Tuesday, September 24, 2019

ಝಿಯಾರತ್ತ್ ಕೇಂದ್ರ 71. ಶೈಖುನಾ ನರಿಕ್ಕೋಡ್ ಉಪ್ಪಾಪ್ಪ (ನ:ಮ)

* #ಝಿಯಾರತ್ #ಕೇಂದ್ರ​​​*
            7⃣1⃣
➖➖➖➖➖➖➖➖
*ನರಿಕ್ಕೋಡ್ ಉಸ್ತಾದ್ ಅಥವಾ ಶೈಖುನಾ ಮುಹಮ್ಮದ್ ಮುಸ್ಲಿಯಾರ್ (ಖ.ಸಿ.) ನರಿಕ್ಕೋಡ್, ತಳಿಪ್ಪರಂಬ್, ಕಣ್ಣೂರು.*
***********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪

✍ ಗಫೂರ್ ಬಾಯಾರ್
***********************
ಕೇರಳದ ಕಣ್ಣೂರು ಜಿಲ್ಲೆಯ ನರಿಕ್ಕೋಡ್ ಎಂಬ ಚಿಕ್ಕ ಗ್ರಾಮದಲ್ಲಿ ಹುಟ್ಟಿ ಬೆಳೆದು ಬಾಲ್ಯದಿಂದಲೇ ಇಲಾಹಿ ಸ್ಮರಣೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅಲ್ಲಾಹನ ಇಷ್ಟದಾಸರ ಸಾಲಿಗೆ ಸೇರಿದ ಮಹಾತ್ಮರಲ್ಲೊಬ್ಬರಾಗಿದ್ದಾರೆ ಶೈಖುನಾ ಮುಹಮ್ಮದ್ ಮುಸ್ಲಿಯಾರ್ (ಖ.ಸಿ) ಅಥವಾ ನರಿಕ್ಕೇೂಡು ಉಪ್ಪಾಪ.

ಆರು ದಶಕಗಳ ಕಾಲದ ತಮ್ಮ ಬದುಕಿಗೆ ಇಲಾಹೀ ಸ್ಮರಣೆ ಮತ್ತು ಪ್ರವಾದಿ ﷺ ಪ್ರೇಮದ ಮೆರುಗು ನೀಡುವುದರೊಂದಿಗೆ ಆಧ್ಯಾತ್ಮಿಕ ರಂಗದ ನಂಟು ಗಳಿಸಿದ ನರಿಕ್ಕೇೂಡು ಉಸ್ತಾದ್ (ಖ.ಸಿ)ರವರ ಹೆಸರು ಕೇಳದವರು ಕೇರಳ, ಕರ್ನಾಟಕಗಳಲ್ಲಿ ವಿರಳ.

ಮಮ್ಮುಟ್ಟಿ ಮುಸ್ಲಿಯಾರ್ (ನ.ಮ)ರ ಬಳಿ ವ್ಯಾಸಂಗ ನಡೆಸುತ್ತಿದ್ದ ನರಿಕ್ಕೋಡು ಉಸ್ತಾದರ ಹದಿನಾರನೇ ಪ್ರಾಯದಲ್ಲೇ ಸೂಫಿಝಮ್'ನ ಕುರುಹುಗಳನ್ನು ಕಂಡ ಗುರುವರ್ಯ ಮಮ್ಮುಟ್ಟಿ ಮುಸ್ಲಿಯಾರ್ (ನ.ಮ)ರವರು ತಮ್ಮ ಶಿಷ್ಯನಿಗೆ ಎಲ್ಲ ರೀತಿಯ ಪ್ರೇೂತ್ಸಾಹ ನೀಡುವುದರೊಂದಿಗೆ ತಮ್ಮ ಶಿಷ್ಯನ ತಂದೆಯವರಾದ ನುಂಜೇರಿ ಮಮ್ಮುಟ್ಟಿ ತಂಙಳ್ (ಖ.ಸಿ)ರನ್ನು ಭೇಟಿಯಾಗಿ ಮಗನನ್ನು ದ್ಸಿಕ್ರ್'ನ ಹಾದಿಯಲ್ಲಿ ಮುನ್ನಡೆಯಲು ಪ್ರೇೂತ್ಸಾಹ ನೀಡಲು ಸೂಚಿಸಿದರು.

ಅನಂತರ ತಮ್ಮ ಮನೆಯಂಗಳದಲ್ಲೇ ಚಿಕ್ಕದೊಂದು ಮಸೀದಿ ನಿರ್ಮಿಸಿದ ನರಿಕ್ಕೋಡ್ ಉಸ್ತಾದ್ (ಖ.ಸಿ)ರವರು  ಸಂಪೂರ್ಣವಾಗಿ ತಮ್ಮನ್ನು ಇಲಾಹೀ ಸ್ಮರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಮಸೀದಿಯಲ್ಲಿ ಸೇವೆ ಸಲ್ಲಿಸುವಾಗ ಆ ಭಾಗದ ಜನತೆಯಿಂದ ಪ್ರೀತಿ ಮತ್ತು ಆತ್ಮೀಯತೆಯಿಂದ 'ಮುಕ್ರಿಕ' ಎಂದು ಕರೆಸಿಕೊಳ್ಳುತ್ತಿದ್ದ ಉಸ್ತಾದರು ಬದುಕಿನ ಜಂಜಾಟದಲ್ಲಿ ಬಳಲಿ ಬೆಂಡಾದ ಜನಸಮೂಹಕ್ಕೆ ಸಾಂತ್ವನ ಹೇಳುತ್ತಾ ಜನಸಾಮಾನ್ಯರ ಆಶಾಕಿರಣವಾಗಿದ್ದರು.

ಹಾಗಾಗಿ ಮಹಾನರ ಪ್ರಾರ್ಥನೆಗಾಗಿ ವಿವಿಧೆಡೆಗಳಿಂದ ವಿದ್ವಾಂಸರಷ್ಟೇ ಅಲ್ಲ, ಜನಸಾಮಾನ್ಯರೂ ಸಹ ಜಾತಿ ಮತ ಬೇಧವಿಲ್ಲದೆ ಮಹಾನರತ್ತ ಪ್ರವಾಹದಂತೆ ಹರಿದು ಬರಲಾರಂಭಿಸಿದ್ದರು.

ತಮ್ಮ ಮನೆಯಂಗಳದಲ್ಲಿ ತಾವೇ ನಿರ್ಮಿಸಿದ ರಿಫಾಈ ಮಸ್ಜಿದ್'ನಲ್ಲಿ ಮಹಾನರ ನೇತೃತ್ವದಲ್ಲಿ ಪ್ರತಿ ಗುರುವಾರ ಲುಹರ್ ನಮಾಝ್'ನ ನಂತರ ನಡೆಯುತ್ತಿದ್ದ ಜಲಾಲಿಯ್ಯಾ ರಾತೀಬ್'ನ ವೇದಿಕೆಯಲ್ಲೇ 2011ರ ರಮಳಾನ್ ಹನ್ನೊಂದರ ಗುರುವಾರದಂದು ಮಹಾನರು ತನ್ನ 73ನೇ ವಯಸ್ಸಿನಲ್ಲಿ ಇಹಲೇೂಕಕ್ಕೆ ವಿದಾಯ ಹೇಳಿದರು.

ಜನಸಾಮಾನ್ಯರಿಗೆ ಮಹಾನರ ಆಧ್ಯಾತ್ಮಿಕ ಸಿದ್ಧಿಯ ಮಹತ್ವದ ಕುರಿತು ಅರಿವಾದುದು ಮಹಾನರ ವಿಯೇೂಗದ ನಂತರವಾಗಿತ್ತು.

ಕಾರಣ ಬದುಕಿನ ಏಳುಬೀಳುಗಳಿಗೆ ಪ್ರಾರ್ಥನೆ ಮತ್ತು ಸಾಂತ್ವನದ ಮೂಲಕ ಪರಿಹಾರ ಸೂಚಿಸುತ್ತಿದ್ದ ಮಹಾನರ ವಿಯೇೂಗವು ತುಂಬಲಾರದ ನಷ್ಟವೆನ್ನುವುದನ್ನು ಮನಗಂಡ ಜನಸಮೂಹವು, ಆ ಸೂಫಿವರ್ಯರು ಅಂತ್ಯವಿಶ್ರಮ ಪಡೆಯುತ್ತಿರುವ ಅವರ ಆಧ್ಯಾತ್ಮಿಕ ಕರ್ಮ ಸಾಫಲ್ಯತೆಗೆ ಸಾಕ್ಷಿಯಾಗಿದ್ದ ನರಿಕ್ಕೋಡಿಗೆ ಸಾಂತ್ವನದ ನಿರೀಕ್ಷೆಯಿಂದ ಇಂದಿಗೂ ಆಗಮಿಸುತ್ತಲೇ ಇದ್ದಾರೆ.

ಶೈಖುನಾ ನರಿಕ್ಕೋಡ್ ಉಸ್ತಾದರ ವಾರ್ಷಿಕ ಆಂಡ್ ನೇರ್ಚೆ ಪ್ರತಿ ರಮಳಾನ್ 10 ಮತ್ತು 11ರಂದು ನಡೆಯುತ್ತದೆ.

ಸರ್ವಶಕ್ತನಾದ ಅಲ್ಲಾಹನು ಅವನ ಈ ಇಷ್ಟದಾಸರ ಹಕ್ಕ್, ಜಾಹ್, ಬರ್ಕತ್ತಿನಿಂದ ನಮ್ಮೆಲ್ಲರನ್ನೂ ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.

ದಾರಿ: ರಿಫಾಯಿ ಮಸ್ಜಿದ್ ನರಿಕ್ಕೋಡ್ ತಳಿಪ್ಪರಂಬ್, ಕಣ್ಣೂರು.
🌱🌱🌱🌱🌱🌱🌱🌱

No comments:

Post a Comment