*ಕುತ್ತ್ ರಾತೀಬ್ ಇಸ್ಲಾಮಿಕವೇ?*
ಭಾಗ--3
📝 _ಮುನೀರ್ ಸಖಾಫಿ ಸಾಲೆತ್ತೂರು_
----------------------------------------------------
ಪವಾಡಗಳು ಅವರವರ ಕರಾಮತ್ತಾಗಿ ಸಂಭವಿಸಬೇಕಾದರೆ ಪ್ರಸ್ತುತ ನಿಯಮಗಳು ಅಡಗಿರಬೇಕು ಎಂದಾಗಿದೆ ಮೇಲಿನ ಇಬಾರತ್ತಿನಲ್ಲಿ ಹೇಳಿದ್ದು.ಅದೇ ವೇಳೆ ಒಂದು ಪ್ರವಾದಿಯ ಅಥವಾ ವಲಿಯ್ಯ್ ನ ಕರಾಮತ್ ಇನ್ನೊಬ್ಬರಲ್ಲಿ ಪ್ರಕಟವಾಗಲು ಪ್ರಸ್ತುತ ನಿಬಂಧನೆ ಬಾಧಕವಲ್ಲ.ಅದು ದುಷ್ಕರ್ಮಿಯಲ್ಲೂ ,ಕಾಫಿರಾದ ವ್ಯಕ್ತಿಯಲ್ಲೂ ಪ್ರಕಟವಾಗಬಹುದಾಗಿದೆ.
ಔಲಿಯಾಗಳನ್ನು ನಿಂದಿಸಿದ ಎಷ್ಟೋ ದುಷ್ಕರ್ಮಿಗಳಿಗೆ ಔಲಿಯಾಗಳ ಕರಾಮತ್'ನ ಮೂಲಕ ನಾಶ ನಷ್ಟ ಸಂಭವಿಸಿದ್ದು ಚರಿತ್ರೆಗಳಲ್ಲಿದೆ.
ಇಮಾಮ್ ಇಬ್ನ್ ಹಜರ್ (ರ) ಹೇಳುತ್ತಾರೆ,
وقد تظهر الكرامة علي يد فاسق بل كافر كالسامري فانه رأى فرس جبريل حتي اخذ من تراب حافرها وجعله في
العجل فخار.(فتاوي الكبري للهيتمي 4/352)
ಕೆಲವೊಮ್ಮೆ ಔಲಿಯಾಗಳ ಕರಾಮತ್ ಸತ್ಯ ನಿಷೇಧಿ ಅಥವಾ ದುಷ್ಕರ್ಮಿಯ ಮೂಲಕ ಪ್ರಕಟವಾಗಬಹುದು.ಜಿಬ್ರೀಲ್ ಅಲೈಹಿಸ್ಸಲಾಮ್ ರ ಕುದುರೆಯ ಕಾಲು ತಾಗಿದ ಮಣ್ಣು ತೆಗೆದು"ಸಾಮಿರಿ" ಎಂಬಾತನು ಆತ ನಿರ್ಮಿಸಿದ ಹಸುವಿನ ಕರು ವಿಗೆ ಹಾಕಿದಾಗ ಅದು ಶಬ್ಧವುಂಟು ಮಾಡಿತು.
(ಫತಾವಲ್ ಕುಬ್ರಾ 4/352)
----------------------------------------------------
ಇಲ್ಲಿ ಜಿಬ್ರೀಲ್ (ಅ) ರ ಕರಾಮತ್ ಸಾಮಿರಿಯಲ್ಲಿ ಪ್ರಕಟವಾಯಿತು.ಆತ ಕಾಫಿರನಾಗಿದ್ದ.
ಇಮಾ ಗಝ್ಝಾಲೀ(ರ)ಹೇಳುತ್ತಾರೆ,
يجوز ظهور ذلك علي يد فاسق لانه مقدور في نفسه
(الاقتصاد في الاعتقاد 1/63)
ದುಷ್ಕರ್ಮಿಯಲ್ಲೂ ಔಲಿಯಾಗಳ ಕರಾಮತ್ ಪ್ರಕಟವಾಗಬಹುದು.ಕಾರಣ ಅದು ಅಸಂಭವ್ಯವಾದ ಸಂಗತಿಯಲ್ಲ.
(ಅಲ್ ಇಖ್ತಿಸ್ವಾದ್ ಫಿಲ್ ಇಹ್'ತಿಖಾದ್ 1/63)
----------------------------------------------------
ಒಟ್ಟಿನಲ್ಲಿಒಬ್ಬ ವ್ಯಕ್ತಿ ಶರೀಅತ್ ನ ನಿಯಮಗಳನ್ನು ಪಾಲಿಸಿ ಅವನಿಂದ ಪವಾಡಗಳು ಪ್ರಕಟವಾದಲ್ಲಿ ಅದು ಆತನ ಕರಾಮತ್ ಎಂದೂ ಶರೀಅತ್ ನಿಯಮ ಪಾಲಿಸದವನಾಗಿದ್ದರೆ, ಪವಾಡ ಶಕ್ತಿ ಕಲಿತು ಪ್ರಕಟ ಮಾಡಿದ್ದಲ್ಲಿ ಅದು ಸಿಹ್ರ್ ಎಂದೂ ಹೇಳಬಹುದಾಗಿದೆ.ಇದ್ಯಾವುದೂ ಇಲ್ಲದ ಕೇವಲ ಒಬ್ಬ ಸಾಧಾರಣ ವ್ಯಕ್ತಿಯಿಂದ ಅಧ್ಬುತ ಪವಾಡಗಳು ಪ್ರಕಟವಾದಲ್ಲಿ ಆತ ಯಾವ ಪ್ರವಾದಿಗೆ ಅಥವಾ ವಲಿಯ್ಯ್ ಗೆ ಸೇರಿಸಿ ಅದನ್ನು ಹೇಳುತ್ತಾನೋ ಅದು ಅವರ ಮುಹ್'ಜಿಝತ್ ಅಥವಾ ಕರಾಮತ್ ಆಗಿ ಪರಿಗಣಿಸಲ್ಪಡಲಾಗುತ್ತದೆ.
ಕುತ್ತ್ ರಾತೀಬ್ ಎಂಬುವುದು ರಿಫಾಈ ರಾತೀಬ್ ನಲ್ಲಿ ನಡೆಸುವ ಒಂದು ಕ್ರಿಯೆ ಆಗಿರುವುದರಿಂದ ಅದು ರಿಫಾಯೀ ಶೈಖ್ (ರ)ರಿಗೆ ಸೇರಿದ ಕರಾಮತ್ ಎಂದು ಹೇಳಬಹುದು.
ಕುತ್ತು ರಾತೀಬ್ ನಡೆಸುವವರು ಸುನ್ನತ್ ಗಳನ್ನು ಪಾಲಿಸದವರು.ಅವರಲ್ಲಿ ಹೇಗೆ ಪವಾಡ ನಡೆಯಬಹುದು ಎಂಬ ಸಂಶಯ ಕೆಲವರಿಗಾದರೂ ಇದೆ.
ಅದರ ಉತ್ತರವನ್ನಾಗಿದೆ ಮೇಲೆ ಓದಿದ್ದು.
ಯಾವುದೇ ಕಾರಣವಿಲ್ಲದೆ ಶರೀರಕ್ಕೆ ಗಾಯ ಮಾಡಬಾರದು.ಚಿಕಿತ್ಸೆಯ ಭಾಗವಾಗಿ ಶರೀರಗಳನ್ನು ಗಾಯ ಮಾಡುವುದು/ಭಾಗಗಳನ್ನು ಕೊಯ್ಯುವುದು ಸ್ವಾಭಾವಿಕವಾಗಿದೆ.
ಕರಾಮತ್ ಎಂಬ ಪವಾಡವನ್ನು ನಿಷೇಧಿಸುವವರ ಮುಂದೆ ಔಲಿಯಾಗಳಿಗೆ ಕರಾಮತ್ ಇದೆ ಎಂದು ತೋರಿಸಲು ಆತ್ಮೀಯ ಚಿಕಿತ್ಸೆಯ ಭಾಗವಾಗಿ ರಾತೀಬ್ ನಲ್ಲಿ ಆಯುಧಗಳಿಂದ ಚುಚ್ಚಿದರೆ ಅದನ್ನು ತಪ್ಪು ಎಂದು ಹೇಗೆ ತಾನೇ ಹೇಳುವುದು?
ಪುರಾವೆಗಳು ಇನ್ನೂ ಇವೆ.
ಬೇಕಾದಲ್ಲಿ ಇನ್ನೊಮ್ಮೆ ಬರೆಯುವೆ.ಇಂಶಾ ಅಲ್ಲಾಹ್.
*ಮುಗಿಯಿತು.....*
----------------------------------------------------
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment