ಉರೂಸ್ ಆಚರಣೆ ಇಸ್ಲಾಮಿನಲ್ಲಿ.
ಭಾಗ -7
📝 ಟಿ.ಎಂ ಮುಹ್ಯಿದ್ದೀನ್ ಖಾಮಿಲ್ ಸಖಾಫಿ , ತೋಕೆ.
ಇನ್ನು ಈ ಸೊಳಪಿಗಳಲ್ಲಿ ಎರಡು ಪ್ರಶ್ನೆಗಳು.
1.ಖಬರನ್ನು ಒಂದು ಅಂಗುಲಕ್ಕಿಂತ ಹೆಚ್ಚು ಎತ್ತರಿಸುವುದು ಹರಾಮ್ ಅಥವಾ ಶಿರ್ಕ್ ಎಂದು ಹೇಳುವ ಯಾವುದೇ ಒಂದು ಆಯತ್ ಅಥವಾ ಹದೀಸನ್ನು ತೋರಿಸಿಕೊಡಬಹುದೇ?
2.ಪೂರ್ವಿಕ ವಿಧ್ವಾಂಸರಲ್ಲಿ ಯಾರಾದರೊಬ್ಬರು ಅದು ಹರಾಮ್ ಅಥವಾ ಶಿರ್ಕ್ ಎಂದು ಹೇಳಿದ್ದಾಗಿ ತೋರಿಸಿಕೊಡಬಹುದೇ?
ಖಬರ್ ಕಟ್ಟುವುದು:
ಕಲ್ಲು , ಇಟ್ಟಿಗೆಗಳ ಮೂಲಕ ಗಾರೆ ಹಾಕಿ ಖಬರನ್ನು ಕಟ್ಟುವುದರ ವಿಧಿಯೇನೆಂಬುವುದನ್ನು ಪರಿಶೀಲಿಸುವುದಕ್ಕಿಂತ ಮುಂಚಿತವಾಗಿ ಅದರ ಹಲವು ರೂಪಗಳನ್ನು ತಿಳಿದು ಕೊಳ್ಳೋಣ.
1.ಸಾಮಾನ್ಯ ವ್ಯಕ್ತಿಯ ಖಬರನ್ನು ಸ್ವಂತ ಭೂಮಿಯಲ್ಲಿ ಕಟ್ಟುವುದು.
2.ಸಾಮನ್ಯ ವ್ಯಕ್ತಿಯ ಖಬರನ್ನು ಮೌಖೂಫ್ ( ದಫನ ಮಾಡಲು ವಖಫ್ ಮಾಡಲ್ಪಟ್ಟ ಭೂಮಿ)
ಆದ ಸ್ಥಳದಲ್ಲಿ ಕಟ್ಟುವುದು.
3.ಸಾಮಾನ್ಯ ವ್ಯಕ್ತಿಯ ಖಬರನ್ನು ಮುಸಬ್ಬಲತ್ ( ಒಂದು ಊರಿನ ಜನತೆಯ ದಫನ್ ಮಾಡುತ್ತಾ ಬಂದ ಪ್ರತ್ಯೇಕ ಭೂಮಿ) ಆದ ಭೂಮಿಯಲ್ಲಿ ದಫನ್ ಮಾಡುವುದು.
4.ಮಹಾ ಪುರುಷರ ಖಬರನ್ನು ಕಟ್ಟುವುದು.
ಇದರಲ್ಲಿ ಒಂದನೆಯದರ ವಿಧಿ ಅಂದರೆ ಸಾಮಾನ್ಯ ವ್ಯಕ್ತಿಯ ಖಬರನ್ನು ಸ್ವಂತ ಭೂಮಿಯಲ್ಲಿ ಕಟ್ಟುವುದು ಕರಾಹತ್ ಆಗಿದೆ.ಅದಕ್ಕಿರುವ ಕಾರಣ ಅದು ಅನಪೇಕ್ಷಿತವಾಗಿ ಸೌಂಧರ್ಯ ಹಾಗೂ ಜಂಭತನವನ್ನು ಸೂಚಿಸುತ್ತದೆ ಎಂಬುವುದಾಗಿದೆ.ಬಹು! ಇಮಾಮ್ ಶಾಫೀ ರಲಿಯಲ್ಲಾಹು ಅನ್ಹು ರವರು ಹೇಳುತ್ತಾರೆ,
" ಖಬರ್ ಕಟ್ಟುವಿಕೆ ಹಾಗೂ ಅದಕ್ಕೆ ಹುಡಿಸುಣ್ಣ ಹಾಕಿ ಬಿಲುಪುಗೊಳಿಸುವುದನ್ನು ನಾನು ಇಷ್ಟಪಡುವುದಿಲ್ಲ.ಏಕೆಂದರೆ ಅದು ಅನಪೇಕ್ಷಿತ ಸೌಂಧರ್ಯ ಹಾಗೂ ಜಂಭತನವನ್ನು ಹೋಲುತ್ತದೆ."
( ಕಿತಾಬುಲ್ ಇಮ್ಮ್ 316 /1)
ಇದೇ ಆಶಯವನ್ನು ಇತರ ಹಲವಾರು ಗ್ರಂಥಗಳಲ್ಲಿ ಕಾಣಬಹುದು.
ಬಹು ಮಾನ್ಯರಾದ ಇಮಾಮ್ ಝೈನುದ್ದೀನ್ ಮಖ್ದೂಂ ರಳಿಯಲ್ಲಾಹು ಅನ್ಹು ಹೇಳುತಾರೆ ,
" ಖಬರಿನೊಳಗೆ ಅಥವಾ ಮೇಲೆ ಕಟ್ಟುವುದು ಕರಾಹತ್ ಆಗಿದೆ. ( ಫತ್ ಹುಲ್ ಮುಈನ್ 154)
ಇಮಾಮ್ ನವವೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಖಬರಿಗೆ ಹುಡಿಸುಣ್ಣ ಹಾಕಿ ಬಿಳುಪುಗೊಳಿಸುವುದು ಮತ್ತು ಅದರ ಮೇಲೆ ಕಟ್ಟುವುದು ಕರಾಹತ್ ಆಗಿದೆ.(
ತುಹ್ಫಾ 196 /3)
ಅದೇ ರೀತಿ ನಿಹಾಯ 34/ 3 , ಶರ್ಖಾವಿ 345 / 1 , ಬುಜೈರಿಮಿ 263 / 2 , ಫತ್ ಹುಲ್ ಅಲ್ಲಾಂ 2883 / 3 , ಮುಂತಾದ ಸರ್ವ ಗ್ರಂಥಗಳಲ್ಲೂ ಕಾಣಬಹುದು.
ಈ ವಿವರಣೆಯಿಂದ ಎರಡು ಮುಖ್ಯ ಕಾರ್ಯಗಳು ಇಲ್ಲಿ ಸರಿಯಾಗಿ ತಿಳಿದು ಕೊಳ್ಳಬೇಕಾಗಿದೆ.
1.ಸಾಮಾನ್ಯ ವ್ಯಕ್ತಿಯ ಖಬರನ್ನು ಎತ್ತರಿಸಿ ಕಟ್ಟುವುದರ ವಿಧಿ ಸ್ವಂತ ಭೂಮಿಯಲ್ಲಾಗಿದ್ದರೆ ಕರಾಹತ್ ಮಾತ್ರವಾಗಿದೆ.ಶಿರ್ಕೋ , ಕುಫ್ರೋ , ಹರಾಮೋ ಅಲ್ಲ.
ಆದ್ದರಿಂದ ಖಬರ್ ಎತ್ತರಿಸಿ ಕಟ್ಟುವುದು ಶಿರ್ಕ್ , ಕುಫ್ರ್ , ಹರಾಮ್ ಎಂದು ಲಾಗ ಹಾಕುವುದು ವಹ್ಹಾಬಿ ಹಾಗೂ ಜಮ ಮೌಲವಿಗಳ ಕಾಪಟ್ಯವಾಗಿದೆ.
2. ಈ ಎತ್ತರಿಸಿ ಕಟ್ಟುವಿಕೆಯು ಖಬರ್ ಆರಾಧನೆಯೆಂದು ಅವರ್ಯಾರು ಹೇಳಿಲ್ಲ.ಹಾಗಿದ್ದರೆ ಅದು ಕುಫ್ರ್ ಆಗಬೇಕಿತ್ತು.ಅವರು ಹೇಳಿದ್ದು ಕೇವಲ ಕರಾಹತ್ ಎಂದು ಮಾತ್ರವಾಗಿದೆ.ಕರಾಹತ್ ಎಂದರೆ ಶಿಕ್ಷೆ ಇಲ್ಲದ್ದೂ ಉಪೇಕ್ಷಿಸಿದರೆ ಪುಣ್ಯ ಇರುವಂತದ್ದೂ ಆಗಿದೆ. ಈ ಎತ್ತರಿಸಿ ಕಟ್ಟುವಿಕೆಯು ಕರಾಹತ್ ಆಗಲು ಅವರು ಹೇಳಿದ ಕಾರಣವೇನೆಂದರೆ ಅದು ಜಂಭತನ ಹಾಗೂ ಅನಪೇಕ್ಷಿತ ಸೌಂಧರ್ಯವನ್ನು ಸೂಚಿಸುತ್ತದೆ ಎಂಬುವುದು ಮಾತ್ರವಾಗಿದೆ.ಹೊರತು ಖಬರ್ ಆರಾಧನೆ ಎಂದು ಅಲ್ಲ.ಆದ್ದರಿಂದ ಇಲ್ಲೂ ಕೂಡಾ ಮೌಲವಿಗಳ ಕಾಪಟ್ಯವನ್ನು ಜನ ಸಾಮಾನ್ಯರು ತಿಳಿದು ಕೊಳ್ಳಬೇಕಾಗಿದೆ.ಇವಿಷ್ಟು ಸಾಮಾನ್ಯ ವ್ಯಕ್ತಿಯ ಖಬರನ್ನು ಆತನ ಸ್ವಂತ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದರ ವಿಷಯವಾಗಿದೆ.
ಮುಂದುವರಿಯುವುದು...
No comments:
Post a Comment