶದಲ್ಲಿ ಅವಿತು ಕುಳಿತರು.ಆತಿಕ ಬೀವಿ ಸಮೀಪಿಸುತಿದ್ದಂತೆಯೇ ಉಮರ್ (ರ)ಅವರ ಮೇಲೆ ಎರಗಿ ಎದೆಯ ಭಾಗಕ್ಕೆ ಏಟು ಕೊಟ್ಟರು.ಏಟು ಕೊಟ್ಟವರು ಯಾರೆಂದು ತಿಳಿಯದಿರಲು ಉಮರ್(ರ) ಅವರಲ್ಲಿ  ಒಂದೇ ಒಂದು  ಮಾತನ್ನಾಡಿಲ್ಲ.
ನಂತರ ಆತಿಕ ಬೀವಿ ಮಸೀದಿಗೆ ತೆರಳದೆ ಅರ್ಧದಿಂದಲೇ ಮನೆಗೆ ಮರಳಿದರು.ಅದರ ನಂತರ ಆತಿಕ ಬೀವಿ ಮಸೀದಿಗೆ ತೆರಳಿಲ್ಲ.
ಮಸೀದಿಗೆ ತೆರಳದಿರುವುದನ್ನು ಕಂಡ ಉಮರ್ (ರ)ಪತ್ನಿಯೊಂದಿಗೆ  ಕೇಳಿದರು;ಯಾಕೆ ನೀನು ಮಸೀದಿಗೆ ಹೋಗುತ್ತಿಲ್ಲ?.
ಆವಾಗ ಆತಿಕ ಬೀವಿ ಹೇಳಿದರು;ಜನರು ಹಾಳಾಗಿದ್ದಾರೆ.
ಮಸೀದಿಗೆ ತೆರಳದಿರಲು ಅವರು ಹೇಳಿದ ಕಾರಣ ಜನರು ಹಾಳಾಗಿದ್ದಾರೆ ಎಂಬುವುದಾಗಿದೆ. ಅನುಸರಿಸಬೇಕೆಂದು ಅಲ್ಲಾಹನು ನಮ್ಮಲ್ಲಿ ಆಜ್ಞಾಪಿಸಿದ ನಾಲ್ಕು ಖಲೀಫರುಗಳಲೊಬ್ಬರೂ ಎರಡು ಉಮರ್ ಗಳ ಪೈಕಿ ಒಬ್ಬರೂ ಆದ   ಉಮರ್ (ರ) ಆತಿಕ ಬೀವಿಯ ಪ್ರಸ್ತುತ ಮಾತನ್ನು ಒಪ್ಪಿಕೊಂಡರು.
(ಬಹ್ ಜತುನ್ನುಫೂಸ್ 1/212)


ಉಮರ್(ರ)ಆತಿಕ ಬೀವಿಗೆ ಏಟು ಕೊಟ್ಟ ಪ್ರಸ್ತುತ ಘಟನೆಯನ್ನು ವಹ್ಹಾಬಿಗಳ ಅಂಗೀಕೃತ ನಾಯಕ ಇಬ್ನ್ ಕಸೀರ್ ರ ಅಲ್ ಬಿದಾಯತು ವನ್ನಿಹಾಯದ 6/353ರಲ್ಲೂ ವಿವರಿಸಿದ್ದಾರೆ.

ತಂತ್ರಪೂರ್ವಕ ಆತಿಕ ಬೀವಿಯನ್ನು ಮಸೀದಿಯಿಂದ ತಡೆಯುವ ಉದ್ದೇಶವಾಗಿತ್ತು ಉಮರ್(ರ) ರವರದ್ದು  ಎಂಬುವುದು ಇದರಿಂದ ಬಹಳ ಸ್ಪಷ್ಟ.ಈ ತಂತ್ರ ಪಾಯೋಗಿಕವಾಗಿ ಜಾರಿಗೆ ತರಬೇಕಾದರೆ ವಿವಾಹವಾಗಲೇ ಬೇಕು.
ಕಾರಣ , ಅನ್ಯ ಸ್ತ್ರೀ ಗೆ ದಾರಿಯಲ್ಲಿ ಅವಿತು ಕುಳಿತು ಏಟು ಕೊಡುವಂತಿಲ್ಲ.
ವಿವಾಹವಾದರೆ ತನ್ನ ಪತ್ನಿಗೆ ಏಟು ಕೊಟ್ಟಲ್ಲಿ ಅದರಿಂದ ತೊಂದರೆಯುಂಟಾಗಲಾರದು.ಇದು ಮನಗಂಡ ಉಮರ್ (ರ)ಆತಿಕ ಬೀವಿಯ ಪ್ರಸ್ತುತ ನಿಬಂಧನೆಗೆ ಒಪ್ಪಿಗೆ ಸೂಚಿಸಿದ್ದರು.
ಫಸಾದ್ ಉಂಟಾಗುವ ವೇಳೆ ಸ್ತ್ರೀಯರು ಮಸೀದಿ ಹೋಗಬಾರದೆಂಬ ವಿಶ್ವಾಸವೇ ಆತಿಕ ಬೀವಿಗೆ ಇದ್ದದ್ದು ಎಂಬುವುದು ಇದರಿಂದ ಬಹಳ ವ್ಯಕ್ತ.ಅದರ ನಂತರ ಆತಿಕ ಬೀವಿ ಮಸೀದಿಗೆ ತೆರಳದಿರುವುದೇ ಅದಕ್ಕೆ ಆಧಾರ.
ಫಸಾದ್ ಉಂಟಾಗುವ ಒಂದು ರೂಪವನ್ನು ಉಮರ್ (ರ) ಆತಿಕ ಬೀವಿಗೆ ಮನದಟ್ಟು ಮಾಡಿ ಕೊಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ.ಅದರಲ್ಲಿ ಉಮರ್(ರ)ಯಶಸ್ವಿಯಾದರು.


*ಮಂದುವರಿಯುದು.....*


ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ

No comments:

Post a Comment