*ಝಿಯಾರತ್ತ್ ಕೇಂದ್ರ*
👉🏻👉🏻 7⃣3⃣
➖➖➖➖➖➖➖➖➖
*ಝೈನುದ್ದೀನ್ ಮುಸ್ಲಿಯಾರ್ ಎಂಬ ತೇನು ಮುಸ್ಲಿಯಾರ್ (ನ:ಮ) ಕೂರಿಯಾಡ್ ಮಲಪ್ಪುರಂ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
***********************
1942 ರಲ್ಲಿ ಕೇರಳದ ಮಲಪ್ಪುರಂನಲ್ಲಿ ಕಾಲರ ಎಂಬ ಮಾರಕ ವ್ಯಾಧಿಗೆ ತುತ್ತಾಗಿ ಪ್ರತಿನಿತ್ಯವೂ ಹಲವಾರು ಜನ ಮರಣ ಹೊಂದುತ್ತಿದ್ದರು. ಆಗ ಮುಸ್ಲಿಂ ಸಮುದಾಯದ ಹಿರಿಯರೆಲ್ಲ ಸಭೆ ಸೇರಿ ಚರ್ಚಿಸಿದಾಗ "ಪ್ರಾಯ ಪೂರ್ತಿಯಾದ ನಂತರ 40 ವರ್ಷಗಳ ಕಾಲ ಒಮ್ಮೆಯೂ ನಮಾಜ್ ಕಲಾ ಮಾಡದ ವ್ಯಕ್ತಿಯಿಂದ ಪ್ರಾರ್ಥನೆ ಮಾಡಿಸಬೇಕು" ಎಂಬ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.
ನಂತರ ಜನ ಸಾಮಾನ್ಯರು 40 ವರ್ಷಗಳಿಂದ ನಮಾಜ್ ಕಲಾ ಮಾಡದ ವ್ಯಕ್ತಿಗಾಗಿ ಹುಡುಕಾಟ ನಡೆಸಿದಾಗ ಕಂಡು ಬಂದ ವ್ಯಕ್ತಿಯೇ *ತೇನು ಮುಸ್ಲಿಯಾರ್ ಎಂದೇ ಜನಸಾಮಾನ್ಯರ ನಡುವೆ ಚಿರಪರಿಚಿತರಾದ ಕೂರಿಯಾಡ್ ನಿವಾಸಿ ಝೈನುದ್ದೀನ್ ಮುಸ್ಲಿಯಾರ್ (ನ.ಮ).*
ಹಾಗೆ ಜನಸಾಮಾನ್ಯರ ಕೋರಿಕೆಯ ಮೇರೆಗೆ ತೇನು ಮುಸ್ಲಿಯಾರ್ (ನ.ಮ) ರವರು ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ ಪ್ರಾರ್ಥಿಸಿದಾಗ ಆ ಮಾರಕ ವ್ಯಾಧಿಯು ತನ್ನ ರೌದ್ರಾವತಾರವನ್ನು ನಿಲ್ಲಿಸಿ ಶಾಂತವಾಗಿತ್ತು.
ಹೀಗೆ ತಮ್ಮ ಜೀವನದುದ್ದಕ್ಕೂ ಹಲವಾರು ಕಶ್ಪ್, ಕರಾಮತ್ಗಳನ್ನು ತೋರಿಸಿದ ತೇನು ಮುಸ್ಲಿಯಾರ್ (ನ.ಮ)ರವರು ಮಲಪ್ಪುರಂ ಜಿಲ್ಲೆಯ ಕೂರಿಯಾಡ್ ಕಲ್ಲಿಡುಂಬಿಲ್ ಅಹ್ಮದ್ ಮತ್ತು ನಲ್ಲೂರಿನ ಕರಿಜಾಯ್ ಮೂಸ ಎಂಬವವರ ಪುತ್ರಿಯಾದ ಫಾತಿಮಾ ದಂಪತಿಗಳ ಮಗನಾಗಿ ಹಿಜರಿ 1302ರಲ್ಲಿ ಜನಿಸಿದರು.
ಕೂರಿಯಾಡ್ ಹಬೀಬ್ ಕುಟ್ಟಿಕೋಯ ತಂಙಳ್ (ಖ:ಸಿ) ಮತ್ತು ಅಬ್ದುಲ್ಲ ಕೋಯ ತಂಙಳ್ (ಖ:ಸಿ)ರಿಂದ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ನಂತರ ಅಬ್ದುಲ ಕೋಯ ತಂಗಳವರ (ಖ:ಸಿ) ಕಿಯಕೆವಿಡ್, ಕೈತ್ತಕರ, ತಿರೂರ್ ಕೊರಂಗಾತ್ತ್, ಪೊನ್ನಾನಿ, ಕಾಟ್ಟಿಪ್ಪರುತ್ತಿ, ಕಾವಪ್ಪುರ, ಕಿಡಂಗಾಯಂ, ನೆಲ್ಲಿಕುತ್ತು ಮತ್ತಿತರ ಸ್ಥಳಗಳಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.
ತಿರೂರಂಗಾಡಿ ಬುಖಾರಿ ಮುಸ್ಲಿಯಾರ್ (ಖ:ಸಿ), ತೃಕರಿಪ್ಪುರ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ:ಸಿ), ಮಚ್ಚಿಂಗಪ್ಪಾರ ಅಹ್ಮದ್ ಮುಸ್ಲಿಯಾರ್ (ಖ:ಸಿ), ಪಾರಮ್ಮಲ್ ಮೊಯ್ದಿನ್ ಕುಟ್ಟಿ ಮುಸ್ಲಿಯಾರ್ (ಖ:ಸಿ), ಮೂಸ ಮುಸ್ಲಿಯಾರುಪ್ಪಾಪ್ಪ ಎಂದು ಕರೆಯಲ್ಪಡುತ್ತಿದ್ದ ಕಾವುಪ್ಪುರ ಮುದರಿಸ್ (ಖ:ಸಿ), ಪೆರಂಬಲಂ ಉಣ್ಣಿದ್ ಮುಸ್ಲಿಯಾರ್ (ಖ:ಸಿ), ಪಳ್ಳಿಪ್ಪುರಂ ಮಮ್ಮದ್ ಮುಸ್ಲಿಯಾರ್ (ಖ:ಸಿ), ಚಾಲಿಲಕತ್ತ್ ಕುಂಜಾಹಮ್ಮದ್ ಹಾಜಿ (ಖ:ಸಿ) ಮುಂತಾದವರಿಂದ ಉನ್ನತ ವ್ಯಾಸಂಗ ಪಡೆದರು.
ತದ ನಂತರ ಹಲವು ವರ್ಷಗಳ ಕಾಲ ಚಾಪ್ಪಂಗಾಡಿ, ಕಿಡಂಗಾಯಂ ಆಮಕಾಡ್, ಕೂರಿಯಾಡ್, ಕಿಯಕೊಪ್ಪುರಂ, ಇಂಡ್ಯನೂರ್, ಕೊಟ್ಟಕ್ಕಲ್ ಟೌನ್ ಮಸೀದಿ, ಒರವಮ್ಬ್ರಂ, ಮುಡಿಕೊಡ್, ಮಲಪ್ಪುರಂ ದೊಡ್ಡ ಮಸೀದಿ, ನೆಲ್ಲಿಕುತ್ತ್, ಪಾಂಗ್ ಪಳ್ಳಿಪ್ಪರಂಬ್, ಮತ್ತಿತರೆಡೆ ದರ್ಸ್ ನಡೆಸಿದ ನಂತರವೂ ಸಹ ಮಹಾನರು ವಿವಿದೆಡೆ ತೆರಳಿ ಆ ಕಾಲದ ಹೆಸರಾಂತ ಭಾಷಾ ತಜ್ಞರಿಂದ ಅತ್ಯುನ್ನತ ವ್ಯಾಸಂಗ ಪಡೆದರು.
ಹಾಗೆ ಉನ್ನತ ವಿದ್ಯಾಭ್ಯಾಸವನ್ನರಸುತ್ತಿದ್ದ ಸಮಯದಲ್ಲಿ ಸಹೀಹುಲ್ ಬುಖಾರಿಯ ಪಠಣಕ್ಕೆ ಕುಟ್ಟಿ ಮುಸ್ಲಿಯಾರ (ಖ:ಸಿ)ವರನ್ನು ಸಮೀಪಿಸಿದಾಗ ಅವರಿಬ್ಬರ ನಡುವೆ ನಡೆದ ಸಂದರ್ಶನವಂತೂ ಮೈನವಿರೇಳಿಸುವಂಥಹದು.
ಆಗ ಸಂದರ್ಶನ ಹೀಗಿದೆ..
ತೇನು ಉಸ್ತಾದರು (ನ:ಮ) ಅಬ್ದುದುರಹ್ಮಾನ್ ಫಳ್ಫಾರಿ ಕುಟ್ಟಿ ಮುಸ್ಲಿಯಾರರನ್ನು (ಖ:ಸಿ) ಭೇಟಿಯಾಗಿ, ಮಹಾನರೇ... "ತಮ್ಮ ತಂದೆಯವರಿಂದ ನಾನು ಸ್ವಹೀಹುಲ್ ಬುಖಾರಿಯನ್ನು ಸ್ವಲ್ಪ ಕಲಿತಿದ್ದೇನೆ. ಅದರ ಉಳಿದ ಭಾಗವನ್ನು ದಯವಿಟ್ಟು ತಾವು ನನಗೆ ಕಲಿಸಬೇಕು ಎಂದರು.
ಈ ಮಾತನ್ನು ಕೇಳಿದ ಕುಟ್ಟಿ ಮುಸ್ಲಿಯಾರರು (ಖ:ಸಿ) ಸಮಯ ಮತ್ತು ಸೌಕರ್ಯಗಳ ಅನಾನುಕೂಲತೆಯ ಕಾರಣ ಮುಂದಿಟ್ಟು ಸಾಧ್ಯವಿಲ್ಲ ಎಂದುಬಿಟ್ಟರು. ಆಗ ತೇನು ಮುಸ್ಲಿಯಾರರು (ನ:ಮ) ತಮ್ಮ ಬಿಡುವಿನ ಸಮಯದಲ್ಲಾದರೂ ಕಲಿಸಿ ವಿನಂತಿಸಿದರೂ ಕುಟ್ಟಿ ಮುಸ್ಲಿಯಾರರು (ಖ:ಸಿ) ಒಪ್ಪದಿದ್ದಾಗ,
ತೇನು ಮುಸ್ಲಿಯಾರರು ( ನ:ಮ) ಆ ತನಕ ತಮ್ಮ ಮನದಲ್ಲಿ ಅಡಗಿಸಿಟ್ಟಿದ್ದ ರಹಸ್ಯವೊಂದನ್ನು ಕುಟ್ಟಿ ಮುಸ್ಲಿಯರರ (ಖ:ಸಿ) ಮುಂದೆ ಬಹಿರಂಗ ಪಡಿಸಬೇಕಾಯಿತು.
ಆ ರಹಸ್ಯವೆಂದರೆ....
ಉಸ್ತಾದರೇ... *"ನಾನು ಅಲ್ಲಾಹನ ಹಬೀಬಾದ ಮುತ್ತು ನಬಿ ರಸೂಲ್ ﷺ ರನ್ನು ಕನಸಿನಲ್ಲಿ ಕಂಡೆ. ಆಗ ನಾನು ಅಲ್ಲಾಹನ ರಸೂಲ್ ﷺರೊಂದಿಗೆ ನನಗೆ ಸ್ವಹೀಹುಲ್ ಬುಖಾರಿ ಕಲಿಯಲು ಉಸ್ತಾದರೊಬ್ಬರನ್ನು ತೋರಿಸಿ ಕೊಡುವಂತೆ ಅಪೇಕ್ಷಿದಾಗ, ಅಲ್ಲಾಹನ ರಸೂಲ್ ﷺರು ತಮ್ಮ ಹೆಸರನ್ನು ಸೂಚಿಸಿದರು ಹಾಗಾಗಿ ನಾನು ತಮ್ಮ ಬಳಿ ಬಂದೆ ಎಂದರು".*
ಈ ಮಾತನ್ನು ಕೇಳಿ ರೋಮಾಂಚನಕ್ಕೊಳಗಾದ ಕುಟ್ಟಿ ಮುಸ್ಲಿಯಾರರು (ಖ:ಸಿ), ವ್ಯಾಸಂಗವನ್ನರಸಿ ತಮ್ಮ ಬಳಿ ಬಂದಿರುವ ವ್ಯಕ್ತಿ ಸಾಮಾನ್ಯರಲ್ಲ ಎಂಬುದು ಮನದಟ್ಟಾದ ಕಾರಣ ಸಂತೋಷದಿಂದ ಒಪ್ಪಿದರು.
ಸಮಸ್ತ ಅಧ್ಯಕ್ಷರಾಗಿದ್ದ ವರಕ್ಕಲ್ ಮುಲ್ಲಕೋಯ ತಂಙಳ (ರ)ವರಿಂದ ಖಾದಿರಿಯ್ಯ ತ್ವರಿಖತ್ತ್'ನ ಅನುಮತಿ ಪಡೆದಿದ್ದರು ತೇನು ಮುಸ್ಲಿಯಾರರು (ನ:ಮ), ವಾಳಕುಳಂ ಅಬ್ದುಲ್ ಬಾರಿ ಮುಸ್ಲಿಯಾರ್ (ಖ:ಸಿ)ರಿಂದ ಹದ್ದಾದ್'ನ ಅನುಮತಿಯನ್ನೂ ಪಡೆದಿದ್ದ ಮಹಾನರು ಕಿಯಿಕ್ಕೆ ಪುನ್ನತ್ತ್ ಎಂಬಲ್ಲಿ ಮದ್ರಸತ್ತುಲ್ ಬನಾತ್ತ್ ಎಂಬ ಸಂಸ್ಥೆಯ ಸ್ಥಾಪನೆಗೆ ನೇತೃತ್ವವನ್ನೂ ವಹಿಸಿದರು.
ಮಹಾನರಿಗೆ ಅಬ್ದುಲ್ಲ ಹಾಜಿ ಮತ್ತು ಫಾತಿಮಾ ಎಂಬಿಬ್ಬರು ಮಕ್ಕಳಿದ್ದು ಜಮಾಲುದ್ದೀನ್ ಮುಸ್ಲಿಯಾರ್ರವರು ಮಹಾನರ ಅಳಿಯ (ಮಗಳ ಪತಿ) ಯಾಗಿದ್ದಾರೆ. ಮಕ್ಕಳು ಮತ್ತು ಅಳಿಯನಂತೆ ಮಹಾನುಭಾವರ ಮೊಮ್ಮೊಕ್ಕಳೂ ಸಹ ವಿದ್ವಾಂಸರೂ, ಸುನ್ನತ್ತ್ ಜಮಾಅತ್ತಿನ ಸಕ್ರಿಯ ಕಾರ್ಯಕರ್ತರೂ ಆಗಿದ್ದಾರೆ.
ತಮ್ಮ ಬದುಕಿನುದ್ದಕ್ಕೂ ಹಲವಾರು ಕಶ್ಪ್ ಕರಾಮತ್ಗಳನ್ನು ತೋರಿಸುತ್ತಾ ಜನಸಾಮಾನ್ಯರ ಆಶಾಕಿರಣವಾಗಿದ್ದ ಆ ಮಹಾನುಭಾವರು ಹಿಜರಿ 1389 ದುಲ್'ಹಜ್ಜ್ 4ರ ಬುಧವಾರ (1970 ಫೆಬ್ರವರಿ 12) ಇಹಲೋಕ ತ್ಯಜಿಸಿದಾಗ ಮಹಾನರನ್ನು ಕೂರಿಯಾಡ್ ಜುಮಾ ಮಸೀದಿಯ ಸಮೀಪ ದಫನ ಮಾಡಲಾಯಿತು.
ದಾರಿ: ಕೂರಿಯಾಡ್ ಜುಮಾಅತ್ತ್ ಮಸೀದಿ, ಮಲಪ್ಪುರಂ
⚠⚠⚠⚠⚠⚠⚠⚠⚠
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment