*ಝಿಯಾರತ್ತ್ ಕೇಂದ್ರ*
👉🏻👉🏻 7⃣8⃣
ಭಾಗ == 01
➖➖➖➖➖➖➖
*ಬಿಮಾಪಳ್ಳಿ ಮಖಾಂ ಶರೀಫ್ ಪೂಂತ್ತುರ*
*ತಿರುವನಂತಪುರಂ*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪
✍ _ಗಫೂರ್ ಬಾಯಾರ್_
**********************
ಶಹೀದ್ ಅಥವಾ ಶುಹದಾ (ಹುತಾತ್ಮ) ಎಂಬ ಪದವಿಗೆ ಅಲ್ಲಾಹನ ಬಳಿ ಅಪರಿಮಿತವಾದ ಮಹತ್ವವಿದೆ. ಎಲ್ಲರಿಗೂ ಈ ಪದವಿ ಲಭಿಸಲಾರದಾದರೂ ಮಹತ್ವಪೂರ್ಣವಾದ ಆ ಪದವಿಗೆ ಭಾಜನರಾದ ಶುಹದಾಗಳಿಗೆ ಅಲ್ಲಾಹನಿಂದ ಲಭಿಸುವ ಸೌಭಾಗ್ಯಗಳಿಗೆ ಮಿತಿಯೆಂಬುದೇ ಇಲ್ಲ.
ಸೃಷ್ಟಿಕರ್ತನಾದ ಅಲ್ಲಾಹನ ಔದಾರ್ಯ ಲಭಿಸಿದವರ ಹೊರತು ಎಲ್ಲರಿಗೂ ಶಹೀದಾಗುವ ಭಾಗ್ಯ ಲಭಿಸಲಾರದಾದರೂ ಅಲ್ಲಾಹನ ತೃಪ್ತಿಯೊಂದಿಗೆ ಶಹೀದಾಗಲು ಅಥವಾ ಶಹೀದ್ನ ಪ್ರತಿಫಲವನ್ನು ಅಲ್ಲಾಹನಿಂದ ಪಡೆಯಲು ಹಾತೊರೆಯದ ಮುಅ್ಮಿನ್ಗಳೇ ಇರಲಾರರು. ಆದರೆ ಅಲ್ಲಾಹನ ಪ್ರಪ್ರಥಮ ಸೃಷ್ಟಿಯೂ, ಅಂತ್ಯ ಪ್ರವಾದಿಯೂ, ಅಂಬಿಯಾಗಳ ನೇತಾರರೂ, ವಿಶ್ವ ಪ್ರವಾದಿಯೂ, ವಿಶ್ವಾಸಿ ಹೃದಯದ ಉಜ್ವಲ ತಾರೆಯೂ ಆದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺِ ರಿಂದ ಒಬ್ಬ ವ್ಯಕ್ತಿಗೆ "ಶಹಾದತ್ ಪದವಿ ನಿಮ್ಮನ್ನು ನಿರೀಕ್ಷಿಸುತ್ತಿದೆ" ಎಂಬ ಸಂದೇಶ ಲಭಿಸಿದರೆ ಆ ವ್ಯಕ್ತಿಯ ಸೌಭಾಗ್ಯಕ್ಕೆ ಎಣೆಯುಂಟೇ...?
ಸುಮಾರು ಐದು ಶತಮಾನಗಳ ಹಿಂದೆ ಅಲ್ಲಾಹನ ಹಬೀಬರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺِ ರವರ ಸಲಹೆಯ ಮೇರೆಗೆ ಸಯ್ಯಿದ್ ಅಬ್ದುಲ್ ಗಫಾರಿ (ರ)ರವರು ಪತ್ನಿ ಸಯ್ಯಿದತ್ ಬಿಮಾ ಬೀವಿ (ರ.ಅ) ಹಾಗೂ ಪುತ್ರ ಸಯ್ಯಿದ್ ಮಾಹಿನ್ ಅಬೂಬಕರ್ (ರ.ಅ)ರೊಂದಿಗೆ ಅರೇಬಿಯಾದಿಂದ ಹೊರಟು ತಮಿಳುನಾಡಿಗೆ ಆಗಮಿಸಿ ದೀನೀ ಪ್ರಬೋಧನೆ ನಡೆಸಲಾರಂಭಿಸಿದರು.
ತಮಿಳುನಾಡಿನ ತಿರುವೆಲ್ಲ ಎಂಬಲ್ಲಿ ವಾಸಿಸುತ್ತಾ ದೀನೀ ದಅ್ವಾ ನಡೆಸುತ್ತಿದ್ದ ಸಯ್ಯಿದ್ ಅಬ್ದುಲ್ ಗಫಾರಿ (ರ) ರವರ ವಿಯೋಗಾ ನಂತರ ಅವರ ಪತ್ನಿಯಾದ ಮಹದಿ ಬಿಮಾ ಬೀವಿ (ರ)ರವರು ತಮಿಳುನಾಡಿನಿಂದ ಕೇರಳದ ಈಗಿನ ತಿರುವನಂತಪುರಂ ಜಿಲ್ಲೆಗೆ ವಾಸ ಬದಲಿಸಿದರು. (ಕ್ರಿಸ್ತಶಕ 1478-1528. ಕೇರಳವನ್ನು ರಾಜ ಮಾರ್ತಾಂಡ ವರ್ಮ ಆಳುತ್ತಿದ್ದ ಕಾಲ)
ಅದಾಗಲೇ ವಿಲಾಯತಿನ ಪದವಿಗೇರಿದ್ದ ಆ ಮಹದಿ ಬಿಮಾ ಬೀವಿ (ರ) ಮತ್ತು ಪುತ್ರ ಮಾಹಿನ್ ಅಬೂಬಕರ್ (ರ) ರವರು ಇಖ್ಲಾಸ್ ಮತ್ತು ತಖ್ವಾದಿಂದ ಕಳಂಕರಹಿತವಾದ ಜೀವನ ನಡೆಸುತ್ತಾ ಅಲ್ಲಾಹನು ದಯಪಾಲಿಸಿದ ಕರಾಮತ್ಗಳ ಮೂಲಕ ಪ್ರತಿಫಲಾಪೇಕ್ಷೆಯಿಲ್ಲದೆ ಕೇರಳದಲ್ಲಿ ಸಮಾಜಸೇವೆ ಮಾಡುತ್ತಾ ದೀನೀ ಪ್ರಬೋಧನೆ ನಡೆಸಲಾರಂಭಿಸಿದರು.
ಮಹದಿ ಮತ್ತು ಅವರ ಪುತ್ರರ ಪ್ರಾರ್ಥನೆಯ ಮಹತ್ವದ ಅರಿವಾದ ನಂತರ ಜನಸಾಮಾನ್ಯರು ತಮ್ಮ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ ಜಾತಿ ಮತ ಭೇದವಿಲ್ಲದೆ ಸಂದರ್ಶಿಸುತ್ತಿದ್ದುದಷ್ಟೇ ಅಲ್ಲದೆ ಅವರ ಪ್ರಬೋಧನೆಯಿಂದ ಜನತೆಗೆ ಇಸ್ಲಾಮಿನ ತತ್ವ ಮತ್ತು ಆದರ್ಶಗಳ ಅರಿವಾಗತೊಡಗಿತು.
*ಮುಂದುವರಿಯುವುದು*
💢💢💢💢💢💢💢
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment